<p><strong>ನವದೆಹಲಿ (ಐಎಎನ್ಎಸ್):</strong> ತೆಲಂಗಾಣ ರಾಜ್ಯ ರಚನೆ ಹಾಗೂ ಬೆಲೆ ಏರಿಕೆ ವಿಷಯವಾಗಿ ಬುಧವಾರವೂ ಸಂಸತ್ನ ಉಭಯ ಸದನಗಳಲ್ಲಿ ವಿರೋಧ ಪಕ್ಷದ ಸದಸ್ಯರು ಗದ್ದಲ ಎಬ್ಬಿಸಿದ್ದರಿಂದ ಕಲಾಪ ಮುಂದೂಡಬೇಕಾಯಿತು.<br /> <br /> ದಿನದ ಕಲಾಪ ಆರಂಭವಾಗುತ್ತಲೇ ಸರ್ಕಾರದ ವಿರುದ್ಧ ಸದಸ್ಯರು ಘೋಷಣೆ ಕೂಗಲು ಆರಂಭಿಸಿದರು. ಹಾಗಾಗಿ ಪ್ರಶ್ನೋತ್ತರ ಅವಧಿ ಬುಧವಾರವೂ ವ್ಯರ್ಥವಾಯಿತು.<br /> <br /> ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ವಿರೋಧ ವ್ಯಕ್ತಪಡಿಸಿ ಆಂಧ್ರಪ್ರದೇಶದ ಸೀಮಾಂಧ್ರ ಭಾಗದ ಸದಸ್ಯರು ಲೋಕಸಭೆಯಲ್ಲಿ ಘೋಷಣೆ ಕೂಗಲು ಆರಂಭಿಸಿದಾಗ ಗದ್ದಲ ನಿಯಂತ್ರಣಕ್ಕೆ ಬರಲಿಲ್ಲ.<br /> <br /> ಆಹಾರ ದಾನ್ಯಗಳ ಬೆಲೆ ಏರಿಕೆ ಹಾಗೂ ಕೋಮುಗಲಭೆಗೆ ಒಳಗಾದ ಉತ್ತರ ಪ್ರದೇಶದ ಮುಜಪ್ಫರ್ನಗರ ನಿರಾಶ್ರಿತರ ಶಿಬಿರದಲ್ಲಿಯ ಮಕ್ಕಳು ಸಾವಿಗೀಡಾಗಿರುವ ವಿಷಯ ಪ್ರಸ್ತಾಪಿಸಿದ ಸದಸ್ಯರು ಸರ್ಕಾರದ ವಿರುದ್ಧ ಹರಿಹಾಯ್ದರು.<br /> <br /> ಮಧ್ಯಾಹ್ನವೂ ಸದಸ್ಯರು ಪ್ರತಿಭಟನೆ ನಿಲ್ಲಿಸದೇ ಇದ್ದಾಗ ಲೋಕಸಭೆ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು. <br /> ರಾಜ್ಯಸಭೆಯಲ್ಲೂ ಇದೇ ಸ್ಥಿತಿ ತಲೆದೋರಿದಾಗ ಸಭಾಪತಿ ಎಂ. ಹಮೀದ್ ಅನ್ಸಾರಿ ಮಧ್ಯಾಹ್ನದವರೆಗೆ ಕಲಾಪ ಮುಂದೂಡಿದರು.<br /> <br /> 2ಜಿ ತರಂಗಾಂತರ ಹಗರಣ ಕುರಿತು ಜೆಪಿಸಿ ನೀಡಿದ ವರದಿ, ತಮಿಳು ಮೀನುಗಾರರ ಮೇಲೆ ಶ್ರೀಲಂಕಾ ನೌಕಾ ಸಿಬ್ಬಂದಿ ನಡೆಸಿರುವ ದಾಳಿಯ ವಿಷಯಗಳೂ ಕೋಲಾಹಲಕ್ಕೆ ಕಾರಣವಾದವು.<br /> <br /> ಇತರ ಹಿಂದುಳಿದ ವರ್ಗದ (ಒಬಿಸಿ) ವ್ಯಾಪ್ತಿಗೆ ಇನ್ನೂ 17 ಜಾತಿಗಳನ್ನು ಸೇರಿಸಲು ಒತ್ತಾಯಿಸಿ ಬಿಎಸ್ಪಿ ಸದಸ್ಯರು ಮಧ್ಯಾಹ್ನವೂ ರಾಜ್ಯಸಭೆ ಯಲ್ಲಿ ಪ್ರತಿಭಟನೆ ನಡೆಸಿದಾಗ ಇದಕ್ಕೆ ಸಮಾಜವಾದಿ ಪಕ್ಷದ ಸದಸ್ಯರೂ ಕೈಜೋಡಿಸಿದರು.<br /> <br /> 2ಜಿ ತರಂಗಾಂತರ ಹಂಚಿಕೆ ಕುರಿತು ಜೆಪಿಸಿ ಸಂಸತ್ನಲ್ಲಿ ವರದಿ ಮಂಡಿಸಿದ್ದು ಈ ಕುರಿತು ಚರ್ಚೆ ನಡೆಯಬೇಕು ಎಂದು ಬಿಜೆಪಿ ನಾಯಕ ವೆಂಕಯ್ಯ ನಾಯ್ಡು ಆಗ್ರಹಿಸಿದರು.<br /> <br /> ಅತ್ಯಲ್ಪ ಅವಧಿಯ ಸಂಸತ್ನ ಚಳಿಗಾಲದ ಅಧಿವೇಶನ ಆರಂಭವಾಗಿ ಐದು ದಿನಗಳಾದರೂ ಯಾವುದೇ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆದಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಐಎಎನ್ಎಸ್):</strong> ತೆಲಂಗಾಣ ರಾಜ್ಯ ರಚನೆ ಹಾಗೂ ಬೆಲೆ ಏರಿಕೆ ವಿಷಯವಾಗಿ ಬುಧವಾರವೂ ಸಂಸತ್ನ ಉಭಯ ಸದನಗಳಲ್ಲಿ ವಿರೋಧ ಪಕ್ಷದ ಸದಸ್ಯರು ಗದ್ದಲ ಎಬ್ಬಿಸಿದ್ದರಿಂದ ಕಲಾಪ ಮುಂದೂಡಬೇಕಾಯಿತು.<br /> <br /> ದಿನದ ಕಲಾಪ ಆರಂಭವಾಗುತ್ತಲೇ ಸರ್ಕಾರದ ವಿರುದ್ಧ ಸದಸ್ಯರು ಘೋಷಣೆ ಕೂಗಲು ಆರಂಭಿಸಿದರು. ಹಾಗಾಗಿ ಪ್ರಶ್ನೋತ್ತರ ಅವಧಿ ಬುಧವಾರವೂ ವ್ಯರ್ಥವಾಯಿತು.<br /> <br /> ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ವಿರೋಧ ವ್ಯಕ್ತಪಡಿಸಿ ಆಂಧ್ರಪ್ರದೇಶದ ಸೀಮಾಂಧ್ರ ಭಾಗದ ಸದಸ್ಯರು ಲೋಕಸಭೆಯಲ್ಲಿ ಘೋಷಣೆ ಕೂಗಲು ಆರಂಭಿಸಿದಾಗ ಗದ್ದಲ ನಿಯಂತ್ರಣಕ್ಕೆ ಬರಲಿಲ್ಲ.<br /> <br /> ಆಹಾರ ದಾನ್ಯಗಳ ಬೆಲೆ ಏರಿಕೆ ಹಾಗೂ ಕೋಮುಗಲಭೆಗೆ ಒಳಗಾದ ಉತ್ತರ ಪ್ರದೇಶದ ಮುಜಪ್ಫರ್ನಗರ ನಿರಾಶ್ರಿತರ ಶಿಬಿರದಲ್ಲಿಯ ಮಕ್ಕಳು ಸಾವಿಗೀಡಾಗಿರುವ ವಿಷಯ ಪ್ರಸ್ತಾಪಿಸಿದ ಸದಸ್ಯರು ಸರ್ಕಾರದ ವಿರುದ್ಧ ಹರಿಹಾಯ್ದರು.<br /> <br /> ಮಧ್ಯಾಹ್ನವೂ ಸದಸ್ಯರು ಪ್ರತಿಭಟನೆ ನಿಲ್ಲಿಸದೇ ಇದ್ದಾಗ ಲೋಕಸಭೆ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು. <br /> ರಾಜ್ಯಸಭೆಯಲ್ಲೂ ಇದೇ ಸ್ಥಿತಿ ತಲೆದೋರಿದಾಗ ಸಭಾಪತಿ ಎಂ. ಹಮೀದ್ ಅನ್ಸಾರಿ ಮಧ್ಯಾಹ್ನದವರೆಗೆ ಕಲಾಪ ಮುಂದೂಡಿದರು.<br /> <br /> 2ಜಿ ತರಂಗಾಂತರ ಹಗರಣ ಕುರಿತು ಜೆಪಿಸಿ ನೀಡಿದ ವರದಿ, ತಮಿಳು ಮೀನುಗಾರರ ಮೇಲೆ ಶ್ರೀಲಂಕಾ ನೌಕಾ ಸಿಬ್ಬಂದಿ ನಡೆಸಿರುವ ದಾಳಿಯ ವಿಷಯಗಳೂ ಕೋಲಾಹಲಕ್ಕೆ ಕಾರಣವಾದವು.<br /> <br /> ಇತರ ಹಿಂದುಳಿದ ವರ್ಗದ (ಒಬಿಸಿ) ವ್ಯಾಪ್ತಿಗೆ ಇನ್ನೂ 17 ಜಾತಿಗಳನ್ನು ಸೇರಿಸಲು ಒತ್ತಾಯಿಸಿ ಬಿಎಸ್ಪಿ ಸದಸ್ಯರು ಮಧ್ಯಾಹ್ನವೂ ರಾಜ್ಯಸಭೆ ಯಲ್ಲಿ ಪ್ರತಿಭಟನೆ ನಡೆಸಿದಾಗ ಇದಕ್ಕೆ ಸಮಾಜವಾದಿ ಪಕ್ಷದ ಸದಸ್ಯರೂ ಕೈಜೋಡಿಸಿದರು.<br /> <br /> 2ಜಿ ತರಂಗಾಂತರ ಹಂಚಿಕೆ ಕುರಿತು ಜೆಪಿಸಿ ಸಂಸತ್ನಲ್ಲಿ ವರದಿ ಮಂಡಿಸಿದ್ದು ಈ ಕುರಿತು ಚರ್ಚೆ ನಡೆಯಬೇಕು ಎಂದು ಬಿಜೆಪಿ ನಾಯಕ ವೆಂಕಯ್ಯ ನಾಯ್ಡು ಆಗ್ರಹಿಸಿದರು.<br /> <br /> ಅತ್ಯಲ್ಪ ಅವಧಿಯ ಸಂಸತ್ನ ಚಳಿಗಾಲದ ಅಧಿವೇಶನ ಆರಂಭವಾಗಿ ಐದು ದಿನಗಳಾದರೂ ಯಾವುದೇ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆದಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>