<p><strong>ಸಿದ್ದಾಪುರ:</strong> ಕಳೆದ ತಿಂಗಳು ಸುರಿದ ಭಾರಿ ಮಳೆಯಿಂದ ತಾಲ್ಲೂಕಿನ ಬಿಳಗಿಯ ಪುರಾತನ ಗೋಲಬಾವಿಯ ಒಳಗಿನ ವರಾಂಡ ನೀರಿನಿಂದ ಭರ್ತಿಯಾಗಿದೆ. ಇದೇ ಸಂದರ್ಭದಲ್ಲಿ ಗೋಲಬಾವಿಯ ಮೇಲ್ಭಾಗದ ಆವರಣದಲ್ಲಿ ಇತ್ತೀಚೆಗೆ ನಿರ್ಮಿಸಲಾಗಿದ್ದ ತಡೆಗೋಡೆಯೊಂದು ಕುಸಿದು ಬಿದ್ದಿದೆ.<br /> <br /> ಬಿಳಗಿ ಅರಸರ ಕಾಲದಲ್ಲಿ (16ನೇ ಶತಮಾನದಲ್ಲಿ) ನೆಲದೊಳಗೆ ನಿರ್ಮಿಸಲಾಗಿರುವ ಈ ವಿಸ್ಮಯ ಕಟ್ಟಡ ಮಳೆಗಾಲದಲ್ಲಿ ನೀರಿನಲ್ಲಿ ಮಾಯವಾಗುವುದು ಮಾಮೂಲು ಸಂಗತಿ. ಆದರೆ ಈ ವರ್ಷ ಜೂನ್ ತಿಂಗಳಿನಲ್ಲಿಯೇ ಗೋಲಬಾವಿಯಲ್ಲಿ ನೀರು ತುಂಬಿದೆ. ಪ್ರತಿ ವರ್ಷವೂ ಮಳೆಗಾಲದಲ್ಲಿ ನೀರಿನಲ್ಲಿಯೇ ಇದ್ದರೂ ಈ ಬಾವಿಯ ಒಳ ಆವರಣ ಇದುವರೆಗೂ ಕುಸಿದಿಲ್ಲ. ಆದರೆ ಕೇವಲ ಕೆಲವು ತಿಂಗಳುಗಳ ಹಿಂದೆ ಕಟ್ಟಲಾದ ಈ ಕಾಲದ ತಡೆ ಗೋಡೆ ಮಾತ್ರ ಮಳೆಗೆ ಸೋತು ನೆಲಕ್ಕಪ್ಪಳಿಸಿರುವುದು ಸ್ಥಳೀಯರ ಆಶ್ಚರ್ಯಕ್ಕೆ ಕಾರಣವಾಗಿದೆ.<br /> <br /> ಕಳೆದ ಹಲವು ದಶಕಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಈ ಗೋಲಬಾವಿಯ ಸಂರಕ್ಷಣೆ ಆರಂಭವಾದುದು ಇತ್ತೀಚೆಗೆ. ರಾಜ್ಯದ ಪ್ರವಾಸೋದ್ಯಮ ಇಲಾಖೆ ಮಂಜೂರು ಮಾಡಿದ ರೂ 5 ಲಕ್ಷ ಅನುದಾನದಲ್ಲಿ ಗೋಲಬಾವಿಯ ಆವರಣದಲ್ಲಿ ಹಲವು ಕಾಮಗಾರಿ ಕೈಗೊಳ್ಳಲಾಯಿತು. ಈ ಕಾಮಗಾರಿಗಳ ಮೂಲಕ ಗೋಲಬಾವಿಗೆ ಮರು ಜೀವ ನೀಡುವ ಕೆಲಸ ನಡೆಯಿತು. ಗೋಲಬಾವಿಯ ಆವರಣ ಚೊಕ್ಕಟ ಮಾಡಲಾಯಿತು. ಗೋಲಬಾವಿಯ ಸುತ್ತಲೂ ಬೇಲಿ ನಿರ್ಮಿಸಲಾಯಿತು. ಈ ಬಾವಿಯ ಮೇಲ್ಭಾಗದಲ್ಲಿ ಮತ್ತು ಒಳಗಿನ ವರಾಂಡದ ಸ್ಥಳದಲ್ಲಿ ಕಬ್ಬಿಣದ ಸರಳು ಅಳವಡಿಸಲಾಯಿತು. ಈ ಎಲ್ಲ ಕಾಮಗಾರಿಗಳನ್ನು (ಗೋಲಬಾವಿಯ ಕಂಪೌಂಡ್ ವಾಲ್ ಮತ್ತು ರೇಲಿಂಗ್ ಸೌಲಭ್ಯ) ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ 2012ರ ಡಿಸೆಂಬರ್ 14ರಂದು ಉದ್ಘಾಟಿಸಿದರು.<br /> <br /> ಈ ಗೋಲಬಾವಿಯ ಮೇಲಿನ ಆವರಣದಲ್ಲಿ ಎತ್ತರದಿಂದ ತಗ್ಗಿನ ಸ್ಥಳಕ್ಕೆ ಧರೆ ಕುಸಿಯದಂತೆ ತಡೆಯಲು ತಡೆಗೋಡೆಯೊಂದನ್ನು ಮಾಡಲಾಗಿತ್ತು. ಉದ್ಘಾಟನೆಗೊಂಡು ಆರೇಳು ತಿಂಗಳು ಕಳೆಯುವಷ್ಟರಲ್ಲಿ ಈ ತಡೆಗೋಡೆ ಕುಸಿದು ಬಿದ್ದಿದೆ.<br /> <br /> ಈ ಬಗ್ಗೆ ಪಂಚಾಯ್ತಿರಾಜ್ ಎಂಜಿನಿಯರಿಂಗ್ ಇಲಾಖೆಯ ಎಂಜಿನಿಯರ್ ಉಮಾ ನಾಯ್ಕ ಅವರನ್ನು `ಪ್ರಜಾವಾಣಿ' ಪ್ರತಿನಿಧಿ ಸಂಪರ್ಕಿಸಿದಾಗ, `ಈ ತಡೆ ಗೋಡೆಯನ್ನು ಗ್ರಾಮ ಪಂಚಾಯ್ತಿ ಅನುದಾನದಿಂದ ಕಟ್ಟಲಾಗಿದೆ. ಅದನ್ನು ಕಟ್ಟಲು ಹೆಚ್ಚಿನ ಅನುದಾನ ಅಗತ್ಯ ಎಂದು ಆರಂಭದಲ್ಲಿಯೇ ತಿಳಿಸಿದ್ದೆ. ಆದರೂ ಕೂಡ ರೂ 50 ಸಾವಿರ ಅನುದಾನದಲ್ಲಿ ಕೆಂಪು ಕಲ್ಲಿನಿಂದ ತಡೆಗೋಡೆ ನಿರ್ಮಿಸಲಾಯಿತು' ಎಂದು ಪ್ರತಿಕ್ರಿಯೆ ನೀಡಿದರು.<br /> <br /> ಕಳೆದ ನಾಲ್ಕೈದು ದಿನಗಳ ಹಿಂದೆ ಭಾರಿ ಮಳೆ ಸುರಿದ ಸಂದರ್ಭದಲ್ಲಿ ಈ ತಡೆಗೋಡೆ ಬಿದ್ದು ಹೋಗಿದ್ದು, ಈಗಾಗಲೇ ಹಾನಿಯ ಅಂದಾಜು ಮಾಡಿ ಕಳುಹಿಸಿದ್ದೇವೆ ಎಂಬುದು ಅವರು ನೀಡುವ ವಿವರ.<br /> <br /> `ಈ ಕಾಮಗಾರಿಗಳು ಸಮರ್ಪಕವಾಗಿಲ್ಲ; ಕಳಪೆಯಾಗಿವೆ' ಎಂಬುದು ಸ್ಥಳೀಯರ ಆರೋಪವಾಗಿದೆ. ಹಲವು ಶತಮಾನಗಳ ಹಿಂದಿನ ಪುರಾತನ ತಂತ್ರಜ್ಞಾನದ ಗೋಲಬಾವಿಯ ಎದುರು ಈ ಕಾಲದ `ಆಧುನಿಕ ಕಾಮಗಾರಿ' ತಲೆ ತಗ್ಗಿಸಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿದ್ದಾಪುರ:</strong> ಕಳೆದ ತಿಂಗಳು ಸುರಿದ ಭಾರಿ ಮಳೆಯಿಂದ ತಾಲ್ಲೂಕಿನ ಬಿಳಗಿಯ ಪುರಾತನ ಗೋಲಬಾವಿಯ ಒಳಗಿನ ವರಾಂಡ ನೀರಿನಿಂದ ಭರ್ತಿಯಾಗಿದೆ. ಇದೇ ಸಂದರ್ಭದಲ್ಲಿ ಗೋಲಬಾವಿಯ ಮೇಲ್ಭಾಗದ ಆವರಣದಲ್ಲಿ ಇತ್ತೀಚೆಗೆ ನಿರ್ಮಿಸಲಾಗಿದ್ದ ತಡೆಗೋಡೆಯೊಂದು ಕುಸಿದು ಬಿದ್ದಿದೆ.<br /> <br /> ಬಿಳಗಿ ಅರಸರ ಕಾಲದಲ್ಲಿ (16ನೇ ಶತಮಾನದಲ್ಲಿ) ನೆಲದೊಳಗೆ ನಿರ್ಮಿಸಲಾಗಿರುವ ಈ ವಿಸ್ಮಯ ಕಟ್ಟಡ ಮಳೆಗಾಲದಲ್ಲಿ ನೀರಿನಲ್ಲಿ ಮಾಯವಾಗುವುದು ಮಾಮೂಲು ಸಂಗತಿ. ಆದರೆ ಈ ವರ್ಷ ಜೂನ್ ತಿಂಗಳಿನಲ್ಲಿಯೇ ಗೋಲಬಾವಿಯಲ್ಲಿ ನೀರು ತುಂಬಿದೆ. ಪ್ರತಿ ವರ್ಷವೂ ಮಳೆಗಾಲದಲ್ಲಿ ನೀರಿನಲ್ಲಿಯೇ ಇದ್ದರೂ ಈ ಬಾವಿಯ ಒಳ ಆವರಣ ಇದುವರೆಗೂ ಕುಸಿದಿಲ್ಲ. ಆದರೆ ಕೇವಲ ಕೆಲವು ತಿಂಗಳುಗಳ ಹಿಂದೆ ಕಟ್ಟಲಾದ ಈ ಕಾಲದ ತಡೆ ಗೋಡೆ ಮಾತ್ರ ಮಳೆಗೆ ಸೋತು ನೆಲಕ್ಕಪ್ಪಳಿಸಿರುವುದು ಸ್ಥಳೀಯರ ಆಶ್ಚರ್ಯಕ್ಕೆ ಕಾರಣವಾಗಿದೆ.<br /> <br /> ಕಳೆದ ಹಲವು ದಶಕಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಈ ಗೋಲಬಾವಿಯ ಸಂರಕ್ಷಣೆ ಆರಂಭವಾದುದು ಇತ್ತೀಚೆಗೆ. ರಾಜ್ಯದ ಪ್ರವಾಸೋದ್ಯಮ ಇಲಾಖೆ ಮಂಜೂರು ಮಾಡಿದ ರೂ 5 ಲಕ್ಷ ಅನುದಾನದಲ್ಲಿ ಗೋಲಬಾವಿಯ ಆವರಣದಲ್ಲಿ ಹಲವು ಕಾಮಗಾರಿ ಕೈಗೊಳ್ಳಲಾಯಿತು. ಈ ಕಾಮಗಾರಿಗಳ ಮೂಲಕ ಗೋಲಬಾವಿಗೆ ಮರು ಜೀವ ನೀಡುವ ಕೆಲಸ ನಡೆಯಿತು. ಗೋಲಬಾವಿಯ ಆವರಣ ಚೊಕ್ಕಟ ಮಾಡಲಾಯಿತು. ಗೋಲಬಾವಿಯ ಸುತ್ತಲೂ ಬೇಲಿ ನಿರ್ಮಿಸಲಾಯಿತು. ಈ ಬಾವಿಯ ಮೇಲ್ಭಾಗದಲ್ಲಿ ಮತ್ತು ಒಳಗಿನ ವರಾಂಡದ ಸ್ಥಳದಲ್ಲಿ ಕಬ್ಬಿಣದ ಸರಳು ಅಳವಡಿಸಲಾಯಿತು. ಈ ಎಲ್ಲ ಕಾಮಗಾರಿಗಳನ್ನು (ಗೋಲಬಾವಿಯ ಕಂಪೌಂಡ್ ವಾಲ್ ಮತ್ತು ರೇಲಿಂಗ್ ಸೌಲಭ್ಯ) ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ 2012ರ ಡಿಸೆಂಬರ್ 14ರಂದು ಉದ್ಘಾಟಿಸಿದರು.<br /> <br /> ಈ ಗೋಲಬಾವಿಯ ಮೇಲಿನ ಆವರಣದಲ್ಲಿ ಎತ್ತರದಿಂದ ತಗ್ಗಿನ ಸ್ಥಳಕ್ಕೆ ಧರೆ ಕುಸಿಯದಂತೆ ತಡೆಯಲು ತಡೆಗೋಡೆಯೊಂದನ್ನು ಮಾಡಲಾಗಿತ್ತು. ಉದ್ಘಾಟನೆಗೊಂಡು ಆರೇಳು ತಿಂಗಳು ಕಳೆಯುವಷ್ಟರಲ್ಲಿ ಈ ತಡೆಗೋಡೆ ಕುಸಿದು ಬಿದ್ದಿದೆ.<br /> <br /> ಈ ಬಗ್ಗೆ ಪಂಚಾಯ್ತಿರಾಜ್ ಎಂಜಿನಿಯರಿಂಗ್ ಇಲಾಖೆಯ ಎಂಜಿನಿಯರ್ ಉಮಾ ನಾಯ್ಕ ಅವರನ್ನು `ಪ್ರಜಾವಾಣಿ' ಪ್ರತಿನಿಧಿ ಸಂಪರ್ಕಿಸಿದಾಗ, `ಈ ತಡೆ ಗೋಡೆಯನ್ನು ಗ್ರಾಮ ಪಂಚಾಯ್ತಿ ಅನುದಾನದಿಂದ ಕಟ್ಟಲಾಗಿದೆ. ಅದನ್ನು ಕಟ್ಟಲು ಹೆಚ್ಚಿನ ಅನುದಾನ ಅಗತ್ಯ ಎಂದು ಆರಂಭದಲ್ಲಿಯೇ ತಿಳಿಸಿದ್ದೆ. ಆದರೂ ಕೂಡ ರೂ 50 ಸಾವಿರ ಅನುದಾನದಲ್ಲಿ ಕೆಂಪು ಕಲ್ಲಿನಿಂದ ತಡೆಗೋಡೆ ನಿರ್ಮಿಸಲಾಯಿತು' ಎಂದು ಪ್ರತಿಕ್ರಿಯೆ ನೀಡಿದರು.<br /> <br /> ಕಳೆದ ನಾಲ್ಕೈದು ದಿನಗಳ ಹಿಂದೆ ಭಾರಿ ಮಳೆ ಸುರಿದ ಸಂದರ್ಭದಲ್ಲಿ ಈ ತಡೆಗೋಡೆ ಬಿದ್ದು ಹೋಗಿದ್ದು, ಈಗಾಗಲೇ ಹಾನಿಯ ಅಂದಾಜು ಮಾಡಿ ಕಳುಹಿಸಿದ್ದೇವೆ ಎಂಬುದು ಅವರು ನೀಡುವ ವಿವರ.<br /> <br /> `ಈ ಕಾಮಗಾರಿಗಳು ಸಮರ್ಪಕವಾಗಿಲ್ಲ; ಕಳಪೆಯಾಗಿವೆ' ಎಂಬುದು ಸ್ಥಳೀಯರ ಆರೋಪವಾಗಿದೆ. ಹಲವು ಶತಮಾನಗಳ ಹಿಂದಿನ ಪುರಾತನ ತಂತ್ರಜ್ಞಾನದ ಗೋಲಬಾವಿಯ ಎದುರು ಈ ಕಾಲದ `ಆಧುನಿಕ ಕಾಮಗಾರಿ' ತಲೆ ತಗ್ಗಿಸಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>