<p><strong>ವಿಜಾಪುರ</strong>: ರೈತರು ಕೊಯಿಲು ಸಂದರ್ಭದಲ್ಲಿ ಸಿಕ್ಕಷ್ಟು ಬೆಲೆಗೆ ಕೃಷಿ ಉತ್ಪನ್ನ ಮಾರಾಟ ಮಾಡಿ ಹಾನಿ ಅನುಭವಿಸುವುದನ್ನು ತಪ್ಪಿಸಲು ಮತ್ತು ಅವರ ತಕ್ಷಣದ ಹಣಕಾಸಿನ ಅವಶ್ಯಕತೆ ಈಡೇರಿಸಲು ಸರ್ಕಾರ `ಕೃಷಿ ಉತ್ಪನ್ನ ಅಡಮಾನ ಸಾಲ ಯೋಜನೆ' ಜಾರಿಗೆ ತಂದಿದೆ. ಈ ಯೋಜನೆ ಆರಂಭಗೊಂಡು ಆರು ವರ್ಷವಾದರೂ ಜಿಲ್ಲೆಯ ಒಬ್ಬ ರೈತರೂ ಇದರ ಪ್ರಯೋಜನ ಪಡೆದಿಲ್ಲ!<br /> <br /> ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ನಿಗದಿಪಡಿಸಿದ ಗೋದಾಮುಗಳಲ್ಲಿ ಸಂಗ್ರಹಿಸಿಟ್ಟು ರಸೀತಿ ತಂದರೆ ಆ ಉತ್ಪನ್ನದ ಒಟ್ಟು ಮೌಲ್ಯದ ಶೇ 60ರಷ್ಟು ಹಣವನ್ನು ಸಾಲದ ರೂಪದಲ್ಲಿ ನೀಡಲಾಗುತ್ತದೆ. ಈ ಹಣಕ್ಕೆ 90 ದಿನಗಳ ವರೆಗೆ ಯಾವುದೇ ಬಡ್ಡಿ ಆಕರಿಸುವುದಿಲ್ಲ. ರೈತರಿಗೆ ವರದಾನದಂತಿರುವ ಈ ಯೋಜನೆ ವಿಜಾಪುರ ಸೇರಿದಂತೆ ರಾಜ್ಯದ ಬಹುತೇಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಗಳಲ್ಲಿ ಜಾರಿಯಲ್ಲಿದ್ದರೂ ರೈತರು ಅದನ್ನು ಪಡೆಯುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.<br /> <br /> ಚಿಕ್ಕಪುಟ್ಟ ಸಾಲ, ಇತರ ಹಣಕಾಸಿನ ತೊಂದರೆಗಳನ್ನು ಆದಷ್ಟು ಬೇಗ ಪರಿಹರಿಸಿಕೊಳ್ಳಲು ರೈತರು ಸುಗ್ಗಿಯ ಸಮಯದಲ್ಲಿ ಆತುರದಿಂದ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವುದು. ಆ ಸಂದರ್ಭದಲ್ಲಿ ಪೂರೈಕೆ ಹೆಚ್ಚಿ, ಬೆಲೆ ಕಡಿಮೆಯಾಗುವುದು ಸಾಮಾನ್ಯ. ಈ ಸಮಸ್ಯೆ ನಿವಾರಣೆಗಾಗಿಯೇ ಕರ್ನಾಟಕ ಸರ್ಕಾರದ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಹಾಮಂಡಳಿ ಈ ಯೋಜನೆ ರೂಪಿಸಿದೆ.<br /> <br /> ಈ ಯೋಜನೆ ಅನ್ವಯ ಎಪಿಎಂಸಿಗಳಲ್ಲಿ ಪ್ರತ್ಯೇಕ ಆವರ್ತ ನಿಧಿ ಸ್ಥಾಪಿಸಲಾಗಿದೆ. ಆ ಎಪಿಎಂಸಿಯ ಒಟ್ಟು ಆದಾಯದಲ್ಲಿ ಶೇ 10ರಷ್ಟನ್ನು ಈ ಆವರ್ತ ನಿಧಿಗೆ ವರ್ಗಾಯಿಸಿ, ಆ ಹಣನ್ನು ಅಡಮಾನ ಸಾಲವಾಗಿ ನೀಡಬೇಕು ಎಂಬುದು ನಿಯಮ.<br /> <br /> ಎಪಿಎಂಸಿ, ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳು ಅಥವಾ ರಾಜ್ಯ-ಕೇಂದ್ರ ಸರ್ಕಾರಗಳ ಉಗ್ರಾಣ ನಿಗಮಗಳ ಗೋದಾಮುಗಳಲ್ಲಿ ರೈತರು ತಮ್ಮ ಕೃಷಿ ಉತ್ಪನ್ನವನ್ನು ದಾಸ್ತಾನು ಮಾಡಬೇಕು. ಆ ಕುರಿತು ರಸೀತಿ ತಂದರೆ ಎಪಿಎಂಸಿಗಳು ಅವರಿಗೆ ಮುಂಗಡ ಸಾಲ ನೀಡುತ್ತವೆ. ಒಬ್ಬ ರೈತರಿಗೆ ್ಙ 2 ಲಕ್ಷದ ವರೆಗೆ ಸಾಲ ನೀಡಲು ಅವಕಾಶವಿದೆ. ಹೀಗೆ ನೀಡಿದ ಸಾಲಕ್ಕೆ 90 ದಿನಗಳವರೆಗೆ ಯಾವುದೇ ಬಡ್ಡಿ ಆಕರಿಸುವುದಿಲ್ಲ. ಆ ನಂತರದ ಅವಧಿಗೆ ಸಾಲದ ಮೊತ್ತಕ್ಕೆ ಅನುಗುಣವಾಗಿ ಶೇ 4ರಿಂದ ಶೇ 10ರ ವರೆಗೆ ಬಡ್ಡಿ ಆಕರಿಸಲಾಗುತ್ತದೆ. ಈ ಸಾಲ ಮರುಪಾವತಿಗೆ 180 ದಿನ (ಆರು ತಿಂಗಳು) ಕಾಲಾವಕಾಶ ಇರುತ್ತದೆ. ಹೀಗೆ ಸಾಲ ಪಡೆದು, ಮಾರುಕಟ್ಟೆಯಲ್ಲಿ ಬೆಲೆ ಬಂದಾಗ ರೈತರು ತಮ್ಮ ಕೃಷಿ ಉತ್ಪನ್ನ ಮಾರಾಟ ಮಾಡಿ ಲಾಭ ಮಾಡಿಕೊಳ್ಳಬೇಕು ಎಂಬುದು ಈ ಯೋಜನೆಯ ಉದ್ದೇಶ.<br /> <br /> `ವಿಜಾಪುರ ಜಿಲ್ಲೆಯಲ್ಲಿ ತೊಗರಿ, ಕಡಲೆ, ಮೆಕ್ಕೆಜೋಳ, ಬಿಳಿಜೋಳ, ಸೂರ್ಯಕಾಂತಿ ಉತ್ಪನ್ನಗಳ ಮೇಲೆ ಈ ಸಾಲ ಪಡೆಯಲು ಅವಕಾಶವಿದೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾತ್ರ ಇದ್ದ ಈ ಯೋಜನೆಯನ್ನು ಎಲ್ಲ ವರ್ಗದ ರೈತರಿಗೂ ವಿಸ್ತರಿಸಿ ಸಾಕಷ್ಟು ಪ್ರಚಾರ-ತಿಳಿವಳಿಕೆ ನೀಡಿದ್ದೇವೆ. ಆದರೆ, ನಮ್ಮಲ್ಲಿ ಈ ವರೆಗೆ ಯಾವೊಬ್ಬ ರೈತರೂ ಈ ಸಾಲ ಪಡೆದಿಲ್ಲ' ಎನ್ನುತ್ತಾರೆ ಇಲ್ಲಿಯ ಎಪಿಎಂಸಿ ಕಾರ್ಯದರ್ಶಿ ಆರ್.ಎಂ. ಕುಮಾರಸ್ವಾಮಿ.<br /> <br /> `ಯೋಜನೆ ಜಾರಿಯಾದ ಆರಂಭದ ಎರಡು ತಿಂಗಳು ನಮ್ಮ ಸಮಿತಿ ಆದಾಯದ ಶೇ.10ರಷ್ಟು ಹಣ ್ಙ 9 ಲಕ್ಷವನ್ನು ಈ ನಿಧಿಗೆ ವರ್ಗಾಯಿಸಿದೆವು. ಒಬ್ಬ ರೈತರೂ ಸಾಲ ಪಡೆಯದ ಕಾರಣ ನಿಧಿ ವರ್ಗಾವಣೆ ನಿಲ್ಲಿಸಿದ್ದೇವೆ. ಸರ್ಕಾರದ ಅನುಮತಿ ಇಲ್ಲದೆ ಈ ನಿಧಿಯನ್ನು ಅನ್ಯ ಕಾರ್ಯಕ್ಕೆ ಬಳಸಲು ಅವಕಾಶ ಇಲ್ಲ. ಕೆಲವೊಂದು ಎಪಿಎಂಸಿಗಳಲ್ಲಿ ಕೋಟಿಗಟ್ಟಲೆ ಈ ನಿಧಿ ಬಳಕೆಯಾಗದೆ ಉಳಿದಿದೆ' ಎಂದು ಅವರು ಹೇಳಿದರು.<br /> <br /> `ರೈತರಲ್ಲಿ ಜಾಗೃತಿ ಮತ್ತು ಆರ್ಥಿಕ ಸಬಲತೆ ಇಲ್ಲದಿರುವುದು. ಅವರು ಇನ್ನೂ ಕಮಿಷನ್ ಏಜೆಂಟರ ಕಪಿಮುಷ್ಟಿಯಲ್ಲಿರುವುದು. ಸಣ್ಣ ಮತ್ತು ಅತಿ ಸಣ್ಣ ರೈತರು ಬೆಳೆಯುವ ಉತ್ಪನ್ನವೂ ಅಲ್ಪಸ್ವಲ್ಪ. ಸಾಲ ಮಾಡಿಕೊಂಡಿರುವ ಆ ರೈತರು ತಮ್ಮ ಹೊಲಗಳಲ್ಲಿಯೇ ವರ್ತಕರಿಗೆ ಮಾರಾಟ ಮಾಡಿ ಬಿಡುತ್ತಾರೆ. ಈ ಎಲ್ಲ ಸಂಗತಿಗಳು ಕೃಷಿ ಉತ್ಪನ್ನ ಅಡಮಾನ ಸಾಲ ಪಡೆಯದಿರುವುದಕ್ಕೆ ಕಾರಣ' ಎನ್ನುತ್ತಾರೆ ಕೃಷಿ ಪರಿಣಿತರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಾಪುರ</strong>: ರೈತರು ಕೊಯಿಲು ಸಂದರ್ಭದಲ್ಲಿ ಸಿಕ್ಕಷ್ಟು ಬೆಲೆಗೆ ಕೃಷಿ ಉತ್ಪನ್ನ ಮಾರಾಟ ಮಾಡಿ ಹಾನಿ ಅನುಭವಿಸುವುದನ್ನು ತಪ್ಪಿಸಲು ಮತ್ತು ಅವರ ತಕ್ಷಣದ ಹಣಕಾಸಿನ ಅವಶ್ಯಕತೆ ಈಡೇರಿಸಲು ಸರ್ಕಾರ `ಕೃಷಿ ಉತ್ಪನ್ನ ಅಡಮಾನ ಸಾಲ ಯೋಜನೆ' ಜಾರಿಗೆ ತಂದಿದೆ. ಈ ಯೋಜನೆ ಆರಂಭಗೊಂಡು ಆರು ವರ್ಷವಾದರೂ ಜಿಲ್ಲೆಯ ಒಬ್ಬ ರೈತರೂ ಇದರ ಪ್ರಯೋಜನ ಪಡೆದಿಲ್ಲ!<br /> <br /> ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ನಿಗದಿಪಡಿಸಿದ ಗೋದಾಮುಗಳಲ್ಲಿ ಸಂಗ್ರಹಿಸಿಟ್ಟು ರಸೀತಿ ತಂದರೆ ಆ ಉತ್ಪನ್ನದ ಒಟ್ಟು ಮೌಲ್ಯದ ಶೇ 60ರಷ್ಟು ಹಣವನ್ನು ಸಾಲದ ರೂಪದಲ್ಲಿ ನೀಡಲಾಗುತ್ತದೆ. ಈ ಹಣಕ್ಕೆ 90 ದಿನಗಳ ವರೆಗೆ ಯಾವುದೇ ಬಡ್ಡಿ ಆಕರಿಸುವುದಿಲ್ಲ. ರೈತರಿಗೆ ವರದಾನದಂತಿರುವ ಈ ಯೋಜನೆ ವಿಜಾಪುರ ಸೇರಿದಂತೆ ರಾಜ್ಯದ ಬಹುತೇಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಗಳಲ್ಲಿ ಜಾರಿಯಲ್ಲಿದ್ದರೂ ರೈತರು ಅದನ್ನು ಪಡೆಯುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.<br /> <br /> ಚಿಕ್ಕಪುಟ್ಟ ಸಾಲ, ಇತರ ಹಣಕಾಸಿನ ತೊಂದರೆಗಳನ್ನು ಆದಷ್ಟು ಬೇಗ ಪರಿಹರಿಸಿಕೊಳ್ಳಲು ರೈತರು ಸುಗ್ಗಿಯ ಸಮಯದಲ್ಲಿ ಆತುರದಿಂದ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವುದು. ಆ ಸಂದರ್ಭದಲ್ಲಿ ಪೂರೈಕೆ ಹೆಚ್ಚಿ, ಬೆಲೆ ಕಡಿಮೆಯಾಗುವುದು ಸಾಮಾನ್ಯ. ಈ ಸಮಸ್ಯೆ ನಿವಾರಣೆಗಾಗಿಯೇ ಕರ್ನಾಟಕ ಸರ್ಕಾರದ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಹಾಮಂಡಳಿ ಈ ಯೋಜನೆ ರೂಪಿಸಿದೆ.<br /> <br /> ಈ ಯೋಜನೆ ಅನ್ವಯ ಎಪಿಎಂಸಿಗಳಲ್ಲಿ ಪ್ರತ್ಯೇಕ ಆವರ್ತ ನಿಧಿ ಸ್ಥಾಪಿಸಲಾಗಿದೆ. ಆ ಎಪಿಎಂಸಿಯ ಒಟ್ಟು ಆದಾಯದಲ್ಲಿ ಶೇ 10ರಷ್ಟನ್ನು ಈ ಆವರ್ತ ನಿಧಿಗೆ ವರ್ಗಾಯಿಸಿ, ಆ ಹಣನ್ನು ಅಡಮಾನ ಸಾಲವಾಗಿ ನೀಡಬೇಕು ಎಂಬುದು ನಿಯಮ.<br /> <br /> ಎಪಿಎಂಸಿ, ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳು ಅಥವಾ ರಾಜ್ಯ-ಕೇಂದ್ರ ಸರ್ಕಾರಗಳ ಉಗ್ರಾಣ ನಿಗಮಗಳ ಗೋದಾಮುಗಳಲ್ಲಿ ರೈತರು ತಮ್ಮ ಕೃಷಿ ಉತ್ಪನ್ನವನ್ನು ದಾಸ್ತಾನು ಮಾಡಬೇಕು. ಆ ಕುರಿತು ರಸೀತಿ ತಂದರೆ ಎಪಿಎಂಸಿಗಳು ಅವರಿಗೆ ಮುಂಗಡ ಸಾಲ ನೀಡುತ್ತವೆ. ಒಬ್ಬ ರೈತರಿಗೆ ್ಙ 2 ಲಕ್ಷದ ವರೆಗೆ ಸಾಲ ನೀಡಲು ಅವಕಾಶವಿದೆ. ಹೀಗೆ ನೀಡಿದ ಸಾಲಕ್ಕೆ 90 ದಿನಗಳವರೆಗೆ ಯಾವುದೇ ಬಡ್ಡಿ ಆಕರಿಸುವುದಿಲ್ಲ. ಆ ನಂತರದ ಅವಧಿಗೆ ಸಾಲದ ಮೊತ್ತಕ್ಕೆ ಅನುಗುಣವಾಗಿ ಶೇ 4ರಿಂದ ಶೇ 10ರ ವರೆಗೆ ಬಡ್ಡಿ ಆಕರಿಸಲಾಗುತ್ತದೆ. ಈ ಸಾಲ ಮರುಪಾವತಿಗೆ 180 ದಿನ (ಆರು ತಿಂಗಳು) ಕಾಲಾವಕಾಶ ಇರುತ್ತದೆ. ಹೀಗೆ ಸಾಲ ಪಡೆದು, ಮಾರುಕಟ್ಟೆಯಲ್ಲಿ ಬೆಲೆ ಬಂದಾಗ ರೈತರು ತಮ್ಮ ಕೃಷಿ ಉತ್ಪನ್ನ ಮಾರಾಟ ಮಾಡಿ ಲಾಭ ಮಾಡಿಕೊಳ್ಳಬೇಕು ಎಂಬುದು ಈ ಯೋಜನೆಯ ಉದ್ದೇಶ.<br /> <br /> `ವಿಜಾಪುರ ಜಿಲ್ಲೆಯಲ್ಲಿ ತೊಗರಿ, ಕಡಲೆ, ಮೆಕ್ಕೆಜೋಳ, ಬಿಳಿಜೋಳ, ಸೂರ್ಯಕಾಂತಿ ಉತ್ಪನ್ನಗಳ ಮೇಲೆ ಈ ಸಾಲ ಪಡೆಯಲು ಅವಕಾಶವಿದೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾತ್ರ ಇದ್ದ ಈ ಯೋಜನೆಯನ್ನು ಎಲ್ಲ ವರ್ಗದ ರೈತರಿಗೂ ವಿಸ್ತರಿಸಿ ಸಾಕಷ್ಟು ಪ್ರಚಾರ-ತಿಳಿವಳಿಕೆ ನೀಡಿದ್ದೇವೆ. ಆದರೆ, ನಮ್ಮಲ್ಲಿ ಈ ವರೆಗೆ ಯಾವೊಬ್ಬ ರೈತರೂ ಈ ಸಾಲ ಪಡೆದಿಲ್ಲ' ಎನ್ನುತ್ತಾರೆ ಇಲ್ಲಿಯ ಎಪಿಎಂಸಿ ಕಾರ್ಯದರ್ಶಿ ಆರ್.ಎಂ. ಕುಮಾರಸ್ವಾಮಿ.<br /> <br /> `ಯೋಜನೆ ಜಾರಿಯಾದ ಆರಂಭದ ಎರಡು ತಿಂಗಳು ನಮ್ಮ ಸಮಿತಿ ಆದಾಯದ ಶೇ.10ರಷ್ಟು ಹಣ ್ಙ 9 ಲಕ್ಷವನ್ನು ಈ ನಿಧಿಗೆ ವರ್ಗಾಯಿಸಿದೆವು. ಒಬ್ಬ ರೈತರೂ ಸಾಲ ಪಡೆಯದ ಕಾರಣ ನಿಧಿ ವರ್ಗಾವಣೆ ನಿಲ್ಲಿಸಿದ್ದೇವೆ. ಸರ್ಕಾರದ ಅನುಮತಿ ಇಲ್ಲದೆ ಈ ನಿಧಿಯನ್ನು ಅನ್ಯ ಕಾರ್ಯಕ್ಕೆ ಬಳಸಲು ಅವಕಾಶ ಇಲ್ಲ. ಕೆಲವೊಂದು ಎಪಿಎಂಸಿಗಳಲ್ಲಿ ಕೋಟಿಗಟ್ಟಲೆ ಈ ನಿಧಿ ಬಳಕೆಯಾಗದೆ ಉಳಿದಿದೆ' ಎಂದು ಅವರು ಹೇಳಿದರು.<br /> <br /> `ರೈತರಲ್ಲಿ ಜಾಗೃತಿ ಮತ್ತು ಆರ್ಥಿಕ ಸಬಲತೆ ಇಲ್ಲದಿರುವುದು. ಅವರು ಇನ್ನೂ ಕಮಿಷನ್ ಏಜೆಂಟರ ಕಪಿಮುಷ್ಟಿಯಲ್ಲಿರುವುದು. ಸಣ್ಣ ಮತ್ತು ಅತಿ ಸಣ್ಣ ರೈತರು ಬೆಳೆಯುವ ಉತ್ಪನ್ನವೂ ಅಲ್ಪಸ್ವಲ್ಪ. ಸಾಲ ಮಾಡಿಕೊಂಡಿರುವ ಆ ರೈತರು ತಮ್ಮ ಹೊಲಗಳಲ್ಲಿಯೇ ವರ್ತಕರಿಗೆ ಮಾರಾಟ ಮಾಡಿ ಬಿಡುತ್ತಾರೆ. ಈ ಎಲ್ಲ ಸಂಗತಿಗಳು ಕೃಷಿ ಉತ್ಪನ್ನ ಅಡಮಾನ ಸಾಲ ಪಡೆಯದಿರುವುದಕ್ಕೆ ಕಾರಣ' ಎನ್ನುತ್ತಾರೆ ಕೃಷಿ ಪರಿಣಿತರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>