<p><strong>ಜೈಪುರ್ (ಪಿಟಿಐ): </strong>ಮುಸ್ಲೀಂ ಸಂಘಟನೆಗಳು ಪ್ರತಿಭಟನೆ ವ್ಯಕ್ತಪಡಿಸಿದ್ದು ಮತ್ತು ಹಿಂಸಾಚಾರ ಉಂಟಾಗಬಹುದೆಂಬ ಆತಂಕದ ಹಿನ್ನೆಲೆಯಲ್ಲಿ, ಜೈಪುರ್ ಸಾಹಿತ್ಯ ಉತ್ಸವದಲ್ಲಿ ಆಯೋಜಿಸಲು ಉದ್ದೇಶಿಸಿದ್ದ ಬಹು ನಿರೀಕ್ಷಿತ ವಿವಾದಿತ ಲೇಖಕ ಸಲ್ಮಾನ್ ರಶ್ದಿ ಅವರ ವಿಡಿಯೊ ಸಂವಾದ ಕಾರ್ಯಕ್ರಮವನ್ನು ಮಂಗಳವಾರ ಮಧ್ಯಾಹ್ನ ಕೊನೆ ಗಳಿಗೆಯಲ್ಲಿ ಕೈ ಬಿಡಲಾಗಿದೆ. </p>.<p>ಜೈಪುರ್ ಸಾಹಿತ್ಯ ಉತ್ದವ ಮತ್ತು ಸೆಟಾನಿಕ್ ವರ್ಸಸ್ ಲೇಖಕ ರಶ್ದಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಮುಸ್ಲೀಂ ಸಂಘಟನೆಗಳ ನಡುವಿನ ಮಾತುಕತೆಯ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.</p>.<p>ಮಾತುಕತೆಯ ಸಂದರ್ಭದಲ್ಲಿ, ರಶ್ದಿ ಅವರ ಮುಖ ನೋಡುವುದೂ ತಮಗೆ ಸಹ್ಯವಿಲ್ಲವೆಂದು ಮುಸ್ಲೀಂ ಸಂಘಟನೆಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಿದವೆನ್ನಲಾಗಿದೆ. </p>.<p>ರಶ್ದಿ ಅವರ ಸಂವಾದ ರದ್ದು ಪಡಿಸಿರುವುದನ್ನು ಘೋಷಿಸಿದ ಉತ್ಸವದ ಸಂಘಟಕರಲ್ಲೊಬ್ಬರಾದ ಸಂಜಯ್ ರಾಯ್ ಅವರು, ~ಕೆಲವು ಜನರು ಉತ್ಸವ ನಡೆಯುತ್ತಿರುವ ಸಭಾಂಗಣದಲ್ಲಿ ನುಗ್ಗಿದ್ದಾರೆ, ಅವರು ಗದ್ದಲವೆಬ್ಬಿಸಬಹುದು, ಹಿಂಸಾಚಾರಕ್ಕೂ ಇಳಿದಾರು~ ಎಂದು ಪೊಲೀಸರು ಎಚ್ಚರಿಸಿದ್ದಾರೆಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೈಪುರ್ (ಪಿಟಿಐ): </strong>ಮುಸ್ಲೀಂ ಸಂಘಟನೆಗಳು ಪ್ರತಿಭಟನೆ ವ್ಯಕ್ತಪಡಿಸಿದ್ದು ಮತ್ತು ಹಿಂಸಾಚಾರ ಉಂಟಾಗಬಹುದೆಂಬ ಆತಂಕದ ಹಿನ್ನೆಲೆಯಲ್ಲಿ, ಜೈಪುರ್ ಸಾಹಿತ್ಯ ಉತ್ಸವದಲ್ಲಿ ಆಯೋಜಿಸಲು ಉದ್ದೇಶಿಸಿದ್ದ ಬಹು ನಿರೀಕ್ಷಿತ ವಿವಾದಿತ ಲೇಖಕ ಸಲ್ಮಾನ್ ರಶ್ದಿ ಅವರ ವಿಡಿಯೊ ಸಂವಾದ ಕಾರ್ಯಕ್ರಮವನ್ನು ಮಂಗಳವಾರ ಮಧ್ಯಾಹ್ನ ಕೊನೆ ಗಳಿಗೆಯಲ್ಲಿ ಕೈ ಬಿಡಲಾಗಿದೆ. </p>.<p>ಜೈಪುರ್ ಸಾಹಿತ್ಯ ಉತ್ದವ ಮತ್ತು ಸೆಟಾನಿಕ್ ವರ್ಸಸ್ ಲೇಖಕ ರಶ್ದಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಮುಸ್ಲೀಂ ಸಂಘಟನೆಗಳ ನಡುವಿನ ಮಾತುಕತೆಯ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.</p>.<p>ಮಾತುಕತೆಯ ಸಂದರ್ಭದಲ್ಲಿ, ರಶ್ದಿ ಅವರ ಮುಖ ನೋಡುವುದೂ ತಮಗೆ ಸಹ್ಯವಿಲ್ಲವೆಂದು ಮುಸ್ಲೀಂ ಸಂಘಟನೆಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಿದವೆನ್ನಲಾಗಿದೆ. </p>.<p>ರಶ್ದಿ ಅವರ ಸಂವಾದ ರದ್ದು ಪಡಿಸಿರುವುದನ್ನು ಘೋಷಿಸಿದ ಉತ್ಸವದ ಸಂಘಟಕರಲ್ಲೊಬ್ಬರಾದ ಸಂಜಯ್ ರಾಯ್ ಅವರು, ~ಕೆಲವು ಜನರು ಉತ್ಸವ ನಡೆಯುತ್ತಿರುವ ಸಭಾಂಗಣದಲ್ಲಿ ನುಗ್ಗಿದ್ದಾರೆ, ಅವರು ಗದ್ದಲವೆಬ್ಬಿಸಬಹುದು, ಹಿಂಸಾಚಾರಕ್ಕೂ ಇಳಿದಾರು~ ಎಂದು ಪೊಲೀಸರು ಎಚ್ಚರಿಸಿದ್ದಾರೆಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>