<p><span style="font-size: 26px;"><strong>ವೀರಯೋಧ ಆಲಂಬಾಡಿ ಸತೀಶ್ ವೇದಿಕೆ (ಕೃಷ್ಣರಾಜಪೇಟೆ):</strong> ಸಂಜೆ ಐದರ ಸಮಯ. ನೇಸರ ತನ್ನ ದಿನಚರಿ ಮುಗಿಸಿದ್ದ. ಮುಗಿಲಲ್ಲಿ ಕಪ್ಪು ತಿಳಿ ಮೋಡ ಹೆಪ್ಪುಗಟ್ಟಿತ್ತು. ಹಕ್ಕಿಗಳು ಗೂಡು ಸೇರಲು ಹೊರಟ್ಟಿದ್ದವು. ಅದೇ ವೇಳೆ ಕವಿತೆಗಳು ಗರಿಬಿಚ್ಚತೊಡಗಿದವು..!</span><br /> <br /> `ಒಲುಮೆಯ ಕವಿ' ಕೆ.ಎಸ್.ನರಸಿಂಹಸ್ವಾಮಿ ಊರಲ್ಲಿ ಗರಿಬಿಚ್ಚಿದ ಕೆಲ ಕವಿತೆಗಳು ರಸಪೂರ್ಣವೂ, ಧ್ವನಿಪೂರ್ಣವಾಗಿದ್ದು, ಕವಿತೆಯ ಸೊಗಸು ಹೆಚ್ಚಿಸಿ ಮನಸ್ಸಿಗೆ ಕಚಗಳಿ ಇಟ್ಟವು.<br /> <br /> ಆದರೆ, ಬಹುತೇಕ ಕವಿತೆಗಳಲ್ಲಿ ಧ್ವನಿ ಮತ್ತು ರಸದಲ್ಲಿ ಕೊರತೆ ಕಾಣಿಸಿತು. ಕವನಗಳನ್ನು ವಾಚಿಸುವಲ್ಲಿಯೂ ಕೆಲವರು ಸೋತರು. ಕೆಲವರು ಪಾಠದಂತೆಯೂ, ಕೆಲವರು ಸಂಗೀತದ ಹಾಡುಗಾರಿಕೆಯಂತೆಯೂ ವಾಚಿಸಿದರು.<br /> <br /> ಕೆ.ವಿ.ರಮೇಶ್ ಅವರು ವಾಚಿಸಿದ ಮನಸು..ಮನಸುಗಳ ನಡುವೆ ಗೋಡೆ ಎದ್ದಿದೆ, ಪ್ರೀತಿ ಹುಟ್ಟುವುದು ಹೇಗೆ.. ಎನ್ನುವ ಸಾಲಿರುವ `ಯಕ್ಷಪ್ರಶ್ನೆ' ಶೀರ್ಷಿಕೆಯ ಕವಿತೆ; ಈಶ್ವರ್ ಅವರ `ಹುಟ್ಟಬಾರದಿತ್ತು'; ಗಣಂಗೂರು ನಂಜೇಗೌಡರ `ಕಂದನೂರಿನ' ಹಾಡು' ಕವಿತೆಗಳು ಗಮನ ಸೆಳೆದವು.<br /> <br /> ಜಲಕ್ಷಾಮ ತಂದೊಡ್ಡುವ ಸಮಸ್ಯೆಗಳು, ಜೀವ ಕಳೆದುಕೊಳ್ಳುವ ಪರಿಸರ ಕುರಿತಂತೆ `ಭಾಗೀರಥ ಜೀವರಥ, ಧರೆಗೆ ನೀ ಬಾರದಿರಲು, ನೇಸರ ಕೆಂಡ ಕಾರುತ್ತಿರಲು, ಬಾಯ್ತೆರೆದ ಭೂತಾಯಿ, ಸುಟ್ಟು ಸುಣ್ಣವಾಗಿದೆ...' ಎಂಬ ಸಾಲಿರುವ ಪ್ರಕಾಶ್ ಹಾರೋಹಳ್ಳಿ ಅವರ `ಭಗೀರಥನಿಗೆ' ಕವನ ಚಿಂತನೆಗೆ ಒಳಪಡಿಸಿತು.<br /> <br /> ಬಲ್ಲೇನಹಳ್ಳಿ ಮಂಜುನಾಥ್ ಅವರ `ಬಾಂಬೂ'; ಪರಿಸರ ಸಂರಕ್ಷಣೆ ಮಹತ್ವ ಕುರಿತ ಹರವು ದೇವೇಗೌಡರ `ಸಾಕ್ಷಿಗಾಗಿ'; ಸರಳ ವಿವಾಹದ ಮಹತ್ವ, ಆಡಂಬರ ತಂದೊಡ್ಡುವ ಸಮಸ್ಯೆಗಳು ಕುರಿತು ಸವಿತಾ ರಮೇಶ್, ಬೆಳಕು ಚೆಲ್ಲಿದ `ನಮ್ಮೆಲ್ಲರ ನಡಿಗೆ; ಹೆರಗನಹಳ್ಳಿ ದಿನೇಶ್ರ `ಇನ್ನೂ ಬೆಳಕಿದೆ' ಕವಿತೆಗಳು ಅರ್ಥಪೂರ್ಣವಾಗಿದ್ದವು.<br /> <br /> ಉಳಿದಂತೆ, ಕಾವೇರಿ ಸಮಸ್ಯೆ, ಹೆಣ್ಣಿನ ಕುರಿತ ಸಮಾಜದ ವಕ್ರನೋಟ, ಹಳ್ಳಿ ಕಟ್ಟೆಯಲ್ಲಿ ನಡೆಯುವ ಚರ್ಚೆ, ಭಾಷೆ ಸೇರಿದಂತೆ ಅನೇಕ ವಿಷಯ ಮೇಲೆ ಬೆಳಕು ಚೆಲ್ಲುವ ಕವಿತೆಗಳ ವಾಚನ ನಡೆಯಿತು.<br /> <br /> ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಪ್ರಾಧ್ಯಾಪಕ ಮ.ರಾಮಕೃಷ್ಣ ಮಾತನಾಡಿ, ಕವಿಯಾಗಬೇಕಾದರೆ, ನಾವು ಮಗುವಾಗಬೇಕು. ನಗುವ ಮನಸು ನಮ್ಮದಾಗಬೇಕು. ಕವಿ ಜಗತ್ತನ್ನು ನೋಡಿ ನಗುವುದಲ್ಲ. ಯಾರು ತನ್ನನ್ನು ನೋಡಿ ನಗುತ್ತಾರೋ ಅವರು ಉತ್ತಮ ಕವಿಗಳಾಗುತ್ತಾರೆ ಎಂದು ಹೇಳಿದರು.<br /> <br /> ಕವಿತೆ ಬರೆಯುವವರು ಹೃದಯದ ಆಳಕ್ಕೆ ಇಳಿಯಬೇಕು. ಮರುಗುವ, ಸ್ಪಂದಿಸುವ ಗುಣವಿರಬೇಕೆಂದರು. ಕವಿತೆ ತನ್ನ ಸುತ್ತ ಸುತ್ತಬೇಕು. ನಂತರ ಪ್ರಪಂಚ ಸುತ್ತಬೇಕು. ಅದು, ಸದಾ ಚಲನಶೀಲ ಆಗಿರಬೇಕು ಎಂದರು. ಕವಿತೆಯಲ್ಲಿನ ಧ್ವನಿ, ರಸವನ್ನು ಗುರುತಿಸುವುದನ್ನು ಕಲಿತಾಗಲೇ, ಉತ್ತಮ ಕವಿತೆಗಳು ಒಡಮೂಡಲು ಸಾಧ್ಯವಾಗುತ್ತದೆ. ಈ ಬಗೆಗೆ ಯುವಕವಿಗಳು ಎಚ್ಚರವಹಿಸಬೇಕು ಎಂದು ಸಲಹೆ ನೀಡಿದರು.<br /> <br /> ಪತ್ರಕರ್ತ ಬಿ.ಚಂದ್ರೇಗೌಡ ಮಾತನಾಡಿ, ಕಲೆ, ಸಾಹಿತ್ಯ, ಸಂಗೀತಕ್ಕೆ ಮೀಸಲಾತಿ ಎನ್ನುವುದಿಲ್ಲ. ಇಲ್ಲಿ ಶ್ರೇಷ್ಠತೆಯೇ ಪ್ರಧಾನ. ಇದನ್ನು ಗಮನಿಸಿ ಯುವ ಸಾಹಿತಿಗಳು ಮುಂದುವರೆಯಬೇಕು ಎಂದು ಕಿವಿಮಾತು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;"><strong>ವೀರಯೋಧ ಆಲಂಬಾಡಿ ಸತೀಶ್ ವೇದಿಕೆ (ಕೃಷ್ಣರಾಜಪೇಟೆ):</strong> ಸಂಜೆ ಐದರ ಸಮಯ. ನೇಸರ ತನ್ನ ದಿನಚರಿ ಮುಗಿಸಿದ್ದ. ಮುಗಿಲಲ್ಲಿ ಕಪ್ಪು ತಿಳಿ ಮೋಡ ಹೆಪ್ಪುಗಟ್ಟಿತ್ತು. ಹಕ್ಕಿಗಳು ಗೂಡು ಸೇರಲು ಹೊರಟ್ಟಿದ್ದವು. ಅದೇ ವೇಳೆ ಕವಿತೆಗಳು ಗರಿಬಿಚ್ಚತೊಡಗಿದವು..!</span><br /> <br /> `ಒಲುಮೆಯ ಕವಿ' ಕೆ.ಎಸ್.ನರಸಿಂಹಸ್ವಾಮಿ ಊರಲ್ಲಿ ಗರಿಬಿಚ್ಚಿದ ಕೆಲ ಕವಿತೆಗಳು ರಸಪೂರ್ಣವೂ, ಧ್ವನಿಪೂರ್ಣವಾಗಿದ್ದು, ಕವಿತೆಯ ಸೊಗಸು ಹೆಚ್ಚಿಸಿ ಮನಸ್ಸಿಗೆ ಕಚಗಳಿ ಇಟ್ಟವು.<br /> <br /> ಆದರೆ, ಬಹುತೇಕ ಕವಿತೆಗಳಲ್ಲಿ ಧ್ವನಿ ಮತ್ತು ರಸದಲ್ಲಿ ಕೊರತೆ ಕಾಣಿಸಿತು. ಕವನಗಳನ್ನು ವಾಚಿಸುವಲ್ಲಿಯೂ ಕೆಲವರು ಸೋತರು. ಕೆಲವರು ಪಾಠದಂತೆಯೂ, ಕೆಲವರು ಸಂಗೀತದ ಹಾಡುಗಾರಿಕೆಯಂತೆಯೂ ವಾಚಿಸಿದರು.<br /> <br /> ಕೆ.ವಿ.ರಮೇಶ್ ಅವರು ವಾಚಿಸಿದ ಮನಸು..ಮನಸುಗಳ ನಡುವೆ ಗೋಡೆ ಎದ್ದಿದೆ, ಪ್ರೀತಿ ಹುಟ್ಟುವುದು ಹೇಗೆ.. ಎನ್ನುವ ಸಾಲಿರುವ `ಯಕ್ಷಪ್ರಶ್ನೆ' ಶೀರ್ಷಿಕೆಯ ಕವಿತೆ; ಈಶ್ವರ್ ಅವರ `ಹುಟ್ಟಬಾರದಿತ್ತು'; ಗಣಂಗೂರು ನಂಜೇಗೌಡರ `ಕಂದನೂರಿನ' ಹಾಡು' ಕವಿತೆಗಳು ಗಮನ ಸೆಳೆದವು.<br /> <br /> ಜಲಕ್ಷಾಮ ತಂದೊಡ್ಡುವ ಸಮಸ್ಯೆಗಳು, ಜೀವ ಕಳೆದುಕೊಳ್ಳುವ ಪರಿಸರ ಕುರಿತಂತೆ `ಭಾಗೀರಥ ಜೀವರಥ, ಧರೆಗೆ ನೀ ಬಾರದಿರಲು, ನೇಸರ ಕೆಂಡ ಕಾರುತ್ತಿರಲು, ಬಾಯ್ತೆರೆದ ಭೂತಾಯಿ, ಸುಟ್ಟು ಸುಣ್ಣವಾಗಿದೆ...' ಎಂಬ ಸಾಲಿರುವ ಪ್ರಕಾಶ್ ಹಾರೋಹಳ್ಳಿ ಅವರ `ಭಗೀರಥನಿಗೆ' ಕವನ ಚಿಂತನೆಗೆ ಒಳಪಡಿಸಿತು.<br /> <br /> ಬಲ್ಲೇನಹಳ್ಳಿ ಮಂಜುನಾಥ್ ಅವರ `ಬಾಂಬೂ'; ಪರಿಸರ ಸಂರಕ್ಷಣೆ ಮಹತ್ವ ಕುರಿತ ಹರವು ದೇವೇಗೌಡರ `ಸಾಕ್ಷಿಗಾಗಿ'; ಸರಳ ವಿವಾಹದ ಮಹತ್ವ, ಆಡಂಬರ ತಂದೊಡ್ಡುವ ಸಮಸ್ಯೆಗಳು ಕುರಿತು ಸವಿತಾ ರಮೇಶ್, ಬೆಳಕು ಚೆಲ್ಲಿದ `ನಮ್ಮೆಲ್ಲರ ನಡಿಗೆ; ಹೆರಗನಹಳ್ಳಿ ದಿನೇಶ್ರ `ಇನ್ನೂ ಬೆಳಕಿದೆ' ಕವಿತೆಗಳು ಅರ್ಥಪೂರ್ಣವಾಗಿದ್ದವು.<br /> <br /> ಉಳಿದಂತೆ, ಕಾವೇರಿ ಸಮಸ್ಯೆ, ಹೆಣ್ಣಿನ ಕುರಿತ ಸಮಾಜದ ವಕ್ರನೋಟ, ಹಳ್ಳಿ ಕಟ್ಟೆಯಲ್ಲಿ ನಡೆಯುವ ಚರ್ಚೆ, ಭಾಷೆ ಸೇರಿದಂತೆ ಅನೇಕ ವಿಷಯ ಮೇಲೆ ಬೆಳಕು ಚೆಲ್ಲುವ ಕವಿತೆಗಳ ವಾಚನ ನಡೆಯಿತು.<br /> <br /> ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಪ್ರಾಧ್ಯಾಪಕ ಮ.ರಾಮಕೃಷ್ಣ ಮಾತನಾಡಿ, ಕವಿಯಾಗಬೇಕಾದರೆ, ನಾವು ಮಗುವಾಗಬೇಕು. ನಗುವ ಮನಸು ನಮ್ಮದಾಗಬೇಕು. ಕವಿ ಜಗತ್ತನ್ನು ನೋಡಿ ನಗುವುದಲ್ಲ. ಯಾರು ತನ್ನನ್ನು ನೋಡಿ ನಗುತ್ತಾರೋ ಅವರು ಉತ್ತಮ ಕವಿಗಳಾಗುತ್ತಾರೆ ಎಂದು ಹೇಳಿದರು.<br /> <br /> ಕವಿತೆ ಬರೆಯುವವರು ಹೃದಯದ ಆಳಕ್ಕೆ ಇಳಿಯಬೇಕು. ಮರುಗುವ, ಸ್ಪಂದಿಸುವ ಗುಣವಿರಬೇಕೆಂದರು. ಕವಿತೆ ತನ್ನ ಸುತ್ತ ಸುತ್ತಬೇಕು. ನಂತರ ಪ್ರಪಂಚ ಸುತ್ತಬೇಕು. ಅದು, ಸದಾ ಚಲನಶೀಲ ಆಗಿರಬೇಕು ಎಂದರು. ಕವಿತೆಯಲ್ಲಿನ ಧ್ವನಿ, ರಸವನ್ನು ಗುರುತಿಸುವುದನ್ನು ಕಲಿತಾಗಲೇ, ಉತ್ತಮ ಕವಿತೆಗಳು ಒಡಮೂಡಲು ಸಾಧ್ಯವಾಗುತ್ತದೆ. ಈ ಬಗೆಗೆ ಯುವಕವಿಗಳು ಎಚ್ಚರವಹಿಸಬೇಕು ಎಂದು ಸಲಹೆ ನೀಡಿದರು.<br /> <br /> ಪತ್ರಕರ್ತ ಬಿ.ಚಂದ್ರೇಗೌಡ ಮಾತನಾಡಿ, ಕಲೆ, ಸಾಹಿತ್ಯ, ಸಂಗೀತಕ್ಕೆ ಮೀಸಲಾತಿ ಎನ್ನುವುದಿಲ್ಲ. ಇಲ್ಲಿ ಶ್ರೇಷ್ಠತೆಯೇ ಪ್ರಧಾನ. ಇದನ್ನು ಗಮನಿಸಿ ಯುವ ಸಾಹಿತಿಗಳು ಮುಂದುವರೆಯಬೇಕು ಎಂದು ಕಿವಿಮಾತು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>