<p><strong>ತುಮಕೂರು</strong>: ನಗರದ ಮರಳೂರು ಸಿದ್ಧಾರ್ಥ ಕಾಲೇಜಿನ ಎಂಬಿಎ ಸೆಮಿನಾರ್ ಸಭಾಂಗಣದಲ್ಲಿ ಮಂಗಳವಾರ ನೆದರ್ಲ್ಯಾಂಡ್ನ ಪ್ರಸಿದ್ಧ ರಂಗ ನಿರ್ದೇಶಕಿ ಎವಲೀಯನ್ ಪುಲನ್ ನಿರ್ದೇಶನದ `ಸ್ಟೋನ್ ಸೂಪ್~ ನಾಟಕ ಪ್ರದರ್ಶನ ಗಮನ ಸೆಳೆಯಿತು.<br /> <br /> ಬೆಂಗಳೂರು ರಾಷ್ಟ್ರೀಯ ನಾಟಕ ಶಾಲೆಯು `ಶಿಕ್ಷಣದಲ್ಲಿ ರಂಗಭೂಮಿ~ ವಿಷಯವಾಗಿ ಮೂರು ತಿಂಗಳ ಶಿಬಿರವನ್ನು ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಆಯ್ದ ಶಿಕ್ಷಕರಿಗೆ ನಡೆಸುತ್ತಿದೆ. ಈ ಶಿಬಿರದ ಎರಡನೇ ಹಂತವಾಗಿ ನಗರದ ಅಂಕಿತ ಶಾಲೆ ಮಕ್ಕಳಿಗಾಗಿ ನಾಟಕ ಪ್ರದರ್ಶನ ಮಾಡಲಾಯಿತು. ನಾಟಕ ನೋಡಲು ಶಿಕ್ಷಕರು, ಜನರು, ಚಿಕ್ಕ ಮಕ್ಕಳು ಕಿಕ್ಕಿರಿದು ತುಂಬಿದ್ದರು.<br /> <br /> ಪೊಯ್ಲಿ ಸೇನ್ ಗುಪ್ತಾ ಅವರ ನಾಟಕವನ್ನು ಎವಲೀಯನ್ ಪುಲನ್ ರಂಗಕ್ಕೆ ತಂದಿದ್ದಾರೆ. ಕನ್ನಡಕ್ಕೆ ರಾಮನಾಥ ಅನುವಾದಿಸಿದ್ದಾರೆ.<br /> <br /> ಶಿಕ್ಷಣದಲ್ಲಿ ರಂಗಭೂಮಿ ಶಿಬಿರವು ಮಕ್ಕಳನ್ನು ಮುಕ್ತವಾಗಿ ಯೋಚಿಸಲು ಪ್ರಚೋದಿಸುವುದಲ್ಲದೆ, ಕಲಿಕೆಯನ್ನು ಸುಲಭಸಾಧ್ಯವಾಗಿಸುವ ನಿಟ್ಟಿನಲ್ಲಿ ಹುಡುಕಾಟ ನಡೆಸುವಲ್ಲಿ ಯಶಸ್ವಿಯಾಗಿದೆ.<br /> <br /> ಚಳಿಗಾಲದ ನಡುರಾತ್ರಿಯಲ್ಲಿ ಹಸಿದ 7 ಜನ ಯಾತ್ರಿಕರು ಹಳ್ಳಿಯೊಂದರಲ್ಲಿ ಬೆಚ್ಚನೆಯ ನೆಲೆಯ ಹುಡುಕಾಟ ನಡೆಸುವುದು ಹಾಗೂ ಬಿಸಿ ನೀರು, ಮಾಂತ್ರಿಕ ಕಲ್ಲಿನಿಂದ ಸೂಪ್ ತಯಾರಿಸಲು ನೆಡೆಸುವ ಪರಿಪಾಟ ಆಕರ್ಷಕವಾಗಿತ್ತು. ಆಹಾರಕ್ಕಾಗಿ ಪರಿಪಾಠ ನಡೆಸುವಾಗಲೇ ಅಲ್ಲಿಗೆ ಬರುವ ಸರ್ಕಸ್ವೊಂದರ ತಂಡ ಆ ವಾತಾವರಣಕ್ಕೆ ಹೊಸ ಸೊಗಸು ನೀಡುವುದು ನಾಟಕದ ತಿರುಳಾಗಿದೆ.<br /> <br /> ಎವಲೀಯನ್ ಮೂಲತಃ ಶಿಕ್ಷಕಿ. ನೆದರ್ಲ್ಯಾಂಡ್ನ ಪ್ರಮುಖ ಪಪೆಟ್ ಕಲಾವಿದೆ ಕೂಡ ಹೌದು. ಅವರೇ ಕಟ್ಟಿದ `ಮಾಜೇ-90~ ತಂಡದ ಮೂಲಕ ಹಾಲೆಂಡ್, ಬೆಲ್ಜಿಯಂ ದೇಶಗಳಲ್ಲಿ ಸತತ 12 ವರ್ಷ ಕಾಲ ನಾಟಕ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು</strong>: ನಗರದ ಮರಳೂರು ಸಿದ್ಧಾರ್ಥ ಕಾಲೇಜಿನ ಎಂಬಿಎ ಸೆಮಿನಾರ್ ಸಭಾಂಗಣದಲ್ಲಿ ಮಂಗಳವಾರ ನೆದರ್ಲ್ಯಾಂಡ್ನ ಪ್ರಸಿದ್ಧ ರಂಗ ನಿರ್ದೇಶಕಿ ಎವಲೀಯನ್ ಪುಲನ್ ನಿರ್ದೇಶನದ `ಸ್ಟೋನ್ ಸೂಪ್~ ನಾಟಕ ಪ್ರದರ್ಶನ ಗಮನ ಸೆಳೆಯಿತು.<br /> <br /> ಬೆಂಗಳೂರು ರಾಷ್ಟ್ರೀಯ ನಾಟಕ ಶಾಲೆಯು `ಶಿಕ್ಷಣದಲ್ಲಿ ರಂಗಭೂಮಿ~ ವಿಷಯವಾಗಿ ಮೂರು ತಿಂಗಳ ಶಿಬಿರವನ್ನು ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಆಯ್ದ ಶಿಕ್ಷಕರಿಗೆ ನಡೆಸುತ್ತಿದೆ. ಈ ಶಿಬಿರದ ಎರಡನೇ ಹಂತವಾಗಿ ನಗರದ ಅಂಕಿತ ಶಾಲೆ ಮಕ್ಕಳಿಗಾಗಿ ನಾಟಕ ಪ್ರದರ್ಶನ ಮಾಡಲಾಯಿತು. ನಾಟಕ ನೋಡಲು ಶಿಕ್ಷಕರು, ಜನರು, ಚಿಕ್ಕ ಮಕ್ಕಳು ಕಿಕ್ಕಿರಿದು ತುಂಬಿದ್ದರು.<br /> <br /> ಪೊಯ್ಲಿ ಸೇನ್ ಗುಪ್ತಾ ಅವರ ನಾಟಕವನ್ನು ಎವಲೀಯನ್ ಪುಲನ್ ರಂಗಕ್ಕೆ ತಂದಿದ್ದಾರೆ. ಕನ್ನಡಕ್ಕೆ ರಾಮನಾಥ ಅನುವಾದಿಸಿದ್ದಾರೆ.<br /> <br /> ಶಿಕ್ಷಣದಲ್ಲಿ ರಂಗಭೂಮಿ ಶಿಬಿರವು ಮಕ್ಕಳನ್ನು ಮುಕ್ತವಾಗಿ ಯೋಚಿಸಲು ಪ್ರಚೋದಿಸುವುದಲ್ಲದೆ, ಕಲಿಕೆಯನ್ನು ಸುಲಭಸಾಧ್ಯವಾಗಿಸುವ ನಿಟ್ಟಿನಲ್ಲಿ ಹುಡುಕಾಟ ನಡೆಸುವಲ್ಲಿ ಯಶಸ್ವಿಯಾಗಿದೆ.<br /> <br /> ಚಳಿಗಾಲದ ನಡುರಾತ್ರಿಯಲ್ಲಿ ಹಸಿದ 7 ಜನ ಯಾತ್ರಿಕರು ಹಳ್ಳಿಯೊಂದರಲ್ಲಿ ಬೆಚ್ಚನೆಯ ನೆಲೆಯ ಹುಡುಕಾಟ ನಡೆಸುವುದು ಹಾಗೂ ಬಿಸಿ ನೀರು, ಮಾಂತ್ರಿಕ ಕಲ್ಲಿನಿಂದ ಸೂಪ್ ತಯಾರಿಸಲು ನೆಡೆಸುವ ಪರಿಪಾಟ ಆಕರ್ಷಕವಾಗಿತ್ತು. ಆಹಾರಕ್ಕಾಗಿ ಪರಿಪಾಠ ನಡೆಸುವಾಗಲೇ ಅಲ್ಲಿಗೆ ಬರುವ ಸರ್ಕಸ್ವೊಂದರ ತಂಡ ಆ ವಾತಾವರಣಕ್ಕೆ ಹೊಸ ಸೊಗಸು ನೀಡುವುದು ನಾಟಕದ ತಿರುಳಾಗಿದೆ.<br /> <br /> ಎವಲೀಯನ್ ಮೂಲತಃ ಶಿಕ್ಷಕಿ. ನೆದರ್ಲ್ಯಾಂಡ್ನ ಪ್ರಮುಖ ಪಪೆಟ್ ಕಲಾವಿದೆ ಕೂಡ ಹೌದು. ಅವರೇ ಕಟ್ಟಿದ `ಮಾಜೇ-90~ ತಂಡದ ಮೂಲಕ ಹಾಲೆಂಡ್, ಬೆಲ್ಜಿಯಂ ದೇಶಗಳಲ್ಲಿ ಸತತ 12 ವರ್ಷ ಕಾಲ ನಾಟಕ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>