<p><strong>ಕಣ್ಣಿಗೆ ರಾಚುವ ಅಶ್ಲೀಲ ಪುಸ್ತಕಗಳದ್ದೇ ಕಾರುಬಾರು<br /> ಪುಟ್ಟ ವರದಿಗಾರರು ಸುದ್ದಿ ಬರೆದಾಗ...</strong></p>.<p><strong>ಬೆಂಗಳೂರು</strong>: `ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಪುಸ್ತಕದ ಅಂಗಡಿಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಆದರೆ, ಅಲ್ಲಿ ಅಶ್ಲೀಲ ಪುಸ್ತಕಗಳನ್ನು ಕಣ್ಣಿಗೆ ರಾಚುವಂತೆ ಇಟ್ಟಿರುತ್ತಾರೆ. ಇದು ಚಿಕ್ಕ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ...~<br /> <br /> ಇದು `ವರದಿಗಾರರಾಗಿ ಮಕ್ಕಳು~ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪುಟ್ಟ ವರದಿಗಾರರು ಶುಕ್ರವಾರ ಸಿದ್ಧಪಡಿಸಿದ ಗೋಡೆ ಪತ್ರಿಕೆ `ಮಕ್ಕಳ ಸಂದೇಶ~ದಲ್ಲಿ ಇದ್ದ ಪ್ರಧಾನ ವರದಿಯ ಆಯ್ದ ಭಾಗ. <br /> <br /> ಚೈಲ್ಡ್ ರೈಟ್ಸ್ ಟ್ರಸ್ಟ್ (ಸಿಆರ್ಟಿ), `ಯುನಿಸೆಫ್~ ಮತ್ತು ರಾಜ್ಯ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಆಯೋಜಿಸಿರುವ ಕಾರ್ಯಕ್ರಮದ ಅಂಗವಾಗಿ ನಗರದ ವಿವಿಧ ಇಲಾಖೆಗಳ ಕಚೇರಿಗಳು, ಸಾರ್ವಜನಿಕ ಸ್ಥಳಗಳಿಗೆ ಗುರುವಾರ ಭೇಟಿ ನೀಡಿದ್ದ ಪುಟ್ಟ ವರದಿಗಾರರು, ಅಲ್ಲಿ ಕಂಡ ಕುತೂಹಲಕರ ಅಂಶಗಳನ್ನು ಆಧರಿಸಿ ಪತ್ರಿಕೆ ಸಿದ್ಧಪಡಿಸಿದ್ದರು.<br /> <br /> ಸಿದ್ಧಪಡಿಸಿದ ಪತ್ರಿಕೆಗಳನ್ನು ಇಲ್ಲಿನ ಮಿಷನ್ ರಸ್ತೆಯಲ್ಲಿರುವ ಎಸ್ಸಿಎಂ ಹೌಸ್ನಲ್ಲಿ ಶುಕ್ರವಾರ ಪ್ರದರ್ಶನಕ್ಕೆ ಇಡಲಾಗಿತ್ತು. ಅಶ್ಲೀಲ ಪುಸ್ತಕಗಳ ಕುರಿತು ಮಾತ್ರವಲ್ಲ, ಮೆಜೆಸ್ಟಿಕ್ ಪ್ರದೇಶದಲ್ಲಿ ತಿಂಡಿ-ತಿನಿಸುಗಳನ್ನು ಕೆಲವು ಅಂಗಡಿಗಳ ಮಾಲೀಕರು ಗಾಳಿಗೆ ತೆರೆದಿಡುವುದು, ಬಸ್ ನಿಲ್ದಾಣದಲ್ಲಿ ಅಂಗವಿಕಲರಿಗೆ ಸೂಕ್ತ ಸೌಲಭ್ಯ ಇಲ್ಲದಿರುವ ಕುರಿತೂ `ಮಕ್ಕಳ ಸಂದೇಶ~ ಪತ್ರಿಕೆಯಲ್ಲಿ ವರದಿ ಬರೆಯಲಾಗಿದೆ.<br /> <br /> <strong>ಇಲ್ಲಿ ಇದು ಲೀಡ್ ಸುದ್ದಿ!: </strong>ಮಕ್ಕಳ ಇನ್ನೊಂದು ತಂಡ ಸಿದ್ಧಪಡಿಸಿದ `ಪ್ರಜ್ಞಾ ಪತ್ರಿಕೆ~ಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಅಮಿತಾ ಪ್ರಸಾದ್ ಅವರ ಜೊತೆ ಪುಟ್ಟ ವರದಿಗಾರರು ನಡೆಸಿದ ಸಂವಾದ ಪ್ರಮುಖ ಸುದ್ದಿಯಾಗಿದೆ!<br /> <br /> ಡಾ. ಅಮಿತಾ ಅವರನ್ನು ಗುರುವಾರ ಭೇಟಿ ಮಾಡಿದ್ದ ಪುಟ್ಟ ವರದಿಗಾರರು, ಮಕ್ಕಳ ಗ್ರಾಮ ಸಭೆ ಕುರಿತು ಅವರ ಜೊತೆ ಮಾತನಾಡಿದ್ದರು. `ಮಕ್ಕಳ ಗ್ರಾಮ ಸಭೆ ಕಡ್ಡಾಯ~ ಎಂದು ಡಾ. ಅಮಿತಾ ನೀಡಿರುವ ಹೇಳಿಕೆಯನ್ನು ಲೀಡ್ ಸುದ್ದಿಯಾಗಿ ಬರೆದಿದ್ದಾರೆ.<br /> <br /> ಅನ್ಸರ್ ಖಾನ್, ಪವಿತ್ರಾ, ಸವಿತಾ, ಆನಂದ ಮತ್ತು ರವಿಶಂಕರ್ ಅವರು ಸೇರಿ ಸಿದ್ಧಪಡಿಸಿರುವ `ಮಕ್ಕಳ ಕೂಗು~ ಪತ್ರಿಕೆಯಲ್ಲಿ ಬಾಲಕರ ಸರ್ಕಾರಿ ವಿದ್ಯಾರ್ಥಿ ನಿಲಯಗಳಲ್ಲಿ ಸೂಕ್ತ ಸೌಲಭ್ಯಗಳು ಇಲ್ಲ ಎಂಬ ಪ್ರಮುಖ ಸುದ್ದಿ ಇದೆ. <br /> ಅಲ್ಲದೆ, ಅಲ್ಲಿ ವಯಸ್ಸಿನಲ್ಲಿ ತುಸು ಹಿರಿಯರಾದ ಮಕ್ಕಳು ಕಿರಿಯರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದೂ ವರದಿ ಬರೆದಿದ್ದಾರೆ!<br /> <br /> `ವರದಿಯಾಗಬಲ್ಲ ಅಂಶಗಳನ್ನು ಮಕ್ಕಳೇ ಆಯ್ಕೆ ಮಾಡಿದ್ದಾರೆ. ಆದರೆ ಅದಕ್ಕೆ ಒಂದು ರೂಪ ನೀಡುವಲ್ಲಿ ನಾವು ಅವರಿಗೆ ಸಹಾಯ ಮಾಡಿದ್ದೇವೆ~ ಎಂದು ಸಿಆರ್ಟಿಯ ಕಾರ್ಯಕಾರಿ ನಿರ್ದೇಶಕ ವಾಸುದೇವ ಶರ್ಮ `ಪ್ರಜಾವಾಣಿ~ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಣ್ಣಿಗೆ ರಾಚುವ ಅಶ್ಲೀಲ ಪುಸ್ತಕಗಳದ್ದೇ ಕಾರುಬಾರು<br /> ಪುಟ್ಟ ವರದಿಗಾರರು ಸುದ್ದಿ ಬರೆದಾಗ...</strong></p>.<p><strong>ಬೆಂಗಳೂರು</strong>: `ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಪುಸ್ತಕದ ಅಂಗಡಿಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಆದರೆ, ಅಲ್ಲಿ ಅಶ್ಲೀಲ ಪುಸ್ತಕಗಳನ್ನು ಕಣ್ಣಿಗೆ ರಾಚುವಂತೆ ಇಟ್ಟಿರುತ್ತಾರೆ. ಇದು ಚಿಕ್ಕ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ...~<br /> <br /> ಇದು `ವರದಿಗಾರರಾಗಿ ಮಕ್ಕಳು~ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪುಟ್ಟ ವರದಿಗಾರರು ಶುಕ್ರವಾರ ಸಿದ್ಧಪಡಿಸಿದ ಗೋಡೆ ಪತ್ರಿಕೆ `ಮಕ್ಕಳ ಸಂದೇಶ~ದಲ್ಲಿ ಇದ್ದ ಪ್ರಧಾನ ವರದಿಯ ಆಯ್ದ ಭಾಗ. <br /> <br /> ಚೈಲ್ಡ್ ರೈಟ್ಸ್ ಟ್ರಸ್ಟ್ (ಸಿಆರ್ಟಿ), `ಯುನಿಸೆಫ್~ ಮತ್ತು ರಾಜ್ಯ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಆಯೋಜಿಸಿರುವ ಕಾರ್ಯಕ್ರಮದ ಅಂಗವಾಗಿ ನಗರದ ವಿವಿಧ ಇಲಾಖೆಗಳ ಕಚೇರಿಗಳು, ಸಾರ್ವಜನಿಕ ಸ್ಥಳಗಳಿಗೆ ಗುರುವಾರ ಭೇಟಿ ನೀಡಿದ್ದ ಪುಟ್ಟ ವರದಿಗಾರರು, ಅಲ್ಲಿ ಕಂಡ ಕುತೂಹಲಕರ ಅಂಶಗಳನ್ನು ಆಧರಿಸಿ ಪತ್ರಿಕೆ ಸಿದ್ಧಪಡಿಸಿದ್ದರು.<br /> <br /> ಸಿದ್ಧಪಡಿಸಿದ ಪತ್ರಿಕೆಗಳನ್ನು ಇಲ್ಲಿನ ಮಿಷನ್ ರಸ್ತೆಯಲ್ಲಿರುವ ಎಸ್ಸಿಎಂ ಹೌಸ್ನಲ್ಲಿ ಶುಕ್ರವಾರ ಪ್ರದರ್ಶನಕ್ಕೆ ಇಡಲಾಗಿತ್ತು. ಅಶ್ಲೀಲ ಪುಸ್ತಕಗಳ ಕುರಿತು ಮಾತ್ರವಲ್ಲ, ಮೆಜೆಸ್ಟಿಕ್ ಪ್ರದೇಶದಲ್ಲಿ ತಿಂಡಿ-ತಿನಿಸುಗಳನ್ನು ಕೆಲವು ಅಂಗಡಿಗಳ ಮಾಲೀಕರು ಗಾಳಿಗೆ ತೆರೆದಿಡುವುದು, ಬಸ್ ನಿಲ್ದಾಣದಲ್ಲಿ ಅಂಗವಿಕಲರಿಗೆ ಸೂಕ್ತ ಸೌಲಭ್ಯ ಇಲ್ಲದಿರುವ ಕುರಿತೂ `ಮಕ್ಕಳ ಸಂದೇಶ~ ಪತ್ರಿಕೆಯಲ್ಲಿ ವರದಿ ಬರೆಯಲಾಗಿದೆ.<br /> <br /> <strong>ಇಲ್ಲಿ ಇದು ಲೀಡ್ ಸುದ್ದಿ!: </strong>ಮಕ್ಕಳ ಇನ್ನೊಂದು ತಂಡ ಸಿದ್ಧಪಡಿಸಿದ `ಪ್ರಜ್ಞಾ ಪತ್ರಿಕೆ~ಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಅಮಿತಾ ಪ್ರಸಾದ್ ಅವರ ಜೊತೆ ಪುಟ್ಟ ವರದಿಗಾರರು ನಡೆಸಿದ ಸಂವಾದ ಪ್ರಮುಖ ಸುದ್ದಿಯಾಗಿದೆ!<br /> <br /> ಡಾ. ಅಮಿತಾ ಅವರನ್ನು ಗುರುವಾರ ಭೇಟಿ ಮಾಡಿದ್ದ ಪುಟ್ಟ ವರದಿಗಾರರು, ಮಕ್ಕಳ ಗ್ರಾಮ ಸಭೆ ಕುರಿತು ಅವರ ಜೊತೆ ಮಾತನಾಡಿದ್ದರು. `ಮಕ್ಕಳ ಗ್ರಾಮ ಸಭೆ ಕಡ್ಡಾಯ~ ಎಂದು ಡಾ. ಅಮಿತಾ ನೀಡಿರುವ ಹೇಳಿಕೆಯನ್ನು ಲೀಡ್ ಸುದ್ದಿಯಾಗಿ ಬರೆದಿದ್ದಾರೆ.<br /> <br /> ಅನ್ಸರ್ ಖಾನ್, ಪವಿತ್ರಾ, ಸವಿತಾ, ಆನಂದ ಮತ್ತು ರವಿಶಂಕರ್ ಅವರು ಸೇರಿ ಸಿದ್ಧಪಡಿಸಿರುವ `ಮಕ್ಕಳ ಕೂಗು~ ಪತ್ರಿಕೆಯಲ್ಲಿ ಬಾಲಕರ ಸರ್ಕಾರಿ ವಿದ್ಯಾರ್ಥಿ ನಿಲಯಗಳಲ್ಲಿ ಸೂಕ್ತ ಸೌಲಭ್ಯಗಳು ಇಲ್ಲ ಎಂಬ ಪ್ರಮುಖ ಸುದ್ದಿ ಇದೆ. <br /> ಅಲ್ಲದೆ, ಅಲ್ಲಿ ವಯಸ್ಸಿನಲ್ಲಿ ತುಸು ಹಿರಿಯರಾದ ಮಕ್ಕಳು ಕಿರಿಯರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದೂ ವರದಿ ಬರೆದಿದ್ದಾರೆ!<br /> <br /> `ವರದಿಯಾಗಬಲ್ಲ ಅಂಶಗಳನ್ನು ಮಕ್ಕಳೇ ಆಯ್ಕೆ ಮಾಡಿದ್ದಾರೆ. ಆದರೆ ಅದಕ್ಕೆ ಒಂದು ರೂಪ ನೀಡುವಲ್ಲಿ ನಾವು ಅವರಿಗೆ ಸಹಾಯ ಮಾಡಿದ್ದೇವೆ~ ಎಂದು ಸಿಆರ್ಟಿಯ ಕಾರ್ಯಕಾರಿ ನಿರ್ದೇಶಕ ವಾಸುದೇವ ಶರ್ಮ `ಪ್ರಜಾವಾಣಿ~ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>