<p><strong>ಬೆಂಗಳೂರು:</strong> ಕುಮುದ್ವತಿ ನದಿ ಪುನಶ್ಚೇತನ ಯೋಜನೆಯ ಬಗ್ಗೆ ಅರಿವು ಮೂಡಿಸುವ ಉದೇಶದಿಂದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಶನಿವಾರ (ಜೂ. 8) ಜಾಗೃತಿ ಜಾಥಾ ಕಾರ್ಯಕ್ರಮವನ್ನು ಆಯೋಜಿಸಿದೆ.<br /> <br /> `ಉತ್ತಮ ಭಾರತಕ್ಕಾಗಿ ಸ್ವಯಂಸೇವಕರಾಗಿ' ಎಂಬ ಘೋಷಣೆಯಡಿ ನದಿ ಪುನಶ್ಚೇತನ ಯೋಜನೆಯನ್ನು ಪ್ರಾರಂಭಿಸಲಾಗಿದೆ.<br /> <br /> ಜಾಥಾದಲ್ಲಿ ಸಂಸ್ಥೆಯ ಶ್ರೀ ಶ್ರೀ ರವಿಶಂಕರ್ ಗುರೂಜಿ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಪರಿಸರವಾದಿ ಅ.ನ.ಯಲ್ಲಪ್ಪ ರೆಡ್ಡಿ, ನಿವೃತ್ತ ಐಎಫ್ಎಸ್ ಅಧಿಕಾರಿಗಳು, ಕುಮುದ್ವತಿ ನದಿ ದಂಡೆಯ ಗ್ರಾಮಸ್ಥರು ಹಾಗೂ ವಿವಿಧ ಸ್ವಯಂಸೇವಾ ಸಂಸ್ಥೆಗಳ ಸದಸ್ಯರು ಪಾಲ್ಗೊಳ್ಳಲಿದ್ದಾರೆ.<br /> <br /> ಬೆಂಗಳೂರಿಗೆ ಶೇ 60 ಕುಡಿಯುವ ನೀರನ್ನು ಒದಗಿಸುವ ಸಾಮರ್ಥ್ಯ ಕುಮುದ್ವತಿ ನದಿಗಿದೆ. ಆದರೆ, ನದಿ ಪಾತ್ರದಲ್ಲಿ ಸದ್ಯ ನೀರಿನ ಹರಿವು ಕಡಿಮೆಯಾಗಿದೆ. ಹೀಗಾಗಿ ಮೂರು ವರ್ಷಗಳ ನದಿ ಪುನಶ್ಚೇತನ ಯೋಜನೆಯನ್ನು ಸಂಸ್ಥೆ ಆರಂಭಿಸಿದೆ. ಈ ವರ್ಷದ ಫೆಬ್ರುವರಿಯಿಂದ ಯೋಜನೆ ಜಾರಿಗೊಳಿಸಲಾಗಿದ್ದು, ನದಿ ಪಾತ್ರದಲ್ಲಿ ಸ್ವಯಂಸೇವಕರು 15ರಿಂದ 20 ಅಡಿ ಆಳದ ಮರುಪೂರಣ ಬಾವಿಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.<br /> <br /> `ನದಿಯ ದಂಡೆಯಲ್ಲಿ ಮರಗಳು, ಪೊದೆ ಗಿಡಗಳು ಹಾಗೂ ಹುಲ್ಲನ್ನು ನಾಟಿ ಮಾಡಲಾಗುತ್ತಿದೆ. ನದಿ ಪಾತ್ರದ ಕೆರೆಕೊತ್ತಿಗನೂರು, ಟಿ.ಬೇಗೂರು, ಸೋಲದೇವನಹಳ್ಳಿ, ಅರೆಬೊಮ್ಮನಹಳ್ಳಿ, ಯಂಟಗಾನಹಳ್ಳಿ, ಕಂಬಾಳು ಹಾಗೂ ಅಕ್ಕಪಕ್ಕದ ಗ್ರಾಮಗಳಲ್ಲಿ ಒಟ್ಟು 17 ಕಲ್ಯಾಣಿಗಳ ಹೂಳು ತೆಗೆದು ಶುಚಿಗೊಳಿಸಲಾಗಿದೆ' ಎಂದು ಸ್ವಯಂಸೇವಕ ವಿವೇಕಾನಂದ ತಿಳಿಸಿದರು.<br /> <br /> `ಯೋಜನೆಯಡಿ ಫೆಬ್ರುವರಿ ತಿಂಗಳಿನಲ್ಲಿ ಕೆರೆಕೊತ್ತಿಗನೂರಿನ ಗ್ರಾಮಸ್ಥರ ನೆರವಿನೊಂದಿಗೆ ಗ್ರಾಮದ ಕಲ್ಯಾಣಿಯ ಹೂಳು ತೆಗೆಯಲಾಗಿತ್ತು. ಈಗ ಕಲ್ಯಾಣಿಯಲ್ಲಿ ನೀರು ತುಂಬಿದೆ. ಇದರಿಂದ ನಮ್ಮ ಉತ್ಸಾಹ ಹೆಚ್ಚಾಗಿದೆ' ಎಂದು ಅವರು ಹೇಳಿದರು.<br /> <br /> ಕಲ್ಯಾಣಿಗಳ ಹೂಳನ್ನು ತೆಗೆಯಲಾಗುತ್ತಿರುವುದರಿಂದ ಅಂತರ್ಜಲದ ಮಟ್ಟ ಹೆಚ್ಚಾಗಿ ನದಿಯನ್ನು ಪುನಶ್ಚೇತನಗೊಳಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.<br /> <br /> ಶನಿವಾರ ನಗರದ ಮಹಾತ್ಮ ಗಾಂಧಿ ರಸ್ತೆಯ ಗಾಂಧಿ ಪ್ರತಿಮೆ ಎದುರಿನಿಂದ ಕಬ್ಬನ್ ಉದ್ಯಾನ, ಕೆ.ಆರ್.ವೃತ್ತ ಮಾರ್ಗವಾಗಿ ಸ್ವಾತಂತ್ರ್ಯ ಉದ್ಯಾನದವರೆಗೆ ಜಾಥಾ ನಡೆಯಲಿದೆ. ಬೆಳಿಗ್ಗೆ 9ಗಂಟೆಗೆ ಜಾಥಾ ಆರಂಭವಾಗಲಿದೆ.<br /> <br /> ಸಂಪರ್ಕಿಸಿ : 96633 82878.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕುಮುದ್ವತಿ ನದಿ ಪುನಶ್ಚೇತನ ಯೋಜನೆಯ ಬಗ್ಗೆ ಅರಿವು ಮೂಡಿಸುವ ಉದೇಶದಿಂದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಶನಿವಾರ (ಜೂ. 8) ಜಾಗೃತಿ ಜಾಥಾ ಕಾರ್ಯಕ್ರಮವನ್ನು ಆಯೋಜಿಸಿದೆ.<br /> <br /> `ಉತ್ತಮ ಭಾರತಕ್ಕಾಗಿ ಸ್ವಯಂಸೇವಕರಾಗಿ' ಎಂಬ ಘೋಷಣೆಯಡಿ ನದಿ ಪುನಶ್ಚೇತನ ಯೋಜನೆಯನ್ನು ಪ್ರಾರಂಭಿಸಲಾಗಿದೆ.<br /> <br /> ಜಾಥಾದಲ್ಲಿ ಸಂಸ್ಥೆಯ ಶ್ರೀ ಶ್ರೀ ರವಿಶಂಕರ್ ಗುರೂಜಿ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಪರಿಸರವಾದಿ ಅ.ನ.ಯಲ್ಲಪ್ಪ ರೆಡ್ಡಿ, ನಿವೃತ್ತ ಐಎಫ್ಎಸ್ ಅಧಿಕಾರಿಗಳು, ಕುಮುದ್ವತಿ ನದಿ ದಂಡೆಯ ಗ್ರಾಮಸ್ಥರು ಹಾಗೂ ವಿವಿಧ ಸ್ವಯಂಸೇವಾ ಸಂಸ್ಥೆಗಳ ಸದಸ್ಯರು ಪಾಲ್ಗೊಳ್ಳಲಿದ್ದಾರೆ.<br /> <br /> ಬೆಂಗಳೂರಿಗೆ ಶೇ 60 ಕುಡಿಯುವ ನೀರನ್ನು ಒದಗಿಸುವ ಸಾಮರ್ಥ್ಯ ಕುಮುದ್ವತಿ ನದಿಗಿದೆ. ಆದರೆ, ನದಿ ಪಾತ್ರದಲ್ಲಿ ಸದ್ಯ ನೀರಿನ ಹರಿವು ಕಡಿಮೆಯಾಗಿದೆ. ಹೀಗಾಗಿ ಮೂರು ವರ್ಷಗಳ ನದಿ ಪುನಶ್ಚೇತನ ಯೋಜನೆಯನ್ನು ಸಂಸ್ಥೆ ಆರಂಭಿಸಿದೆ. ಈ ವರ್ಷದ ಫೆಬ್ರುವರಿಯಿಂದ ಯೋಜನೆ ಜಾರಿಗೊಳಿಸಲಾಗಿದ್ದು, ನದಿ ಪಾತ್ರದಲ್ಲಿ ಸ್ವಯಂಸೇವಕರು 15ರಿಂದ 20 ಅಡಿ ಆಳದ ಮರುಪೂರಣ ಬಾವಿಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.<br /> <br /> `ನದಿಯ ದಂಡೆಯಲ್ಲಿ ಮರಗಳು, ಪೊದೆ ಗಿಡಗಳು ಹಾಗೂ ಹುಲ್ಲನ್ನು ನಾಟಿ ಮಾಡಲಾಗುತ್ತಿದೆ. ನದಿ ಪಾತ್ರದ ಕೆರೆಕೊತ್ತಿಗನೂರು, ಟಿ.ಬೇಗೂರು, ಸೋಲದೇವನಹಳ್ಳಿ, ಅರೆಬೊಮ್ಮನಹಳ್ಳಿ, ಯಂಟಗಾನಹಳ್ಳಿ, ಕಂಬಾಳು ಹಾಗೂ ಅಕ್ಕಪಕ್ಕದ ಗ್ರಾಮಗಳಲ್ಲಿ ಒಟ್ಟು 17 ಕಲ್ಯಾಣಿಗಳ ಹೂಳು ತೆಗೆದು ಶುಚಿಗೊಳಿಸಲಾಗಿದೆ' ಎಂದು ಸ್ವಯಂಸೇವಕ ವಿವೇಕಾನಂದ ತಿಳಿಸಿದರು.<br /> <br /> `ಯೋಜನೆಯಡಿ ಫೆಬ್ರುವರಿ ತಿಂಗಳಿನಲ್ಲಿ ಕೆರೆಕೊತ್ತಿಗನೂರಿನ ಗ್ರಾಮಸ್ಥರ ನೆರವಿನೊಂದಿಗೆ ಗ್ರಾಮದ ಕಲ್ಯಾಣಿಯ ಹೂಳು ತೆಗೆಯಲಾಗಿತ್ತು. ಈಗ ಕಲ್ಯಾಣಿಯಲ್ಲಿ ನೀರು ತುಂಬಿದೆ. ಇದರಿಂದ ನಮ್ಮ ಉತ್ಸಾಹ ಹೆಚ್ಚಾಗಿದೆ' ಎಂದು ಅವರು ಹೇಳಿದರು.<br /> <br /> ಕಲ್ಯಾಣಿಗಳ ಹೂಳನ್ನು ತೆಗೆಯಲಾಗುತ್ತಿರುವುದರಿಂದ ಅಂತರ್ಜಲದ ಮಟ್ಟ ಹೆಚ್ಚಾಗಿ ನದಿಯನ್ನು ಪುನಶ್ಚೇತನಗೊಳಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.<br /> <br /> ಶನಿವಾರ ನಗರದ ಮಹಾತ್ಮ ಗಾಂಧಿ ರಸ್ತೆಯ ಗಾಂಧಿ ಪ್ರತಿಮೆ ಎದುರಿನಿಂದ ಕಬ್ಬನ್ ಉದ್ಯಾನ, ಕೆ.ಆರ್.ವೃತ್ತ ಮಾರ್ಗವಾಗಿ ಸ್ವಾತಂತ್ರ್ಯ ಉದ್ಯಾನದವರೆಗೆ ಜಾಥಾ ನಡೆಯಲಿದೆ. ಬೆಳಿಗ್ಗೆ 9ಗಂಟೆಗೆ ಜಾಥಾ ಆರಂಭವಾಗಲಿದೆ.<br /> <br /> ಸಂಪರ್ಕಿಸಿ : 96633 82878.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>