<p>ಮಡಿಕೇರಿ: ಕಾಫಿ ತೋಟಗಳಿಗೆ ನುಗ್ಗುವ ಕಾಡಾನೆಗಳು ಈಚೆಗೆ ಕಾಫಿ ಬೀಜ ತಿನ್ನಲು ಶುರು ಮಾಡಿವೆ. ಇವುಗಳನ್ನು ನಿಯಂತ್ರಿಸದಿದ್ದರೆ ಕೊಡಗಿನ ಕಾಫಿ ಬೆಳೆಗಾರರು ಕಂಗಾಲಾಗುವ ದಿನಗಳು ದೂರವಿಲ್ಲ ಎಂದು ಕಾಫಿ ಬೆಳೆಗಾರರು ಆತಂಕ ವ್ಯಕ್ತಪಡಿಸಿದರು. <br /> <br /> ಹೈಕೋರ್ಟ್ ನಿರ್ದೇಶನದ ಮೇರೆಗೆ ಆನೆ-ಮಾನವ ಸಂಘರ್ಷದ ಬಗ್ಗೆ ಅಧ್ಯಯನ ನಡೆಸಲು ರಚಿತವಾಗಿರುವ ಸಮಿತಿಯ ಸದಸ್ಯರು ದಕ್ಷಿಣ ಕೊಡಗಿನ ಮಾಲ್ದಾರೆಗೆ ಬುಧವಾರ ಭೇಟಿ ನೀಡಿದಾಗ ಕಾಫಿ ಬೆಳೆಗಾರರು ಈ ವಿಷಯದ ಬಗ್ಗೆ ಗಮನ ಸೆಳೆದರು. <br /> <br /> ಆನೆ ಹಾವಳಿಯಿಂದಾಗಿ ಈ ಭಾಗದ ಜನರು ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಮಾತನಾಡಿದ ಕಾಫಿ ಬೆಳೆಗಾರ ನಂದ ಸುಬ್ಬಯ್ಯ, ಇಲ್ಲಿಯವರೆಗೆ ಆನೆಗಳು ನಮ್ಮ ತೋಟಗಳಿಗೆ ನುಗ್ಗಿ ಬಾಳೆ, ಬಿದಿರು ತಿನ್ನುತ್ತಿದ್ದವು. ಆದರೆ, ಈಗ ಅವು ನಮ್ಮ ಆದಾಯದ ಮೂಲವಾಗಿರುವ ಕಾಫಿಗೆ ಬಾಯಿ ಹಾಕಿವೆ ಎಂದು ಹೇಳಿದರು. <br /> <br /> ತಮ್ಮ ಮಾತಿಗೆ ಸಾಕ್ಷಿ ಒದಗಿಸಲು ಅವರು ಆನೆಯ ಲದ್ದಿ ತಂದು ಅದರಲ್ಲಿ ಕಾಫಿ ಬೀಜ ಇರುವುದನ್ನು ತೋರಿಸಿದರು. <br /> <br /> ಮಾಲ್ದಾರೆ ವ್ಯಾಪ್ತಿಯ ನಿವಾಸಿ ಪೂವಯ್ಯ ಮಾತನಾಡಿ, ಮನುಷ್ಯರ ಸಂಖ್ಯೆ ಹೆಚ್ಚುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಈ ಭಾಗದಲ್ಲಿ ಆನೆಗಳ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ ಅರಣ್ಯ ಪ್ರದೇಶ ಮಾತ್ರ ಕಡಿಮೆಯಾಗುತ್ತಿದೆ. ಹೀಗಾಗಿ ಆನೆ-ಮಾನವ ಸಂಘರ್ಷಗಳು ಉಂಟಾಗುತ್ತಿವೆ ಎಂದರು. <br /> <br /> ಗ್ರಾಮದ ನಿವಾಸಿ ಅಯ್ಯಪ್ಪ ಮಾತನಾಡಿ, ಸೋಲಾರ್ ಬೇಲಿ, ಆನೆ ಕಂದಕಗಳ ನಿರ್ಮಾಣ ಇವ್ಯಾವುದೂ ಪರಿಣಾಮಕಾರಿಯಾಗಿ ಪ್ರಯೋಜನಕ್ಕೆ ಬರುತ್ತಿಲ್ಲ. ಅರಣ್ಯ ಅಧಿಕಾರಿಗಳು `ಕಮಿಷನ್~ಗೋಸ್ಕರ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ ಎಂದು ದೂರಿದರು. <br /> <br /> ಆಗ ಮಧ್ಯಪ್ರವೇಶಿಸಿದ ಸಮಿತಿಯ ಸದಸ್ಯರು, ದಾಖಲೆಗಳಿಲ್ಲದೇ ಇಂತಹ ಆರೋಪಗಳನ್ನು ಮಾಡಬೇಡಿ ಎಂದರು. <br /> <br /> ನಮಗೆ ಮನುಷ್ಯರೂ ಮುಖ್ಯ, ಅದರ ಜೊತೆಗೆ ವನ್ಯಜೀವಿಗಳೂ ಮುಖ್ಯ. ಇವುಗಳ ನಡುವಿನ ಸಂಘರ್ಷ ತಪ್ಪಿಸಲು ನಿಮ್ಮ ಬಳಿ ಸಲಹೆಗಳಿದ್ದರೆ ತಿಳಿಸಿ, ಇವುಗಳನ್ನು ಹೈಕೋರ್ಟ್ ಗಮನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಮಿತಿಯ ಸದಸ್ಯ ರವೀಂದ್ರನಾಥ್ ಕಾಮತ್ ಹೇಳಿದರು. <br /> <br /> ಸರ್ಕಾರವು ಸೂಕ್ತ ಪರಿಹಾರ ನೀಡಿದರೆ ಅರಣ್ಯವನ್ನು ತೊರೆದು ನಾಡಿನಲ್ಲಿ ವಾಸಿಸಲು ಗಿರಿಜನರು ಸಿದ್ಧರಿದ್ದಾರೆಯೇ ಎಂದು ಸಮಿತಿಯ ಒಬ್ಬ ಸದಸ್ಯರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅರಣ್ಯದೊಳಗಿನ ಹಾಡಿಯಲ್ಲಿ ವಾಸಿಸುತ್ತಿರುವ ಟಿ.ವಿ. ರವಿ, ನಾವು ಕಳೆದ ನಾಲ್ಕು ತಲೆಮಾರಿನಿಂದ ಈ ಪ್ರದೇಶದಲ್ಲಿ ವಾಸಿಸುತ್ತಿದ್ದೇವೆ. ಕೊನೆಯ ಉಸಿರು ಇರುವವರೆಗೂ ನಾವು ಅರಣ್ಯವನ್ನು ಬಿಟ್ಟು ಹೊರಬರುವುದಿಲ್ಲ ಎಂದು ಹೇಳಿದರು. <br /> <br /> ಆನೆ ದಾಳಿಯಿಂದ ತಮಗಾಗುತ್ತಿರುವ ಕಷ್ಟ-ನಷ್ಟಗಳನ್ನು ಹಾಗೂ ಈ ಸಮಸ್ಯೆ ಪರಿಹಾರಕ್ಕೆ ಸಲಹೆಗಳನ್ನು ನೀಡಲು ಬಯಸುವವರು ಇ-ಮೇಲ್ ್ಟಠ್ಠಝ್ಠೇಃ್ಚಛಿ.ಜಿಜಿಠ್ಚ.ಛ್ಟ್ಞಿಛಿಠಿ.ಜ್ಞಿ ಅಥವಾ ಛಿಠ್ಛಿಃ ಟಟ ಜ್ಟಟ್ಠ.್ಚಟಞ ಮೂಲಕ ಸಂಪರ್ಕಿಸಬಹುದು. ವರದಿಯನ್ನು ಏ.15ರೊಳಗೆ ಹೈಕೋರ್ಟ್ಗೆ ಸಲ್ಲಿಸಬೇಕಾಗಿದ್ದು, ಆದಷ್ಟು ಬೇಗನೇ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ಸಮಿತಿಯ ಅಧ್ಯಕ್ಷ ಡಾ.ಆರ್. ಸುಕುಮಾರನ್ ಹೇಳಿದರು. <br /> <br /> ಇದಕ್ಕೂ ಮುಂಚೆ ಮಡಿಕೇರಿಯಲ್ಲಿ ಸಮಿತಿಯ ಸದಸ್ಯರು ಜನಪ್ರತನಿಧಿಗಳ ಜೊತೆ ಚರ್ಚೆ ನಡೆಸಿ, ಸಲಹೆಗಳನ್ನು ಪಡೆದರು. <br /> <br /> ವಿಧಾನ ಪರಿಷತ್ ಸದಸ್ಯ ಎಂ.ಸಿ. ನಾಣಯ್ಯ, ಶಾಸಕ ಅಪ್ಪಚ್ಚು ರಂಜನ್, ಜಿ.ಪಂ. ಅಧ್ಯಕ್ಷ ರವಿ ಕುಶಾಲಪ್ಪ, ಉಪಾಧ್ಯಕ್ಷೆ ಎಚ್.ಎಂ. ಕಾವೇರಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸಲಹೆಗಳನ್ನು ನೀಡಿದರು. <br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಡಿಕೇರಿ: ಕಾಫಿ ತೋಟಗಳಿಗೆ ನುಗ್ಗುವ ಕಾಡಾನೆಗಳು ಈಚೆಗೆ ಕಾಫಿ ಬೀಜ ತಿನ್ನಲು ಶುರು ಮಾಡಿವೆ. ಇವುಗಳನ್ನು ನಿಯಂತ್ರಿಸದಿದ್ದರೆ ಕೊಡಗಿನ ಕಾಫಿ ಬೆಳೆಗಾರರು ಕಂಗಾಲಾಗುವ ದಿನಗಳು ದೂರವಿಲ್ಲ ಎಂದು ಕಾಫಿ ಬೆಳೆಗಾರರು ಆತಂಕ ವ್ಯಕ್ತಪಡಿಸಿದರು. <br /> <br /> ಹೈಕೋರ್ಟ್ ನಿರ್ದೇಶನದ ಮೇರೆಗೆ ಆನೆ-ಮಾನವ ಸಂಘರ್ಷದ ಬಗ್ಗೆ ಅಧ್ಯಯನ ನಡೆಸಲು ರಚಿತವಾಗಿರುವ ಸಮಿತಿಯ ಸದಸ್ಯರು ದಕ್ಷಿಣ ಕೊಡಗಿನ ಮಾಲ್ದಾರೆಗೆ ಬುಧವಾರ ಭೇಟಿ ನೀಡಿದಾಗ ಕಾಫಿ ಬೆಳೆಗಾರರು ಈ ವಿಷಯದ ಬಗ್ಗೆ ಗಮನ ಸೆಳೆದರು. <br /> <br /> ಆನೆ ಹಾವಳಿಯಿಂದಾಗಿ ಈ ಭಾಗದ ಜನರು ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಮಾತನಾಡಿದ ಕಾಫಿ ಬೆಳೆಗಾರ ನಂದ ಸುಬ್ಬಯ್ಯ, ಇಲ್ಲಿಯವರೆಗೆ ಆನೆಗಳು ನಮ್ಮ ತೋಟಗಳಿಗೆ ನುಗ್ಗಿ ಬಾಳೆ, ಬಿದಿರು ತಿನ್ನುತ್ತಿದ್ದವು. ಆದರೆ, ಈಗ ಅವು ನಮ್ಮ ಆದಾಯದ ಮೂಲವಾಗಿರುವ ಕಾಫಿಗೆ ಬಾಯಿ ಹಾಕಿವೆ ಎಂದು ಹೇಳಿದರು. <br /> <br /> ತಮ್ಮ ಮಾತಿಗೆ ಸಾಕ್ಷಿ ಒದಗಿಸಲು ಅವರು ಆನೆಯ ಲದ್ದಿ ತಂದು ಅದರಲ್ಲಿ ಕಾಫಿ ಬೀಜ ಇರುವುದನ್ನು ತೋರಿಸಿದರು. <br /> <br /> ಮಾಲ್ದಾರೆ ವ್ಯಾಪ್ತಿಯ ನಿವಾಸಿ ಪೂವಯ್ಯ ಮಾತನಾಡಿ, ಮನುಷ್ಯರ ಸಂಖ್ಯೆ ಹೆಚ್ಚುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಈ ಭಾಗದಲ್ಲಿ ಆನೆಗಳ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ ಅರಣ್ಯ ಪ್ರದೇಶ ಮಾತ್ರ ಕಡಿಮೆಯಾಗುತ್ತಿದೆ. ಹೀಗಾಗಿ ಆನೆ-ಮಾನವ ಸಂಘರ್ಷಗಳು ಉಂಟಾಗುತ್ತಿವೆ ಎಂದರು. <br /> <br /> ಗ್ರಾಮದ ನಿವಾಸಿ ಅಯ್ಯಪ್ಪ ಮಾತನಾಡಿ, ಸೋಲಾರ್ ಬೇಲಿ, ಆನೆ ಕಂದಕಗಳ ನಿರ್ಮಾಣ ಇವ್ಯಾವುದೂ ಪರಿಣಾಮಕಾರಿಯಾಗಿ ಪ್ರಯೋಜನಕ್ಕೆ ಬರುತ್ತಿಲ್ಲ. ಅರಣ್ಯ ಅಧಿಕಾರಿಗಳು `ಕಮಿಷನ್~ಗೋಸ್ಕರ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ ಎಂದು ದೂರಿದರು. <br /> <br /> ಆಗ ಮಧ್ಯಪ್ರವೇಶಿಸಿದ ಸಮಿತಿಯ ಸದಸ್ಯರು, ದಾಖಲೆಗಳಿಲ್ಲದೇ ಇಂತಹ ಆರೋಪಗಳನ್ನು ಮಾಡಬೇಡಿ ಎಂದರು. <br /> <br /> ನಮಗೆ ಮನುಷ್ಯರೂ ಮುಖ್ಯ, ಅದರ ಜೊತೆಗೆ ವನ್ಯಜೀವಿಗಳೂ ಮುಖ್ಯ. ಇವುಗಳ ನಡುವಿನ ಸಂಘರ್ಷ ತಪ್ಪಿಸಲು ನಿಮ್ಮ ಬಳಿ ಸಲಹೆಗಳಿದ್ದರೆ ತಿಳಿಸಿ, ಇವುಗಳನ್ನು ಹೈಕೋರ್ಟ್ ಗಮನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಮಿತಿಯ ಸದಸ್ಯ ರವೀಂದ್ರನಾಥ್ ಕಾಮತ್ ಹೇಳಿದರು. <br /> <br /> ಸರ್ಕಾರವು ಸೂಕ್ತ ಪರಿಹಾರ ನೀಡಿದರೆ ಅರಣ್ಯವನ್ನು ತೊರೆದು ನಾಡಿನಲ್ಲಿ ವಾಸಿಸಲು ಗಿರಿಜನರು ಸಿದ್ಧರಿದ್ದಾರೆಯೇ ಎಂದು ಸಮಿತಿಯ ಒಬ್ಬ ಸದಸ್ಯರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅರಣ್ಯದೊಳಗಿನ ಹಾಡಿಯಲ್ಲಿ ವಾಸಿಸುತ್ತಿರುವ ಟಿ.ವಿ. ರವಿ, ನಾವು ಕಳೆದ ನಾಲ್ಕು ತಲೆಮಾರಿನಿಂದ ಈ ಪ್ರದೇಶದಲ್ಲಿ ವಾಸಿಸುತ್ತಿದ್ದೇವೆ. ಕೊನೆಯ ಉಸಿರು ಇರುವವರೆಗೂ ನಾವು ಅರಣ್ಯವನ್ನು ಬಿಟ್ಟು ಹೊರಬರುವುದಿಲ್ಲ ಎಂದು ಹೇಳಿದರು. <br /> <br /> ಆನೆ ದಾಳಿಯಿಂದ ತಮಗಾಗುತ್ತಿರುವ ಕಷ್ಟ-ನಷ್ಟಗಳನ್ನು ಹಾಗೂ ಈ ಸಮಸ್ಯೆ ಪರಿಹಾರಕ್ಕೆ ಸಲಹೆಗಳನ್ನು ನೀಡಲು ಬಯಸುವವರು ಇ-ಮೇಲ್ ್ಟಠ್ಠಝ್ಠೇಃ್ಚಛಿ.ಜಿಜಿಠ್ಚ.ಛ್ಟ್ಞಿಛಿಠಿ.ಜ್ಞಿ ಅಥವಾ ಛಿಠ್ಛಿಃ ಟಟ ಜ್ಟಟ್ಠ.್ಚಟಞ ಮೂಲಕ ಸಂಪರ್ಕಿಸಬಹುದು. ವರದಿಯನ್ನು ಏ.15ರೊಳಗೆ ಹೈಕೋರ್ಟ್ಗೆ ಸಲ್ಲಿಸಬೇಕಾಗಿದ್ದು, ಆದಷ್ಟು ಬೇಗನೇ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ಸಮಿತಿಯ ಅಧ್ಯಕ್ಷ ಡಾ.ಆರ್. ಸುಕುಮಾರನ್ ಹೇಳಿದರು. <br /> <br /> ಇದಕ್ಕೂ ಮುಂಚೆ ಮಡಿಕೇರಿಯಲ್ಲಿ ಸಮಿತಿಯ ಸದಸ್ಯರು ಜನಪ್ರತನಿಧಿಗಳ ಜೊತೆ ಚರ್ಚೆ ನಡೆಸಿ, ಸಲಹೆಗಳನ್ನು ಪಡೆದರು. <br /> <br /> ವಿಧಾನ ಪರಿಷತ್ ಸದಸ್ಯ ಎಂ.ಸಿ. ನಾಣಯ್ಯ, ಶಾಸಕ ಅಪ್ಪಚ್ಚು ರಂಜನ್, ಜಿ.ಪಂ. ಅಧ್ಯಕ್ಷ ರವಿ ಕುಶಾಲಪ್ಪ, ಉಪಾಧ್ಯಕ್ಷೆ ಎಚ್.ಎಂ. ಕಾವೇರಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸಲಹೆಗಳನ್ನು ನೀಡಿದರು. <br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>