<p><strong>ಕಾರಟಗಿ: </strong>ಗಣರಾಜ್ಯೋತ್ಸವವನ್ನು ಗುರುವಾರ ಇಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಶಾಲಾ, ಕಾಲೇಜ್ ವಿದ್ಯಾರ್ಥಿಗಳು ಪರೇಡ್ ನಡೆಸಿ, ಧ್ವಜದೊಂದಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗಮನ ಸೆಳೆದರು. ಶಾಲಾ, ಕಾಲೇಜ್ ಸೇರಿದಂತೆ ವಿವಿಧ ಸರ್ಕಾರಿ ಕಛೇರಿ ಹಾಗೂ ಸಂಘಟನೆಗಳಲ್ಲಿ ಧ್ವಜಾರೋಹಣದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಯಿತು.<br /> <br /> ಸಮೀಪದ ನವನಗರದ ಕಮ್ಮಾವಾರಿ ಶಿಕ್ಷಣ ಸಂಸ್ಥೆಯ ರೆಡ್ಡಿ ವೀರಣ್ಣ ಸಂಜೀವಪ್ಪ ವಸತಿ ಶಾಲೆಯಲ್ಲಿ ಪ್ರಾಚಾರ್ಯ ಗುರುಮಠ ಧ್ವಜಾರೋಹಣ ಮಾಡಿದರು. ವಿದ್ಯಾರ್ಥಿಗಳು ಪಥ ಸಂಚಲನೆ ನಡೆಸಿ ಗೌರವ ವಂದನೆ ಸಲ್ಲಿಸಿದರು.<br /> <br /> ಸಂಸ್ಥೆಯ ಅಧ್ಯಕ್ಷ ಕೊಲ್ಲಾ ಶೇಷಗಿರಿರಾವ್, ಬಿಜೆಪಿ ಮುಖಂಡ ಗುರುಸಿದ್ದಪ್ಪ ಎರಕಲ್, ಸಂಸ್ಥೆ ಕಾರ್ಯದರ್ಶಿ ಎಲ್. ವೀರಭದ್ರರಾವ್, ಪ್ರಾಚಾರ್ಯ ಡಾ. ಮಹ್ಮದ್ ರಫೀಕ್, ಲಿಂಗಾರೆಡ್ಡಿ ಆಲೂರ, ಸಂಗಪ್ಪ, ಸಾಧಿತಾ, ಗಂಗಮ್ಮ ಹಿರೇಮಠ, ಚಂದ್ರಶೇಖರರೆಡ್ಡಿ, ದುರ್ಗಾಪ್ರಸಾದ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.<br /> ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.<br /> <br /> ಕಾರಟಗಿ ತುಂಗಭದ್ರಾ ಲಘು ವಾಹನ ಚಾಲಕರ ಸಂಘದಲ್ಲಿ ಪಿಎಸ್ಐ ಡಿ. ದುರುಗಪ್ಪ ಧ್ವಜಾರೋಹಣ ನೆರವೇರಿಸಿ ಮಾತನಾಡಿ ನಮ್ಮ ಹಕ್ಕುಗಳನ್ನು ಅನುಭವಿಸುವ ಜೊತೆಗೆ ಕರ್ತವ್ಯಗಳನ್ನು ಮಾಡುವ ಮೂಲಕ ದೇಶಪ್ರೇಮ ಮೆರೆಯಬೇಕು ಎಂದರು.<br /> <br /> ಸಂಘದ ಅಧ್ಯಕ್ಷ ಗೋವಿಂದ ಈಳಿಗೇರ, ಗೌರವಾಧ್ಯಕ್ಷ ಎಚ್. ಚಾಂದಸಿಂಗ್ ರಜಪೂತ, ಶಿಕ್ಷಣ ಸಂಯೋಜಕ ಕೇರುಪವಾರ್, ಪ್ರಮುಖರಾದ ವೇಣುಗೋಪಾಲಶ್ರೇಷ್ಠಿ, ಕೊಟ್ರಪ್ಪ ಸಜ್ಜನ್, ಮಂಜುನಾಥ ಮಸ್ಕಿ ಮೊದಲಾದವರು ಉಪಸ್ಥಿತರಿದ್ದರು.<br /> <br /> ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜ್ ಪ್ರೌಢಶಾಲಾ ವಿಭಾಗದಲ್ಲಿ ಉಪ ಪ್ರಾಚಾರ್ಯ ಶರಣಪ್ಪ ಗೌರಿಪೂರ ಧ್ವಜಾರೋಹಣ ಮಾಡಿದರು.<br /> ಎಸ್ಡಿಎಂಸಿ ಉಪಾಧ್ಯಕ್ಷ ಶರಣಪ್ಪ ಉಪನಾಳ, ವಿಜಯಕುಮಾರ್, ಬಸವರಾಜ್ ಬಿ, ಲಕ್ಷ್ಮಣ ಹುಲಿಗಿ, ಶಂಕ್ರಪ್ಪ, ಹಜರತ್ ಬಾಗಲಿ, ಗುರುಬಸಪ್ಪ ಪಟ್ಟಣಶೆಟ್ಟಿ, ಶಕುಂತಲಾ, ಗೌತಮಿ, ರೋಹಿಣಿ, ಸಲೀಮಾ, ಮೀನಾಕ್ಷಿ ಲಕ್ಷ್ಮೀದಟ್ಟಿ, ವಿ. ಮಂಜುನಾಥ, ಮೌನೇಶ್, ಗುರಪ್ಪಯ್ಯ, ಅಡಿವೆಪ್ಪ ಗುಣಾರಿ ಉಪಸ್ಥಿತರಿದ್ದರು. <br /> ವಿದ್ಯಾರ್ಥಿಗಳಿಗೆ ಭಾಷಣ, ಗಾಯನ, ರಂಗೋಲಿ, ಕ್ವಿಜ್ ಸ್ಫರ್ಧೆಗಳನ್ನು ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.<br /> <br /> ಶಾಂತಿ ನಿಕೇತನ ಪಬ್ಲಿಕ್ ಸ್ಕೂಲ್ನಲ್ಲಿ ರುದ್ರಗೌಡ ನಂದಿಹಳ್ಳಿ ಧ್ವಜಾರೋಹಣ ಮಾಡಿದರು. ಸಂಸ್ಥೆ ಅಧ್ಯಕ್ಷ ಶರಣಪ್ಪ ಅಂಗಡಿ, ಶರಣಯ್ಯ, ಅಶೋಕ, ಸೋಮನಾಥ, ಹನುಮೇಶ್ ಪೂಜಾರ್, ಹಿರೇಮಠ ಮೊದಲಾದವರು ಉಪಸ್ಥಿತರಿದ್ದರು.<br /> ಗಿರಿಜಾ ಮಹಿಳಾ ಮಂಡಳದಲ್ಲಿ ಅಧ್ಯಕ್ಷೆ ಟಿ. ಎಂ. ನೀಲಮ್ಮ ಧ್ವಜಾರೋಹಣ ಮಾಡಿದರು. ಸುರೇಖಾ, ಪ್ರಭಾವತಿ ಶೆಟ್ಟರ್, ಲಕ್ಷ್ಮೀದೇವಿ ಗೋಡಿ, ಸಜ್ಜನ್ ಲಕ್ಷ್ಮೀ, ಅರುಣಾ ಟೀಚರ್ ಮೊದಲಾದವರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರಟಗಿ: </strong>ಗಣರಾಜ್ಯೋತ್ಸವವನ್ನು ಗುರುವಾರ ಇಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಶಾಲಾ, ಕಾಲೇಜ್ ವಿದ್ಯಾರ್ಥಿಗಳು ಪರೇಡ್ ನಡೆಸಿ, ಧ್ವಜದೊಂದಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗಮನ ಸೆಳೆದರು. ಶಾಲಾ, ಕಾಲೇಜ್ ಸೇರಿದಂತೆ ವಿವಿಧ ಸರ್ಕಾರಿ ಕಛೇರಿ ಹಾಗೂ ಸಂಘಟನೆಗಳಲ್ಲಿ ಧ್ವಜಾರೋಹಣದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಯಿತು.<br /> <br /> ಸಮೀಪದ ನವನಗರದ ಕಮ್ಮಾವಾರಿ ಶಿಕ್ಷಣ ಸಂಸ್ಥೆಯ ರೆಡ್ಡಿ ವೀರಣ್ಣ ಸಂಜೀವಪ್ಪ ವಸತಿ ಶಾಲೆಯಲ್ಲಿ ಪ್ರಾಚಾರ್ಯ ಗುರುಮಠ ಧ್ವಜಾರೋಹಣ ಮಾಡಿದರು. ವಿದ್ಯಾರ್ಥಿಗಳು ಪಥ ಸಂಚಲನೆ ನಡೆಸಿ ಗೌರವ ವಂದನೆ ಸಲ್ಲಿಸಿದರು.<br /> <br /> ಸಂಸ್ಥೆಯ ಅಧ್ಯಕ್ಷ ಕೊಲ್ಲಾ ಶೇಷಗಿರಿರಾವ್, ಬಿಜೆಪಿ ಮುಖಂಡ ಗುರುಸಿದ್ದಪ್ಪ ಎರಕಲ್, ಸಂಸ್ಥೆ ಕಾರ್ಯದರ್ಶಿ ಎಲ್. ವೀರಭದ್ರರಾವ್, ಪ್ರಾಚಾರ್ಯ ಡಾ. ಮಹ್ಮದ್ ರಫೀಕ್, ಲಿಂಗಾರೆಡ್ಡಿ ಆಲೂರ, ಸಂಗಪ್ಪ, ಸಾಧಿತಾ, ಗಂಗಮ್ಮ ಹಿರೇಮಠ, ಚಂದ್ರಶೇಖರರೆಡ್ಡಿ, ದುರ್ಗಾಪ್ರಸಾದ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.<br /> ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.<br /> <br /> ಕಾರಟಗಿ ತುಂಗಭದ್ರಾ ಲಘು ವಾಹನ ಚಾಲಕರ ಸಂಘದಲ್ಲಿ ಪಿಎಸ್ಐ ಡಿ. ದುರುಗಪ್ಪ ಧ್ವಜಾರೋಹಣ ನೆರವೇರಿಸಿ ಮಾತನಾಡಿ ನಮ್ಮ ಹಕ್ಕುಗಳನ್ನು ಅನುಭವಿಸುವ ಜೊತೆಗೆ ಕರ್ತವ್ಯಗಳನ್ನು ಮಾಡುವ ಮೂಲಕ ದೇಶಪ್ರೇಮ ಮೆರೆಯಬೇಕು ಎಂದರು.<br /> <br /> ಸಂಘದ ಅಧ್ಯಕ್ಷ ಗೋವಿಂದ ಈಳಿಗೇರ, ಗೌರವಾಧ್ಯಕ್ಷ ಎಚ್. ಚಾಂದಸಿಂಗ್ ರಜಪೂತ, ಶಿಕ್ಷಣ ಸಂಯೋಜಕ ಕೇರುಪವಾರ್, ಪ್ರಮುಖರಾದ ವೇಣುಗೋಪಾಲಶ್ರೇಷ್ಠಿ, ಕೊಟ್ರಪ್ಪ ಸಜ್ಜನ್, ಮಂಜುನಾಥ ಮಸ್ಕಿ ಮೊದಲಾದವರು ಉಪಸ್ಥಿತರಿದ್ದರು.<br /> <br /> ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜ್ ಪ್ರೌಢಶಾಲಾ ವಿಭಾಗದಲ್ಲಿ ಉಪ ಪ್ರಾಚಾರ್ಯ ಶರಣಪ್ಪ ಗೌರಿಪೂರ ಧ್ವಜಾರೋಹಣ ಮಾಡಿದರು.<br /> ಎಸ್ಡಿಎಂಸಿ ಉಪಾಧ್ಯಕ್ಷ ಶರಣಪ್ಪ ಉಪನಾಳ, ವಿಜಯಕುಮಾರ್, ಬಸವರಾಜ್ ಬಿ, ಲಕ್ಷ್ಮಣ ಹುಲಿಗಿ, ಶಂಕ್ರಪ್ಪ, ಹಜರತ್ ಬಾಗಲಿ, ಗುರುಬಸಪ್ಪ ಪಟ್ಟಣಶೆಟ್ಟಿ, ಶಕುಂತಲಾ, ಗೌತಮಿ, ರೋಹಿಣಿ, ಸಲೀಮಾ, ಮೀನಾಕ್ಷಿ ಲಕ್ಷ್ಮೀದಟ್ಟಿ, ವಿ. ಮಂಜುನಾಥ, ಮೌನೇಶ್, ಗುರಪ್ಪಯ್ಯ, ಅಡಿವೆಪ್ಪ ಗುಣಾರಿ ಉಪಸ್ಥಿತರಿದ್ದರು. <br /> ವಿದ್ಯಾರ್ಥಿಗಳಿಗೆ ಭಾಷಣ, ಗಾಯನ, ರಂಗೋಲಿ, ಕ್ವಿಜ್ ಸ್ಫರ್ಧೆಗಳನ್ನು ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.<br /> <br /> ಶಾಂತಿ ನಿಕೇತನ ಪಬ್ಲಿಕ್ ಸ್ಕೂಲ್ನಲ್ಲಿ ರುದ್ರಗೌಡ ನಂದಿಹಳ್ಳಿ ಧ್ವಜಾರೋಹಣ ಮಾಡಿದರು. ಸಂಸ್ಥೆ ಅಧ್ಯಕ್ಷ ಶರಣಪ್ಪ ಅಂಗಡಿ, ಶರಣಯ್ಯ, ಅಶೋಕ, ಸೋಮನಾಥ, ಹನುಮೇಶ್ ಪೂಜಾರ್, ಹಿರೇಮಠ ಮೊದಲಾದವರು ಉಪಸ್ಥಿತರಿದ್ದರು.<br /> ಗಿರಿಜಾ ಮಹಿಳಾ ಮಂಡಳದಲ್ಲಿ ಅಧ್ಯಕ್ಷೆ ಟಿ. ಎಂ. ನೀಲಮ್ಮ ಧ್ವಜಾರೋಹಣ ಮಾಡಿದರು. ಸುರೇಖಾ, ಪ್ರಭಾವತಿ ಶೆಟ್ಟರ್, ಲಕ್ಷ್ಮೀದೇವಿ ಗೋಡಿ, ಸಜ್ಜನ್ ಲಕ್ಷ್ಮೀ, ಅರುಣಾ ಟೀಚರ್ ಮೊದಲಾದವರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>