<p>ವಿಕಲಚೇತನ ಮಕ್ಕಳ ಆಟಕ್ಕೆ ಭಿನ್ನ ಸ್ಪರ್ಶ ನೀಡುವ ಕೆಲಸವನ್ನು ಇಂದು ಅನಿಮೇಷನ್ ಶಿಕ್ಷಣ ಸಂಸ್ಥೆಯೊಂದು ಮಾಡುತ್ತಿದೆ.ಹೆಣೆಯುವ ಯೋಜನೆ, ಕೈಗೊಳ್ಳುವ ಕಾರ್ಯ, ಸಿಗುವ ಪ್ರೋತ್ಸಾಹ, ಅದನ್ನು ಬಳಸಿಕೊಳ್ಳುವ ರೀತಿ ಉತ್ತಮವಾಗಿದ್ದರೆ ವಿದ್ಯಾರ್ಥಿಗಳ ಸಾಧನೆಗೆ ಶಹಬ್ಬಾಸ್ಗಿರಿ ಸಲ್ಲುತ್ತದೆ. <br /> <br /> ಯುವಜನತೆಯ ಮನದಲ್ಲಿ ಮೂಡುವ ಯೋಚನೆ ಸಾಕಾರಗೊಂಡರೆ ಅದೊಂದು ಮಹಾನ್ ಸಾಧನೆಯಾಗಿ ಹೊರ ಹೊಮ್ಮುತ್ತದೆ. ಇಂಥದ್ದೇ ಒಂದು ಸಾಧನೆ ಐದು ವಿದ್ಯಾರ್ಥಿಗಳ ತಂಡದಿಂದ ಆಗಿದೆ. ಅದಕ್ಕೆ ಪೋಷಣೆ ನೀಡಿದ್ದು `ವಿಜ್ಟೂನ್ಜ್ ಅನಿಮೇಷನ್ ಅಕಾಡೆಮಿ~.<br /> <br /> ವಿಕಲಚೇತನ ಮಕ್ಕಳ ಕುರಿತು ಸಂಸ್ಥೆಯ ಎರಡನೇ ಸೆಮಿಸ್ಟರ್ ಪದವಿ ವಿದ್ಯಾರ್ಥಿಗಳು ಕಿರುಚಿತ್ರವೊಂದನ್ನು ಸಿದ್ಧಪಡಿಸಿದ್ದಾರೆ. ಮಕ್ಕಳ ಭಾವನೆಗಳನ್ನು ಉತ್ತಮವಾಗಿ ಸೆರೆ ಹಿಡಿದಿರುವ ಈ ಚಿತ್ರ ವಿಕಲಚೇತನ ಮಕ್ಕಳ ಬಗ್ಗೆ ಮರುಕ ಹುಟ್ಟಿಸುವ ಬದಲು ಉತ್ತೇಜಿಸುವ ಭಾವನೆ ಮೂಡಿಸುತ್ತದೆ.<br /> <br /> `ಸಮರ್ಥನಂ~ ಸಂಸ್ಥೆಯ ಮಕ್ಕಳ ಕುರಿತ ಈ ಚಿತ್ರವನ್ನು ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಆಸಕ್ತಿಯಿಂದ ಸೆರೆಹಿಡಿದಿದ್ದಾರೆ. ಇಲ್ಲಿ ಮಕ್ಕಳ ಸಹಜ ಹಾವ-ಭಾವ, ಆಂಗಿಕ ಅಭಿನಯವೇ ಬಂಡವಾಳ. ಇದನ್ನು ಚಿತ್ರವಾಗಿಸಿರುವಲ್ಲಿ ವಿದ್ಯಾರ್ಥಿಗಳ ಪ್ರೌಢಿಮೆ ಎದ್ದುಕಾಣುತ್ತದೆ. <br /> <br /> ಜೆ.ಪಿ.ನಗರದ ವಿಜ್ಟೂನ್ಜ್ ಅನಿಮೇಷನ್ ಅಕಾಡೆಮಿ ವಿದ್ಯಾರ್ಥಿಗಳಾದ ಬಿಂದು ಆರ್, ಶ್ವೇತಾ ಬಿ.ಎಂ, ರಾಜೇಶ್ ಕೆ.ಎಚ್, ದೀಪಕ್ ಎಚ್.ವಿ. ಸೇರಿ ಈ ಯೋಜನೆ ಸಿದ್ಧಪಡಿಸಿದ್ದಾರೆ. `ಶಿಕ್ಷಣ ಸಂಸ್ಥೆಯ ಸಹಕಾರ, ಪಾಲಕರ ಪ್ರೋತ್ಸಾಹ ಈ ಕಾರ್ಯಕ್ಕೆ ಸಹಕಾರಿಯಾಯಿತು. <br /> <br /> ಚಿತ್ರೀಕರಣದ ವೇಳೆ ಸಾರ್ವಜನಿಕರು, ಸಂಸ್ಥೆಗಳು, ಸರ್ಕಾರದಿಂದ ಸಹಕಾರ ಸಿಕ್ಕಿದ್ದರೆ ಇನ್ನಷ್ಟು ಗುಣಮಟ್ಟದ ಚಿತ್ರ ಸಿದ್ಧಪಡಿಸಬಹುದಿತ್ತು~ ಎನ್ನುತ್ತಾರೆ ಇವರು.<br /> ವಿದ್ಯಾರ್ಥಿಗಳೆಲ್ಲ ಮೂರು ವರ್ಷದ ಪದವಿ ಕಲಿಕೆಯಲ್ಲಿ ಒಂದು ವರ್ಷ ಪೂರೈಸಿಕೊಂಡಿದ್ದಾರೆ. <br /> <br /> ತರಗತಿ ಅವಧಿ ಹೊರತುಪಡಿಸಿ ರಜೆ ಹಾಗೂ ಸಮಯ ಸಿಕ್ಕಾಗೆಲ್ಲಾ ಓಡಾಡಿ ಚಿತ್ರ ಸಿದ್ಧಪಡಿಸಿಕೊಂಡಿದ್ದಾರೆ. ಕಲಿಕೆಯ ಜತೆ ಜತೆಗೆ ಮೊದಲ ವರ್ಷಾಂತ್ಯದೊಳಗೇ ಕಿರುಚಿತ್ರ ಸಿದ್ಧಪಡಿಸಿ ನೀಡುತ್ತಿರುವುದು ಅವರಿಗೆ ಹೆಮ್ಮೆಯ ಸಂಗತಿ. <br /> <br /> ತಂಡದ ನಾಯಕತ್ವ ವಹಿಸಿದ್ದವರು ಕೋರಮಂಗಲದ ಬಿಂದು ಆರ್. ಪಿಯುಸಿ ಮುಗಿಸಿ ಅನಿಮೇಷನ್ ಕಲಿಯುತ್ತೇನೆ ಅಂದಾಗ ಪಾಲಕರು ವಿರೋಧಿಸಿದ್ದರು. ಆದರೆ ವರ್ಷದಲ್ಲಿ ಇವರ ಕೆಲಸ ಕಂಡು ಎಲ್ಲರೂ ಮೆಚ್ಚಿದ್ದಾರೆ. ಇದರ ಹಿಂದೆ ಶಿಕ್ಷಣ ಸಂಸ್ಥೆಯ ಕೊಡುಗೆ ಅಪಾರ ಎನ್ನುತ್ತಾರೆ ಬಿಂದು. <br /> <br /> ಜೆ.ಪಿ.ನಗರದ ನಿವಾಸಿ ಶ್ವೇತಾ ಕಲಿಕೆಯ ಜತೆ ವ್ಯಾಪಾರವನ್ನೂ ನಡೆಸುತ್ತಿದ್ದಾರೆ. ಇನ್ನಷ್ಟು ಕಲಿಯುವ ಆಸಕ್ತಿ ಹೊಂದಿರುವ ಇವರಿಗೆ ಈ ಚಿತ್ರ ಸಮಾಧಾನ ತಂದಿದೆ.<br /> ಕೋಲಾರದ ರಾಜೇಶ್ ಕೆ.ವಿ. ಒಬ್ಬ ಪ್ರತಿಭಾವಂತ ವಿದ್ಯಾರ್ಥಿ ಎಂಬುದನ್ನು ಇಲ್ಲಿ ತೋರಿಸಿದ್ದಾರೆ. ಅನಿಮೇಷನ್ ಕಲಿಕೆಗಾಗಿಯೇ ಬೆಂಗಳೂರಿಗೆ ಬಂದ ಇವರ ಕೈ ಹಿಡಿದದ್ದು ವಿಜ್ಟೂನ್ಜ್. ಇಂದು ಇಲ್ಲಿ ಕಲಿತು ಒಂದು ಕಿರುಚಿತ್ರ ಕೂಡ ಮಾಡಿ ಯಶ ಸಾಧಿಸಿದ್ದೇನೆ ಎನ್ನುತ್ತಾರೆ ಅವರು. <br /> <br /> ಹೊಸಕೋಟೆಯಿಂದ ನಿತ್ಯ ಬೆಂಗಳೂರಿಗೆ ಓಡಾಡುವ ದೀಪಕ್ ಎಚ್.ವಿ. ಒಬ್ಬ ಸಹೃದಯಿ ಛಾಯಾಗ್ರಾಹಕ. ಕೆಲವೆಡೆ ಮೊಬೈಲ್ ಕ್ಯಾಮೆರಾ ಮೂಲಕ ಚಿತ್ರೀಕರಣ ನಡೆಸಿ ಜಯಿಸಿದ್ದಾರೆ. ಉತ್ಸಾಹಕ್ಕೆ ತಕ್ಕ ಪ್ರೋತ್ಸಾಹವೂ ಸಿಕ್ಕಿರುವುದು ಅವರ ಯಶಸ್ಸಿನ ಓಟಕ್ಕೆ ಇಂಬುಗೊಟ್ಟಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಕಲಚೇತನ ಮಕ್ಕಳ ಆಟಕ್ಕೆ ಭಿನ್ನ ಸ್ಪರ್ಶ ನೀಡುವ ಕೆಲಸವನ್ನು ಇಂದು ಅನಿಮೇಷನ್ ಶಿಕ್ಷಣ ಸಂಸ್ಥೆಯೊಂದು ಮಾಡುತ್ತಿದೆ.ಹೆಣೆಯುವ ಯೋಜನೆ, ಕೈಗೊಳ್ಳುವ ಕಾರ್ಯ, ಸಿಗುವ ಪ್ರೋತ್ಸಾಹ, ಅದನ್ನು ಬಳಸಿಕೊಳ್ಳುವ ರೀತಿ ಉತ್ತಮವಾಗಿದ್ದರೆ ವಿದ್ಯಾರ್ಥಿಗಳ ಸಾಧನೆಗೆ ಶಹಬ್ಬಾಸ್ಗಿರಿ ಸಲ್ಲುತ್ತದೆ. <br /> <br /> ಯುವಜನತೆಯ ಮನದಲ್ಲಿ ಮೂಡುವ ಯೋಚನೆ ಸಾಕಾರಗೊಂಡರೆ ಅದೊಂದು ಮಹಾನ್ ಸಾಧನೆಯಾಗಿ ಹೊರ ಹೊಮ್ಮುತ್ತದೆ. ಇಂಥದ್ದೇ ಒಂದು ಸಾಧನೆ ಐದು ವಿದ್ಯಾರ್ಥಿಗಳ ತಂಡದಿಂದ ಆಗಿದೆ. ಅದಕ್ಕೆ ಪೋಷಣೆ ನೀಡಿದ್ದು `ವಿಜ್ಟೂನ್ಜ್ ಅನಿಮೇಷನ್ ಅಕಾಡೆಮಿ~.<br /> <br /> ವಿಕಲಚೇತನ ಮಕ್ಕಳ ಕುರಿತು ಸಂಸ್ಥೆಯ ಎರಡನೇ ಸೆಮಿಸ್ಟರ್ ಪದವಿ ವಿದ್ಯಾರ್ಥಿಗಳು ಕಿರುಚಿತ್ರವೊಂದನ್ನು ಸಿದ್ಧಪಡಿಸಿದ್ದಾರೆ. ಮಕ್ಕಳ ಭಾವನೆಗಳನ್ನು ಉತ್ತಮವಾಗಿ ಸೆರೆ ಹಿಡಿದಿರುವ ಈ ಚಿತ್ರ ವಿಕಲಚೇತನ ಮಕ್ಕಳ ಬಗ್ಗೆ ಮರುಕ ಹುಟ್ಟಿಸುವ ಬದಲು ಉತ್ತೇಜಿಸುವ ಭಾವನೆ ಮೂಡಿಸುತ್ತದೆ.<br /> <br /> `ಸಮರ್ಥನಂ~ ಸಂಸ್ಥೆಯ ಮಕ್ಕಳ ಕುರಿತ ಈ ಚಿತ್ರವನ್ನು ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಆಸಕ್ತಿಯಿಂದ ಸೆರೆಹಿಡಿದಿದ್ದಾರೆ. ಇಲ್ಲಿ ಮಕ್ಕಳ ಸಹಜ ಹಾವ-ಭಾವ, ಆಂಗಿಕ ಅಭಿನಯವೇ ಬಂಡವಾಳ. ಇದನ್ನು ಚಿತ್ರವಾಗಿಸಿರುವಲ್ಲಿ ವಿದ್ಯಾರ್ಥಿಗಳ ಪ್ರೌಢಿಮೆ ಎದ್ದುಕಾಣುತ್ತದೆ. <br /> <br /> ಜೆ.ಪಿ.ನಗರದ ವಿಜ್ಟೂನ್ಜ್ ಅನಿಮೇಷನ್ ಅಕಾಡೆಮಿ ವಿದ್ಯಾರ್ಥಿಗಳಾದ ಬಿಂದು ಆರ್, ಶ್ವೇತಾ ಬಿ.ಎಂ, ರಾಜೇಶ್ ಕೆ.ಎಚ್, ದೀಪಕ್ ಎಚ್.ವಿ. ಸೇರಿ ಈ ಯೋಜನೆ ಸಿದ್ಧಪಡಿಸಿದ್ದಾರೆ. `ಶಿಕ್ಷಣ ಸಂಸ್ಥೆಯ ಸಹಕಾರ, ಪಾಲಕರ ಪ್ರೋತ್ಸಾಹ ಈ ಕಾರ್ಯಕ್ಕೆ ಸಹಕಾರಿಯಾಯಿತು. <br /> <br /> ಚಿತ್ರೀಕರಣದ ವೇಳೆ ಸಾರ್ವಜನಿಕರು, ಸಂಸ್ಥೆಗಳು, ಸರ್ಕಾರದಿಂದ ಸಹಕಾರ ಸಿಕ್ಕಿದ್ದರೆ ಇನ್ನಷ್ಟು ಗುಣಮಟ್ಟದ ಚಿತ್ರ ಸಿದ್ಧಪಡಿಸಬಹುದಿತ್ತು~ ಎನ್ನುತ್ತಾರೆ ಇವರು.<br /> ವಿದ್ಯಾರ್ಥಿಗಳೆಲ್ಲ ಮೂರು ವರ್ಷದ ಪದವಿ ಕಲಿಕೆಯಲ್ಲಿ ಒಂದು ವರ್ಷ ಪೂರೈಸಿಕೊಂಡಿದ್ದಾರೆ. <br /> <br /> ತರಗತಿ ಅವಧಿ ಹೊರತುಪಡಿಸಿ ರಜೆ ಹಾಗೂ ಸಮಯ ಸಿಕ್ಕಾಗೆಲ್ಲಾ ಓಡಾಡಿ ಚಿತ್ರ ಸಿದ್ಧಪಡಿಸಿಕೊಂಡಿದ್ದಾರೆ. ಕಲಿಕೆಯ ಜತೆ ಜತೆಗೆ ಮೊದಲ ವರ್ಷಾಂತ್ಯದೊಳಗೇ ಕಿರುಚಿತ್ರ ಸಿದ್ಧಪಡಿಸಿ ನೀಡುತ್ತಿರುವುದು ಅವರಿಗೆ ಹೆಮ್ಮೆಯ ಸಂಗತಿ. <br /> <br /> ತಂಡದ ನಾಯಕತ್ವ ವಹಿಸಿದ್ದವರು ಕೋರಮಂಗಲದ ಬಿಂದು ಆರ್. ಪಿಯುಸಿ ಮುಗಿಸಿ ಅನಿಮೇಷನ್ ಕಲಿಯುತ್ತೇನೆ ಅಂದಾಗ ಪಾಲಕರು ವಿರೋಧಿಸಿದ್ದರು. ಆದರೆ ವರ್ಷದಲ್ಲಿ ಇವರ ಕೆಲಸ ಕಂಡು ಎಲ್ಲರೂ ಮೆಚ್ಚಿದ್ದಾರೆ. ಇದರ ಹಿಂದೆ ಶಿಕ್ಷಣ ಸಂಸ್ಥೆಯ ಕೊಡುಗೆ ಅಪಾರ ಎನ್ನುತ್ತಾರೆ ಬಿಂದು. <br /> <br /> ಜೆ.ಪಿ.ನಗರದ ನಿವಾಸಿ ಶ್ವೇತಾ ಕಲಿಕೆಯ ಜತೆ ವ್ಯಾಪಾರವನ್ನೂ ನಡೆಸುತ್ತಿದ್ದಾರೆ. ಇನ್ನಷ್ಟು ಕಲಿಯುವ ಆಸಕ್ತಿ ಹೊಂದಿರುವ ಇವರಿಗೆ ಈ ಚಿತ್ರ ಸಮಾಧಾನ ತಂದಿದೆ.<br /> ಕೋಲಾರದ ರಾಜೇಶ್ ಕೆ.ವಿ. ಒಬ್ಬ ಪ್ರತಿಭಾವಂತ ವಿದ್ಯಾರ್ಥಿ ಎಂಬುದನ್ನು ಇಲ್ಲಿ ತೋರಿಸಿದ್ದಾರೆ. ಅನಿಮೇಷನ್ ಕಲಿಕೆಗಾಗಿಯೇ ಬೆಂಗಳೂರಿಗೆ ಬಂದ ಇವರ ಕೈ ಹಿಡಿದದ್ದು ವಿಜ್ಟೂನ್ಜ್. ಇಂದು ಇಲ್ಲಿ ಕಲಿತು ಒಂದು ಕಿರುಚಿತ್ರ ಕೂಡ ಮಾಡಿ ಯಶ ಸಾಧಿಸಿದ್ದೇನೆ ಎನ್ನುತ್ತಾರೆ ಅವರು. <br /> <br /> ಹೊಸಕೋಟೆಯಿಂದ ನಿತ್ಯ ಬೆಂಗಳೂರಿಗೆ ಓಡಾಡುವ ದೀಪಕ್ ಎಚ್.ವಿ. ಒಬ್ಬ ಸಹೃದಯಿ ಛಾಯಾಗ್ರಾಹಕ. ಕೆಲವೆಡೆ ಮೊಬೈಲ್ ಕ್ಯಾಮೆರಾ ಮೂಲಕ ಚಿತ್ರೀಕರಣ ನಡೆಸಿ ಜಯಿಸಿದ್ದಾರೆ. ಉತ್ಸಾಹಕ್ಕೆ ತಕ್ಕ ಪ್ರೋತ್ಸಾಹವೂ ಸಿಕ್ಕಿರುವುದು ಅವರ ಯಶಸ್ಸಿನ ಓಟಕ್ಕೆ ಇಂಬುಗೊಟ್ಟಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>