<p><strong>ಬೆಂಗಳೂರು:</strong> ಹೊಸ ಕಟ್ಟಡ ನಿರ್ಮಾಣ ಮಾಡುವಾಗ ಮಾತ್ರವಲ್ಲ; ಸದ್ಯ ಇರುವ ಕಟ್ಟಡದ ಯಾವುದೇ ಭಾಗವನ್ನು ತೆಗೆದುಹಾಕಲು ಇಲ್ಲವೆ ನವೀಕರಣ ಮಾಡಲು ಕೂಡ ನಗರದ ನಾಗರಿಕರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅನುಮತಿ ಪಡೆಯುವುದು ಇನ್ನು ಮುಂದೆ ಕಡ್ಡಾಯವಾಗಲಿದೆ.<br /> <br /> ಬಿಬಿಎಂಪಿ ಈ ಸಂಬಂಧ ನಿಯಮಾವಳಿ ರೂಪಿಸಿದ್ದು, ಶೀಘ್ರವೇ ಅದನ್ನು ಜಾರಿಗೆ ತರಲು ಉತ್ಸುಕವಾಗಿದೆ. ಇದರಿಂದ ಕಟ್ಟಡ ಅವಶೇಷ ನಗರದ ಎಲ್ಲೆಂದರಲ್ಲಿ ಬೀಳುವುದು ತಪ್ಪಲಿದೆ. ಜತೆಗೆ ನಿರ್ವಹಣೆ ಸುಗಮವಾಗಲಿದೆ ಎಂಬುದು ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ) ಸುಬೋಧ್ ಯಾದವ್ ಅವರ ವಿಶ್ವಾಸವಾಗಿದೆ.<br /> <br /> ಕಟ್ಟಡದ ಭಾಗವನ್ನು ಕೆಡವಿದಾಗ ಉತ್ಪಾದನೆಯಾಗುವ ತ್ಯಾಜ್ಯದ ಪ್ರಮಾಣ, ವಿಲೇವಾರಿ ಮಾಡುವ ವಿಧಾನದ ಕುರಿತು ಬಿಬಿಎಂಪಿಗೆ ಮೊದಲೇ ಸಮಗ್ರ ವಿವರ ಒದಗಿಸಬೇಕು. ಕಟ್ಟಡದ ಮಾಲೀಕರು ಕೊಡುವ ವಿಲೇವಾರಿ ಯೋಜನೆಯನ್ನು ಪರಿಶೀಲಿಸಿ ಬಿಬಿಎಂಪಿಯಿಂದ ಅನುಮತಿ ನೀಡಲಾಗುತ್ತದೆ ಎಂದು ವಿವರಿಸುತ್ತದೆ ಕಟ್ಟಡ ಅವಶೇಷ ವಿಲೇವಾರಿ ನೀತಿ.<br /> <br /> ಈ ಹೊಸ ನೀತಿಯ ಮತ್ತೊಂದು ವಿಶೇಷವೆಂದರೆ ಕಟ್ಟಡದ ಮಾಲೀಕರಿಗೆ ತ್ಯಾಜ್ಯ ವಿಲೇವಾರಿ ಮಾಡುವುದು ಅಸಾಧ್ಯ ಎಂದಾದರೆ ತಕ್ಕ ಶುಲ್ಕ ಆಕರಿಸಿ ಬಿಬಿಎಂಪಿಯೇ ಆ ಹೊಣೆಯನ್ನು ನಿಭಾಯಿಸಲಿದೆ. ಈ ಹಿಂದೆ ಕೆಲವು ಘಟಕಗಳನ್ನು ಗುರುತಿಸಿ, ಅಲ್ಲಿಯೇ ಕಟ್ಟಡ ತ್ಯಾಜ್ಯ ವಿಲೇವಾರಿ ಮಾಡಬೇಕು ಎಂಬ ಸೂಚನೆ ನೀಡಲಾಗಿತ್ತು. ಆದರೆ, ರಾತ್ರಿ ವೇಳೆಯಲ್ಲಿ ನಗರದ ರಸ್ತೆ ಬದಿಯಲ್ಲೇ ಅವಶೇಷ ಸುರಿದುಹೋಗುವ ಪರಿಪಾಠ ಮುಂದುವರಿದ ಕಾರಣ ಬಿಬಿಎಂಪಿ ಹೊಸ ವ್ಯವಸ್ಥೆಗೆ ಮುಂದಾಗಿದೆ.<br /> <br /> ಉತ್ಪಾದನೆ ಆಗಲಿರುವ ತ್ಯಾಜ್ಯದ ಪ್ರಮಾಣಕ್ಕೆ ಅನುಗುಣವಾಗಿ ಕಟ್ಟಡದ ಮಾಲೀಕರು ಠೇವಣಿ ಇಡಬೇಕು. ಆ ಠೇವಣಿ ಮೊತ್ತವನ್ನೇ ಬಳಸಿಕೊಂಡು ಬಿಬಿಎಂಪಿ ತನ್ನ ಗುತ್ತಿಗೆದಾರರ ಮೂಲಕ ಅವಶೇಷವನ್ನು ತೆಗೆದು ಹಾಕಲಿದೆ. ಈ ಸಂಬಂಧ ಮಾಹಿತಿ ಪಡೆಯಲು ಮತ್ತು ಮನವಿ ಸಲ್ಲಿಸಲು ಟೋಲ್ ಫ್ರೀ ದೂರವಾಣಿ ಸಂಪರ್ಕ ಸಂಖ್ಯೆ ಒದಗಿಸಲು ಉದ್ದೇಶಿಸಲಾಗಿದೆ.<br /> <br /> ‘ಉತ್ಪಾದನೆಯಾಗುವ ಕಟ್ಟಡ ಅವಶೇಷದ ಕುರಿತಂತೆ ಹೊಸ ನೀತಿ ಅನುಷ್ಠಾನದಿಂದ ದತ್ತಾಂಶಗಳು ಲಭ್ಯವಾಗಲಿವೆ. ವಿಲೇವಾರಿ ಸಹ ಸುಲಭವಾಗಲಿದೆ’ ಎಂದು ಯಾದವ್ ಹೇಳುತ್ತಾರೆ.<br /> <br /> ನಗರದ ಸುತ್ತಲಿನ ಪ್ರದೇಶಗಳಲ್ಲಿರುವ ಕಲ್ಲಿನ ಕ್ವಾರಿಗಳಲ್ಲಿ ಕಟ್ಟಡದ ಅವಶೇಷ ಹಾಕಲು ನಿರ್ಧರಿಸಲಾಗಿದೆ. ಈ ಸಂಬಂಧ ಹಲವು ಕ್ವಾರಿಗಳನ್ನು 2013ರಲ್ಲೇ ಗುರುತಿಸಲಾಗಿದೆ. ಅವುಗಳ ಪೈಕಿ ಲಕ್ಷ್ಮೀಪುರ ಹಾಗೂ ಎಸ್.ಬಿಂಗೀಪುರ ಕ್ವಾರಿಗಳಲ್ಲಿ ಕಸವನ್ನೂ ಸುರಿಯಲಾಗುತ್ತಿತ್ತು. ಗ್ರಾಮಸ್ಥರ ಪ್ರತಿಭಟನೆ ಹೆಚ್ಚಾದ ಮೇಲೆ ಅಲ್ಲೀಗ ತ್ಯಾಜ್ಯ ವಿಲೇವಾರಿಯನ್ನು ಸ್ಥಗಿತಗೊಳಿಸಲಾಗಿದೆ.<br /> <br /> ಒಂದು ಅಂದಾಜಿನ ಪ್ರಕಾರ, ನಗರದಲ್ಲಿ ನಿತ್ಯ ಸಾವಿರ ಟನ್ ಕಟ್ಟಡ ತ್ಯಾಜ್ಯ ಉತ್ಪಾದನೆ ಆಗುತ್ತಿದೆ. ಅಲ್ಲದೆ, ಇದುವರೆಗೆ ವಿಲೇವಾರಿಯಾಗದೆ ಬಿದ್ದಿರುವ ಅವಶೇಷದ ಪ್ರಮಾಣವೂ ಹೆಚ್ಚಾಗಿದೆ ಎಂದು ಬಿಬಿಎಂಪಿ ಘನತ್ಯಾಜ್ಯ ತಜ್ಞರ ಸಮಿತಿ ಸದಸ್ಯರು ಮಾಹಿತಿ ನೀಡುತ್ತಾರೆ.<br /> <br /> ಬೃಹತ್ ಸಮುಚ್ಚಯಗಳು, ವಾಣಿಜ್ಯ ಕಟ್ಟಡಗಳು ಹಾಗೂ ಮನೆಗಳ ನವೀಕರಣದ ಸಂದರ್ಭದಲ್ಲಿ ಉತ್ಪತ್ತಿಯಾಗುವ ಅನುಪಯುಕ್ತ ಸಾಮಗ್ರಿಗಳನ್ನು ರಸ್ತೆ ಬದಿಯಲ್ಲಿ ಸುರಿಯುತ್ತಿರುವ ಕಾರಣ ನಗರದ ಅಂದ ಹಾಳಾಗುತ್ತಿದೆ. ಹೀಗೆ ಸುರಿಯಲಾದ ಅವಶೇಷವು ಮಳೆಯಾದ ಸಂದರ್ಭದಲ್ಲಿ ಚರಂಡಿಯಲ್ಲಿ ಸೇರಿಕೊಂಡು ಹೂಳಿನ ಪ್ರಮಾಣ ಹೆಚ್ಚಾಗುತ್ತಿದೆ.<br /> <br /> ರಸ್ತೆಬದಿ ಸುರಿದ ಕಟ್ಟಡ ತ್ಯಾಜ್ಯವನ್ನು ಕಸದ ಗುತ್ತಿಗೆದಾರರು ವಿಲೇವಾರಿ ಮಾಡುವುದಿಲ್ಲ. ಹೀಗಾಗಿ ಅದನ್ನು ನಿರ್ವಹಣೆ ಮಾಡುವುದು ಕಷ್ಟವಾಗಿ ಪರಿಣಮಿಸಿದೆ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಹೊಸ ಕಟ್ಟಡ ನಿರ್ಮಾಣ ಮಾಡುವಾಗ ಮಾತ್ರವಲ್ಲ; ಸದ್ಯ ಇರುವ ಕಟ್ಟಡದ ಯಾವುದೇ ಭಾಗವನ್ನು ತೆಗೆದುಹಾಕಲು ಇಲ್ಲವೆ ನವೀಕರಣ ಮಾಡಲು ಕೂಡ ನಗರದ ನಾಗರಿಕರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅನುಮತಿ ಪಡೆಯುವುದು ಇನ್ನು ಮುಂದೆ ಕಡ್ಡಾಯವಾಗಲಿದೆ.<br /> <br /> ಬಿಬಿಎಂಪಿ ಈ ಸಂಬಂಧ ನಿಯಮಾವಳಿ ರೂಪಿಸಿದ್ದು, ಶೀಘ್ರವೇ ಅದನ್ನು ಜಾರಿಗೆ ತರಲು ಉತ್ಸುಕವಾಗಿದೆ. ಇದರಿಂದ ಕಟ್ಟಡ ಅವಶೇಷ ನಗರದ ಎಲ್ಲೆಂದರಲ್ಲಿ ಬೀಳುವುದು ತಪ್ಪಲಿದೆ. ಜತೆಗೆ ನಿರ್ವಹಣೆ ಸುಗಮವಾಗಲಿದೆ ಎಂಬುದು ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ) ಸುಬೋಧ್ ಯಾದವ್ ಅವರ ವಿಶ್ವಾಸವಾಗಿದೆ.<br /> <br /> ಕಟ್ಟಡದ ಭಾಗವನ್ನು ಕೆಡವಿದಾಗ ಉತ್ಪಾದನೆಯಾಗುವ ತ್ಯಾಜ್ಯದ ಪ್ರಮಾಣ, ವಿಲೇವಾರಿ ಮಾಡುವ ವಿಧಾನದ ಕುರಿತು ಬಿಬಿಎಂಪಿಗೆ ಮೊದಲೇ ಸಮಗ್ರ ವಿವರ ಒದಗಿಸಬೇಕು. ಕಟ್ಟಡದ ಮಾಲೀಕರು ಕೊಡುವ ವಿಲೇವಾರಿ ಯೋಜನೆಯನ್ನು ಪರಿಶೀಲಿಸಿ ಬಿಬಿಎಂಪಿಯಿಂದ ಅನುಮತಿ ನೀಡಲಾಗುತ್ತದೆ ಎಂದು ವಿವರಿಸುತ್ತದೆ ಕಟ್ಟಡ ಅವಶೇಷ ವಿಲೇವಾರಿ ನೀತಿ.<br /> <br /> ಈ ಹೊಸ ನೀತಿಯ ಮತ್ತೊಂದು ವಿಶೇಷವೆಂದರೆ ಕಟ್ಟಡದ ಮಾಲೀಕರಿಗೆ ತ್ಯಾಜ್ಯ ವಿಲೇವಾರಿ ಮಾಡುವುದು ಅಸಾಧ್ಯ ಎಂದಾದರೆ ತಕ್ಕ ಶುಲ್ಕ ಆಕರಿಸಿ ಬಿಬಿಎಂಪಿಯೇ ಆ ಹೊಣೆಯನ್ನು ನಿಭಾಯಿಸಲಿದೆ. ಈ ಹಿಂದೆ ಕೆಲವು ಘಟಕಗಳನ್ನು ಗುರುತಿಸಿ, ಅಲ್ಲಿಯೇ ಕಟ್ಟಡ ತ್ಯಾಜ್ಯ ವಿಲೇವಾರಿ ಮಾಡಬೇಕು ಎಂಬ ಸೂಚನೆ ನೀಡಲಾಗಿತ್ತು. ಆದರೆ, ರಾತ್ರಿ ವೇಳೆಯಲ್ಲಿ ನಗರದ ರಸ್ತೆ ಬದಿಯಲ್ಲೇ ಅವಶೇಷ ಸುರಿದುಹೋಗುವ ಪರಿಪಾಠ ಮುಂದುವರಿದ ಕಾರಣ ಬಿಬಿಎಂಪಿ ಹೊಸ ವ್ಯವಸ್ಥೆಗೆ ಮುಂದಾಗಿದೆ.<br /> <br /> ಉತ್ಪಾದನೆ ಆಗಲಿರುವ ತ್ಯಾಜ್ಯದ ಪ್ರಮಾಣಕ್ಕೆ ಅನುಗುಣವಾಗಿ ಕಟ್ಟಡದ ಮಾಲೀಕರು ಠೇವಣಿ ಇಡಬೇಕು. ಆ ಠೇವಣಿ ಮೊತ್ತವನ್ನೇ ಬಳಸಿಕೊಂಡು ಬಿಬಿಎಂಪಿ ತನ್ನ ಗುತ್ತಿಗೆದಾರರ ಮೂಲಕ ಅವಶೇಷವನ್ನು ತೆಗೆದು ಹಾಕಲಿದೆ. ಈ ಸಂಬಂಧ ಮಾಹಿತಿ ಪಡೆಯಲು ಮತ್ತು ಮನವಿ ಸಲ್ಲಿಸಲು ಟೋಲ್ ಫ್ರೀ ದೂರವಾಣಿ ಸಂಪರ್ಕ ಸಂಖ್ಯೆ ಒದಗಿಸಲು ಉದ್ದೇಶಿಸಲಾಗಿದೆ.<br /> <br /> ‘ಉತ್ಪಾದನೆಯಾಗುವ ಕಟ್ಟಡ ಅವಶೇಷದ ಕುರಿತಂತೆ ಹೊಸ ನೀತಿ ಅನುಷ್ಠಾನದಿಂದ ದತ್ತಾಂಶಗಳು ಲಭ್ಯವಾಗಲಿವೆ. ವಿಲೇವಾರಿ ಸಹ ಸುಲಭವಾಗಲಿದೆ’ ಎಂದು ಯಾದವ್ ಹೇಳುತ್ತಾರೆ.<br /> <br /> ನಗರದ ಸುತ್ತಲಿನ ಪ್ರದೇಶಗಳಲ್ಲಿರುವ ಕಲ್ಲಿನ ಕ್ವಾರಿಗಳಲ್ಲಿ ಕಟ್ಟಡದ ಅವಶೇಷ ಹಾಕಲು ನಿರ್ಧರಿಸಲಾಗಿದೆ. ಈ ಸಂಬಂಧ ಹಲವು ಕ್ವಾರಿಗಳನ್ನು 2013ರಲ್ಲೇ ಗುರುತಿಸಲಾಗಿದೆ. ಅವುಗಳ ಪೈಕಿ ಲಕ್ಷ್ಮೀಪುರ ಹಾಗೂ ಎಸ್.ಬಿಂಗೀಪುರ ಕ್ವಾರಿಗಳಲ್ಲಿ ಕಸವನ್ನೂ ಸುರಿಯಲಾಗುತ್ತಿತ್ತು. ಗ್ರಾಮಸ್ಥರ ಪ್ರತಿಭಟನೆ ಹೆಚ್ಚಾದ ಮೇಲೆ ಅಲ್ಲೀಗ ತ್ಯಾಜ್ಯ ವಿಲೇವಾರಿಯನ್ನು ಸ್ಥಗಿತಗೊಳಿಸಲಾಗಿದೆ.<br /> <br /> ಒಂದು ಅಂದಾಜಿನ ಪ್ರಕಾರ, ನಗರದಲ್ಲಿ ನಿತ್ಯ ಸಾವಿರ ಟನ್ ಕಟ್ಟಡ ತ್ಯಾಜ್ಯ ಉತ್ಪಾದನೆ ಆಗುತ್ತಿದೆ. ಅಲ್ಲದೆ, ಇದುವರೆಗೆ ವಿಲೇವಾರಿಯಾಗದೆ ಬಿದ್ದಿರುವ ಅವಶೇಷದ ಪ್ರಮಾಣವೂ ಹೆಚ್ಚಾಗಿದೆ ಎಂದು ಬಿಬಿಎಂಪಿ ಘನತ್ಯಾಜ್ಯ ತಜ್ಞರ ಸಮಿತಿ ಸದಸ್ಯರು ಮಾಹಿತಿ ನೀಡುತ್ತಾರೆ.<br /> <br /> ಬೃಹತ್ ಸಮುಚ್ಚಯಗಳು, ವಾಣಿಜ್ಯ ಕಟ್ಟಡಗಳು ಹಾಗೂ ಮನೆಗಳ ನವೀಕರಣದ ಸಂದರ್ಭದಲ್ಲಿ ಉತ್ಪತ್ತಿಯಾಗುವ ಅನುಪಯುಕ್ತ ಸಾಮಗ್ರಿಗಳನ್ನು ರಸ್ತೆ ಬದಿಯಲ್ಲಿ ಸುರಿಯುತ್ತಿರುವ ಕಾರಣ ನಗರದ ಅಂದ ಹಾಳಾಗುತ್ತಿದೆ. ಹೀಗೆ ಸುರಿಯಲಾದ ಅವಶೇಷವು ಮಳೆಯಾದ ಸಂದರ್ಭದಲ್ಲಿ ಚರಂಡಿಯಲ್ಲಿ ಸೇರಿಕೊಂಡು ಹೂಳಿನ ಪ್ರಮಾಣ ಹೆಚ್ಚಾಗುತ್ತಿದೆ.<br /> <br /> ರಸ್ತೆಬದಿ ಸುರಿದ ಕಟ್ಟಡ ತ್ಯಾಜ್ಯವನ್ನು ಕಸದ ಗುತ್ತಿಗೆದಾರರು ವಿಲೇವಾರಿ ಮಾಡುವುದಿಲ್ಲ. ಹೀಗಾಗಿ ಅದನ್ನು ನಿರ್ವಹಣೆ ಮಾಡುವುದು ಕಷ್ಟವಾಗಿ ಪರಿಣಮಿಸಿದೆ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>