<p><strong>ಹುಬ್ಬಳ್ಳಿ:</strong> ಎ. ರಘು (42 ರನ್, 30 ಎಸೆತ, 4 ಬೌಂಡರಿ, 2 ಸಿಕ್ಸರ್) ಅವರ ಭರ್ಜರಿ ಆಲ್ರೌಂಡ್ ಆಟದ ನೆರವಿನಿಂದ ಹೈದರಾಬಾದ್ ತಂಡ, ಭಾನುವಾರ ಮುಕ್ತಾಯಗೊಂಡ ಉತ್ತರ ಕರ್ನಾಟಕ ಅಂಗವಿಕಲರ ಕ್ರೀಡೆ ಹಾಗೂ ಕ್ಷೇಮಾಭಿವೃದ್ಧಿ ಸಂಸ್ಥೆ ಆಶ್ರಯದ ಅಂಗವಿಕಲರ ರಾಷ್ಟ್ರಮಟ್ಟದ ಕ್ರಿಕೆಟ್ ಟೂರ್ನಿ `ಗಂಧರ್ವ ಟ್ರೋಫಿ~ಯ ಪ್ರಶಸ್ತಿಯನ್ನು ಗೆದ್ದುಕೊಂಡಿತು.</p>.<p>ನಗರದ ಕರ್ನಾಟಕ ಜಿಮ್ಖಾನ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅದು ತಮಿಳುನಾಡು ತಂಡವನ್ನು 5 ರನ್ಗಳಿಂದ ಮಣಿಸಿ ಪ್ಲೇಟ್ ಹಂತದ ಚಾಂಪಿಯನ್ ಆಗಿ ಹೊರಹೊಮ್ಮಿತು.</p>.<p>ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಹೈದರಾಬಾದ್ ತಂಡ ನಿಗದಿತ 12 ಓವರ್ಗಳಲ್ಲಿ 5 ವಿಕೆಟ್ಗಳಿಗೆ 81 ರನ್ ಗಳಿಸಿತು. ತಮಿಳುನಾಡು 10.1 ಓವರ್ಗಳಲ್ಲಿ 76 ರನ್ಗಳಿಗೆ ಆಲೌಟಾಯಿತು.</p>.<p><strong>ಸ್ಕೋರ್ ವಿವರ:</strong> ಹೈದರಾಬಾದ್: 12 ಓವರ್ಗಳಲ್ಲಿ 5 ವಿಕೆಟ್ಗಳಿಗೆ 81 (ಎ. ರಘು 42; ಸುರೇಶ 15ಕ್ಕೆ3, ಕಣ್ಣದಾಸನ್ 10ಕ್ಕೆ 2); ತಮಿಳುನಾಡು: 10.1 ಓವರ್ಗಳಲ್ಲಿ 76ಕ್ಕೆ ಆಲೌಟ್ (ಡಿ. ಆ್ಯಂಟನಿ 29; ವೈ. ತಿರುಪತಿ 13ಕ್ಕೆ 3, ಎ. ರಘು 12ಕ್ಕೆ 2, ಬಾಲಕೃಷ್ಣ 13ಕ್ಕೆ 2).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ಎ. ರಘು (42 ರನ್, 30 ಎಸೆತ, 4 ಬೌಂಡರಿ, 2 ಸಿಕ್ಸರ್) ಅವರ ಭರ್ಜರಿ ಆಲ್ರೌಂಡ್ ಆಟದ ನೆರವಿನಿಂದ ಹೈದರಾಬಾದ್ ತಂಡ, ಭಾನುವಾರ ಮುಕ್ತಾಯಗೊಂಡ ಉತ್ತರ ಕರ್ನಾಟಕ ಅಂಗವಿಕಲರ ಕ್ರೀಡೆ ಹಾಗೂ ಕ್ಷೇಮಾಭಿವೃದ್ಧಿ ಸಂಸ್ಥೆ ಆಶ್ರಯದ ಅಂಗವಿಕಲರ ರಾಷ್ಟ್ರಮಟ್ಟದ ಕ್ರಿಕೆಟ್ ಟೂರ್ನಿ `ಗಂಧರ್ವ ಟ್ರೋಫಿ~ಯ ಪ್ರಶಸ್ತಿಯನ್ನು ಗೆದ್ದುಕೊಂಡಿತು.</p>.<p>ನಗರದ ಕರ್ನಾಟಕ ಜಿಮ್ಖಾನ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅದು ತಮಿಳುನಾಡು ತಂಡವನ್ನು 5 ರನ್ಗಳಿಂದ ಮಣಿಸಿ ಪ್ಲೇಟ್ ಹಂತದ ಚಾಂಪಿಯನ್ ಆಗಿ ಹೊರಹೊಮ್ಮಿತು.</p>.<p>ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಹೈದರಾಬಾದ್ ತಂಡ ನಿಗದಿತ 12 ಓವರ್ಗಳಲ್ಲಿ 5 ವಿಕೆಟ್ಗಳಿಗೆ 81 ರನ್ ಗಳಿಸಿತು. ತಮಿಳುನಾಡು 10.1 ಓವರ್ಗಳಲ್ಲಿ 76 ರನ್ಗಳಿಗೆ ಆಲೌಟಾಯಿತು.</p>.<p><strong>ಸ್ಕೋರ್ ವಿವರ:</strong> ಹೈದರಾಬಾದ್: 12 ಓವರ್ಗಳಲ್ಲಿ 5 ವಿಕೆಟ್ಗಳಿಗೆ 81 (ಎ. ರಘು 42; ಸುರೇಶ 15ಕ್ಕೆ3, ಕಣ್ಣದಾಸನ್ 10ಕ್ಕೆ 2); ತಮಿಳುನಾಡು: 10.1 ಓವರ್ಗಳಲ್ಲಿ 76ಕ್ಕೆ ಆಲೌಟ್ (ಡಿ. ಆ್ಯಂಟನಿ 29; ವೈ. ತಿರುಪತಿ 13ಕ್ಕೆ 3, ಎ. ರಘು 12ಕ್ಕೆ 2, ಬಾಲಕೃಷ್ಣ 13ಕ್ಕೆ 2).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>