<p><strong>ರಾಣೆಬೆನ್ನೂರು:</strong> ಏಷ್ಯಾ ಖಂಡದಲ್ಲಿಯೇ ಬಿತ್ತನೆ ಬೀಜ ಉತ್ಪಾದನೆಗೆ ಹೆಸರುವಾಸಿಯಾಗಿರುವ ರಾಣೆಬೆನ್ನೂರು ವಾಣಿಜ್ಯ ನಗರಿ ಎಂದು ಪ್ರಖ್ಯಾತಿ ಪಡೆದಿದ್ದರೂ, ನಗರ ಇಂದು ಘನ ತ್ಯಾಜ್ಯ ವಸ್ತುಗಳಿಂದ ಗಬ್ಬು ನಾರುತ್ತಿದೆ. ನಗರದ ತುಂಬೆಲ್ಲ ಎಲ್ಲಿ ಬೇಕೆಂದಲ್ಲಿ ಹಾಕಲಾಗಿರುವ ಕಸದ ರಾಶಿಗಳಿಂದ ಜನತೆ ಬೇಸತ್ತಿದ್ದಾರೆ.<br /> <br /> ನಗರ ಪ್ರವೇಶವಾಗುತ್ತಿದ್ದಂತೆ ಮೊದಲು ಕಣ್ಣಿಗೆ ಬೀಳುವುದು ಕಸದ ಗುಡ್ಡೆಗಳು, ಎಲ್ಲೆಂದರಲ್ಲಿ ಹಾಕಲಾದ ಕಾಂಕ್ರಿಟ್ ಕಲ್ಲು ಮಣ್ಣಿನ ಗುಡ್ಡೆಗಳು, ಮದ್ಯದ ಬಾಟಲಿಗಳ ಗುಡ್ಡೆಗಳು ಸ್ವಾಗತಿಸುತ್ತಿವೆ.<br /> <br /> ರಾಷ್ಟ್ರೀಯ ಹೆದ್ದಾರಿಯಲ್ಲಿ ಅಕ್ಕಪಕ್ಕದಲ್ಲಿ ಸುಮಾರು ಒಂದು ಕಿ.ಮೀ ಉದ್ದಕ್ಕೂ ಇಂತಹ ಕಸದ ಗುಡ್ಡೆಗಳದ್ದೆ ಕಾರುಬಾರು.<br /> <br /> ಇದಕ್ಕೆಲ್ಲಾ ಕಾರಣ ಘನತ್ಯಾಜ್ಯ ವಿಲೇವಾರಿಯಲ್ಲಿ ಸ್ಥಳೀಯ ನಗರಸಭೆ ವಿಫಲವಾಗಿದೆ ಎಂಬುದು ಸಾರ್ವಜನಿಕರ ಆರೋಪ. ನಗರದ ಘನತ್ಯಾಜ್ಯ ವಿಲೇವಾರಿಗೆ ಸೂಕ್ತ ಜಾಗ ಆಯ್ಕೆ ಮಾಡಿ ಅದನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡಿದ್ದರೆ ಸಾರ್ವಜನಿಕರು ಈ ರೀತಿ ಹೆದ್ದಾರಿ ಅಕ್ಕಪಕ್ಕದಲ್ಲಿ ಕಸ ವಿಲೇವಾರಿ ಮಾಡುವ ಅನಿವಾರ್ಯತೆ ಬರುತ್ತಿರಲಿಲ್ಲ ಎಂದು ಹೇಳುತ್ತಾರೆ ನಗರದ ನಿವಾಸಿಗಳು.<br /> <br /> ಇಲ್ಲಿನ ಶ್ರೀರಾಮನಗರ, ಮೃತ್ಯುಂಜಯ ನಗರ, ನೇಕಾರನಗರ, ಕೈಗಾರಿಕಾ ಪ್ರದೇಶ, ಸಿದ್ಧಾರೂಢ ನಗರ, ಉಮಾಶಂಕರ ನಗರ ಸೇರಿದಂತೆ ಇಲ್ಲಿನ ಹಲವು ಪ್ರದೇಶಗಳಲ್ಲಿನ ಘನ ತ್ಯಾಜ್ಯವನ್ನೆಲ್ಲಾ ಹೆದ್ದಾರಿ ಬದಿಗೆ ಹಾಕುವುದರಿಂದ ಇಲ್ಲಿ ಸಂಚರಿಸುವ ಪ್ರಯಾಣಿಕರು ಮೂಗು ಮುಚ್ಚಿಕೊಂಡೇ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ. <br /> <br /> ನಗರದ ಬಿ.ಟಿ.ಪಾಟೀಲ ಮೈದಾನದಲ್ಲಿ ಇದೇ ಪರಿಸ್ಥಿತಿ. ಮೈದಾನದ ಸುತ್ತಮುತ್ತಲಿನ ನಿವಾಸಿಗಳು ಈ ಮೈದಾನದಲ್ಲಿ ಕಸ ತಂದು ಹಾಕುವುದರಿಂದ ಹಾಗೂ ಇಲ್ಲಿ ಹಾಕಿದ ಕಸವನ್ನು ನಗರಸಭೆ ಸಮರ್ಪಕವಾಗಿ ವಿಲೇವಾರಿ ಮಾಡದಿರುವ ಕಾರಣ ಈ ಮೈದಾನ ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ. ಅಲ್ಲದೆ ಈ ಮೈದಾನದಲ್ಲಿ ನಡೆಯುವ ಸಭೆ ಸಮಾರಂಭಗಳ ನಂತರ ಇಲ್ಲಿ ಬೀಳುವ ಕಸವನ್ನು ವಿಲೇವಾರಿ ಮಾಡುವ ಗೋಜಿಗೆ ಸ್ಥಳೀಯ ಆಡಳಿತ ಮುಂದಾಗಿಲ್ಲ. ಈ ಇದರಿಂದಾಗಿ ಇಡೀ ಮೈದಾನವೆಲ್ಲ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯದಿಂದ ಕೂಡಿದ್ದು, ಇಲ್ಲಿ ಓಡಾಡುವ ಹಾಗೂ ಸುತ್ತಮುತ್ತಲಿನ ನಿವಾಸಿಗಳಿಗೆ ನಿತ್ಯ ಕಿರಿಕಿರಿ ಉಂಟು ಮಾಡುತ್ತಿದೆ.<br /> <br /> ನಗರದ ಹೊರವಲಯದ ಹುಲ್ಲತ್ತಿ ಗ್ರಾಮದ ಸಮೀಪ ನಗರಸಭೆ ಘನ ತ್ಯಾಜ್ಯ ವಿಲೇವಾರಿಗಾಗಿ ಜಮೀನು ಖರೀದಿಸಿ ವ್ಯವಸ್ಥೆಗೊಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನಗರ ದಲ್ಲಿ ಸಂಗ್ರಹವಾದ ಘನ ತ್ಯಾಜ್ಯವನ್ನು ಸಮರ್ಪಕವಾಗಿ ಘಟಕಕ್ಕೆ ವಿಲೇವಾರಿ ಮಾಡದಿರುವುದೇ ಇದಕ್ಕೆಲ್ಲಾ ಕಾರಣ ಎಂದು ಹೇಳಲಾಗುತ್ತಿದೆ.<br /> <br /> ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು ತ್ಯಾಜ್ಯ ವಿಲೇವಾರಿಗೆ ಸಮರ್ಪಕ ಕ್ರಮ ಕೈಗೊಳ್ಳಬೇಕಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಣೆಬೆನ್ನೂರು:</strong> ಏಷ್ಯಾ ಖಂಡದಲ್ಲಿಯೇ ಬಿತ್ತನೆ ಬೀಜ ಉತ್ಪಾದನೆಗೆ ಹೆಸರುವಾಸಿಯಾಗಿರುವ ರಾಣೆಬೆನ್ನೂರು ವಾಣಿಜ್ಯ ನಗರಿ ಎಂದು ಪ್ರಖ್ಯಾತಿ ಪಡೆದಿದ್ದರೂ, ನಗರ ಇಂದು ಘನ ತ್ಯಾಜ್ಯ ವಸ್ತುಗಳಿಂದ ಗಬ್ಬು ನಾರುತ್ತಿದೆ. ನಗರದ ತುಂಬೆಲ್ಲ ಎಲ್ಲಿ ಬೇಕೆಂದಲ್ಲಿ ಹಾಕಲಾಗಿರುವ ಕಸದ ರಾಶಿಗಳಿಂದ ಜನತೆ ಬೇಸತ್ತಿದ್ದಾರೆ.<br /> <br /> ನಗರ ಪ್ರವೇಶವಾಗುತ್ತಿದ್ದಂತೆ ಮೊದಲು ಕಣ್ಣಿಗೆ ಬೀಳುವುದು ಕಸದ ಗುಡ್ಡೆಗಳು, ಎಲ್ಲೆಂದರಲ್ಲಿ ಹಾಕಲಾದ ಕಾಂಕ್ರಿಟ್ ಕಲ್ಲು ಮಣ್ಣಿನ ಗುಡ್ಡೆಗಳು, ಮದ್ಯದ ಬಾಟಲಿಗಳ ಗುಡ್ಡೆಗಳು ಸ್ವಾಗತಿಸುತ್ತಿವೆ.<br /> <br /> ರಾಷ್ಟ್ರೀಯ ಹೆದ್ದಾರಿಯಲ್ಲಿ ಅಕ್ಕಪಕ್ಕದಲ್ಲಿ ಸುಮಾರು ಒಂದು ಕಿ.ಮೀ ಉದ್ದಕ್ಕೂ ಇಂತಹ ಕಸದ ಗುಡ್ಡೆಗಳದ್ದೆ ಕಾರುಬಾರು.<br /> <br /> ಇದಕ್ಕೆಲ್ಲಾ ಕಾರಣ ಘನತ್ಯಾಜ್ಯ ವಿಲೇವಾರಿಯಲ್ಲಿ ಸ್ಥಳೀಯ ನಗರಸಭೆ ವಿಫಲವಾಗಿದೆ ಎಂಬುದು ಸಾರ್ವಜನಿಕರ ಆರೋಪ. ನಗರದ ಘನತ್ಯಾಜ್ಯ ವಿಲೇವಾರಿಗೆ ಸೂಕ್ತ ಜಾಗ ಆಯ್ಕೆ ಮಾಡಿ ಅದನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡಿದ್ದರೆ ಸಾರ್ವಜನಿಕರು ಈ ರೀತಿ ಹೆದ್ದಾರಿ ಅಕ್ಕಪಕ್ಕದಲ್ಲಿ ಕಸ ವಿಲೇವಾರಿ ಮಾಡುವ ಅನಿವಾರ್ಯತೆ ಬರುತ್ತಿರಲಿಲ್ಲ ಎಂದು ಹೇಳುತ್ತಾರೆ ನಗರದ ನಿವಾಸಿಗಳು.<br /> <br /> ಇಲ್ಲಿನ ಶ್ರೀರಾಮನಗರ, ಮೃತ್ಯುಂಜಯ ನಗರ, ನೇಕಾರನಗರ, ಕೈಗಾರಿಕಾ ಪ್ರದೇಶ, ಸಿದ್ಧಾರೂಢ ನಗರ, ಉಮಾಶಂಕರ ನಗರ ಸೇರಿದಂತೆ ಇಲ್ಲಿನ ಹಲವು ಪ್ರದೇಶಗಳಲ್ಲಿನ ಘನ ತ್ಯಾಜ್ಯವನ್ನೆಲ್ಲಾ ಹೆದ್ದಾರಿ ಬದಿಗೆ ಹಾಕುವುದರಿಂದ ಇಲ್ಲಿ ಸಂಚರಿಸುವ ಪ್ರಯಾಣಿಕರು ಮೂಗು ಮುಚ್ಚಿಕೊಂಡೇ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ. <br /> <br /> ನಗರದ ಬಿ.ಟಿ.ಪಾಟೀಲ ಮೈದಾನದಲ್ಲಿ ಇದೇ ಪರಿಸ್ಥಿತಿ. ಮೈದಾನದ ಸುತ್ತಮುತ್ತಲಿನ ನಿವಾಸಿಗಳು ಈ ಮೈದಾನದಲ್ಲಿ ಕಸ ತಂದು ಹಾಕುವುದರಿಂದ ಹಾಗೂ ಇಲ್ಲಿ ಹಾಕಿದ ಕಸವನ್ನು ನಗರಸಭೆ ಸಮರ್ಪಕವಾಗಿ ವಿಲೇವಾರಿ ಮಾಡದಿರುವ ಕಾರಣ ಈ ಮೈದಾನ ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ. ಅಲ್ಲದೆ ಈ ಮೈದಾನದಲ್ಲಿ ನಡೆಯುವ ಸಭೆ ಸಮಾರಂಭಗಳ ನಂತರ ಇಲ್ಲಿ ಬೀಳುವ ಕಸವನ್ನು ವಿಲೇವಾರಿ ಮಾಡುವ ಗೋಜಿಗೆ ಸ್ಥಳೀಯ ಆಡಳಿತ ಮುಂದಾಗಿಲ್ಲ. ಈ ಇದರಿಂದಾಗಿ ಇಡೀ ಮೈದಾನವೆಲ್ಲ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯದಿಂದ ಕೂಡಿದ್ದು, ಇಲ್ಲಿ ಓಡಾಡುವ ಹಾಗೂ ಸುತ್ತಮುತ್ತಲಿನ ನಿವಾಸಿಗಳಿಗೆ ನಿತ್ಯ ಕಿರಿಕಿರಿ ಉಂಟು ಮಾಡುತ್ತಿದೆ.<br /> <br /> ನಗರದ ಹೊರವಲಯದ ಹುಲ್ಲತ್ತಿ ಗ್ರಾಮದ ಸಮೀಪ ನಗರಸಭೆ ಘನ ತ್ಯಾಜ್ಯ ವಿಲೇವಾರಿಗಾಗಿ ಜಮೀನು ಖರೀದಿಸಿ ವ್ಯವಸ್ಥೆಗೊಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನಗರ ದಲ್ಲಿ ಸಂಗ್ರಹವಾದ ಘನ ತ್ಯಾಜ್ಯವನ್ನು ಸಮರ್ಪಕವಾಗಿ ಘಟಕಕ್ಕೆ ವಿಲೇವಾರಿ ಮಾಡದಿರುವುದೇ ಇದಕ್ಕೆಲ್ಲಾ ಕಾರಣ ಎಂದು ಹೇಳಲಾಗುತ್ತಿದೆ.<br /> <br /> ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು ತ್ಯಾಜ್ಯ ವಿಲೇವಾರಿಗೆ ಸಮರ್ಪಕ ಕ್ರಮ ಕೈಗೊಳ್ಳಬೇಕಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>