<p>ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ 2011ರ ಅಕ್ಟೋಬರ್ನಲ್ಲಿ ನಡೆಸಿದ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್) ಫಲಿತಾಂಶ ಭಾನುವಾರ ಪ್ರಕಟಗೊಂಡಿದ್ದು, ಪುರುಷ ಅಭ್ಯರ್ಥಿ ಗಳು ಮೇಲುಗೈ ಸಾಧಿಸಿದ್ದಾರೆ. <br /> ಒಟ್ಟು ಪರೀಕ್ಷಾರ್ಥಿಗಳ ಪೈಕಿ ಶೇ 64.96ರಷ್ಟು (1,194) ಪುರುಷ ಅಭ್ಯರ್ಥಿಗಳಿದ್ದರೆ, ಶೇ 35.04ರಷ್ಟು (644) ಮಹಿಳಾ ಅಭ್ಯರ್ಥಿಗಳು ಇದ್ದಾರೆ. ಆದರೆ, ಗಣಿತವಿಜ್ಞಾನ ವಿಷಯದಲ್ಲಿ ಒಟ್ಟು 1,038 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರೂ ಯಾರೊಬ್ಬರೂ ಉಪನ್ಯಾಸಕ ಹುದ್ದೆಗೆ ಅರ್ಹತೆ ಪಡೆದಿಲ್ಲ.<br /> <br /> ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವಿವಿ ಕುಲಪತಿ ಪ್ರೊ.ವಿ.ಜಿ.ತಳವಾರ, `ಭೌತವಿಜ್ಞಾನ-1064, ಸಾಯನವಿಜ್ಞಾನ-1584, ಇಂಗ್ಲಿಷ್-1980, ಕನ್ನಡ-5949, ಗಣಕ ವಿಜ್ಞಾನ-1363, ಅರ್ಥಶಾಸ್ತ್ರ-3873, ಇತಿಹಾಸ-3991, ವಾಣಿಜ್ಯ-3628, ಜೀವ ವಿಜ್ಞಾನ-2576, ಶಿಕ್ಷಣ-1939, ಮ್ಯಾನೇಜ್ಮೆಂಟ್-1427, ಗ್ರಂಥಾಲಯ ವಿಜ್ಞಾನ-1106, ರಾಜ್ಯಶಾಸ್ತ್ರ-2964, ಭೂಗೋಳಶಾಸ್ತ್ರ-444, ಭೂವಿಜ್ಞಾನ-64, ಸಮಾಜ ಶಾಸ್ತ್ರ-2196, ಮನಶಾಸ್ತ್ರ- 331, ಸಮಾಜ ಕಾರ್ಯ- 1105, ಗೃಹವಿಜ್ಞಾನ-76, ಸಂಸ್ಕೃತ-164, ಹಿಂದಿ-671, ದೈಹಿಕ ಶಿಕ್ಷಣ-1023, ಪರಿಸರ ವಿಜ್ಞಾನ-124, ಉರ್ದು- 185 ಹಾಗೂ ತತ್ವಶಾಸ್ತ್ರದಲ್ಲಿ 38 ಸೇರಿದಂತೆ ಒಟ್ಟು 40,903 ಅಭ್ಯರ್ಥಿಗಳು ಪರೀಕ್ಷೆಗೆ ಹಾಜ ರಾಗಿದ್ದರು. ಈ ಪೈಕಿ 1,838 ಅಭ್ಯರ್ಥಿಗಳು ಉಪನ್ಯಾಸಕ ಹುದ್ದೆಗೆ ಅರ್ಹತೆ ಪಡೆದಿದ್ದಾರೆ~ ಎಂದು ತಿಳಿಸಿದರು.<br /> <br /> `ಪತ್ರಿಕೆ-1 ಮತ್ತು ಪತ್ರಿಕೆ-2ರಲ್ಲಿ ಉತ್ತೀರ್ಣ ರಾಗಿದ್ದರೆ ಮಾತ್ರ 3ನೇ ಪತ್ರಿಕೆಯನ್ನು ಮೌಲ್ಯಮಾಪನ ಮಾಡಲಾಗಿದೆ. ಮೊದಲೆರಡು ಪತ್ರಿಕೆಗಳು ವಸ್ತುನಿಷ್ಠವಾಗಿದ್ದು, ಮೂರನೇ ಪತ್ರಿಕೆ ವಿವರಣೆ ಯಿಂದ ಕೂಡಿತ್ತು. <br /> <br /> ಅಲ್ಲದೆ ಮೂರನೇ ಪತ್ರಿಕೆಯನ್ನು ಐದು ಭಾಗಗಳಾಗಿ ವಿಂಗಡಿಸಿ ಬೇರೆ ಬೇರೆ ಅಧ್ಯಾಪಕರಿಂದ ಮೌಲ್ಯಮಾಪನ ಮಾಡಿಸಲಾಗಿದೆ. ಆದರೆ, ಗಣಿತವಿಜ್ಞಾನ, ಭೌತವಿಜ್ಞಾನ, ರಸಾಯನ ವಿಜ್ಞಾನ, ಗ್ರಂಥಾಲಯ ವಿಜ್ಞಾನದಲ್ಲಿ ಅತ್ಯಂತ ಕಡಿಮೆ ಅಭ್ಯರ್ಥಿಗಳು ಅರ್ಹತೆ ಪಡೆದಿರುವುದು ಬೇಸರ ವನ್ನುಂಟು ಮಾಡಿದೆ~ ಎಂದರು.<br /> <br /> `ಆರು ವರ್ಷಗಳ ಹಿಂದೆ ಕುವೆಂಪು ವಿವಿ ಕೆ-ಸೆಟ್ ಪರೀಕ್ಷೆ ನಡೆಸಿದಾಗ ಸುಮಾರು 6 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಆ ಪೈಕಿ ಶೇ 2.5ರಷ್ಟು ಅಭ್ಯರ್ಥಿಗಳು ಉಪನ್ಯಾಸಕ ಹುದ್ದೆಗೆ ಅರ್ಹತೆ ಪಡೆದಿದ್ದರು. ಬೇರೆ ವಿಶ್ವವಿದ್ಯಾನಿಲಯಗಳಿಗೆ ಹೋಲಿಸಿದರೆ ನಮ್ಮ ಸಾಧನೆ ಕಡಿಮೆ ಏನಲ್ಲ.<br /> <br /> ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಹಾಗೂ ಪುಣೆ ವಿಶ್ವವಿದ್ಯಾನಿಲಯದ ತಜ್ಞರ ಸಮಿತಿ ಪರೀಕ್ಷಾ ಮೌಲ್ಯಮಾಪನ ಪ್ರಕ್ರಿಯೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿವೆ. ಮುಂದಿನ ಪರೀಕ್ಷೆಯಲ್ಲಿ ಮೂರನೇ ಪತ್ರಿಕೆಯನ್ನೂ ವಸ್ತುನಿಷ್ಠ ಮಾದರಿಯಲ್ಲಿ ನಡೆಸಬೇಕು ಎಂದು ತೀರ್ಮಾನಿ ಸಲಾಗಿದೆ~ ಎಂದು ಹೇಳಿದರು.<br /> <br /> ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ (ಪರೀಕ್ಷಾಂಗ) ಬಿ.ರಾಮು, ಕೆ-ಸೆಟ್ ಸಂಚಾಲಕ ಪ್ರೊ.ಸಿ. ಶ್ರೀಕಂಠಪ್ಪ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ 2011ರ ಅಕ್ಟೋಬರ್ನಲ್ಲಿ ನಡೆಸಿದ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್) ಫಲಿತಾಂಶ ಭಾನುವಾರ ಪ್ರಕಟಗೊಂಡಿದ್ದು, ಪುರುಷ ಅಭ್ಯರ್ಥಿ ಗಳು ಮೇಲುಗೈ ಸಾಧಿಸಿದ್ದಾರೆ. <br /> ಒಟ್ಟು ಪರೀಕ್ಷಾರ್ಥಿಗಳ ಪೈಕಿ ಶೇ 64.96ರಷ್ಟು (1,194) ಪುರುಷ ಅಭ್ಯರ್ಥಿಗಳಿದ್ದರೆ, ಶೇ 35.04ರಷ್ಟು (644) ಮಹಿಳಾ ಅಭ್ಯರ್ಥಿಗಳು ಇದ್ದಾರೆ. ಆದರೆ, ಗಣಿತವಿಜ್ಞಾನ ವಿಷಯದಲ್ಲಿ ಒಟ್ಟು 1,038 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರೂ ಯಾರೊಬ್ಬರೂ ಉಪನ್ಯಾಸಕ ಹುದ್ದೆಗೆ ಅರ್ಹತೆ ಪಡೆದಿಲ್ಲ.<br /> <br /> ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವಿವಿ ಕುಲಪತಿ ಪ್ರೊ.ವಿ.ಜಿ.ತಳವಾರ, `ಭೌತವಿಜ್ಞಾನ-1064, ಸಾಯನವಿಜ್ಞಾನ-1584, ಇಂಗ್ಲಿಷ್-1980, ಕನ್ನಡ-5949, ಗಣಕ ವಿಜ್ಞಾನ-1363, ಅರ್ಥಶಾಸ್ತ್ರ-3873, ಇತಿಹಾಸ-3991, ವಾಣಿಜ್ಯ-3628, ಜೀವ ವಿಜ್ಞಾನ-2576, ಶಿಕ್ಷಣ-1939, ಮ್ಯಾನೇಜ್ಮೆಂಟ್-1427, ಗ್ರಂಥಾಲಯ ವಿಜ್ಞಾನ-1106, ರಾಜ್ಯಶಾಸ್ತ್ರ-2964, ಭೂಗೋಳಶಾಸ್ತ್ರ-444, ಭೂವಿಜ್ಞಾನ-64, ಸಮಾಜ ಶಾಸ್ತ್ರ-2196, ಮನಶಾಸ್ತ್ರ- 331, ಸಮಾಜ ಕಾರ್ಯ- 1105, ಗೃಹವಿಜ್ಞಾನ-76, ಸಂಸ್ಕೃತ-164, ಹಿಂದಿ-671, ದೈಹಿಕ ಶಿಕ್ಷಣ-1023, ಪರಿಸರ ವಿಜ್ಞಾನ-124, ಉರ್ದು- 185 ಹಾಗೂ ತತ್ವಶಾಸ್ತ್ರದಲ್ಲಿ 38 ಸೇರಿದಂತೆ ಒಟ್ಟು 40,903 ಅಭ್ಯರ್ಥಿಗಳು ಪರೀಕ್ಷೆಗೆ ಹಾಜ ರಾಗಿದ್ದರು. ಈ ಪೈಕಿ 1,838 ಅಭ್ಯರ್ಥಿಗಳು ಉಪನ್ಯಾಸಕ ಹುದ್ದೆಗೆ ಅರ್ಹತೆ ಪಡೆದಿದ್ದಾರೆ~ ಎಂದು ತಿಳಿಸಿದರು.<br /> <br /> `ಪತ್ರಿಕೆ-1 ಮತ್ತು ಪತ್ರಿಕೆ-2ರಲ್ಲಿ ಉತ್ತೀರ್ಣ ರಾಗಿದ್ದರೆ ಮಾತ್ರ 3ನೇ ಪತ್ರಿಕೆಯನ್ನು ಮೌಲ್ಯಮಾಪನ ಮಾಡಲಾಗಿದೆ. ಮೊದಲೆರಡು ಪತ್ರಿಕೆಗಳು ವಸ್ತುನಿಷ್ಠವಾಗಿದ್ದು, ಮೂರನೇ ಪತ್ರಿಕೆ ವಿವರಣೆ ಯಿಂದ ಕೂಡಿತ್ತು. <br /> <br /> ಅಲ್ಲದೆ ಮೂರನೇ ಪತ್ರಿಕೆಯನ್ನು ಐದು ಭಾಗಗಳಾಗಿ ವಿಂಗಡಿಸಿ ಬೇರೆ ಬೇರೆ ಅಧ್ಯಾಪಕರಿಂದ ಮೌಲ್ಯಮಾಪನ ಮಾಡಿಸಲಾಗಿದೆ. ಆದರೆ, ಗಣಿತವಿಜ್ಞಾನ, ಭೌತವಿಜ್ಞಾನ, ರಸಾಯನ ವಿಜ್ಞಾನ, ಗ್ರಂಥಾಲಯ ವಿಜ್ಞಾನದಲ್ಲಿ ಅತ್ಯಂತ ಕಡಿಮೆ ಅಭ್ಯರ್ಥಿಗಳು ಅರ್ಹತೆ ಪಡೆದಿರುವುದು ಬೇಸರ ವನ್ನುಂಟು ಮಾಡಿದೆ~ ಎಂದರು.<br /> <br /> `ಆರು ವರ್ಷಗಳ ಹಿಂದೆ ಕುವೆಂಪು ವಿವಿ ಕೆ-ಸೆಟ್ ಪರೀಕ್ಷೆ ನಡೆಸಿದಾಗ ಸುಮಾರು 6 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಆ ಪೈಕಿ ಶೇ 2.5ರಷ್ಟು ಅಭ್ಯರ್ಥಿಗಳು ಉಪನ್ಯಾಸಕ ಹುದ್ದೆಗೆ ಅರ್ಹತೆ ಪಡೆದಿದ್ದರು. ಬೇರೆ ವಿಶ್ವವಿದ್ಯಾನಿಲಯಗಳಿಗೆ ಹೋಲಿಸಿದರೆ ನಮ್ಮ ಸಾಧನೆ ಕಡಿಮೆ ಏನಲ್ಲ.<br /> <br /> ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಹಾಗೂ ಪುಣೆ ವಿಶ್ವವಿದ್ಯಾನಿಲಯದ ತಜ್ಞರ ಸಮಿತಿ ಪರೀಕ್ಷಾ ಮೌಲ್ಯಮಾಪನ ಪ್ರಕ್ರಿಯೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿವೆ. ಮುಂದಿನ ಪರೀಕ್ಷೆಯಲ್ಲಿ ಮೂರನೇ ಪತ್ರಿಕೆಯನ್ನೂ ವಸ್ತುನಿಷ್ಠ ಮಾದರಿಯಲ್ಲಿ ನಡೆಸಬೇಕು ಎಂದು ತೀರ್ಮಾನಿ ಸಲಾಗಿದೆ~ ಎಂದು ಹೇಳಿದರು.<br /> <br /> ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ (ಪರೀಕ್ಷಾಂಗ) ಬಿ.ರಾಮು, ಕೆ-ಸೆಟ್ ಸಂಚಾಲಕ ಪ್ರೊ.ಸಿ. ಶ್ರೀಕಂಠಪ್ಪ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>