<p><span style="font-size: 26px;"><strong>ಲಂಡನ್ (ಪಿಟಿಐ): </strong>ವ್ಯಕ್ತಿಯೊಬ್ಬರಲ್ಲಿ ಮೇದೋಜೀರಕ ಗ್ರಂಥಿ (ಪ್ಯಾಂಕ್ರಿಯಾಟಿಕ್) ಕ್ಯಾನ್ಸರ್ ಗೋಚರಿಸಲಿರುವ ಬಗ್ಗೆ ಪೂರ್ವ ಸೂಚನೆ ನೀಡುವ ಹೊಸ ವಿಧಾನವನ್ನು ಸಂಶೋಧಕರು ಅಭಿವೃದ್ಧಿ ಪಡಿಸಿದ್ದಾರೆ.</span></p>.<p>ಗೊಟೆನ್ಬರ್ಗ್ನ ಸಹ್ಲಗ್ರೆನ್ಸ್ಕಾ ವಿಶ್ವವಿದ್ಯಾಲಯದ ಸಂಶೋಧಕರು ಈ ಹೊಸ ವಿಧಾನವನ್ನು ಅಭಿವೃದ್ಧಿ ಪಡಿಸಿದ್ದು, ಶೇಕಡಾ 97ರಷ್ಟು ಖಚಿತವಾಗಿ ಪೂರ್ವ ಮುನ್ಸೂಚನೆ ನೀಡಲಿದೆ ಎನ್ನುತ್ತಾರೆ ಅವರು.<br /> <br /> ‘ಹೊಸ ವಿಧಾನದ ಮೂಲಕ ಮುಂಚಿತವಾಗಿ ಕ್ಯಾನ್ಸರ್ನ ಗುಣ ಲಕ್ಷಣಗಳನ್ನು ಪತ್ತೆಮಾಡಲು ಸಾಧ್ಯವಾಗುವುದರಿಂದ ಅನಗತ್ಯವಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಅಪಾಯದಿಂದ ಪಾರಾಗಬಹುದು. ಮುಂದಿನ ಐದು ವರ್ಷಗಳ ಒಳಗಾಗಿ ಈ ವ್ಯವಸ್ಥೆಯನ್ನು ರೋಗಿಗಳಿಗೆ ಒದಗಿಸಲಾಗುವುದು’ ಎನ್ನುತ್ತಾರೆ ಸಹ್ಲಗ್ರೆನ್ಸ್ಕಾ ವಿಶ್ವವಿದ್ಯಾಲಯದ ಆಸ್ಪತ್ರೆಯ ವೈದ್ಯ ಕರೊಲಿನಾ ಜಬ್ಬಾರ್.<br /> <br /> ಅಲ್ಲದೇ ಕಾಯಿಲೆಯ ಬೆಳವಣಿಗೆಯ ಮಟ್ಟವನ್ನು ಗುರುತಿಸಲು ಹಾಗೂ ರೋಗಿಗೆ ತಕ್ಷಣದಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯವಿದೆಯೇ ಎಂಬುದನ್ನು ನಿರ್ಧರಿಸಲೂ ಈ ಹೊಸ ವಿಧಾನ ನೆರವಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;"><strong>ಲಂಡನ್ (ಪಿಟಿಐ): </strong>ವ್ಯಕ್ತಿಯೊಬ್ಬರಲ್ಲಿ ಮೇದೋಜೀರಕ ಗ್ರಂಥಿ (ಪ್ಯಾಂಕ್ರಿಯಾಟಿಕ್) ಕ್ಯಾನ್ಸರ್ ಗೋಚರಿಸಲಿರುವ ಬಗ್ಗೆ ಪೂರ್ವ ಸೂಚನೆ ನೀಡುವ ಹೊಸ ವಿಧಾನವನ್ನು ಸಂಶೋಧಕರು ಅಭಿವೃದ್ಧಿ ಪಡಿಸಿದ್ದಾರೆ.</span></p>.<p>ಗೊಟೆನ್ಬರ್ಗ್ನ ಸಹ್ಲಗ್ರೆನ್ಸ್ಕಾ ವಿಶ್ವವಿದ್ಯಾಲಯದ ಸಂಶೋಧಕರು ಈ ಹೊಸ ವಿಧಾನವನ್ನು ಅಭಿವೃದ್ಧಿ ಪಡಿಸಿದ್ದು, ಶೇಕಡಾ 97ರಷ್ಟು ಖಚಿತವಾಗಿ ಪೂರ್ವ ಮುನ್ಸೂಚನೆ ನೀಡಲಿದೆ ಎನ್ನುತ್ತಾರೆ ಅವರು.<br /> <br /> ‘ಹೊಸ ವಿಧಾನದ ಮೂಲಕ ಮುಂಚಿತವಾಗಿ ಕ್ಯಾನ್ಸರ್ನ ಗುಣ ಲಕ್ಷಣಗಳನ್ನು ಪತ್ತೆಮಾಡಲು ಸಾಧ್ಯವಾಗುವುದರಿಂದ ಅನಗತ್ಯವಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಅಪಾಯದಿಂದ ಪಾರಾಗಬಹುದು. ಮುಂದಿನ ಐದು ವರ್ಷಗಳ ಒಳಗಾಗಿ ಈ ವ್ಯವಸ್ಥೆಯನ್ನು ರೋಗಿಗಳಿಗೆ ಒದಗಿಸಲಾಗುವುದು’ ಎನ್ನುತ್ತಾರೆ ಸಹ್ಲಗ್ರೆನ್ಸ್ಕಾ ವಿಶ್ವವಿದ್ಯಾಲಯದ ಆಸ್ಪತ್ರೆಯ ವೈದ್ಯ ಕರೊಲಿನಾ ಜಬ್ಬಾರ್.<br /> <br /> ಅಲ್ಲದೇ ಕಾಯಿಲೆಯ ಬೆಳವಣಿಗೆಯ ಮಟ್ಟವನ್ನು ಗುರುತಿಸಲು ಹಾಗೂ ರೋಗಿಗೆ ತಕ್ಷಣದಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯವಿದೆಯೇ ಎಂಬುದನ್ನು ನಿರ್ಧರಿಸಲೂ ಈ ಹೊಸ ವಿಧಾನ ನೆರವಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>