<p>ಮಡಿಕೇರಿ: ಯಾವುದೇ ಭಾರತೀಯ ಭಾಷೆ ಅವನತಿಯ ಹಾದಿ ಹಿಡಿಯಬಾರದು. ಭಾಷೆಯನ್ನು ನಾವು ಸಂಪೂರ್ಣವಾಗಿ ಬಳಕೆ ಮಾಡಿದರೆ ಬೆಳವಣಿಗೆ ಸಾಧ್ಯ ಎಂದು ಮೈಸೂರಿನ ಭಾಷಾ ಸಂಸ್ಥಾನದ (ಸಿ.ಐ.ಐ.ಎಲ್) ರೀಚರ್ ಮತ್ತು ಸಂಶೋಧನಾ ಅಧಿಕಾರಿಗಳಾದ ಡಾ. ಸಿ.ವಿ. ಶಿವರಾಮಕೃಷ್ಣನ್ ಹೇಳಿದರು.<br /> <br /> ಮೈಸೂರಿನ ಸಿ.ಐ.ಐ.ಎಲ್ ಸಂಸ್ಥೆಯ ಆಶ್ರಯದಲ್ಲಿ ನಗರದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸಭಾಭವನದಲ್ಲಿ ಆಯೋಜಿಸಲಾಗಿರುವ ಏಳು ದಿನಗಳ ಕೊಡವ ಒಗಟುಗಳ ರಚನೆಯ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.<br /> <br /> ಭಾರತದಲ್ಲಿ ಸಾವಿರಾರು ಭಾಷೆಗಳನ್ನು ನೂರಾರು ಧರ್ಮದವರು ಬಳಸುತ್ತಿದ್ದಾರೆ. ಕೆಲವು ಭಾಷೆಗಳಿಗೆ ಲಿಪಿ ಇಲ್ಲ. ಕೊಡವ ಭಾಷೆಯು ಕನ್ನಡದ ಲಿಪಿಯೊಂದಿಗೆ ಬೆಳವಣಿಗೆ ಸಾಧಿಸಿದೆ ಎಂದರು.<br /> <br /> ಕೊಡವ ಭಾಷೆಯಲ್ಲಿ ಇನ್ನೂ ಹಳೆಯ ಪದಗಳು ಬಳಕೆಯಾಗುತ್ತಿಲ್ಲ. ಕನ್ನಡ, ತುಳು, ಮಲಯಾಳಿ, ತಮಿಳು ಮತ್ತು ಇಂಗ್ಲೀಷ್ ಭಾಷೆಯ ಮಿಶ್ರಣವಿದೆ. ಕೊಡವ ಭಾಷೆಯ ಹಿರಿಯತಜ್ಞರು, ಅನುಭವಿಗಳಿಂದ ಒಗಟು ನುಡಿಗಟ್ಟುಗಳನ್ನು ರಚಿಸಿ, ಭಾಷಾ ಸಂಸ್ಥಾನದ ಸಹಕಾರದೊಂದಿಗೆ ಕೊಡವ ಭಾಷೆಯ ಬೆಳವಣಿಗೆಗೆ ಶ್ರಮಿಸಲಾಗುವುದು ಎಂದರು.<br /> <br /> ರೀಜನಲ್ ಕಾಲೇಜಿನ ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ನಾಗರಾಜ್ ಮಾತನಾಡಿ, ಗ್ರಾಮೀಣ ಸೊಗಡಿನ ಹಿನ್ನೆಲೆ ಇರುವ ಗಾದೆ ಮಾತುಗಳು ಜನಜೀವನದ ವ್ಯವಸ್ಥೆಯನ್ನು ಪ್ರತಿಬಿಂಬಿಸಲಾಗುತ್ತದೆ. ಒಂದು ಒಗಟು ನೂರಾರು ಅರ್ಥವನ್ನು ಕೊಡುತ್ತದೆ ಎಂದರು. <br /> <br /> ಸಿ.ಐ.ಐ.ಎಲ್ ಸಂಸ್ಥೆಯ ಡಾ. ಭಾಮಿನಿ ರಾಘವಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಸಾಹಿತಿ ಬಾಚರಣೆಯಂಡ ಅಪ್ಪಣ್ಣ ಕಾರ್ಯಾಗಾರವನ್ನು ಉದ್ಘಾಟಿಸಿದರು. <br /> <br /> ಕೊಡವ ಗಾದೆ ರಚನೆ ಕಾರ್ಯಾಗಾರದಲ್ಲಿ ಬಾಚರಣೆ ಇಯಂಡ ರಾಣು ಅಪ್ಪಣ್ಣ, ಮಂಡೇಪಂಡ ಗೀತಾ ಮಂದಣ್ಣ, ತೇಲಪಂಡ ಕವನ್ ಕಾರ್ಯಪ್ಪ, ಮಲಚೀರ ಕಾರ್ಯಪ್ಪ, ಕಾಳಿಮಾಡ ಮೋಟಯ್ಯ, ಕಲಿಯಂಡ ಸರಸ್ವತಿ ಚಂಗಪ್ಪ, ಐಮುಡಿಯಂಡ ರಾಣಿ ಮಾಚಯ್ಯ ಮತ್ತಿತರರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಡಿಕೇರಿ: ಯಾವುದೇ ಭಾರತೀಯ ಭಾಷೆ ಅವನತಿಯ ಹಾದಿ ಹಿಡಿಯಬಾರದು. ಭಾಷೆಯನ್ನು ನಾವು ಸಂಪೂರ್ಣವಾಗಿ ಬಳಕೆ ಮಾಡಿದರೆ ಬೆಳವಣಿಗೆ ಸಾಧ್ಯ ಎಂದು ಮೈಸೂರಿನ ಭಾಷಾ ಸಂಸ್ಥಾನದ (ಸಿ.ಐ.ಐ.ಎಲ್) ರೀಚರ್ ಮತ್ತು ಸಂಶೋಧನಾ ಅಧಿಕಾರಿಗಳಾದ ಡಾ. ಸಿ.ವಿ. ಶಿವರಾಮಕೃಷ್ಣನ್ ಹೇಳಿದರು.<br /> <br /> ಮೈಸೂರಿನ ಸಿ.ಐ.ಐ.ಎಲ್ ಸಂಸ್ಥೆಯ ಆಶ್ರಯದಲ್ಲಿ ನಗರದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸಭಾಭವನದಲ್ಲಿ ಆಯೋಜಿಸಲಾಗಿರುವ ಏಳು ದಿನಗಳ ಕೊಡವ ಒಗಟುಗಳ ರಚನೆಯ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.<br /> <br /> ಭಾರತದಲ್ಲಿ ಸಾವಿರಾರು ಭಾಷೆಗಳನ್ನು ನೂರಾರು ಧರ್ಮದವರು ಬಳಸುತ್ತಿದ್ದಾರೆ. ಕೆಲವು ಭಾಷೆಗಳಿಗೆ ಲಿಪಿ ಇಲ್ಲ. ಕೊಡವ ಭಾಷೆಯು ಕನ್ನಡದ ಲಿಪಿಯೊಂದಿಗೆ ಬೆಳವಣಿಗೆ ಸಾಧಿಸಿದೆ ಎಂದರು.<br /> <br /> ಕೊಡವ ಭಾಷೆಯಲ್ಲಿ ಇನ್ನೂ ಹಳೆಯ ಪದಗಳು ಬಳಕೆಯಾಗುತ್ತಿಲ್ಲ. ಕನ್ನಡ, ತುಳು, ಮಲಯಾಳಿ, ತಮಿಳು ಮತ್ತು ಇಂಗ್ಲೀಷ್ ಭಾಷೆಯ ಮಿಶ್ರಣವಿದೆ. ಕೊಡವ ಭಾಷೆಯ ಹಿರಿಯತಜ್ಞರು, ಅನುಭವಿಗಳಿಂದ ಒಗಟು ನುಡಿಗಟ್ಟುಗಳನ್ನು ರಚಿಸಿ, ಭಾಷಾ ಸಂಸ್ಥಾನದ ಸಹಕಾರದೊಂದಿಗೆ ಕೊಡವ ಭಾಷೆಯ ಬೆಳವಣಿಗೆಗೆ ಶ್ರಮಿಸಲಾಗುವುದು ಎಂದರು.<br /> <br /> ರೀಜನಲ್ ಕಾಲೇಜಿನ ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ನಾಗರಾಜ್ ಮಾತನಾಡಿ, ಗ್ರಾಮೀಣ ಸೊಗಡಿನ ಹಿನ್ನೆಲೆ ಇರುವ ಗಾದೆ ಮಾತುಗಳು ಜನಜೀವನದ ವ್ಯವಸ್ಥೆಯನ್ನು ಪ್ರತಿಬಿಂಬಿಸಲಾಗುತ್ತದೆ. ಒಂದು ಒಗಟು ನೂರಾರು ಅರ್ಥವನ್ನು ಕೊಡುತ್ತದೆ ಎಂದರು. <br /> <br /> ಸಿ.ಐ.ಐ.ಎಲ್ ಸಂಸ್ಥೆಯ ಡಾ. ಭಾಮಿನಿ ರಾಘವಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಸಾಹಿತಿ ಬಾಚರಣೆಯಂಡ ಅಪ್ಪಣ್ಣ ಕಾರ್ಯಾಗಾರವನ್ನು ಉದ್ಘಾಟಿಸಿದರು. <br /> <br /> ಕೊಡವ ಗಾದೆ ರಚನೆ ಕಾರ್ಯಾಗಾರದಲ್ಲಿ ಬಾಚರಣೆ ಇಯಂಡ ರಾಣು ಅಪ್ಪಣ್ಣ, ಮಂಡೇಪಂಡ ಗೀತಾ ಮಂದಣ್ಣ, ತೇಲಪಂಡ ಕವನ್ ಕಾರ್ಯಪ್ಪ, ಮಲಚೀರ ಕಾರ್ಯಪ್ಪ, ಕಾಳಿಮಾಡ ಮೋಟಯ್ಯ, ಕಲಿಯಂಡ ಸರಸ್ವತಿ ಚಂಗಪ್ಪ, ಐಮುಡಿಯಂಡ ರಾಣಿ ಮಾಚಯ್ಯ ಮತ್ತಿತರರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>