<p><strong>ನವದೆಹಲಿ: </strong>ಕಳಸಾ ಬಂಡೂರಿ ಯೋಜನೆಯ ಅನುಷ್ಠಾನದಿಂದ ಕುಡಿಯುವ ನೀರಿಗೆ ಸಮಸ್ಯೆಯುಂಟಾಗುತ್ತದೆ ಎನ್ನುವ ಗೋವಾ ಸರ್ಕಾರದ ಆತಂಕವನ್ನು ಈ ಸಂಬಂಧ ನೇಮಿಸಲಾದ ಮಹದಾಯಿ ಜಲ ವಿವಾದ ನ್ಯಾಯಮಂಡಳಿಯ ಸಲಹೆಗಾರರು ಪುಷ್ಟೀಕರಿಸಿಲ್ಲ.<br /> <br /> ಯೋಜನೆಯ ಅಧ್ಯಯನ ನಡೆಸಿದ ನ್ಯಾಯ ಸಲಹೆಗಾರರು ಮಂಡಳಿಗೆ ವರದಿ ಸಲ್ಲಿಸಿದ್ದು, ಗೋವಾ ಸರ್ಕಾರದ ಆಕ್ಷೇಪಕ್ಕೆ ಯಾವುದೇ ಸಮರ್ಥನೆ ನೀಡಿಲ್ಲ.<br /> <br /> ಯೋಜನೆಯಿಂದ ನೀರಿನ ಸಮಸ್ಯೆ ಜತೆಗೆ ಪರಿಸರ ಅಸಮತೋಲನ ಉಂಟಾಗುತ್ತದೆ ಎಂದು ಗೋವಾ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.<br /> ಕಳಸಾ ನದಿ ತಿರುವು ಯೋಜನೆ ಭಾಗವಾಗಿ ಮಹದಾಯಿ ನದಿಯಿಂದ ಮಲಪ್ರಭಾ ನದಿಗೆ ನೀರು ಹಾಯಿಸುವ ಮೂಲಕ ಹುಬ್ಬಳ್ಳಿ–ಧಾರವಾಡ ಅವಳಿ ನಗರಗಳ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸುವ ಯೋಜನೆ ಕರ್ನಾಟಕ ಸರ್ಕಾರದಿಂದ 2006ರಲ್ಲಿ ಆರಂಭಗೊಂಡಿದ್ದು ಇದೀಗ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ಸಲಹೆಗಾರರು ತಿಳಿಸಿದ್ದಾರೆ.<br /> <br /> ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜೆ.ಎಂ. ಪಾಂಚಾಳ ಅವರ ನೇತೃತ್ವದ ಮಹದಾಯಿ ನ್ಯಾಯಮಂಡಳಿ ಸದಸ್ಯರು ಕಳೆದ ಡಿಸೆಂಬರ್ನಲ್ಲಿ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿದ್ದು ಈ ಸಂದರ್ಭ ಸಲಹೆಗಾರರೂ ಜತೆಯಲ್ಲಿದ್ದರು.<br /> <br /> ಮಂಗಳವಾರ ನ್ಯಾಯಮಂಡಳಿ ಸಭೆ ಸೇರಿದ್ದು ಮುಂದಿನ ಸಭೆ ಏ.1ಕ್ಕೆ ನಡೆಯಲಿದೆ. ಕಳಸಾ ಬಂಡೂರಿ ನದಿ ತಿರುವು ಯೋಜನೆ ವಿರುದ್ಧ ಗೋವಾ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ಮಂಡಳಿ ಈ ಸಂದರ್ಭ ವಿಚಾರಣೆಗೆ ತೆಗೆದುಕೊಳ್ಳಲಿದೆ. ಬೇಡ್ತಿ ನದಿ ಮತ್ತಿತರ ಪರ್ಯಾಯ ಮೂಲಗಳಿಂದ ಕರ್ನಾಟಕ ನೀರು ಪಡೆಯಬಹುದಾಗಿದೆ ಎಂದು ಗೋವಾ ವಾದಿಸುತ್ತಿದೆ.<br /> <br /> ಕರ್ನಾಟಕ ಸರ್ಕಾರದ ಪರವಾಗಿ ಹಾಜರಾದ ಹಿರಿಯ ವಕೀಲ ಎಫ್.ಎಸ್.ನಾರಿಮನ್, ಯೋಜನೆ ಸಂಬಂಧ ಗೋವಾ ಸರ್ಕಾರದ ವಾದವನ್ನು ತೀವ್ರವಾಗಿ ಆಕ್ಷೇಪಿಸಿದರು. ಬೇಡ್ತಿ ಯೋಜನೆಯಿಂದ ಕರ್ನಾಟಕ ನೀರು ಪಡೆಯಬಹುದಾಗಿದೆ ಎನ್ನುವ ಗೋವಾ ಸರ್ಕಾರದ ವಾದ ನ್ಯಾಯಮಂಡಳಿ ವಿಚಾರಣೆ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ನಾರಿಮನ್ ವಾದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಕಳಸಾ ಬಂಡೂರಿ ಯೋಜನೆಯ ಅನುಷ್ಠಾನದಿಂದ ಕುಡಿಯುವ ನೀರಿಗೆ ಸಮಸ್ಯೆಯುಂಟಾಗುತ್ತದೆ ಎನ್ನುವ ಗೋವಾ ಸರ್ಕಾರದ ಆತಂಕವನ್ನು ಈ ಸಂಬಂಧ ನೇಮಿಸಲಾದ ಮಹದಾಯಿ ಜಲ ವಿವಾದ ನ್ಯಾಯಮಂಡಳಿಯ ಸಲಹೆಗಾರರು ಪುಷ್ಟೀಕರಿಸಿಲ್ಲ.<br /> <br /> ಯೋಜನೆಯ ಅಧ್ಯಯನ ನಡೆಸಿದ ನ್ಯಾಯ ಸಲಹೆಗಾರರು ಮಂಡಳಿಗೆ ವರದಿ ಸಲ್ಲಿಸಿದ್ದು, ಗೋವಾ ಸರ್ಕಾರದ ಆಕ್ಷೇಪಕ್ಕೆ ಯಾವುದೇ ಸಮರ್ಥನೆ ನೀಡಿಲ್ಲ.<br /> <br /> ಯೋಜನೆಯಿಂದ ನೀರಿನ ಸಮಸ್ಯೆ ಜತೆಗೆ ಪರಿಸರ ಅಸಮತೋಲನ ಉಂಟಾಗುತ್ತದೆ ಎಂದು ಗೋವಾ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.<br /> ಕಳಸಾ ನದಿ ತಿರುವು ಯೋಜನೆ ಭಾಗವಾಗಿ ಮಹದಾಯಿ ನದಿಯಿಂದ ಮಲಪ್ರಭಾ ನದಿಗೆ ನೀರು ಹಾಯಿಸುವ ಮೂಲಕ ಹುಬ್ಬಳ್ಳಿ–ಧಾರವಾಡ ಅವಳಿ ನಗರಗಳ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸುವ ಯೋಜನೆ ಕರ್ನಾಟಕ ಸರ್ಕಾರದಿಂದ 2006ರಲ್ಲಿ ಆರಂಭಗೊಂಡಿದ್ದು ಇದೀಗ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ಸಲಹೆಗಾರರು ತಿಳಿಸಿದ್ದಾರೆ.<br /> <br /> ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜೆ.ಎಂ. ಪಾಂಚಾಳ ಅವರ ನೇತೃತ್ವದ ಮಹದಾಯಿ ನ್ಯಾಯಮಂಡಳಿ ಸದಸ್ಯರು ಕಳೆದ ಡಿಸೆಂಬರ್ನಲ್ಲಿ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿದ್ದು ಈ ಸಂದರ್ಭ ಸಲಹೆಗಾರರೂ ಜತೆಯಲ್ಲಿದ್ದರು.<br /> <br /> ಮಂಗಳವಾರ ನ್ಯಾಯಮಂಡಳಿ ಸಭೆ ಸೇರಿದ್ದು ಮುಂದಿನ ಸಭೆ ಏ.1ಕ್ಕೆ ನಡೆಯಲಿದೆ. ಕಳಸಾ ಬಂಡೂರಿ ನದಿ ತಿರುವು ಯೋಜನೆ ವಿರುದ್ಧ ಗೋವಾ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ಮಂಡಳಿ ಈ ಸಂದರ್ಭ ವಿಚಾರಣೆಗೆ ತೆಗೆದುಕೊಳ್ಳಲಿದೆ. ಬೇಡ್ತಿ ನದಿ ಮತ್ತಿತರ ಪರ್ಯಾಯ ಮೂಲಗಳಿಂದ ಕರ್ನಾಟಕ ನೀರು ಪಡೆಯಬಹುದಾಗಿದೆ ಎಂದು ಗೋವಾ ವಾದಿಸುತ್ತಿದೆ.<br /> <br /> ಕರ್ನಾಟಕ ಸರ್ಕಾರದ ಪರವಾಗಿ ಹಾಜರಾದ ಹಿರಿಯ ವಕೀಲ ಎಫ್.ಎಸ್.ನಾರಿಮನ್, ಯೋಜನೆ ಸಂಬಂಧ ಗೋವಾ ಸರ್ಕಾರದ ವಾದವನ್ನು ತೀವ್ರವಾಗಿ ಆಕ್ಷೇಪಿಸಿದರು. ಬೇಡ್ತಿ ಯೋಜನೆಯಿಂದ ಕರ್ನಾಟಕ ನೀರು ಪಡೆಯಬಹುದಾಗಿದೆ ಎನ್ನುವ ಗೋವಾ ಸರ್ಕಾರದ ವಾದ ನ್ಯಾಯಮಂಡಳಿ ವಿಚಾರಣೆ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ನಾರಿಮನ್ ವಾದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>