<p><strong>ಬೆಂಗಳೂರು: </strong> ನಗರದ ಕ್ಯಾಸಲ್ ಬೀದಿಯ ಮನೆಗಳಿಗೆ ಮತ್ತೆ ಕಲುಷಿತ ನೀರು ಪೂರೈಕೆಯಾಗುತ್ತಿದ್ದು ಜಲಮಂಡಲಿ ಅಧಿಕಾರಿಗಳ ನಿಷ್ಕ್ರಿಯತೆ ಬಗ್ಗೆ ಇಲ್ಲಿನ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.<br /> <br /> ಚರಂಡಿಯಲ್ಲಿ ನೀರು ಕಟ್ಟಿಕೊಂಡ ಪರಿಣಾಮ ಕೊಳಾಯಿಯಲ್ಲಿ ಕಲುಷಿತ ನೀರು ಹರಿದು ಬರುತ್ತಿದೆ. ಈ ಬಗ್ಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜಲಮಂಡಲಿ ಕೂಡಲೇ ಶಾಶ್ವತ ಪರಿಹಾರ ಕಂಡು ಹಿಡಿಯಬೇಕು ಎಂದು ಅವರು ಆಗ್ರಹಿಸಿದ್ದಾರೆ. <br /> <br /> `ನಾಲ್ಕು ದಿನಗಳಿಂದ ಜಲಮಂಡಲಿ ಪೂರೈಕೆ ಮಾಡುತ್ತಿರುವ ನೀರನ್ನು ನಾವು ಬಳಸುತ್ತಿಲ್ಲ. ಕುಡಿಯುವ ನೀರನ್ನು ಬೇರೆಡೆಯಿಂದ ಖರೀದಿಸುತ್ತಿದ್ದೇವೆ. ರಿಪೇರಿ ಮಾಡುವುದಾಗಿ ಬಂದಿದ್ದ ಜಲಮಂಡಲಿ ಅಧಿಕಾರಿಗಳು ಇದುವರೆಗೆ ಏನನ್ನೂ ಮಾಡಿಲ್ಲ~ ಎಂದು ಕ್ಯಾಸಲ್ ಬೀದಿಯ ನಿವಾಸಿ ಗ್ರೆಗೊರಿ ತಿಳಿಸಿದ್ದಾರೆ.<br /> <br /> ಕಲುಷಿತ ನೀರು ಈಗ ಅಪಾರ ಪ್ರಮಾಣದಲ್ಲಿ ಹರಿದು ಬರುತ್ತಿದ್ದು ಕೇವಲ ಬಣ್ಣ ಹಾಗೂ ದುರ್ವಾಸನೆಯಿಂದಲೇ ಇದು ಪತ್ತೆಯಾಗುತ್ತದೆ. `ನೀರಿನಲ್ಲಿ ಸತ್ತ ಇಲಿಯ ವಾಸನೆ ಬರುತ್ತದೆ. ಆದ್ದರಿಂದ ನೀರು ಬಳಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದೇವೆ. ಹೊರಗಿನಿಂದ ನೀರು ಖರೀದಿಸಿ ಬಳಸುತ್ತಿದ್ದೇವೆ~ ಎನ್ನುತ್ತಾರೆ ಮತ್ತೊಬ್ಬ ನಿವಾಸಿ ಗೌತಮ್.<br /> <br /> ಸಂಬಂಧಪಟ್ಟ ಜಲಮಂಡಲಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ `ಈಗಾಗಲೇ ನೀರು ಕಲುಷಿತಗೊಳ್ಳದಂತೆ ಕ್ರಮ ಕೈಗೊಳ್ಳಲಾಗಿದೆ. ಇನ್ನೂ ಸಮಸ್ಯೆ ಇದ್ದರೆ ಸೋಮವಾರ ಬೆಳಿಗ್ಗೆ ಪರಿಹರಿಸಲಾಗುವುದು. ಬ್ರಿಗೇಡ್ರಸ್ತೆಯಿಂದ ರಿಚ್ಮಂಡ್ ರಸ್ತೆಯವರೆಗೆ 9 ಇಂಚಿನ ಪೈಪ್ ಬದಲು 12 ಇಂಚಿನ ಪೈಪ್ ಅಳವಡಿಕೆಗೆ ಚಿಂತನೆ ನಡೆದಿದೆ. ಆದರೆ ಅಂತಿಮ ನಿರ್ಧಾರ ಜಲಮಂಡಲಿಯ ಮೇಲಾಧಿಕಾರಿಗಳಿಗೆ ಬಿಟ್ಟ ವಿಚಾರ~ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong> ನಗರದ ಕ್ಯಾಸಲ್ ಬೀದಿಯ ಮನೆಗಳಿಗೆ ಮತ್ತೆ ಕಲುಷಿತ ನೀರು ಪೂರೈಕೆಯಾಗುತ್ತಿದ್ದು ಜಲಮಂಡಲಿ ಅಧಿಕಾರಿಗಳ ನಿಷ್ಕ್ರಿಯತೆ ಬಗ್ಗೆ ಇಲ್ಲಿನ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.<br /> <br /> ಚರಂಡಿಯಲ್ಲಿ ನೀರು ಕಟ್ಟಿಕೊಂಡ ಪರಿಣಾಮ ಕೊಳಾಯಿಯಲ್ಲಿ ಕಲುಷಿತ ನೀರು ಹರಿದು ಬರುತ್ತಿದೆ. ಈ ಬಗ್ಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜಲಮಂಡಲಿ ಕೂಡಲೇ ಶಾಶ್ವತ ಪರಿಹಾರ ಕಂಡು ಹಿಡಿಯಬೇಕು ಎಂದು ಅವರು ಆಗ್ರಹಿಸಿದ್ದಾರೆ. <br /> <br /> `ನಾಲ್ಕು ದಿನಗಳಿಂದ ಜಲಮಂಡಲಿ ಪೂರೈಕೆ ಮಾಡುತ್ತಿರುವ ನೀರನ್ನು ನಾವು ಬಳಸುತ್ತಿಲ್ಲ. ಕುಡಿಯುವ ನೀರನ್ನು ಬೇರೆಡೆಯಿಂದ ಖರೀದಿಸುತ್ತಿದ್ದೇವೆ. ರಿಪೇರಿ ಮಾಡುವುದಾಗಿ ಬಂದಿದ್ದ ಜಲಮಂಡಲಿ ಅಧಿಕಾರಿಗಳು ಇದುವರೆಗೆ ಏನನ್ನೂ ಮಾಡಿಲ್ಲ~ ಎಂದು ಕ್ಯಾಸಲ್ ಬೀದಿಯ ನಿವಾಸಿ ಗ್ರೆಗೊರಿ ತಿಳಿಸಿದ್ದಾರೆ.<br /> <br /> ಕಲುಷಿತ ನೀರು ಈಗ ಅಪಾರ ಪ್ರಮಾಣದಲ್ಲಿ ಹರಿದು ಬರುತ್ತಿದ್ದು ಕೇವಲ ಬಣ್ಣ ಹಾಗೂ ದುರ್ವಾಸನೆಯಿಂದಲೇ ಇದು ಪತ್ತೆಯಾಗುತ್ತದೆ. `ನೀರಿನಲ್ಲಿ ಸತ್ತ ಇಲಿಯ ವಾಸನೆ ಬರುತ್ತದೆ. ಆದ್ದರಿಂದ ನೀರು ಬಳಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದೇವೆ. ಹೊರಗಿನಿಂದ ನೀರು ಖರೀದಿಸಿ ಬಳಸುತ್ತಿದ್ದೇವೆ~ ಎನ್ನುತ್ತಾರೆ ಮತ್ತೊಬ್ಬ ನಿವಾಸಿ ಗೌತಮ್.<br /> <br /> ಸಂಬಂಧಪಟ್ಟ ಜಲಮಂಡಲಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ `ಈಗಾಗಲೇ ನೀರು ಕಲುಷಿತಗೊಳ್ಳದಂತೆ ಕ್ರಮ ಕೈಗೊಳ್ಳಲಾಗಿದೆ. ಇನ್ನೂ ಸಮಸ್ಯೆ ಇದ್ದರೆ ಸೋಮವಾರ ಬೆಳಿಗ್ಗೆ ಪರಿಹರಿಸಲಾಗುವುದು. ಬ್ರಿಗೇಡ್ರಸ್ತೆಯಿಂದ ರಿಚ್ಮಂಡ್ ರಸ್ತೆಯವರೆಗೆ 9 ಇಂಚಿನ ಪೈಪ್ ಬದಲು 12 ಇಂಚಿನ ಪೈಪ್ ಅಳವಡಿಕೆಗೆ ಚಿಂತನೆ ನಡೆದಿದೆ. ಆದರೆ ಅಂತಿಮ ನಿರ್ಧಾರ ಜಲಮಂಡಲಿಯ ಮೇಲಾಧಿಕಾರಿಗಳಿಗೆ ಬಿಟ್ಟ ವಿಚಾರ~ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>