<p><strong>ಕಾಸರಗೋಡು (ಪಿಟಿಐ): </strong>ಕೇರಳ ಮತ್ತು ಕರ್ನಾಟಕ ಗಡಿಯಲ್ಲಿರುವ ಕಾಸರಗೋಡು ಲೋಕಸಭಾ ಕ್ಷೇತ್ರ ವಿವಿಧ ಭಾಷೆಗಳ ವಿವಿಧ ಉಪಭಾಷೆಗಳನ್ನು ಆಡುವ ಪ್ರದೇಶವಾಗಿರುವುದರಿಂದ ಇಲ್ಲಿನ ಚುನಾವಣಾ ಪ್ರಚಾರವೂ ಬಹುಭಾಷೆಯಿಂದ ವರ್ಣಮಯವಾಗಿದೆ.<br /> <br /> ಕನ್ನಡ ಮತ್ತು ಮಲಯಾಳ ಸೇರಿ ಇಲ್ಲಿ ಏಳಕ್ಕೂ ಹೆಚ್ಚು ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಹಾಗಾಗಿ ಉತ್ತರ ಕೇರಳದ ಈ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಕಾರ್ಯಕರ್ತರು ತಮ್ಮ ಬಹುಭಾಷಾ ಕೌಶಲವನ್ನೂ ಪಣಕ್ಕೆ ಒಡ್ಡಬೇಕಾಗುತ್ತದೆ.<br /> ಕಾಸರಗೋಡು ಜಿಲ್ಲೆಯ ಭಾಷಾ ಅಲ್ಪಸಂಖ್ಯಾತರಲ್ಲಿ ಮತ ಯಾಚಿಸಬೇಕಿದ್ದರೆ ಅವರದ್ದೇ ಭಾಷೆಯಲ್ಲಿ ಕೇಳುವುದು ಅನಿವಾರ್ಯ. ಈ ಜಿಲ್ಲೆಯ ಹಲವು ಭಾಗಗಳು ಕರ್ನಾಟಕದ ಗಡಿಯಲ್ಲಿವೆ.<br /> <br /> ಇಲ್ಲಿನ ಜನಸಂಖ್ಯೆಯಲ್ಲಿ ಶೇ 35ರಷ್ಟು ಜನರು ಕನ್ನಡಿಗರು. ಕನ್ನಡವಲ್ಲದೆ ತುಳು, ಕೊಂಕಣಿ, ಮರಾಠಿ, ಉರ್ದು ಮತ್ತು ಬ್ಯಾರಿ ಭಾಷೆ ಮಾತನಾಡುವವರೂ ಇದ್ದಾರೆ.<br /> <br /> ಹಾಗಾಗಿ ಅಭ್ಯರ್ಥಿಗಳು ತಾವು ಭೇಟಿ ನೀಡುವ ಸ್ಥಳಕ್ಕೆ ಅನುಗುಣವಾಗಿ ಭಾಷೆ ಬದಲಾಯಿಸುತ್ತಾರೆ. ಒಂದು ವೇಳೆ ಅಭ್ಯರ್ಥಿಗೆ ಭಾಷೆಯಲ್ಲಿ ಅಷ್ಟೊಂದು ಹಿಡಿತ ಇಲ್ಲದೇ ಇದ್ದರೆ ಆಯಾ ಪಕ್ಷದ ಕಾರ್ಯಕರ್ತರು ಸಂವಹನ ನಡೆಸಲು ನೆರವಾಗುತ್ತಾರೆ.<br /> <br /> ಚುನಾವಣಾ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ಸಾಮಾನ್ಯವಾಗಿರುವ ಗೋಡೆ ಬರಹಗಳಲ್ಲೂ ಬಹು ಭಾಷೆ ಬರವಣಿಗೆಗಳನ್ನು ಕಾಣಬಹುದು. ಪ್ರದೇಶದ ಹೆಚ್ಚಿನ ಭಾಷೆಗಳಲ್ಲಿ ಸುಲಲಿತವಾಗಿ ವ್ಯವಹರಿಸಬಲ್ಲ ಸ್ಥಳೀಯ ನಾಯಕರನ್ನು ಪಕ್ಷಕ್ಕೆ ಎಳೆದುಕೊಳ್ಳುವ ಪ್ರಯತ್ನಗಳೂ ಇಲ್ಲಿ ನಡೆಯುತ್ತಿವೆ.<br /> <br /> ಕ್ಷೇತ್ರದ ಪ್ರಮುಖ ಸ್ಪರ್ಧಿಗಳೆಂದರೆ ಹಾಲಿ ಸಂಸದ, ಸಿಪಿಎಂನ ಪಿ. ಕರುಣಾಕರನ್, ಕಾಂಗ್ರೆಸ್ನ ಸಿದ್ದಿಕ್ ಮತ್ತು ಬಿಜೆಪಿಯ ಕೆ. ಸುರೇಂದ್ರನ್.<br /> <br /> ‘ನಾನು ಮಲಯಾಳದಷ್ಟೇ ನಿರರ್ಗಳವಾಗಿ ಕನ್ನಡ ಮತ್ತು ತುಳು ಮಾತನಾಡಬಲ್ಲೆ. ಉಳಿದ ಭಾಷೆ ಮಾತನಾಡುವವರೊಂದಿಗೆ ಸಂವಹನ ನಡೆಸಲು ಪಕ್ಷದ ಕಾರ್ಯಕರ್ತರು ಸಹಕರಿಸುತ್ತಾರೆ’ ಎಂದು ಸುರೇಂದ್ರನ್ ಹೇಳಿದರು.<br /> <br /> ಗೋಡೆ ಬರಹ ಮತ್ತು ಭಿತ್ತಿಪತ್ರಗಳಲ್ಲಿಯೂ ವಿವಿಧ ಭಾಷೆ ಬಳಸುವಂತೆ ಸೂಚಿಸಿರುವುದಾಗಿ ಅವರು ತಿಳಿಸಿದರು. ಭಾಷಾ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಕೂಡ ಚುನಾವಣಾ ಪ್ರಚಾರದಲ್ಲಿ ಮಹತ್ವ ದೊರೆತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಸರಗೋಡು (ಪಿಟಿಐ): </strong>ಕೇರಳ ಮತ್ತು ಕರ್ನಾಟಕ ಗಡಿಯಲ್ಲಿರುವ ಕಾಸರಗೋಡು ಲೋಕಸಭಾ ಕ್ಷೇತ್ರ ವಿವಿಧ ಭಾಷೆಗಳ ವಿವಿಧ ಉಪಭಾಷೆಗಳನ್ನು ಆಡುವ ಪ್ರದೇಶವಾಗಿರುವುದರಿಂದ ಇಲ್ಲಿನ ಚುನಾವಣಾ ಪ್ರಚಾರವೂ ಬಹುಭಾಷೆಯಿಂದ ವರ್ಣಮಯವಾಗಿದೆ.<br /> <br /> ಕನ್ನಡ ಮತ್ತು ಮಲಯಾಳ ಸೇರಿ ಇಲ್ಲಿ ಏಳಕ್ಕೂ ಹೆಚ್ಚು ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಹಾಗಾಗಿ ಉತ್ತರ ಕೇರಳದ ಈ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಕಾರ್ಯಕರ್ತರು ತಮ್ಮ ಬಹುಭಾಷಾ ಕೌಶಲವನ್ನೂ ಪಣಕ್ಕೆ ಒಡ್ಡಬೇಕಾಗುತ್ತದೆ.<br /> ಕಾಸರಗೋಡು ಜಿಲ್ಲೆಯ ಭಾಷಾ ಅಲ್ಪಸಂಖ್ಯಾತರಲ್ಲಿ ಮತ ಯಾಚಿಸಬೇಕಿದ್ದರೆ ಅವರದ್ದೇ ಭಾಷೆಯಲ್ಲಿ ಕೇಳುವುದು ಅನಿವಾರ್ಯ. ಈ ಜಿಲ್ಲೆಯ ಹಲವು ಭಾಗಗಳು ಕರ್ನಾಟಕದ ಗಡಿಯಲ್ಲಿವೆ.<br /> <br /> ಇಲ್ಲಿನ ಜನಸಂಖ್ಯೆಯಲ್ಲಿ ಶೇ 35ರಷ್ಟು ಜನರು ಕನ್ನಡಿಗರು. ಕನ್ನಡವಲ್ಲದೆ ತುಳು, ಕೊಂಕಣಿ, ಮರಾಠಿ, ಉರ್ದು ಮತ್ತು ಬ್ಯಾರಿ ಭಾಷೆ ಮಾತನಾಡುವವರೂ ಇದ್ದಾರೆ.<br /> <br /> ಹಾಗಾಗಿ ಅಭ್ಯರ್ಥಿಗಳು ತಾವು ಭೇಟಿ ನೀಡುವ ಸ್ಥಳಕ್ಕೆ ಅನುಗುಣವಾಗಿ ಭಾಷೆ ಬದಲಾಯಿಸುತ್ತಾರೆ. ಒಂದು ವೇಳೆ ಅಭ್ಯರ್ಥಿಗೆ ಭಾಷೆಯಲ್ಲಿ ಅಷ್ಟೊಂದು ಹಿಡಿತ ಇಲ್ಲದೇ ಇದ್ದರೆ ಆಯಾ ಪಕ್ಷದ ಕಾರ್ಯಕರ್ತರು ಸಂವಹನ ನಡೆಸಲು ನೆರವಾಗುತ್ತಾರೆ.<br /> <br /> ಚುನಾವಣಾ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ಸಾಮಾನ್ಯವಾಗಿರುವ ಗೋಡೆ ಬರಹಗಳಲ್ಲೂ ಬಹು ಭಾಷೆ ಬರವಣಿಗೆಗಳನ್ನು ಕಾಣಬಹುದು. ಪ್ರದೇಶದ ಹೆಚ್ಚಿನ ಭಾಷೆಗಳಲ್ಲಿ ಸುಲಲಿತವಾಗಿ ವ್ಯವಹರಿಸಬಲ್ಲ ಸ್ಥಳೀಯ ನಾಯಕರನ್ನು ಪಕ್ಷಕ್ಕೆ ಎಳೆದುಕೊಳ್ಳುವ ಪ್ರಯತ್ನಗಳೂ ಇಲ್ಲಿ ನಡೆಯುತ್ತಿವೆ.<br /> <br /> ಕ್ಷೇತ್ರದ ಪ್ರಮುಖ ಸ್ಪರ್ಧಿಗಳೆಂದರೆ ಹಾಲಿ ಸಂಸದ, ಸಿಪಿಎಂನ ಪಿ. ಕರುಣಾಕರನ್, ಕಾಂಗ್ರೆಸ್ನ ಸಿದ್ದಿಕ್ ಮತ್ತು ಬಿಜೆಪಿಯ ಕೆ. ಸುರೇಂದ್ರನ್.<br /> <br /> ‘ನಾನು ಮಲಯಾಳದಷ್ಟೇ ನಿರರ್ಗಳವಾಗಿ ಕನ್ನಡ ಮತ್ತು ತುಳು ಮಾತನಾಡಬಲ್ಲೆ. ಉಳಿದ ಭಾಷೆ ಮಾತನಾಡುವವರೊಂದಿಗೆ ಸಂವಹನ ನಡೆಸಲು ಪಕ್ಷದ ಕಾರ್ಯಕರ್ತರು ಸಹಕರಿಸುತ್ತಾರೆ’ ಎಂದು ಸುರೇಂದ್ರನ್ ಹೇಳಿದರು.<br /> <br /> ಗೋಡೆ ಬರಹ ಮತ್ತು ಭಿತ್ತಿಪತ್ರಗಳಲ್ಲಿಯೂ ವಿವಿಧ ಭಾಷೆ ಬಳಸುವಂತೆ ಸೂಚಿಸಿರುವುದಾಗಿ ಅವರು ತಿಳಿಸಿದರು. ಭಾಷಾ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಕೂಡ ಚುನಾವಣಾ ಪ್ರಚಾರದಲ್ಲಿ ಮಹತ್ವ ದೊರೆತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>