<p>ಒಲಿದವರಿಗೆ ಉಡುಗೊರೆ ನೀಡುವಾಗ ಹೊನ್ನು, ವಜ್ರಗಳನ್ನೇ ನೀಡಿ.. ಇವು ನಿಮ್ಮ ಬಾಂಧವ್ಯದಷ್ಟೇ ಶಾಶ್ವತ ಎಂದು ತನಿಷ್ಕ್ ಆಭರಣ ವಿನ್ಯಾಸದ ಜಿಎಂ ರೇವತಿ ಕಾಮತ್ ಸಲಹೆ ನೀಡುತ್ತಿದ್ದಾರೆ. <br /> <br /> ಅಮ್ಮನ ವಾತ್ಸಲ್ಯಕ್ಕೆ ಹೋಲಿಸಬಹುದಾದದ್ದು ಏನಾದರೂ ಇದೆಯೇ? ಎಂಬ ಪ್ರಶ್ನೆಯನ್ನು ಮುಂದಿರಿಸಿ, ಹುಬ್ಬೇರಿಸಿ, ಕತ್ತು ಅಲುಗಾಡಿಸಿ ಅದು ಅಮೂಲ್ಯ ಎನ್ನುವುದಿಲ್ಲವೇ? ಅಮೂಲ್ಯ ಅಮ್ಮನ ಪ್ರೀತಿಗೆ ಮೌಲ್ಯ ಕಟ್ಟದಿರಿ, ವಜ್ರಕ್ಕೆ ಮಾತ್ರ ಮೌಲ್ಯ ನೀಡಿ, ಚಂದದ ಉಡುಗೊರೆ ಕೊಂಡೊಯ್ಯಿರಿ ಎನ್ನುತ್ತಾರೆ ಅವರು.<br /> <br /> ಅಮ್ಮ ಅಷ್ಟೇ ಅಲ್ಲ, ಸಹೋದರಿ, ಸಂಗಾತಿ, ಸ್ನೇಹಿತೆ ಹೀಗೆ ವಿಶೇಷ ಬಾಂಧವ್ಯ ಹೊಂದಿರುವ ಎಲ್ಲರಿಗೂ ಕೊಡುಗೆಯಾಗಿ ನೀಡುವಂಥ ಸಂಗ್ರಹ ತನಿಷ್ಕ್ನಲ್ಲಿ ಲಭ್ಯ ಎನ್ನುತ್ತಾರೆ ಅವರು.<br /> <br /> ಉಡುಗೊರೆಯನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು ಎಂಬುದಕ್ಕೂ ರೇವತಿ ಸಲಹೆ ನೀಡಿದ್ದಾರೆ. <br /> <br /> ಮನಮೆಚ್ಚಿದ ಮನದನ್ನೆಗೆ ವಜ್ರದ ಪೆಂಡೆಂಟ್ ನೀಡಿ. ನಿಮ್ಮ ಕೊಡುಗೆ ಹೃದಯಕ್ಕಂಟಿಕೊಂಡು, ಅವಳ ಹೃದಯ ಬಡಿತದ ಅನುಭವಿಸುತ್ತದೆ. ಪ್ರತಿ ಬಡಿತದೊಂದಿಗೂ ನಿಮ್ಮ ಹೆಸರು ಅನುರಣಿಸುವಂತಾಗುತ್ತದೆ.<br /> <br /> ಈಗಾಗಲೇ ವಜ್ರದ ಪದಕ ಅವಳ ಬಳಿ ಇದ್ದರೆ ಅದಕ್ಕೆ ಹೊಂದುವಂಥ ಲೋಲಾಕು ನೀಡಿರಿ. ಕೆನ್ನೆಗೆ ಮುತ್ತಿಡುವ ಕರಿ ಕೂದಲಿನೊಂದಿಗೆ ವಜ್ರದ ಮೆರುಗು ನೀಡಿದಂತಾಗುತ್ತದೆ.<br /> <br /> ಒಂದು ವೇಳೆ ವಜ್ರ ಅವರ ಸಂಗ್ರಹದಲ್ಲಿದ್ದರೆ, ರೂಬಿ, ಪಚ್ಚೆ ಮುಂತಾದ ಹರಳುಗಳ ಶ್ರೇಣಿಯೇ ಇಲ್ಲಿ ಲಭ್ಯ. <br /> <br /> ಅಮ್ಮನಿಗೆ ಬಳೆ, ಉಂಗುರ ಮುಂತಾದವುಗಳನ್ನು ನೀಡಬಹುದು. ಪ್ರತಿ ಸಲವೂ ನಿಮ್ಮ ಉಡುಗೊರೆ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ ಎಂಬುದು ಅವರ ಭರವಸೆ.<br /> <br /> 18 ಕ್ಯಾರೆಟ್ ಚಿನ್ನದಲ್ಲಿ ಅಳವಡಿಸಿರುವ ವಜ್ರದಾಭರಣಗಳು ಒಲವನ್ನು ಬಲಪಡಿಸುತ್ತವೆ ಎನ್ನುತ್ತಾರೆ ಅವರು. ಆಭರಣಗಳ ದೇಖುರೇಕಿಯ ಬಗ್ಗೆಯೂ ಸಲಹೆಗಳನ್ನು ನೀಡಿದ್ದಾರೆ ರೇವತಿ ಕಾಮತ್. ಮುತ್ತಿನ ಆಭರಣಗಳಾದರೆ ಅವನ್ನು ಮೆದು ವಸ್ತ್ರದಲ್ಲಿ ಅಥವಾ ಅರಳೆಯಲ್ಲಿ ಸುತ್ತಿಡಬೇಕು. <br /> <br /> ಪ್ಲಾಟಿನಂ ಆಭರಣಗಳಾದರೆ ಅತಿ ಮುಚ್ಚಟೆಯಿಂದ ಎತ್ತಿಡಬೇಕು. ಅದರ ಒಂದು ಭಾಗ ಇನ್ನೊಂದರ ಮೇಲೆ ಬೀಳದಂತೆ ಗಮನಹರಿಸಬೇಕು. ಇಲ್ಲದಿದ್ದರೆ ಆಭರಣಗಳ ಮೇಲೆ ತಿರುಚು ಗಾಯ ಮೂಡುವ ಸಾಧ್ಯತೆಗಳಿರುತ್ತವೆ.<br /> <br /> ಈಜುವಾಗ ಆಭರಣಗಳನ್ನು ಎತ್ತಿಡುವುದು ಸುರಕ್ಷಿತ. ಸಾಮಾನ್ಯವಾಗಿ ಅಲಂಕಾರ ಮುಗಿದ ನಂತರವೇ ಆಭರಣ ತೊಡುವುದು ಉತ್ತಮ ಅಭ್ಯಾಸ. ಸ್ನಾನ ಮಾಡುವಾಗ ಆಭರಣಗಳನ್ನು ಎತ್ತಿಡಬೇಕು. <br /> <br /> ಇಲ್ಲದಿದ್ದರೆ ಸೋಪಿನ ನೀರು ಆಭರಣಗಳ ಹೊಳಪಿನ ಮೇಲೆ ಸಣ್ಣದೊಂದು ಪರದೆ ಮೂಡುವಂತೆ ಮಾಡುತ್ತದೆ ರೇವತಿ ಎಚ್ಚರಿಸುತ್ತಾರೆ.<br /> ಬದುಕಿನಲ್ಲಿ ಹೊನ್ನು ಇರಲಿ ಬಿಡಲಿ, ಬದುಕು ಬಂಗಾರವಾಗಿರಲಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಒಲಿದವರಿಗೆ ಉಡುಗೊರೆ ನೀಡುವಾಗ ಹೊನ್ನು, ವಜ್ರಗಳನ್ನೇ ನೀಡಿ.. ಇವು ನಿಮ್ಮ ಬಾಂಧವ್ಯದಷ್ಟೇ ಶಾಶ್ವತ ಎಂದು ತನಿಷ್ಕ್ ಆಭರಣ ವಿನ್ಯಾಸದ ಜಿಎಂ ರೇವತಿ ಕಾಮತ್ ಸಲಹೆ ನೀಡುತ್ತಿದ್ದಾರೆ. <br /> <br /> ಅಮ್ಮನ ವಾತ್ಸಲ್ಯಕ್ಕೆ ಹೋಲಿಸಬಹುದಾದದ್ದು ಏನಾದರೂ ಇದೆಯೇ? ಎಂಬ ಪ್ರಶ್ನೆಯನ್ನು ಮುಂದಿರಿಸಿ, ಹುಬ್ಬೇರಿಸಿ, ಕತ್ತು ಅಲುಗಾಡಿಸಿ ಅದು ಅಮೂಲ್ಯ ಎನ್ನುವುದಿಲ್ಲವೇ? ಅಮೂಲ್ಯ ಅಮ್ಮನ ಪ್ರೀತಿಗೆ ಮೌಲ್ಯ ಕಟ್ಟದಿರಿ, ವಜ್ರಕ್ಕೆ ಮಾತ್ರ ಮೌಲ್ಯ ನೀಡಿ, ಚಂದದ ಉಡುಗೊರೆ ಕೊಂಡೊಯ್ಯಿರಿ ಎನ್ನುತ್ತಾರೆ ಅವರು.<br /> <br /> ಅಮ್ಮ ಅಷ್ಟೇ ಅಲ್ಲ, ಸಹೋದರಿ, ಸಂಗಾತಿ, ಸ್ನೇಹಿತೆ ಹೀಗೆ ವಿಶೇಷ ಬಾಂಧವ್ಯ ಹೊಂದಿರುವ ಎಲ್ಲರಿಗೂ ಕೊಡುಗೆಯಾಗಿ ನೀಡುವಂಥ ಸಂಗ್ರಹ ತನಿಷ್ಕ್ನಲ್ಲಿ ಲಭ್ಯ ಎನ್ನುತ್ತಾರೆ ಅವರು.<br /> <br /> ಉಡುಗೊರೆಯನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು ಎಂಬುದಕ್ಕೂ ರೇವತಿ ಸಲಹೆ ನೀಡಿದ್ದಾರೆ. <br /> <br /> ಮನಮೆಚ್ಚಿದ ಮನದನ್ನೆಗೆ ವಜ್ರದ ಪೆಂಡೆಂಟ್ ನೀಡಿ. ನಿಮ್ಮ ಕೊಡುಗೆ ಹೃದಯಕ್ಕಂಟಿಕೊಂಡು, ಅವಳ ಹೃದಯ ಬಡಿತದ ಅನುಭವಿಸುತ್ತದೆ. ಪ್ರತಿ ಬಡಿತದೊಂದಿಗೂ ನಿಮ್ಮ ಹೆಸರು ಅನುರಣಿಸುವಂತಾಗುತ್ತದೆ.<br /> <br /> ಈಗಾಗಲೇ ವಜ್ರದ ಪದಕ ಅವಳ ಬಳಿ ಇದ್ದರೆ ಅದಕ್ಕೆ ಹೊಂದುವಂಥ ಲೋಲಾಕು ನೀಡಿರಿ. ಕೆನ್ನೆಗೆ ಮುತ್ತಿಡುವ ಕರಿ ಕೂದಲಿನೊಂದಿಗೆ ವಜ್ರದ ಮೆರುಗು ನೀಡಿದಂತಾಗುತ್ತದೆ.<br /> <br /> ಒಂದು ವೇಳೆ ವಜ್ರ ಅವರ ಸಂಗ್ರಹದಲ್ಲಿದ್ದರೆ, ರೂಬಿ, ಪಚ್ಚೆ ಮುಂತಾದ ಹರಳುಗಳ ಶ್ರೇಣಿಯೇ ಇಲ್ಲಿ ಲಭ್ಯ. <br /> <br /> ಅಮ್ಮನಿಗೆ ಬಳೆ, ಉಂಗುರ ಮುಂತಾದವುಗಳನ್ನು ನೀಡಬಹುದು. ಪ್ರತಿ ಸಲವೂ ನಿಮ್ಮ ಉಡುಗೊರೆ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ ಎಂಬುದು ಅವರ ಭರವಸೆ.<br /> <br /> 18 ಕ್ಯಾರೆಟ್ ಚಿನ್ನದಲ್ಲಿ ಅಳವಡಿಸಿರುವ ವಜ್ರದಾಭರಣಗಳು ಒಲವನ್ನು ಬಲಪಡಿಸುತ್ತವೆ ಎನ್ನುತ್ತಾರೆ ಅವರು. ಆಭರಣಗಳ ದೇಖುರೇಕಿಯ ಬಗ್ಗೆಯೂ ಸಲಹೆಗಳನ್ನು ನೀಡಿದ್ದಾರೆ ರೇವತಿ ಕಾಮತ್. ಮುತ್ತಿನ ಆಭರಣಗಳಾದರೆ ಅವನ್ನು ಮೆದು ವಸ್ತ್ರದಲ್ಲಿ ಅಥವಾ ಅರಳೆಯಲ್ಲಿ ಸುತ್ತಿಡಬೇಕು. <br /> <br /> ಪ್ಲಾಟಿನಂ ಆಭರಣಗಳಾದರೆ ಅತಿ ಮುಚ್ಚಟೆಯಿಂದ ಎತ್ತಿಡಬೇಕು. ಅದರ ಒಂದು ಭಾಗ ಇನ್ನೊಂದರ ಮೇಲೆ ಬೀಳದಂತೆ ಗಮನಹರಿಸಬೇಕು. ಇಲ್ಲದಿದ್ದರೆ ಆಭರಣಗಳ ಮೇಲೆ ತಿರುಚು ಗಾಯ ಮೂಡುವ ಸಾಧ್ಯತೆಗಳಿರುತ್ತವೆ.<br /> <br /> ಈಜುವಾಗ ಆಭರಣಗಳನ್ನು ಎತ್ತಿಡುವುದು ಸುರಕ್ಷಿತ. ಸಾಮಾನ್ಯವಾಗಿ ಅಲಂಕಾರ ಮುಗಿದ ನಂತರವೇ ಆಭರಣ ತೊಡುವುದು ಉತ್ತಮ ಅಭ್ಯಾಸ. ಸ್ನಾನ ಮಾಡುವಾಗ ಆಭರಣಗಳನ್ನು ಎತ್ತಿಡಬೇಕು. <br /> <br /> ಇಲ್ಲದಿದ್ದರೆ ಸೋಪಿನ ನೀರು ಆಭರಣಗಳ ಹೊಳಪಿನ ಮೇಲೆ ಸಣ್ಣದೊಂದು ಪರದೆ ಮೂಡುವಂತೆ ಮಾಡುತ್ತದೆ ರೇವತಿ ಎಚ್ಚರಿಸುತ್ತಾರೆ.<br /> ಬದುಕಿನಲ್ಲಿ ಹೊನ್ನು ಇರಲಿ ಬಿಡಲಿ, ಬದುಕು ಬಂಗಾರವಾಗಿರಲಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>