<p><strong>ನವದೆಹಲಿ:</strong> ರಾಜ್ಯ ಸರ್ಕಾರಿ ಸ್ವಾಮ್ಯದ ಗಣಿ ಕಂಪೆನಿ ~ಮೈಸೂರು ಮಿನರೆಲ್ಸ್~ (ಎಂಎಂಎಲ್) ಕೆಲವು ಖಾಸಗಿ ಗಣಿ ಕಂಪೆನಿಗಳ ಜತೆ ಮಾಡಿಕೊಂಡ ಒಪ್ಪಂದಗಳಿಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಕುಟುಂಬ ಸದಸ್ಯರ ಅಕ್ರಮ ವ್ಯವಹಾರಗಳಿಗೂ ಸಂಬಂಧವಿರುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಈ ಕುರಿತು ಸಿಬಿಐ ತನಿಖೆಗೆ ಶಿಫಾರಸು ಮಾಡಬೇಕೆಂದು `ಕೇಂದ್ರ ಉನ್ನತ ಅಧಿಕಾರದ ಸಮಿತಿ~ (ಸಿಇಸಿ) ಗೆ ಧಾರವಾಡದ `ಸಮಾಜ ಪರಿವರ್ತನಾ ಸಮುದಾಯ~ (ಎಸ್ಪಿಎಸ್) ಮನವಿ ಮಾಡಿದೆ.<br /> <br /> ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಎಂಎಂಎಲ್ ಕೆಲವು ಖಾಸಗಿ ಗಣಿ ಕಂಪೆನಿಗಳ ಜತೆ ಮಾಡಿಕೊಂಡಿದ್ದ ಒಪ್ಪಂದಗಳನ್ನು ತಿದ್ದುಪಡಿ ಮಾಡಿ ಅವುಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಈ ಅನುಕೂಲಕ್ಕಾಗಿ ಯಡಿಯೂರಪ್ಪ ಮತ್ತು ಅವರ ಕುಟುಂಬದ ಸದಸ್ಯರು `ಲಾಭ~ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. <br /> <br /> ಎಂಎಂಎಲ್ ಒಪ್ಪಂದಗಳು ಹಾಗೂ ಮಾಜಿ ಮುಖ್ಯಮಂತ್ರಿಯ ಕುಟುಂಬದ ಅಕ್ರಮ ವ್ಯವಹಾರಗಳ ಬಗ್ಗೆ ಸಿಬಿಐ ತನಿಖೆ ನಡೆದರೆ ಸತ್ಯಾಂಶ ಹೊರಬರಲಿದೆ ಎಂದು ಎಸ್ಪಿಎಸ್ ಹೇಳಿದೆ.<br /> <br /> ಎಸ್ಪಿಎಸ್ನ ಎಸ್.ಆರ್. ಹಿರೇಮಠ, ಪಿ.ವಿ. ಜಯಕೃಷ್ಣನ್ ನೇತೃತ್ವದ ಸಿಇಸಿಗೆ ಈ ಸಂಬಂಧ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಜತೆಗೆ ಪೂರಕ ದಾಖಲೆಗಳನ್ನು ಲಗತ್ತಿಸಿದ್ದಾರೆ. ಸಿಬಿಐ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ಗೆ ಶಿಫಾರಸು ಮಾಡುವಂತೆ ಮನವಿ ಮಾಡಿದ್ದಾರೆ.<br /> <br /> ಆರಗ ಜ್ಞಾನೇಂದ್ರ ಅಧ್ಯಕ್ಷರಾಗಿದ್ದ `ಸಾರ್ವಜನಿಕ ಉದ್ದಿಮೆಗಳ ಸಮಿತಿ~ (ವಿಧಾನ ಮಂಡಲ ಉಭಯ ಸದನಗಳ ಕೆಲ ಸದಸ್ಯರನ್ನು ಒಳಗೊಂಡ ಸಮಿತಿ) ಎಂಎಂಎಲ್ ವ್ಯವಹಾರಗಳನ್ನು ಕುರಿತು ಪರಿಶೀಲನೆ ನಡೆಸಿ 2007ರ ಜುಲೈ 12ರಂದು ಸರ್ಕಾರಕ್ಕೆ ವರದಿ ಸಲ್ಲಿಸಿದೆ. `ಈ ವರದಿಯಲ್ಲಿ ಎಂಎಂಎಲ್ ತನ್ನ ಹಿತಾಸಕ್ತಿ ಬಲಿಕೊಟ್ಟು ಖಾಸಗಿ ಕಂಪೆನಿಗಳಿಗೆ ಲಾಭ ಮಾಡಿಕೊಡುವ ಮೂಲಕ `ಕರ್ತವ್ಯಲೋಪ~ ಎಸಗಿದೆ. ಇದೇ ಧೋರಣೆ ಮುಂದುವರಿದರೆ ಎಂಎಂಎಲ್ ಮುಚ್ಚಬೇಕಾಗುತ್ತದೆ~ ಎಂದು ಉಲ್ಲೇಖಿಸಿದೆ.<br /> <br /> ರಾಜ್ಯ ಪ್ರಧಾನ ಲೆಕ್ಕಾಧಿಕಾರಿ (ಅಕೌಂಟೆಂಟ್ ಜನರಲ್) ಕೂಡಾ ಎಂಎಂಎಲ್ ಮತ್ತು ಖಾಸಗಿ ಕಂಪೆನಿಗಳ ನಡುವಿನ ಒಪ್ಪಂದಗಳು ಅಕ್ರಮ ಮತ್ತು ಕಾನೂನುಬಾಹಿರವಾಗಿವೆ. ಇದರಿಂದ ಎಂಎಂಎಲ್ಗೆ ಆ ಮೂಲಕ ರಾಜ್ಯ ಬೊಕ್ಕಸಕ್ಕೆ ನೂರಾರು ಕೋಟಿ ನಷ್ಟವಾಗಿದೆ. <br /> <br /> ಖಾಸಗಿ ಗಣಿ ಕಂಪೆನಿಗಳು ಸಿಕ್ಕಾಪಟ್ಟೆ ಲಾಭ ಮಾಡಿದ ಸಮಯದಲ್ಲಿ ಎಂಎಂಎಲ್ ಭಾರಿ ನಷ್ಟ ಅನುಭವಿಸಿದೆ ಎಂದು ಹೇಳಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಿಇಸಿಗೆ ಸಲ್ಲಿಸಲಾಗಿದೆ. ಎಂಎಂಎಲ್ ಮತ್ತು ಜೆಎಸ್ಡಬ್ಲ್ಯು ಜಂಟಿ ಸಹಯೋಗದಲ್ಲಿ ವಿಜಯನಗರ ಮಿನೆರಲ್ಸ್ ಪ್ರೈ.ಲಿ. (ವಿಎಂಪಿಎಲ್) ಕಂಪೆನಿ ಸ್ಥಾಪಿಸಲಾಗಿದೆ. <br /> <br /> ವಿಎಂಪಿಎಲ್ ಬೇಜವಾಬ್ದಾರಿ ಕಾರ್ಯಾಚರಣೆ ಫಲವಾಗಿ ಖಾಸಗಿ ಕಂಪೆನಿಗಳಿಗೆ ಅನುಕೂಲ ಆಗಿದೆ. ಅಲ್ಲದೆ, ಎಂಎಂಎಲ್ಗೆ ಜೆಎಸ್ಡಬ್ಲ್ಯು 118ಕೋಟಿ ಬಾಕಿ ಪಾವತಿಸಬೇಕಾಗಿದೆ. ಈ ಎಲ್ಲ ಅಂಶಗಳನ್ನು ಸಿಇಸಿ ಗಣನೆಗೆ ತೆಗೆದುಕೊಳ್ಳಬೇಕು ಎಂದು ಎಸ್ಪಿಎಸ್ ಕೋರಿಕೆ ಸಲ್ಲಿಸಿದೆ.<br /> <br /> ಯಡಿಯೂರಪ್ಪ ಮತ್ತು ಅವರ ಕುಟುಂಬ ಸದಸ್ಯರು `ಜೆಎಸ್ಡಬ್ಲ್ಯು~ ಮತ್ತು `ಸೌತ್ವೆಸ್ಟ್ ಮೈನಿಂಗ್ ಕಂಪೆನಿ~ಯಿಂದ ಪಡೆದಿರುವ `ದೇಣಿಗೆ` ಕುರಿತು ಸಿಬಿಐ ತನಿಖೆ ಅಗತ್ಯ ಇದೆಯೇ ಎಂಬ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ ನೇತೃತ್ವದ ಅರಣ್ಯ ಪೀಠ ಈಗಾಗಲೇ ಸಿಇಸಿಗೆ ಸೂಚಿಸಿದೆ. <br /> <br /> ಈ ಆರೋಪ ಕುರಿತು ಪರಿಶೀಲಿಸುತ್ತಿರುವ ಸಿಇಸಿ ಮುಂದಿನ ಶುಕ್ರವಾರ ವರದಿ ಸಲ್ಲಿಸುವ ನಿರೀಕ್ಷೆಯಿದೆ. ಸಿಇಸಿ ಶಿಫಾರಸು ಪರಿಶೀಲಿಸಿ ನ್ಯಾಯಾಲಯ ತೀರ್ಮಾನ ಪ್ರಕಟಿಸಲಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ರಾಜ್ಯ ಸರ್ಕಾರಿ ಸ್ವಾಮ್ಯದ ಗಣಿ ಕಂಪೆನಿ ~ಮೈಸೂರು ಮಿನರೆಲ್ಸ್~ (ಎಂಎಂಎಲ್) ಕೆಲವು ಖಾಸಗಿ ಗಣಿ ಕಂಪೆನಿಗಳ ಜತೆ ಮಾಡಿಕೊಂಡ ಒಪ್ಪಂದಗಳಿಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಕುಟುಂಬ ಸದಸ್ಯರ ಅಕ್ರಮ ವ್ಯವಹಾರಗಳಿಗೂ ಸಂಬಂಧವಿರುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಈ ಕುರಿತು ಸಿಬಿಐ ತನಿಖೆಗೆ ಶಿಫಾರಸು ಮಾಡಬೇಕೆಂದು `ಕೇಂದ್ರ ಉನ್ನತ ಅಧಿಕಾರದ ಸಮಿತಿ~ (ಸಿಇಸಿ) ಗೆ ಧಾರವಾಡದ `ಸಮಾಜ ಪರಿವರ್ತನಾ ಸಮುದಾಯ~ (ಎಸ್ಪಿಎಸ್) ಮನವಿ ಮಾಡಿದೆ.<br /> <br /> ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಎಂಎಂಎಲ್ ಕೆಲವು ಖಾಸಗಿ ಗಣಿ ಕಂಪೆನಿಗಳ ಜತೆ ಮಾಡಿಕೊಂಡಿದ್ದ ಒಪ್ಪಂದಗಳನ್ನು ತಿದ್ದುಪಡಿ ಮಾಡಿ ಅವುಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಈ ಅನುಕೂಲಕ್ಕಾಗಿ ಯಡಿಯೂರಪ್ಪ ಮತ್ತು ಅವರ ಕುಟುಂಬದ ಸದಸ್ಯರು `ಲಾಭ~ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. <br /> <br /> ಎಂಎಂಎಲ್ ಒಪ್ಪಂದಗಳು ಹಾಗೂ ಮಾಜಿ ಮುಖ್ಯಮಂತ್ರಿಯ ಕುಟುಂಬದ ಅಕ್ರಮ ವ್ಯವಹಾರಗಳ ಬಗ್ಗೆ ಸಿಬಿಐ ತನಿಖೆ ನಡೆದರೆ ಸತ್ಯಾಂಶ ಹೊರಬರಲಿದೆ ಎಂದು ಎಸ್ಪಿಎಸ್ ಹೇಳಿದೆ.<br /> <br /> ಎಸ್ಪಿಎಸ್ನ ಎಸ್.ಆರ್. ಹಿರೇಮಠ, ಪಿ.ವಿ. ಜಯಕೃಷ್ಣನ್ ನೇತೃತ್ವದ ಸಿಇಸಿಗೆ ಈ ಸಂಬಂಧ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಜತೆಗೆ ಪೂರಕ ದಾಖಲೆಗಳನ್ನು ಲಗತ್ತಿಸಿದ್ದಾರೆ. ಸಿಬಿಐ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ಗೆ ಶಿಫಾರಸು ಮಾಡುವಂತೆ ಮನವಿ ಮಾಡಿದ್ದಾರೆ.<br /> <br /> ಆರಗ ಜ್ಞಾನೇಂದ್ರ ಅಧ್ಯಕ್ಷರಾಗಿದ್ದ `ಸಾರ್ವಜನಿಕ ಉದ್ದಿಮೆಗಳ ಸಮಿತಿ~ (ವಿಧಾನ ಮಂಡಲ ಉಭಯ ಸದನಗಳ ಕೆಲ ಸದಸ್ಯರನ್ನು ಒಳಗೊಂಡ ಸಮಿತಿ) ಎಂಎಂಎಲ್ ವ್ಯವಹಾರಗಳನ್ನು ಕುರಿತು ಪರಿಶೀಲನೆ ನಡೆಸಿ 2007ರ ಜುಲೈ 12ರಂದು ಸರ್ಕಾರಕ್ಕೆ ವರದಿ ಸಲ್ಲಿಸಿದೆ. `ಈ ವರದಿಯಲ್ಲಿ ಎಂಎಂಎಲ್ ತನ್ನ ಹಿತಾಸಕ್ತಿ ಬಲಿಕೊಟ್ಟು ಖಾಸಗಿ ಕಂಪೆನಿಗಳಿಗೆ ಲಾಭ ಮಾಡಿಕೊಡುವ ಮೂಲಕ `ಕರ್ತವ್ಯಲೋಪ~ ಎಸಗಿದೆ. ಇದೇ ಧೋರಣೆ ಮುಂದುವರಿದರೆ ಎಂಎಂಎಲ್ ಮುಚ್ಚಬೇಕಾಗುತ್ತದೆ~ ಎಂದು ಉಲ್ಲೇಖಿಸಿದೆ.<br /> <br /> ರಾಜ್ಯ ಪ್ರಧಾನ ಲೆಕ್ಕಾಧಿಕಾರಿ (ಅಕೌಂಟೆಂಟ್ ಜನರಲ್) ಕೂಡಾ ಎಂಎಂಎಲ್ ಮತ್ತು ಖಾಸಗಿ ಕಂಪೆನಿಗಳ ನಡುವಿನ ಒಪ್ಪಂದಗಳು ಅಕ್ರಮ ಮತ್ತು ಕಾನೂನುಬಾಹಿರವಾಗಿವೆ. ಇದರಿಂದ ಎಂಎಂಎಲ್ಗೆ ಆ ಮೂಲಕ ರಾಜ್ಯ ಬೊಕ್ಕಸಕ್ಕೆ ನೂರಾರು ಕೋಟಿ ನಷ್ಟವಾಗಿದೆ. <br /> <br /> ಖಾಸಗಿ ಗಣಿ ಕಂಪೆನಿಗಳು ಸಿಕ್ಕಾಪಟ್ಟೆ ಲಾಭ ಮಾಡಿದ ಸಮಯದಲ್ಲಿ ಎಂಎಂಎಲ್ ಭಾರಿ ನಷ್ಟ ಅನುಭವಿಸಿದೆ ಎಂದು ಹೇಳಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಿಇಸಿಗೆ ಸಲ್ಲಿಸಲಾಗಿದೆ. ಎಂಎಂಎಲ್ ಮತ್ತು ಜೆಎಸ್ಡಬ್ಲ್ಯು ಜಂಟಿ ಸಹಯೋಗದಲ್ಲಿ ವಿಜಯನಗರ ಮಿನೆರಲ್ಸ್ ಪ್ರೈ.ಲಿ. (ವಿಎಂಪಿಎಲ್) ಕಂಪೆನಿ ಸ್ಥಾಪಿಸಲಾಗಿದೆ. <br /> <br /> ವಿಎಂಪಿಎಲ್ ಬೇಜವಾಬ್ದಾರಿ ಕಾರ್ಯಾಚರಣೆ ಫಲವಾಗಿ ಖಾಸಗಿ ಕಂಪೆನಿಗಳಿಗೆ ಅನುಕೂಲ ಆಗಿದೆ. ಅಲ್ಲದೆ, ಎಂಎಂಎಲ್ಗೆ ಜೆಎಸ್ಡಬ್ಲ್ಯು 118ಕೋಟಿ ಬಾಕಿ ಪಾವತಿಸಬೇಕಾಗಿದೆ. ಈ ಎಲ್ಲ ಅಂಶಗಳನ್ನು ಸಿಇಸಿ ಗಣನೆಗೆ ತೆಗೆದುಕೊಳ್ಳಬೇಕು ಎಂದು ಎಸ್ಪಿಎಸ್ ಕೋರಿಕೆ ಸಲ್ಲಿಸಿದೆ.<br /> <br /> ಯಡಿಯೂರಪ್ಪ ಮತ್ತು ಅವರ ಕುಟುಂಬ ಸದಸ್ಯರು `ಜೆಎಸ್ಡಬ್ಲ್ಯು~ ಮತ್ತು `ಸೌತ್ವೆಸ್ಟ್ ಮೈನಿಂಗ್ ಕಂಪೆನಿ~ಯಿಂದ ಪಡೆದಿರುವ `ದೇಣಿಗೆ` ಕುರಿತು ಸಿಬಿಐ ತನಿಖೆ ಅಗತ್ಯ ಇದೆಯೇ ಎಂಬ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ ನೇತೃತ್ವದ ಅರಣ್ಯ ಪೀಠ ಈಗಾಗಲೇ ಸಿಇಸಿಗೆ ಸೂಚಿಸಿದೆ. <br /> <br /> ಈ ಆರೋಪ ಕುರಿತು ಪರಿಶೀಲಿಸುತ್ತಿರುವ ಸಿಇಸಿ ಮುಂದಿನ ಶುಕ್ರವಾರ ವರದಿ ಸಲ್ಲಿಸುವ ನಿರೀಕ್ಷೆಯಿದೆ. ಸಿಇಸಿ ಶಿಫಾರಸು ಪರಿಶೀಲಿಸಿ ನ್ಯಾಯಾಲಯ ತೀರ್ಮಾನ ಪ್ರಕಟಿಸಲಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>