<p><strong>ಬೆಂಗಳೂರು:</strong> `ಕಾರ್ಮಿಕರು ಬೀದಿಗಿಳಿದು ಹೋರಾಟ ಆರಂಭಿಸಿದರೆ ಪೊಲೀಸ್ ಕಮಿಷನರ್ ಬದಲು ಲೇಬರ್ ಕಮಿಷನರ್ ಅವರನ್ನು ಕರೆಸಿ, ಸಮಸ್ಯೆ ಬಗೆಹರಿಸುತ್ತಿದ್ದ ಜ್ಯೋತಿಬಸು, ದೇಶದ ದುಡಿಯುವ ವರ್ಗ ಕಂಡ ಮಹಾನ್ ನಾಯಕ' ಎಂದು ಸಿಐಟಿಯು ರಾಷ್ಟ್ರೀಯ ಘಟಕದ ಅಧ್ಯಕ್ಷ ಎ.ಕೆ. ಪದ್ಮನಾಭನ್ ಹೇಳಿದರು.<br /> <br /> ನಗರದಲ್ಲಿ ಮಂಗಳವಾರ ಸಿಐಟಿಯು ವತಿಯಿಂದ ಏರ್ಪಡಿಸಲಾಗಿದ್ದ ಜ್ಯೋತಿಬಸು ಜನ್ಮ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. `ಕೆಂಪು ಬಾವುಟವನ್ನು ದೇಶದಾದ್ಯಂತ ಹಾರಾಡುವಂತೆ ಮಾಡಿದ ಅಮರ ಪುರುಷ ಜ್ಯೋತಿಬಸು' ಎಂದು ಅವರು ಕೊಂಡಾಡಿದರು.<br /> <br /> `ಶ್ರಮಿಕರ ಪರ ಹೋರಾಡಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಅವರು, ಹಲವು ಹೋರಾಟಗಳ ಮೂಲಕ ಸರ್ಕಾರದ ನೀತಿಗಳಲ್ಲಿ ಬದಲಾವಣೆ ಆಗುವಂತೆ ಮಾಡಿದ್ದರು' ಎಂದು ಹೇಳಿದರು.<br /> <br /> `ಭಾರತ ಕಮ್ಯೂನಿಸ್ಟ್ ಪಕ್ಷ 1960ರ ದಶಕದಲ್ಲಿ ವಿಭಜನೆಯಾದಾಗ ಸಿಪಿಐ (ಎಂ) ಜತೆ ಗುರುತಿಸಿಕೊಂಡ ಜ್ಯೋತಿಬಸು, 1967ರಲ್ಲಿ ಪಶ್ಚಿಮ ಬಂಗಾಲದ ಉಪ ಮುಖ್ಯಮಂತ್ರಿಯಾಗಿದ್ದಾಗ ಕಾರ್ಮಿಕರ ವಿರುದ್ಧ ಪೊಲೀಸ್ ಬಲವನ್ನು ಬಳಕೆ ಮಾಡಬಾರದು ಎಂಬ ಆದೇಶ ಹೊರಡಿಸಿದ್ದರು' ಎಂದು ನೆನಪು ಮಾಡಿಕೊಂಡರು.<br /> <br /> `ಶಿಕ್ಷಕರ ಪರ ಚಳವಳಿ ನಡೆಸುವಾಗ ಏಳು ದಿನಗಳ ಕಾಲ ವಿಧಾನಸೌಧದಲ್ಲೇ ಉಳಿದು, ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದರು. ಮುಂದೆ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಅವರು, 28 ವರ್ಷಗಳ ಸುದೀರ್ಘ ಆಡಳಿತದಲ್ಲಿ ಜನಹಿತಕ್ಕೆ ವಿರುದ್ಧವಾಗಿ ಎಂದಿಗೂ ನಡೆದುಕೊಳ್ಳಲಿಲ್ಲ' ಎಂದು ತಿಳಿಸಿದರು.<br /> <br /> `ಸಿಐಟಿಯು ಸಂಸ್ಥಾಪಕರಲ್ಲಿ ಜ್ಯೋತಿಬಸು ಕೂಡ ಒಬ್ಬರು' ಎಂದು ಸ್ಮರಿಸಿದರು. `ಕ್ರಾಂತಿಕಾರಿಯಾಗಿದ್ದ ಈ ಕಮ್ಯೂನಿಸ್ಟ್ ನಾಯಕ ನಮ್ಮೆಲ್ಲ ಹೋರಾಟಗಳಿಗೆ ದಾರಿದೀಪವಾಗಿದ್ದಾರೆ' ಎಂದು ಹೇಳಿದರು. ಕ್ಯಾಲೆಂಡರ್ ಬಿಡುಗಡೆ ಮಾಡಿದ ವಿ.ಜೆ.ಕೆ. ನಾಯರ್, `ದುಡಿಯುವವರಿಗೆ ಅವರ ಹಕ್ಕು ಸಿಗಲೇಬೇಕು. ದುಡಿಯದೆ ಇರುವವರಿಗೆ ಕೇಳುವ ಹಕ್ಕು ಇಲ್ಲ ಎಂಬುದಾಗಿ ಜ್ಯೋತಿಬಸು ಬಲವಾಗಿ ಪ್ರತಿಪಾದಿಸಿದ್ದರು' ಎಂದು ತಿಳಿಸಿದರು.<br /> <br /> `ಇಡೀ ದೇಶ ಅತ್ಯಂತ ಗೌರವದಿಂದ ಕಂಡ ಕಾರ್ಮಿಕ ಮುಖಂಡರಾಗಿದ್ದರು ನಮ್ಮ ನಾಯಕ' ಎಂದು ಸಿಪಿಐ (ಎಂ) ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ವಿ. ಶ್ರೀರಾಮರೆಡ್ಡಿ ಹೇಳಿದರು.<br /> <br /> ಕೆ.ಎನ್. ಉಮೇಶ್ ಸ್ವಾಗತಿಸಿದರು. ಎಂ.ಎಸ್. ಮೀನಾಕ್ಷಿ ಸುಂದರಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೋಗಿಲು ಸಿದ್ದರಾಜು ಅವರ ಸಂಭ್ರಮ ತಂಡ ಕ್ರಾಂತಿಗೀತೆಗಳನ್ನು ಹಾಡಿತು. ಪ್ರೊ. ನರೇಂದ್ರ ನಾಯಕ್ ಅವರ ತಂಡ ಪವಾಡ ರಹಸ್ಯ ಬಯಲು ಪ್ರದರ್ಶನ ನೀಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ಕಾರ್ಮಿಕರು ಬೀದಿಗಿಳಿದು ಹೋರಾಟ ಆರಂಭಿಸಿದರೆ ಪೊಲೀಸ್ ಕಮಿಷನರ್ ಬದಲು ಲೇಬರ್ ಕಮಿಷನರ್ ಅವರನ್ನು ಕರೆಸಿ, ಸಮಸ್ಯೆ ಬಗೆಹರಿಸುತ್ತಿದ್ದ ಜ್ಯೋತಿಬಸು, ದೇಶದ ದುಡಿಯುವ ವರ್ಗ ಕಂಡ ಮಹಾನ್ ನಾಯಕ' ಎಂದು ಸಿಐಟಿಯು ರಾಷ್ಟ್ರೀಯ ಘಟಕದ ಅಧ್ಯಕ್ಷ ಎ.ಕೆ. ಪದ್ಮನಾಭನ್ ಹೇಳಿದರು.<br /> <br /> ನಗರದಲ್ಲಿ ಮಂಗಳವಾರ ಸಿಐಟಿಯು ವತಿಯಿಂದ ಏರ್ಪಡಿಸಲಾಗಿದ್ದ ಜ್ಯೋತಿಬಸು ಜನ್ಮ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. `ಕೆಂಪು ಬಾವುಟವನ್ನು ದೇಶದಾದ್ಯಂತ ಹಾರಾಡುವಂತೆ ಮಾಡಿದ ಅಮರ ಪುರುಷ ಜ್ಯೋತಿಬಸು' ಎಂದು ಅವರು ಕೊಂಡಾಡಿದರು.<br /> <br /> `ಶ್ರಮಿಕರ ಪರ ಹೋರಾಡಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಅವರು, ಹಲವು ಹೋರಾಟಗಳ ಮೂಲಕ ಸರ್ಕಾರದ ನೀತಿಗಳಲ್ಲಿ ಬದಲಾವಣೆ ಆಗುವಂತೆ ಮಾಡಿದ್ದರು' ಎಂದು ಹೇಳಿದರು.<br /> <br /> `ಭಾರತ ಕಮ್ಯೂನಿಸ್ಟ್ ಪಕ್ಷ 1960ರ ದಶಕದಲ್ಲಿ ವಿಭಜನೆಯಾದಾಗ ಸಿಪಿಐ (ಎಂ) ಜತೆ ಗುರುತಿಸಿಕೊಂಡ ಜ್ಯೋತಿಬಸು, 1967ರಲ್ಲಿ ಪಶ್ಚಿಮ ಬಂಗಾಲದ ಉಪ ಮುಖ್ಯಮಂತ್ರಿಯಾಗಿದ್ದಾಗ ಕಾರ್ಮಿಕರ ವಿರುದ್ಧ ಪೊಲೀಸ್ ಬಲವನ್ನು ಬಳಕೆ ಮಾಡಬಾರದು ಎಂಬ ಆದೇಶ ಹೊರಡಿಸಿದ್ದರು' ಎಂದು ನೆನಪು ಮಾಡಿಕೊಂಡರು.<br /> <br /> `ಶಿಕ್ಷಕರ ಪರ ಚಳವಳಿ ನಡೆಸುವಾಗ ಏಳು ದಿನಗಳ ಕಾಲ ವಿಧಾನಸೌಧದಲ್ಲೇ ಉಳಿದು, ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದರು. ಮುಂದೆ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಅವರು, 28 ವರ್ಷಗಳ ಸುದೀರ್ಘ ಆಡಳಿತದಲ್ಲಿ ಜನಹಿತಕ್ಕೆ ವಿರುದ್ಧವಾಗಿ ಎಂದಿಗೂ ನಡೆದುಕೊಳ್ಳಲಿಲ್ಲ' ಎಂದು ತಿಳಿಸಿದರು.<br /> <br /> `ಸಿಐಟಿಯು ಸಂಸ್ಥಾಪಕರಲ್ಲಿ ಜ್ಯೋತಿಬಸು ಕೂಡ ಒಬ್ಬರು' ಎಂದು ಸ್ಮರಿಸಿದರು. `ಕ್ರಾಂತಿಕಾರಿಯಾಗಿದ್ದ ಈ ಕಮ್ಯೂನಿಸ್ಟ್ ನಾಯಕ ನಮ್ಮೆಲ್ಲ ಹೋರಾಟಗಳಿಗೆ ದಾರಿದೀಪವಾಗಿದ್ದಾರೆ' ಎಂದು ಹೇಳಿದರು. ಕ್ಯಾಲೆಂಡರ್ ಬಿಡುಗಡೆ ಮಾಡಿದ ವಿ.ಜೆ.ಕೆ. ನಾಯರ್, `ದುಡಿಯುವವರಿಗೆ ಅವರ ಹಕ್ಕು ಸಿಗಲೇಬೇಕು. ದುಡಿಯದೆ ಇರುವವರಿಗೆ ಕೇಳುವ ಹಕ್ಕು ಇಲ್ಲ ಎಂಬುದಾಗಿ ಜ್ಯೋತಿಬಸು ಬಲವಾಗಿ ಪ್ರತಿಪಾದಿಸಿದ್ದರು' ಎಂದು ತಿಳಿಸಿದರು.<br /> <br /> `ಇಡೀ ದೇಶ ಅತ್ಯಂತ ಗೌರವದಿಂದ ಕಂಡ ಕಾರ್ಮಿಕ ಮುಖಂಡರಾಗಿದ್ದರು ನಮ್ಮ ನಾಯಕ' ಎಂದು ಸಿಪಿಐ (ಎಂ) ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ವಿ. ಶ್ರೀರಾಮರೆಡ್ಡಿ ಹೇಳಿದರು.<br /> <br /> ಕೆ.ಎನ್. ಉಮೇಶ್ ಸ್ವಾಗತಿಸಿದರು. ಎಂ.ಎಸ್. ಮೀನಾಕ್ಷಿ ಸುಂದರಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೋಗಿಲು ಸಿದ್ದರಾಜು ಅವರ ಸಂಭ್ರಮ ತಂಡ ಕ್ರಾಂತಿಗೀತೆಗಳನ್ನು ಹಾಡಿತು. ಪ್ರೊ. ನರೇಂದ್ರ ನಾಯಕ್ ಅವರ ತಂಡ ಪವಾಡ ರಹಸ್ಯ ಬಯಲು ಪ್ರದರ್ಶನ ನೀಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>