<p><strong>ಬೆಂಗಳೂರು: </strong>ನಗರದ ರೈಲ್ವೆ ನಿಲ್ದಾಣದ ಸಮೀಪದ ಓಕುಳಿಪುರ ಜಂಕ್ಷನ್ ಆಸುಪಾಸಿನ ಪ್ರದೇಶದಲ್ಲಿ ಗಂಟೆಗಟ್ಟಲೆ ಸಂಚಾರದಟ್ಟಣೆಯಲ್ಲಿ ಸಿಲುಕಿ ಬಳಲಿರುವ ವಾಹನ ಸವಾರರು ಮುಂದಿನ ದಿನಗಳಲ್ಲಿ ಒತ್ತಡರಹಿತರಾಗಿ ಸಂಚರಿಸಬಹುದು.<br /> <br /> ಓಕಳಿಪುರ ಜಂಕ್ಷನ್ನಿಂದ ಫೌಂಟೇನ್ ವೃತ್ತದವರೆಗೆ (ಸಂಗೊಳ್ಳಿ ರಾಯಣ್ಣ) ಎಂಟು ಪಥದ ಸಿಗ್ನಲ್ ಮುಕ್ತ ಕಾರಿಡಾರ್ ಶೀಘ್ರದಲ್ಲೇ ನಿರ್ಮಾಣವಾಗಲಿದೆ. ಈ ಕಾರಿಡಾರ್ ನಿರ್ಮಾಣಕ್ಕೆ ಎದುರಾಗಿದ್ದ ಆತಂಕವನ್ನು ರಾಜ್ಯ ಸರ್ಕಾರ ನಿವಾರಿಸಿದೆ. ಕಾರಿಡಾರ್ ನಿರ್ಮಾಣದಿಂದ ವಾಹನ ದಟ್ಟಣೆ ಕಡಿಮೆ ಆಗಿ ನಗರದ ಕೇಂದ್ರ ಭಾಗ ಹಾಗೂ ರಾಜಾಜಿನಗರ, ವಿಜಯನಗರ, ಬಸವೇಶ್ವರ ನಗರ, ನಾಗರಭಾವಿ ಮತ್ತಿತರ ಪ್ರದೇಶಗಳ ನಡುವೆ ಸುಲಲಿತ ಸಂಚಾರ ವ್ಯವಸ್ಥೆ ರೂಪುಗೊಳ್ಳಲಿದೆ.<br /> <br /> <strong>ದಟ್ಟಣೆ ಯಾಕೆ: </strong>ಕೆಂಪೇಗೌಡ ಬಸ್ ನಿಲ್ದಾಣ, ನಗರ ರೈಲು ನಿಲ್ದಾಣದ ಪಕ್ಕದಲ್ಲೇ ಈ ಜಂಕ್ಷನ್ ಇರುವುದರಿಂದ ವಾಹನ ದಟ್ಟಣೆ ವಿಪರೀತವಾಗಿದೆ. ವರ್ಷದಿಂದ ವರ್ಷಕ್ಕೆ ಈ ಮಾರ್ಗದಲ್ಲಿ ಸಂಚರಿಸುತ್ತಿರುವ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಇದರಿಂದಾಗಿ ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ವಾಹನ ಸವಾರರು ಗಂಟೆಗಟ್ಟಲೆ ಸಂಚಾರ ದಟ್ಟಣೆಯಲ್ಲಿ ಪರಿತಪಿಸುವಂತಾಗಿದೆ.<br /> <br /> <strong>12 ವರ್ಷದ ಹಳೆಯ ಪ್ರಸ್ತಾಪ</strong><br /> 2002ರಲ್ಲೇ ಪಾಲಿಕೆಯಿಂದ ಈ ಯೋಜನೆಗೆ ಒಪ್ಪಿಗೆ ಸೂಚಿಸಲಾಗಿತ್ತು. ರಾಜ್ಯ ಸರ್ಕಾರ 2012ರ ಫೆ.2ರಂದೇ ಅಷ್ಟ ಪಥದ ಈ ಯೋಜನೆಗೆ ಒಪ್ಪಿಗೆ ನೀಡಿದ್ದರೂ ಭೂಮಿ ಹಸ್ತಾಂತರ ವಿವಾದದಿಂದಾಗಿ ಕಾಮಗಾರಿ ಆರಂಭವಾಗಿರಲಿಲ್ಲ. ಅಗತ್ಯ ಸ್ಥಳ ಬಿಟ್ಟುಕೊಡಲು ರೈಲ್ವೆ ಇಲಾಖೆ ಸಮ್ಮತಿಸಿರಲಿಲ್ಲ. 2012ರ ಡಿ.20ರಂದು ಗುದ್ದಲಿ ಪೂಜೆ ಕೂಡ ಮಾಡಲಾಗಿತ್ತು. ಜಮೀನು ಹಸ್ತಾಂತರ ವಿಳಂಬದ ಕಾರಣ ₨ 115.50 ಕೋಟಿ ವೆಚ್ಚದ ಈ ಕಾಮಗಾರಿ ಒಂದೂವರೆ ವರ್ಷದಿಂದ ನೆನಗುದಿಗೆ ಬಿದ್ದಿತ್ತು.<br /> <br /> ಬಳಿಕ ಜಾಗ ನೀಡಲು ಒಪ್ಪಿದ ರೈಲ್ವೆ ಇಲಾಖೆ, ಬೇರೆಡೆ ಭೂಮಿ ಒದಗಿಸುವಂತೆ ಷರತ್ತು ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಬಿನ್ನಿ ಮಿಲ್ ಬಳಿಯ 3.16 ಎಕರೆ ನೀಡಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಓಕಳಿಪುರ ಜಂಕ್ಷನ್ ಕಾಮಗಾರಿ ಸಲುವಾಗಿ ರೈಲ್ವೆಗೆ ಸೇರಿದ 12,818 ಚ.ಮೀ ಜಾಗವನ್ನು ಸ್ವಾಧೀನಕ್ಕೆ ಪಡೆಯಲಾಗಿದೆ. ಇದಕ್ಕೆ ಪರ್ಯಾಯವಾಗಿ ಬಿನ್ನಿಮಿಲ್ನ 3.16 ಎಕರೆ ಜಾಗವನ್ನು ಹಸ್ತಾಂತರ ಮಾಡಲಾಗಿದೆ. ಈ ಜಾಗಕ್ಕೆ ₨ 70.13 ಕೋಟಿ ನೀಡಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಮೊತ್ತವನ್ನು ಬಿಬಿಎಂಪಿ ನೀಡಿದೆ.<br /> <br /> ಭೂಸ್ವಾಧೀನ ಮತ್ತಿತರ ಕಾರಣಗಳಿಂದಾಗಿ ಈ ಯೋಜನೆಯಿಂದ ಜನರಿಗೆ ಹೆಚ್ಚಿನ ತೊಂದರೆ ಆಗುವುದಿಲ್ಲ. ಯೋಜನೆಗೆ ಅಧಿಕ ಪ್ರಮಾಣದ ಜಾಗವನ್ನು ದಕ್ಷಿಣ ರೈಲ್ವೆಯಿಂದಲೇ ಪಡೆಯಲಾಗುತ್ತಿದೆ. ಸ್ಥಳೀಯರ 251 ಚದರ ಮೀಟರ್ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.</p>.<p><strong>ಯೋಜನೆಯ ಸಾರ</strong><br /> *ಭೂಸ್ವಾಧೀನ, ಒಳಚರಂಡಿಗಳ ಸ್ಥಳಾಂತರ ಸೇರಿದಂತೆ ಒಟ್ಟು ಯೋಜನಾ ವೆಚ್ಚ ₨115 ಕೋಟಿ<br /> *ಟೆಂಡರ್ ಮೊತ್ತ ₨102.82 ಕೋಟಿ<br /> *ರೈಲ್ವೆ ಇಲಾಖೆಯಿಂದ ಸ್ವಾಧೀನ ಪಡಿಸಿಕೊಳ್ಳುತ್ತಿರುವ ಭೂಪ್ರದೇಶ 12,818 ಚದರ ಮೀಟರ್<br /> *ಪರ್ಯಾಯವಾಗಿ ರೈಲ್ವೆಗೆ ಬಿನ್ನಿ ಮಿಲ್ ಬಳಿ 3.16 ಎಕರೆ ಹಸ್ತಾಂತರ<br /> *ಯೋಜನಾ ಪ್ರದೇಶದ ರೈಲ್ವೆ ರನ್ನಿಂಗ್ ರೂಮ್ ಕಟ್ಟಡ ಸ್ಥಳಾಂತರಿಸಿ ಮರು ನಿರ್ಮಾಣ<br /> *ಈಗಿರುವ ರೈಲ್ವೆ ವಸತಿಗೃಹವನ್ನು ನೆಲಸಮ ಮಾಡಿ ಹೊಸ ವಸತಿಗೃಹ ನಿರ್ಮಾಣಕ್ಕೆ ಬಿಬಿಎಂಪಿಯಿಂದ ₨4.5 ಕೋಟಿ ಆರಂಭಿಕ ಠೇವಣಿ<br /> *ಬೆಂಗಳೂರು–ತುಮಕೂರು ಹಾಗೂ ಬೆಂಗಳೂರು–ಚೆನ್ನೈ ರೈಲು ಮಾರ್ಗದಲ್ಲಿ ಎಂಟು ಪಥದ ರೈಲ್ವೆ ಕೆಳಸೇತುವೆ (ಆರ್ಯುಬಿ) ನಿರ್ಮಾಣವೂ ಈ ಯೋಜನೆಯಲ್ಲಿ ಸೇರಿದೆ.</p>.<p><strong>18 ತಿಂಗಳಲ್ಲಿ ಯೋಜನೆ ಪೂರ್ಣ</strong><br /> ಈ ಯೋಜನೆಯ ಗುತ್ತಿಗೆಯನ್ನು ಸಿಂಪ್ಲೆಂಕ್ಸ್ ನಿರ್ಮಾಣ ಸಂಸ್ಥೆಗೆ ನೀಡಲಾಗಿದೆ. 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಿದ್ದು, ನಿರ್ಮಾಣ ಸಂದರ್ಭದಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ನಿಗಾ ವಹಿಸಲು ಸೂಚಿಸಲಾಗಿದೆ.</p>.<p><strong>89 ಮರಗಳ ತೆರವು</strong><br /> ರಸ್ತೆ ನಿರ್ಮಾಣ ಕಾರಣದಿಂದ ರೈಲ್ವೆ ನಿಲ್ದಾಣ ಸಮೀಪದ ಹಲವು ಕಟ್ಟಡಗಳನ್ನು ನೆಲಸಮ ಮಾಡಬೇಕಾಗಿದೆ. 52 ವಸತಿ ಗೃಹಗಳು ತೆರವುಗೊಳ್ಳಲಿವೆ. ಬಿಬಿಎಂಪಿ ವ್ಯಾಪ್ತಿಯ 39 ಹಾಗೂ ರೈಲ್ವೆ ವ್ಯಾಪ್ತಿಯ 50 ಮರಗಳನ್ನು ಕಟಾವು ಮಾಡಬೇಕಿದೆ. ಆದಷ್ಟು ಬೇಗ ಈ ಕೆಲಸ ಮಾಡಲಾಗುವುದು. ಅದರ ಬಳಿಕ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ನಗರದ ರೈಲ್ವೆ ನಿಲ್ದಾಣದ ಸಮೀಪದ ಓಕುಳಿಪುರ ಜಂಕ್ಷನ್ ಆಸುಪಾಸಿನ ಪ್ರದೇಶದಲ್ಲಿ ಗಂಟೆಗಟ್ಟಲೆ ಸಂಚಾರದಟ್ಟಣೆಯಲ್ಲಿ ಸಿಲುಕಿ ಬಳಲಿರುವ ವಾಹನ ಸವಾರರು ಮುಂದಿನ ದಿನಗಳಲ್ಲಿ ಒತ್ತಡರಹಿತರಾಗಿ ಸಂಚರಿಸಬಹುದು.<br /> <br /> ಓಕಳಿಪುರ ಜಂಕ್ಷನ್ನಿಂದ ಫೌಂಟೇನ್ ವೃತ್ತದವರೆಗೆ (ಸಂಗೊಳ್ಳಿ ರಾಯಣ್ಣ) ಎಂಟು ಪಥದ ಸಿಗ್ನಲ್ ಮುಕ್ತ ಕಾರಿಡಾರ್ ಶೀಘ್ರದಲ್ಲೇ ನಿರ್ಮಾಣವಾಗಲಿದೆ. ಈ ಕಾರಿಡಾರ್ ನಿರ್ಮಾಣಕ್ಕೆ ಎದುರಾಗಿದ್ದ ಆತಂಕವನ್ನು ರಾಜ್ಯ ಸರ್ಕಾರ ನಿವಾರಿಸಿದೆ. ಕಾರಿಡಾರ್ ನಿರ್ಮಾಣದಿಂದ ವಾಹನ ದಟ್ಟಣೆ ಕಡಿಮೆ ಆಗಿ ನಗರದ ಕೇಂದ್ರ ಭಾಗ ಹಾಗೂ ರಾಜಾಜಿನಗರ, ವಿಜಯನಗರ, ಬಸವೇಶ್ವರ ನಗರ, ನಾಗರಭಾವಿ ಮತ್ತಿತರ ಪ್ರದೇಶಗಳ ನಡುವೆ ಸುಲಲಿತ ಸಂಚಾರ ವ್ಯವಸ್ಥೆ ರೂಪುಗೊಳ್ಳಲಿದೆ.<br /> <br /> <strong>ದಟ್ಟಣೆ ಯಾಕೆ: </strong>ಕೆಂಪೇಗೌಡ ಬಸ್ ನಿಲ್ದಾಣ, ನಗರ ರೈಲು ನಿಲ್ದಾಣದ ಪಕ್ಕದಲ್ಲೇ ಈ ಜಂಕ್ಷನ್ ಇರುವುದರಿಂದ ವಾಹನ ದಟ್ಟಣೆ ವಿಪರೀತವಾಗಿದೆ. ವರ್ಷದಿಂದ ವರ್ಷಕ್ಕೆ ಈ ಮಾರ್ಗದಲ್ಲಿ ಸಂಚರಿಸುತ್ತಿರುವ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಇದರಿಂದಾಗಿ ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ವಾಹನ ಸವಾರರು ಗಂಟೆಗಟ್ಟಲೆ ಸಂಚಾರ ದಟ್ಟಣೆಯಲ್ಲಿ ಪರಿತಪಿಸುವಂತಾಗಿದೆ.<br /> <br /> <strong>12 ವರ್ಷದ ಹಳೆಯ ಪ್ರಸ್ತಾಪ</strong><br /> 2002ರಲ್ಲೇ ಪಾಲಿಕೆಯಿಂದ ಈ ಯೋಜನೆಗೆ ಒಪ್ಪಿಗೆ ಸೂಚಿಸಲಾಗಿತ್ತು. ರಾಜ್ಯ ಸರ್ಕಾರ 2012ರ ಫೆ.2ರಂದೇ ಅಷ್ಟ ಪಥದ ಈ ಯೋಜನೆಗೆ ಒಪ್ಪಿಗೆ ನೀಡಿದ್ದರೂ ಭೂಮಿ ಹಸ್ತಾಂತರ ವಿವಾದದಿಂದಾಗಿ ಕಾಮಗಾರಿ ಆರಂಭವಾಗಿರಲಿಲ್ಲ. ಅಗತ್ಯ ಸ್ಥಳ ಬಿಟ್ಟುಕೊಡಲು ರೈಲ್ವೆ ಇಲಾಖೆ ಸಮ್ಮತಿಸಿರಲಿಲ್ಲ. 2012ರ ಡಿ.20ರಂದು ಗುದ್ದಲಿ ಪೂಜೆ ಕೂಡ ಮಾಡಲಾಗಿತ್ತು. ಜಮೀನು ಹಸ್ತಾಂತರ ವಿಳಂಬದ ಕಾರಣ ₨ 115.50 ಕೋಟಿ ವೆಚ್ಚದ ಈ ಕಾಮಗಾರಿ ಒಂದೂವರೆ ವರ್ಷದಿಂದ ನೆನಗುದಿಗೆ ಬಿದ್ದಿತ್ತು.<br /> <br /> ಬಳಿಕ ಜಾಗ ನೀಡಲು ಒಪ್ಪಿದ ರೈಲ್ವೆ ಇಲಾಖೆ, ಬೇರೆಡೆ ಭೂಮಿ ಒದಗಿಸುವಂತೆ ಷರತ್ತು ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಬಿನ್ನಿ ಮಿಲ್ ಬಳಿಯ 3.16 ಎಕರೆ ನೀಡಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಓಕಳಿಪುರ ಜಂಕ್ಷನ್ ಕಾಮಗಾರಿ ಸಲುವಾಗಿ ರೈಲ್ವೆಗೆ ಸೇರಿದ 12,818 ಚ.ಮೀ ಜಾಗವನ್ನು ಸ್ವಾಧೀನಕ್ಕೆ ಪಡೆಯಲಾಗಿದೆ. ಇದಕ್ಕೆ ಪರ್ಯಾಯವಾಗಿ ಬಿನ್ನಿಮಿಲ್ನ 3.16 ಎಕರೆ ಜಾಗವನ್ನು ಹಸ್ತಾಂತರ ಮಾಡಲಾಗಿದೆ. ಈ ಜಾಗಕ್ಕೆ ₨ 70.13 ಕೋಟಿ ನೀಡಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಮೊತ್ತವನ್ನು ಬಿಬಿಎಂಪಿ ನೀಡಿದೆ.<br /> <br /> ಭೂಸ್ವಾಧೀನ ಮತ್ತಿತರ ಕಾರಣಗಳಿಂದಾಗಿ ಈ ಯೋಜನೆಯಿಂದ ಜನರಿಗೆ ಹೆಚ್ಚಿನ ತೊಂದರೆ ಆಗುವುದಿಲ್ಲ. ಯೋಜನೆಗೆ ಅಧಿಕ ಪ್ರಮಾಣದ ಜಾಗವನ್ನು ದಕ್ಷಿಣ ರೈಲ್ವೆಯಿಂದಲೇ ಪಡೆಯಲಾಗುತ್ತಿದೆ. ಸ್ಥಳೀಯರ 251 ಚದರ ಮೀಟರ್ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.</p>.<p><strong>ಯೋಜನೆಯ ಸಾರ</strong><br /> *ಭೂಸ್ವಾಧೀನ, ಒಳಚರಂಡಿಗಳ ಸ್ಥಳಾಂತರ ಸೇರಿದಂತೆ ಒಟ್ಟು ಯೋಜನಾ ವೆಚ್ಚ ₨115 ಕೋಟಿ<br /> *ಟೆಂಡರ್ ಮೊತ್ತ ₨102.82 ಕೋಟಿ<br /> *ರೈಲ್ವೆ ಇಲಾಖೆಯಿಂದ ಸ್ವಾಧೀನ ಪಡಿಸಿಕೊಳ್ಳುತ್ತಿರುವ ಭೂಪ್ರದೇಶ 12,818 ಚದರ ಮೀಟರ್<br /> *ಪರ್ಯಾಯವಾಗಿ ರೈಲ್ವೆಗೆ ಬಿನ್ನಿ ಮಿಲ್ ಬಳಿ 3.16 ಎಕರೆ ಹಸ್ತಾಂತರ<br /> *ಯೋಜನಾ ಪ್ರದೇಶದ ರೈಲ್ವೆ ರನ್ನಿಂಗ್ ರೂಮ್ ಕಟ್ಟಡ ಸ್ಥಳಾಂತರಿಸಿ ಮರು ನಿರ್ಮಾಣ<br /> *ಈಗಿರುವ ರೈಲ್ವೆ ವಸತಿಗೃಹವನ್ನು ನೆಲಸಮ ಮಾಡಿ ಹೊಸ ವಸತಿಗೃಹ ನಿರ್ಮಾಣಕ್ಕೆ ಬಿಬಿಎಂಪಿಯಿಂದ ₨4.5 ಕೋಟಿ ಆರಂಭಿಕ ಠೇವಣಿ<br /> *ಬೆಂಗಳೂರು–ತುಮಕೂರು ಹಾಗೂ ಬೆಂಗಳೂರು–ಚೆನ್ನೈ ರೈಲು ಮಾರ್ಗದಲ್ಲಿ ಎಂಟು ಪಥದ ರೈಲ್ವೆ ಕೆಳಸೇತುವೆ (ಆರ್ಯುಬಿ) ನಿರ್ಮಾಣವೂ ಈ ಯೋಜನೆಯಲ್ಲಿ ಸೇರಿದೆ.</p>.<p><strong>18 ತಿಂಗಳಲ್ಲಿ ಯೋಜನೆ ಪೂರ್ಣ</strong><br /> ಈ ಯೋಜನೆಯ ಗುತ್ತಿಗೆಯನ್ನು ಸಿಂಪ್ಲೆಂಕ್ಸ್ ನಿರ್ಮಾಣ ಸಂಸ್ಥೆಗೆ ನೀಡಲಾಗಿದೆ. 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಿದ್ದು, ನಿರ್ಮಾಣ ಸಂದರ್ಭದಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ನಿಗಾ ವಹಿಸಲು ಸೂಚಿಸಲಾಗಿದೆ.</p>.<p><strong>89 ಮರಗಳ ತೆರವು</strong><br /> ರಸ್ತೆ ನಿರ್ಮಾಣ ಕಾರಣದಿಂದ ರೈಲ್ವೆ ನಿಲ್ದಾಣ ಸಮೀಪದ ಹಲವು ಕಟ್ಟಡಗಳನ್ನು ನೆಲಸಮ ಮಾಡಬೇಕಾಗಿದೆ. 52 ವಸತಿ ಗೃಹಗಳು ತೆರವುಗೊಳ್ಳಲಿವೆ. ಬಿಬಿಎಂಪಿ ವ್ಯಾಪ್ತಿಯ 39 ಹಾಗೂ ರೈಲ್ವೆ ವ್ಯಾಪ್ತಿಯ 50 ಮರಗಳನ್ನು ಕಟಾವು ಮಾಡಬೇಕಿದೆ. ಆದಷ್ಟು ಬೇಗ ಈ ಕೆಲಸ ಮಾಡಲಾಗುವುದು. ಅದರ ಬಳಿಕ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>