<p>ಭಾದ್ರಪದ ಚೌತಿಯಂದು ಪ್ರತಿಷ್ಠಾಪಿಸಿದ ಗಣಪನನ್ನು ಮೊನ್ನೆ ಭಾನುವಾರ ನೀರಿಗೆ ಬಿಡುವ ಸಂಭ್ರಮ. ಹಾಡು ನರ್ತನ, ಜನಪದ ಕುಣಿತ, ಬ್ಯಾಂಡ್ ಮೆರವಣಿಗೆ ಮಧ್ಯೆ ನಗರದ ವಿವಿಧ ಕೆರೆಗಳಲ್ಲಿ ಸುಗಮವಾಗಿ ವಿಸರ್ಜನೆ ನಡೆಯಿತು.<br /> <br /> ಮನೆ- ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಗಣೇಶ ಮೂರ್ತಿಗಳನ್ನು 5, 7ನೇ ದಿನವೇ ನೀರಿಗೆ ಬಿಟ್ಟರೆ ಗಲ್ಲಿ ಗಲ್ಲಿಗಳು, ರಸ್ತೆಗಳಲ್ಲಿ ಪ್ರತಿಷ್ಠಾಪನೆಗೊಂಡ ಭಾರಿ ಗಾತ್ರದ ಗಣಪನಿಗೆ 11ನೇ ದಿನದಂದೇ ಜಲ ಯೋಗ. ಬಹುಶಃ ಪ್ರತಿಷ್ಠಾಪನೆ ಕಾಲಕ್ಕೆ ನಡೆಯುವಷ್ಟೇ ಅದ್ಧೂರಿಯಾಗಿರುತ್ತವೆ ವಿಸರ್ಜನೆಯ ಮೆರವಣಿಗೆಗಳು.<br /> <br /> ಭಾನುವಾರ ಸಂಜೆಯಿಂದ ನಗರದ ಬಹುತೇಕ ಕಡೆ ಪ್ರಾರಂಭವಾದ ಜಡಿ ಮಳೆ ರಾತ್ರಿ ಬಹು ಹೊತ್ತಿನ ತನಕವೂ ಮುಂದುವರಿಯಿತು. ಆದರೂ ಮೆರವಣಿಗೆಕಾರರ ಉತ್ಸಾಹಕ್ಕೇನೂ ಭಂಗ ಬರಲಿಲ್ಲ.<br /> <br /> ತಮ್ಮ ತಮ್ಮ ಶಕ್ತ್ಯಾನುಸಾರ, ಗಣೇಶನ ಭಾರ ಗಾತ್ರಕ್ಕೆ ತಕ್ಕಂತೆ ಟೆಂಪೊ, ಆಟೊಗಳಲ್ಲಿ ಸುರಿವ ಮಳೆಯಲ್ಲೇ ಮೆರವಣಿಗೆ ಮಾಡಿದರು. ತಾವು ತೊಯ್ದು ತೊಪ್ಪೆಯಾದರೂ ಗಣೇಶನನ್ನು ಮಾತ್ರ ಜೋಪಾನವಾಗಿ ನೋಡಿಕೊಂಡರು. <br /> <br /> ಏಕೆಂದರೆ ಇವರಲ್ಲಿ ಹೆಚ್ಚಿನವರು ಯುವಕರು, ಸಹಜವಾಗೇ ಉತ್ಸಾಹಿಗಳು.<br /> ಇನ್ನೊಂದು ವಿಶೇಷ ಎಂದರೆ ಪ್ರತಿ ವರ್ಷ 4.5 ಲಕ್ಷ ಗಣೇಶಮೂರ್ತಿಗಳು ಬೆಂಗಳೂರು ನಗರ ಪ್ರದೇಶ ಒಂದರಲ್ಲೇ ವಿಸರ್ಜನೆಯಾಗುತ್ತವೆ. <br /> <br /> ಈ ವರ್ಷ ಇದುವರೆಗೆ ಸುಮಾರು 3.5 ಲಕ್ಷ ಮೂರ್ತಿಗಳನ್ನು ನೀರಿಗೆ ಬಿಡಲಾಗಿದೆ. ಹಲಸೂರು, ಸ್ಯಾಂಕಿ ಮತ್ತು ಯಡಿಯೂರು ಕೆರೆಗಳಲ್ಲಿ ರಾಜ್ಯೋತ್ಸವದ ತನಕವೂ ಗಣೇಶ ವಿಸರ್ಜನೆ ನಡೆಯುತ್ತದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.<br /> <br /> ನಗರದಲ್ಲಿ ಗಣೇಶ ವಿಸರ್ಜನೆಯ ಸಂಭ್ರಮದ ಬಿಸಿ ತಟ್ಟುವುದು ವಾಹನ ಸಂಚಾರಕ್ಕೆ. ಗಂಟೆಗಟ್ಟಲೆ ಬೀದಿ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಯುವಕರು ಇಡೀ ರಸ್ತೆಯನ್ನೇ ಆಕ್ರಮಿಸುವುದೇ ಇದಕ್ಕೆ ಕಾರಣ.<br /> <br /> ವಿಸರ್ಜನೆಗೂ ಮೊದಲು ಗಣೇಶನಿಗೆ ಹೂವು ಹಣ್ಣಿನ ಅಲಂಕಾರ. ವಾಹನದಲ್ಲಿ ಕುಳ್ಳಿರಿಸಿದ ಮೇಲೆ ಡೊಳ್ಳು, ನಗಾರಿ, ಜಾನಪದ ತಂಡಗಳ ನೃತ್ಯ ವೈಭವ ಒಂದೆಡೆಯಾದರೆ. ಮತ್ತೊಂದೆಡೆ ಪಟಾಕಿಗಳ ಸದ್ದು. ಡೊಳ್ಳು ತಮಟೆಗಳ ತಾಳಕ್ಕೆ ಯುವಕರ ನರ್ತನ.<br /> <br /> ಈ ಎಲ್ಲಾ ಸಂಭ್ರಮದೊಂದಿಗೆ `ಗಣಪತಿ ಬಪ್ಪ ಮೋರಯಾ~, `ಗಣೇಶ ಬಂದ ಕಾಯಿ ಕಡುಬು ತಿಂದ, ಚಿಕ್ಕೆರೆಲಿ ಬಿದ್ದ ದೊಡ್ಡಕೆರೆಲಿ ಎದ್ದ~ ಹೀಗೆ ಮುಗಿಲು ಮುಟ್ಟುವಂಥ ಘೋಷಣೆಗಳು. <br /> <br /> ನಗರ ಪ್ರದೇಶದ ವ್ಯಾಪ್ತಿ ಬೆಳೆದಂತೆ ಇದ್ದ ಕೆರೆಗಳೆಲ್ಲಾ ಬಡಾವಣೆ, ಐಟಿ- ಬಿಟಿ, ಮಾಲ್ಗಳಾಗಿ ರೂಪ ತಾಳಿವೆ. ಇದರ ನಡುವೆಯೇ ಈ ಬಾರಿಯೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗಣೇಶ ವಿಸರ್ಜನೆಗೆ ಸುಮಾರು 26 ಕೆರೆಗಳಲ್ಲಿ ವ್ಯವಸ್ಥೆ ಕಲ್ಪಿಸಿತ್ತು. ಇದಲ್ಲದೆ ಮಾಲಿನ್ಯ ನಿಯಂತ್ರಣ ಮಂಡಳಿ ಚಿಕ್ಕ ಗಾತ್ರದ ಗಣಪತಿ ವಿಸರ್ಜನೆಗೆ ಸಂಚಾರಿ ಜಲಾಗಾರದ ಏರ್ಪಾಟು ಮಾಡಿತ್ತು.<br /> <br /> ಗಣೇಶಮೂರ್ತಿ ಪ್ರತಿಷ್ಠಾಪನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆಯೇ ವಿನಾ ಕಡಿಮೆಯಾಗುತ್ತಿಲ್ಲ. ಹೀಗಿರುವಾಗ ಲಕ್ಷಾಂತರ ಮೂರ್ತಿಗಳ ವಿಸರ್ಜನೆಗೆ ಸ್ಥಳಾವಕಾಶವಾದರೂ ಎಲ್ಲಿ ಎಂಬ ಪ್ರಶ್ನೆ ಮೂಡುವುದು ಸಹಜ. ಮಾಲಿನ್ಯ, ಹಬ್ಬದ ಸಂಭ್ರಮ ಇವೆರಡರ ನಡುವೆ ಸಮತೋಲನ ಅತ್ಯಗತ್ಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಭಾದ್ರಪದ ಚೌತಿಯಂದು ಪ್ರತಿಷ್ಠಾಪಿಸಿದ ಗಣಪನನ್ನು ಮೊನ್ನೆ ಭಾನುವಾರ ನೀರಿಗೆ ಬಿಡುವ ಸಂಭ್ರಮ. ಹಾಡು ನರ್ತನ, ಜನಪದ ಕುಣಿತ, ಬ್ಯಾಂಡ್ ಮೆರವಣಿಗೆ ಮಧ್ಯೆ ನಗರದ ವಿವಿಧ ಕೆರೆಗಳಲ್ಲಿ ಸುಗಮವಾಗಿ ವಿಸರ್ಜನೆ ನಡೆಯಿತು.<br /> <br /> ಮನೆ- ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಗಣೇಶ ಮೂರ್ತಿಗಳನ್ನು 5, 7ನೇ ದಿನವೇ ನೀರಿಗೆ ಬಿಟ್ಟರೆ ಗಲ್ಲಿ ಗಲ್ಲಿಗಳು, ರಸ್ತೆಗಳಲ್ಲಿ ಪ್ರತಿಷ್ಠಾಪನೆಗೊಂಡ ಭಾರಿ ಗಾತ್ರದ ಗಣಪನಿಗೆ 11ನೇ ದಿನದಂದೇ ಜಲ ಯೋಗ. ಬಹುಶಃ ಪ್ರತಿಷ್ಠಾಪನೆ ಕಾಲಕ್ಕೆ ನಡೆಯುವಷ್ಟೇ ಅದ್ಧೂರಿಯಾಗಿರುತ್ತವೆ ವಿಸರ್ಜನೆಯ ಮೆರವಣಿಗೆಗಳು.<br /> <br /> ಭಾನುವಾರ ಸಂಜೆಯಿಂದ ನಗರದ ಬಹುತೇಕ ಕಡೆ ಪ್ರಾರಂಭವಾದ ಜಡಿ ಮಳೆ ರಾತ್ರಿ ಬಹು ಹೊತ್ತಿನ ತನಕವೂ ಮುಂದುವರಿಯಿತು. ಆದರೂ ಮೆರವಣಿಗೆಕಾರರ ಉತ್ಸಾಹಕ್ಕೇನೂ ಭಂಗ ಬರಲಿಲ್ಲ.<br /> <br /> ತಮ್ಮ ತಮ್ಮ ಶಕ್ತ್ಯಾನುಸಾರ, ಗಣೇಶನ ಭಾರ ಗಾತ್ರಕ್ಕೆ ತಕ್ಕಂತೆ ಟೆಂಪೊ, ಆಟೊಗಳಲ್ಲಿ ಸುರಿವ ಮಳೆಯಲ್ಲೇ ಮೆರವಣಿಗೆ ಮಾಡಿದರು. ತಾವು ತೊಯ್ದು ತೊಪ್ಪೆಯಾದರೂ ಗಣೇಶನನ್ನು ಮಾತ್ರ ಜೋಪಾನವಾಗಿ ನೋಡಿಕೊಂಡರು. <br /> <br /> ಏಕೆಂದರೆ ಇವರಲ್ಲಿ ಹೆಚ್ಚಿನವರು ಯುವಕರು, ಸಹಜವಾಗೇ ಉತ್ಸಾಹಿಗಳು.<br /> ಇನ್ನೊಂದು ವಿಶೇಷ ಎಂದರೆ ಪ್ರತಿ ವರ್ಷ 4.5 ಲಕ್ಷ ಗಣೇಶಮೂರ್ತಿಗಳು ಬೆಂಗಳೂರು ನಗರ ಪ್ರದೇಶ ಒಂದರಲ್ಲೇ ವಿಸರ್ಜನೆಯಾಗುತ್ತವೆ. <br /> <br /> ಈ ವರ್ಷ ಇದುವರೆಗೆ ಸುಮಾರು 3.5 ಲಕ್ಷ ಮೂರ್ತಿಗಳನ್ನು ನೀರಿಗೆ ಬಿಡಲಾಗಿದೆ. ಹಲಸೂರು, ಸ್ಯಾಂಕಿ ಮತ್ತು ಯಡಿಯೂರು ಕೆರೆಗಳಲ್ಲಿ ರಾಜ್ಯೋತ್ಸವದ ತನಕವೂ ಗಣೇಶ ವಿಸರ್ಜನೆ ನಡೆಯುತ್ತದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.<br /> <br /> ನಗರದಲ್ಲಿ ಗಣೇಶ ವಿಸರ್ಜನೆಯ ಸಂಭ್ರಮದ ಬಿಸಿ ತಟ್ಟುವುದು ವಾಹನ ಸಂಚಾರಕ್ಕೆ. ಗಂಟೆಗಟ್ಟಲೆ ಬೀದಿ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಯುವಕರು ಇಡೀ ರಸ್ತೆಯನ್ನೇ ಆಕ್ರಮಿಸುವುದೇ ಇದಕ್ಕೆ ಕಾರಣ.<br /> <br /> ವಿಸರ್ಜನೆಗೂ ಮೊದಲು ಗಣೇಶನಿಗೆ ಹೂವು ಹಣ್ಣಿನ ಅಲಂಕಾರ. ವಾಹನದಲ್ಲಿ ಕುಳ್ಳಿರಿಸಿದ ಮೇಲೆ ಡೊಳ್ಳು, ನಗಾರಿ, ಜಾನಪದ ತಂಡಗಳ ನೃತ್ಯ ವೈಭವ ಒಂದೆಡೆಯಾದರೆ. ಮತ್ತೊಂದೆಡೆ ಪಟಾಕಿಗಳ ಸದ್ದು. ಡೊಳ್ಳು ತಮಟೆಗಳ ತಾಳಕ್ಕೆ ಯುವಕರ ನರ್ತನ.<br /> <br /> ಈ ಎಲ್ಲಾ ಸಂಭ್ರಮದೊಂದಿಗೆ `ಗಣಪತಿ ಬಪ್ಪ ಮೋರಯಾ~, `ಗಣೇಶ ಬಂದ ಕಾಯಿ ಕಡುಬು ತಿಂದ, ಚಿಕ್ಕೆರೆಲಿ ಬಿದ್ದ ದೊಡ್ಡಕೆರೆಲಿ ಎದ್ದ~ ಹೀಗೆ ಮುಗಿಲು ಮುಟ್ಟುವಂಥ ಘೋಷಣೆಗಳು. <br /> <br /> ನಗರ ಪ್ರದೇಶದ ವ್ಯಾಪ್ತಿ ಬೆಳೆದಂತೆ ಇದ್ದ ಕೆರೆಗಳೆಲ್ಲಾ ಬಡಾವಣೆ, ಐಟಿ- ಬಿಟಿ, ಮಾಲ್ಗಳಾಗಿ ರೂಪ ತಾಳಿವೆ. ಇದರ ನಡುವೆಯೇ ಈ ಬಾರಿಯೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗಣೇಶ ವಿಸರ್ಜನೆಗೆ ಸುಮಾರು 26 ಕೆರೆಗಳಲ್ಲಿ ವ್ಯವಸ್ಥೆ ಕಲ್ಪಿಸಿತ್ತು. ಇದಲ್ಲದೆ ಮಾಲಿನ್ಯ ನಿಯಂತ್ರಣ ಮಂಡಳಿ ಚಿಕ್ಕ ಗಾತ್ರದ ಗಣಪತಿ ವಿಸರ್ಜನೆಗೆ ಸಂಚಾರಿ ಜಲಾಗಾರದ ಏರ್ಪಾಟು ಮಾಡಿತ್ತು.<br /> <br /> ಗಣೇಶಮೂರ್ತಿ ಪ್ರತಿಷ್ಠಾಪನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆಯೇ ವಿನಾ ಕಡಿಮೆಯಾಗುತ್ತಿಲ್ಲ. ಹೀಗಿರುವಾಗ ಲಕ್ಷಾಂತರ ಮೂರ್ತಿಗಳ ವಿಸರ್ಜನೆಗೆ ಸ್ಥಳಾವಕಾಶವಾದರೂ ಎಲ್ಲಿ ಎಂಬ ಪ್ರಶ್ನೆ ಮೂಡುವುದು ಸಹಜ. ಮಾಲಿನ್ಯ, ಹಬ್ಬದ ಸಂಭ್ರಮ ಇವೆರಡರ ನಡುವೆ ಸಮತೋಲನ ಅತ್ಯಗತ್ಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>