<p>ಕಂಬಾರರು ಆಡುಭಾಷೆಯ ಸೊಗಡಿನೊಂದಿಗೆ ಕಾವ್ಯ ಕಟ್ಟಿದರು. ಉತ್ತರ ಕರ್ನಾಟಕದ ಸಾಮಾನ್ಯರ ಬದುಕನ್ನು ಆರಿಸಿ ಕೃತಿಗಳನ್ನು ರಚಿಸಿದರು. ಅರ್ಹತೆಗೆ ತಕ್ಕೆ ಪ್ರಶಸ್ತಿ ಲಭಿಸಿದೆ.<br /> - ಡಾ.ಚಿದಾನಂದಮೂರ್ತಿ, ಸಂಶೋಧಕ</p>.<p>ಯಾರಿಗೆ ಪ್ರಶಸ್ತಿ ಸಿಗಬೇಕಿತ್ತೋ ಅವರಿಗೇ ಸಿಕ್ಕಿದೆ. ಎಂಟನೇ ಜ್ಞಾನಪೀಠ ದೊರೆತಿರುವುದರಿಂದ ಕನ್ನಡಕ್ಕೆ ಮತ್ತೊಂದು ಕೋಡು ಮೂಡಿದೆ. ಪ್ರಶಸ್ತಿ ಪಡೆಯುವ ಮೂಲಕ ರಾಷ್ಟ್ರದ ಗಮನವನ್ನು ಅವರು ಕನ್ನಡದೆಡೆಗೆ ಸೆಳೆದಿದ್ದಾರೆ.<br /> ಎಚ್.ಎಸ್.ವೆಂಕಟೇಶಮೂರ್ತಿ, ಕವಿ</p>.<p>ಕಂಬಾರರು ವರ್ತಮಾನ ಕಾಲದ ಸಾಂಸ್ಕೃತಿಕ ವಕ್ತಾರ. ನಮ್ಮಂತಹ ಕಿರಿಯ ತಲೆಮಾರನ್ನು ಪರವಶಗೊಳಿಸಿದ ಲೇಖಕ. ಪ್ರಶಸ್ತಿಯಿಂದ ಉತ್ತರ ಕರ್ನಾಟಕ ಭಾಷೆಗೆ ಶಕ್ತಿ ಇದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅವರ `ಶಿಖರ ಸೂರ್ಯ~ ಮತ್ತಿತರ ಕೃತಿಗಳು ಇಂಗ್ಲೀಷ್ನಲ್ಲಿ ರಚನೆಯಾಗಿದ್ದರೆ ಅವುಗಳಿಗೆ ನೊಬೆಲ್ ದೊರೆಯುತ್ತಿತ್ತು. ನಮ್ಮ ನಡುವೆ ಇಂತಹ ಲೇಖಕ ಇರುವುದೇ ಸಂತಸದ ವಿಚಾರ.<br /> - ಕುಂ.ವೀರಭದ್ರಪ್ಪ, ಕಥೆಗಾರ</p>.<p>ಕಂಬಾರರು ನವ್ಯ ಕಾವ್ಯಕ್ಕೆ ಜಾನಪದದ ಎಳೆಯನ್ನು ತಂದು ಸೇರಿಸಿದರು. ಅವರ ಮೊದಲ ಕೃತಿ `ಹೇಳತೇನ ಕೇಳ~ದಿಂದಲೇ ಪ್ರತಿಭೆಯನ್ನು ಅರಿಯಬಹುದು. ಬಹಳ ಬಡತನವಿದ್ದರೂ ಸ್ವಂತಶಕ್ತಿಯಿಂದ ಮೇಲೆ ಬಂದರು. ಕಬೀರ್ ಸಮ್ಮಾನ್ ಪ್ರಶಸ್ತಿಯನ್ನು ಈಗಾಗಲೇ ಪಡೆದಿರುವ ಅವರಿಗೆ ಇದು ದೊರೆಯಲೇ ಬೇಕಾದ ಪ್ರಶಸ್ತಿ.<br /> - ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ, ಕವಿ</p>.<p>ಬೇಂದ್ರೆ ನಂತರ ಅಚ್ಚಗನ್ನಡದ ಹಿನ್ನೆಲೆಯಲ್ಲಿ ಸಾಹಿತ್ಯ ರಚಿಸಿದ್ದು ಕಂಬಾರರು ಮಾತ್ರ. ಅವರು ದೊಡ್ಡ ನಾಟಕಕಾರ. ದೇಶದಲ್ಲಿಯೇ ಅತಿ ಹೆಚ್ಚು ಜ್ಞಾನಪೀಠ ಪಡೆಯುವ ಮೂಲಕ ಕನ್ನಡದ ಪ್ರತಿಷ್ಠೆ ಹೆಚ್ಚಿದೆ.<br /> - ಕೆ.ಮರುಳಸಿದ್ದಪ್ಪ, ಸಾಹಿತಿ</p>.<p>ಇದಕ್ಕಿಂತ ಸಂತೋಷ ಬೇರೆ ಏನಿದೆ? ಆಧುನಿಕ ಕಾವ್ಯದ ಜಾನಪದ ಸತ್ವಕ್ಕೆ ಮಹತ್ವ ಬಂದಂತಾಯಿತು. ಕನ್ನಡ ಸತ್ವ ರಾಷ್ಟ್ರಮಟ್ಟದಲ್ಲಿ ಮಿಂಚುವಂತಾಯಿತು. ಕಂಬಾರರಿಗೆ ಅಭಿನಂದನೆಗಳು<br /> - ವೈದೇಹಿ, ಲೇಖಕಿ</p>.<p>ಕಂಬಾರರಿಗೆ ಪ್ರಶಸ್ತಿ ಬಂದಿರುವುದರಿಂದ ಜಾನಪದ ಜಗತ್ತಿಗೇ ಪ್ರಶಸ್ತಿ ಬಂದಂತಾಗಿದೆ. ಕಾವ್ಯಕ್ಕೆ ಜಾನಪದ ಸಂಸ್ಕಾರವನ್ನು ತಂದುಕೊಟ್ಟವರು ಅವರು. ಶಿಷ್ಟ ಪಂಥವನ್ನು ಮೀರಿ ಜಾನಪದ ನಾಟಕಗಳನ್ನು ರಚಿಸಿದರು. ಜಾನಪದ ಅಕಾಡೆಮಿ ಅವರನ್ನು ಅಭಿನಂದಿಸುತ್ತದೆ. <br /> - ಗೊ.ರು.ಚನ್ನಬಸಪ್ಪ, <br /> ಜಾನಪದ ಅಕಾಡೆಮಿ ಅಧ್ಯಕ್ಷ <br /> ಕಂಬಾರರಲ್ಲಿ ಜಾನಪದ ಸೊಗಡು, ಆಧುನಿಕ ಸಂವೇದನೆ ಸಮ್ಮಿಲನಗೊಂಡಿದೆ. ವಸಾಹತುಶಾಹಿ ಹಾಗೂ ಜಾಗತೀಕರಣದ ಕ್ರೌರ್ಯವನ್ನು ಅವರ ಕೃತಿಗಳಲ್ಲಿ ಎದುರಿಸಿದ್ದಾರೆ. <br /> - ಡಾ.ಸಿದ್ದಲಿಂಗಯ್ಯ, <br /> ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ</p>.<p>ಕನ್ನಡಕ್ಕೆ ಇದೊಂದು ದೊಡ್ಡ ಆನಂದ. ಇದುವರೆಗೆ ಜ್ಞಾನಪೀಠ ಪಡೆದವರಿಗಿಂತಲೂ ಕಂಬಾರರ ಪ್ರತಿಭೆ ವಿಭಿನ್ನ, ಜಾಗತೀಕರಣದ ಬಗ್ಗೆ ದೇಸಿ ನೆಲೆಗಟ್ಟಿನಲ್ಲಿ ಚಿಂತಿಸಿದವರು.<br /> - ಅಗ್ರಹಾರ ಕೃಷ್ಣಮೂರ್ತಿ, <br /> ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ</p>.<p><br /> `ಅತಿ ಸಂತೋಷವಾಗಿದೆ~ ಎಂದು ಧಾರವಾಡದ ಮನೋಹರ ಗ್ರಂಥಮಾಲೆಯ ಡಾ. ಡಾ.ರಮಾಕಾಂತ ಜೋಶಿ. ಹೇಳಿದರು. 1967ರಲ್ಲಿ ಅವರ ಸಂಗ್ಯಾಬಾಳ್ಯಾ ಹಾಗೂ 1969ರಲ್ಲಿ ಋಷ್ಯಶೃಂಗ ನಾಟಕಗಳನ್ನು ಮನೋಹರ ಗ್ರಂಥಮಾಲೆಯಿಂದ ಪ್ರಕಟಿದ್ದೆವು. ಬೇಂದ್ರೆ ತರುವಾಯ ಉತ್ತರ ಕರ್ನಾಟಕದ ಭಾಷೆಯನ್ನು ಸಮರ್ಥವಾಗಿ ಬಳಸಿದವರು ಕಂಬಾರರು~ ಎಂದು ಜೋಶಿ ಖುಷಿಯಾಗಿ ಹೇಳಿದರು.<br /> -ರಮಾಕಾಂತ ಜೋಶಿ</p>.<p>ಕನಾಟಕ ತೆಲುಗು ಅಕಾಡೆಮಿ ಅಧ್ಯಕ್ಷ ರಾಧಾಕೃಷ್ಣರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್, ಮೇಯರ್ ಶಾರದಮ್ಮ ಮತ್ತಿತರರು ಕಂಬಾರರಿಗೆ ತಮ್ಮ ಅಭಿನಂದನೆಯನ್ನು ಸಲ್ಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಂಬಾರರು ಆಡುಭಾಷೆಯ ಸೊಗಡಿನೊಂದಿಗೆ ಕಾವ್ಯ ಕಟ್ಟಿದರು. ಉತ್ತರ ಕರ್ನಾಟಕದ ಸಾಮಾನ್ಯರ ಬದುಕನ್ನು ಆರಿಸಿ ಕೃತಿಗಳನ್ನು ರಚಿಸಿದರು. ಅರ್ಹತೆಗೆ ತಕ್ಕೆ ಪ್ರಶಸ್ತಿ ಲಭಿಸಿದೆ.<br /> - ಡಾ.ಚಿದಾನಂದಮೂರ್ತಿ, ಸಂಶೋಧಕ</p>.<p>ಯಾರಿಗೆ ಪ್ರಶಸ್ತಿ ಸಿಗಬೇಕಿತ್ತೋ ಅವರಿಗೇ ಸಿಕ್ಕಿದೆ. ಎಂಟನೇ ಜ್ಞಾನಪೀಠ ದೊರೆತಿರುವುದರಿಂದ ಕನ್ನಡಕ್ಕೆ ಮತ್ತೊಂದು ಕೋಡು ಮೂಡಿದೆ. ಪ್ರಶಸ್ತಿ ಪಡೆಯುವ ಮೂಲಕ ರಾಷ್ಟ್ರದ ಗಮನವನ್ನು ಅವರು ಕನ್ನಡದೆಡೆಗೆ ಸೆಳೆದಿದ್ದಾರೆ.<br /> ಎಚ್.ಎಸ್.ವೆಂಕಟೇಶಮೂರ್ತಿ, ಕವಿ</p>.<p>ಕಂಬಾರರು ವರ್ತಮಾನ ಕಾಲದ ಸಾಂಸ್ಕೃತಿಕ ವಕ್ತಾರ. ನಮ್ಮಂತಹ ಕಿರಿಯ ತಲೆಮಾರನ್ನು ಪರವಶಗೊಳಿಸಿದ ಲೇಖಕ. ಪ್ರಶಸ್ತಿಯಿಂದ ಉತ್ತರ ಕರ್ನಾಟಕ ಭಾಷೆಗೆ ಶಕ್ತಿ ಇದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅವರ `ಶಿಖರ ಸೂರ್ಯ~ ಮತ್ತಿತರ ಕೃತಿಗಳು ಇಂಗ್ಲೀಷ್ನಲ್ಲಿ ರಚನೆಯಾಗಿದ್ದರೆ ಅವುಗಳಿಗೆ ನೊಬೆಲ್ ದೊರೆಯುತ್ತಿತ್ತು. ನಮ್ಮ ನಡುವೆ ಇಂತಹ ಲೇಖಕ ಇರುವುದೇ ಸಂತಸದ ವಿಚಾರ.<br /> - ಕುಂ.ವೀರಭದ್ರಪ್ಪ, ಕಥೆಗಾರ</p>.<p>ಕಂಬಾರರು ನವ್ಯ ಕಾವ್ಯಕ್ಕೆ ಜಾನಪದದ ಎಳೆಯನ್ನು ತಂದು ಸೇರಿಸಿದರು. ಅವರ ಮೊದಲ ಕೃತಿ `ಹೇಳತೇನ ಕೇಳ~ದಿಂದಲೇ ಪ್ರತಿಭೆಯನ್ನು ಅರಿಯಬಹುದು. ಬಹಳ ಬಡತನವಿದ್ದರೂ ಸ್ವಂತಶಕ್ತಿಯಿಂದ ಮೇಲೆ ಬಂದರು. ಕಬೀರ್ ಸಮ್ಮಾನ್ ಪ್ರಶಸ್ತಿಯನ್ನು ಈಗಾಗಲೇ ಪಡೆದಿರುವ ಅವರಿಗೆ ಇದು ದೊರೆಯಲೇ ಬೇಕಾದ ಪ್ರಶಸ್ತಿ.<br /> - ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ, ಕವಿ</p>.<p>ಬೇಂದ್ರೆ ನಂತರ ಅಚ್ಚಗನ್ನಡದ ಹಿನ್ನೆಲೆಯಲ್ಲಿ ಸಾಹಿತ್ಯ ರಚಿಸಿದ್ದು ಕಂಬಾರರು ಮಾತ್ರ. ಅವರು ದೊಡ್ಡ ನಾಟಕಕಾರ. ದೇಶದಲ್ಲಿಯೇ ಅತಿ ಹೆಚ್ಚು ಜ್ಞಾನಪೀಠ ಪಡೆಯುವ ಮೂಲಕ ಕನ್ನಡದ ಪ್ರತಿಷ್ಠೆ ಹೆಚ್ಚಿದೆ.<br /> - ಕೆ.ಮರುಳಸಿದ್ದಪ್ಪ, ಸಾಹಿತಿ</p>.<p>ಇದಕ್ಕಿಂತ ಸಂತೋಷ ಬೇರೆ ಏನಿದೆ? ಆಧುನಿಕ ಕಾವ್ಯದ ಜಾನಪದ ಸತ್ವಕ್ಕೆ ಮಹತ್ವ ಬಂದಂತಾಯಿತು. ಕನ್ನಡ ಸತ್ವ ರಾಷ್ಟ್ರಮಟ್ಟದಲ್ಲಿ ಮಿಂಚುವಂತಾಯಿತು. ಕಂಬಾರರಿಗೆ ಅಭಿನಂದನೆಗಳು<br /> - ವೈದೇಹಿ, ಲೇಖಕಿ</p>.<p>ಕಂಬಾರರಿಗೆ ಪ್ರಶಸ್ತಿ ಬಂದಿರುವುದರಿಂದ ಜಾನಪದ ಜಗತ್ತಿಗೇ ಪ್ರಶಸ್ತಿ ಬಂದಂತಾಗಿದೆ. ಕಾವ್ಯಕ್ಕೆ ಜಾನಪದ ಸಂಸ್ಕಾರವನ್ನು ತಂದುಕೊಟ್ಟವರು ಅವರು. ಶಿಷ್ಟ ಪಂಥವನ್ನು ಮೀರಿ ಜಾನಪದ ನಾಟಕಗಳನ್ನು ರಚಿಸಿದರು. ಜಾನಪದ ಅಕಾಡೆಮಿ ಅವರನ್ನು ಅಭಿನಂದಿಸುತ್ತದೆ. <br /> - ಗೊ.ರು.ಚನ್ನಬಸಪ್ಪ, <br /> ಜಾನಪದ ಅಕಾಡೆಮಿ ಅಧ್ಯಕ್ಷ <br /> ಕಂಬಾರರಲ್ಲಿ ಜಾನಪದ ಸೊಗಡು, ಆಧುನಿಕ ಸಂವೇದನೆ ಸಮ್ಮಿಲನಗೊಂಡಿದೆ. ವಸಾಹತುಶಾಹಿ ಹಾಗೂ ಜಾಗತೀಕರಣದ ಕ್ರೌರ್ಯವನ್ನು ಅವರ ಕೃತಿಗಳಲ್ಲಿ ಎದುರಿಸಿದ್ದಾರೆ. <br /> - ಡಾ.ಸಿದ್ದಲಿಂಗಯ್ಯ, <br /> ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ</p>.<p>ಕನ್ನಡಕ್ಕೆ ಇದೊಂದು ದೊಡ್ಡ ಆನಂದ. ಇದುವರೆಗೆ ಜ್ಞಾನಪೀಠ ಪಡೆದವರಿಗಿಂತಲೂ ಕಂಬಾರರ ಪ್ರತಿಭೆ ವಿಭಿನ್ನ, ಜಾಗತೀಕರಣದ ಬಗ್ಗೆ ದೇಸಿ ನೆಲೆಗಟ್ಟಿನಲ್ಲಿ ಚಿಂತಿಸಿದವರು.<br /> - ಅಗ್ರಹಾರ ಕೃಷ್ಣಮೂರ್ತಿ, <br /> ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ</p>.<p><br /> `ಅತಿ ಸಂತೋಷವಾಗಿದೆ~ ಎಂದು ಧಾರವಾಡದ ಮನೋಹರ ಗ್ರಂಥಮಾಲೆಯ ಡಾ. ಡಾ.ರಮಾಕಾಂತ ಜೋಶಿ. ಹೇಳಿದರು. 1967ರಲ್ಲಿ ಅವರ ಸಂಗ್ಯಾಬಾಳ್ಯಾ ಹಾಗೂ 1969ರಲ್ಲಿ ಋಷ್ಯಶೃಂಗ ನಾಟಕಗಳನ್ನು ಮನೋಹರ ಗ್ರಂಥಮಾಲೆಯಿಂದ ಪ್ರಕಟಿದ್ದೆವು. ಬೇಂದ್ರೆ ತರುವಾಯ ಉತ್ತರ ಕರ್ನಾಟಕದ ಭಾಷೆಯನ್ನು ಸಮರ್ಥವಾಗಿ ಬಳಸಿದವರು ಕಂಬಾರರು~ ಎಂದು ಜೋಶಿ ಖುಷಿಯಾಗಿ ಹೇಳಿದರು.<br /> -ರಮಾಕಾಂತ ಜೋಶಿ</p>.<p>ಕನಾಟಕ ತೆಲುಗು ಅಕಾಡೆಮಿ ಅಧ್ಯಕ್ಷ ರಾಧಾಕೃಷ್ಣರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್, ಮೇಯರ್ ಶಾರದಮ್ಮ ಮತ್ತಿತರರು ಕಂಬಾರರಿಗೆ ತಮ್ಮ ಅಭಿನಂದನೆಯನ್ನು ಸಲ್ಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>