<p><strong>ದಾವಣಗೆರೆ</strong>: ಮುಂಬರುವ ಚುನಾವಣಾ ಪ್ರಕ್ರಿಯೆ ನಂತರ 10ಕ್ಕಿಂತಲೂ ಹೆಚ್ಚು ಭಾಗವಾಗಿ ಹಂಚಿಹೋಗಿರುವ ಭೋವಿ ಸಂಘಗಳನ್ನು ಒಂದೇ ವೇದಿಕೆಯಡಿ ಸಂಘಟಿಸುವುದಾಗಿ ಭೋವಿ ಮಹಾಸಂಸ್ಥಾನ ಮಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ತಿಳಿಸಿದರು.<br /> <br /> ಜ. 14, 2013ರಲ್ಲಿ ನಡೆಯಲಿರುವ ಸಿದ್ದರಾಮೇಶ್ವರ ಜಯಂತಿ ಸಂದರ್ಭದಲ್ಲಿ ಸಾಧ್ಯವಾದಲ್ಲಿ ಭೋವಿ ಸಂಘಗಳನ್ನು ಒಂದುಗೂಡಿಸಿ, ಪ್ರಕಟಿಸುವ ವಿಚಾರ ಇದೆ ಎಂದು ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.<br /> <br /> ಚುನಾವಣಾ ಪೂರ್ವದಲ್ಲಿ ಅಸಂಘಟಿತರಾಗಿದ್ದ ಸಮಾಜವನ್ನು ಮುಖಂಡರ ಅಪೇಕ್ಷೆ ಮೇರೆಗೆ ಒಂದುಗೂಡಿಸಲಾಗಿತ್ತು. ಅದರ ಫಲವಾಗಿ ಭೋವಿ ಸಮಾಜದಿಂದ 11 ಶಾಸಕರು, ಒಬ್ಬ ಸಂಸತ್ ಸದಸ್ಯರು ರಾಜಕೀಯ ಸ್ಥಾನಮಾನ ಪಡೆದರು.</p>.<p>ಮುಂದಿನ ದಿನಗಳಲ್ಲಿ ಸಮಾಜ ಮತ್ತಷ್ಟು ಬಲಿಷ್ಠವಾಗಿ ಬೆಳೆಯಬೇಕು. ಈ ಹಿನ್ನೆಲೆಯಲ್ಲಿ ರಾಜ್ಯದ 20 ಜಿಲ್ಲೆಗಳ ವಿವಿಧ ಹಳ್ಳಿಗಳಲ್ಲಿ ಪ್ರವಾಸ ಮಾಡಲಾಗಿದೆ. ಭೋವಿ ಗುರುಪೀಠದ ಆದೇಶದ ಮೇರೆಗೆ ಜಿಲ್ಲಾವಾರು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.</p>.<p>ಮುಖ್ಯವಾಗಿ ಪ್ರತಿ ತಾಲ್ಲೂಕಿಗೆ ಮೂವರು ಸದಸ್ಯರನ್ನು ಒಳಗೊಂಡಂತೆ ಸಮಾಜದ ಸರ್ವಸದಸ್ಯರ ಸಭೆಯಲ್ಲಿ ಜಿಲ್ಲಾಮಟ್ಟದಲ್ಲಿ ಸಮಿತಿ ರಚಿಸಲಾಗಿದೆ. ಕರ್ನಾಟಕ ರಾಜ್ಯ ಭೋವಿ ಸಂಘದ ಮಾರ್ಗದರ್ಶಕ ಡಾ.ವೈ. ರಾಮಪ್ಪ ಅವರ ನೇತೃತ್ವದಲ್ಲಿ ಈ ಕಾರ್ಯ ನಡೆದಿದೆ ಎಂದು ಸ್ವಾಮೀಜಿ ವಿವರಿಸಿದರು. ಭೋವಿ ಸಮಾಜದ ಓದೋಗಂಗಣ್ಣ, ಅರಸೀಕೆರೆ ತಿಮ್ಮಣ್ಣ, ಅಂಜನಪ್ಪ, ಚೌಡಪ್ಪ, ಶ್ರೀನಿವಾಸ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ</strong>: ಮುಂಬರುವ ಚುನಾವಣಾ ಪ್ರಕ್ರಿಯೆ ನಂತರ 10ಕ್ಕಿಂತಲೂ ಹೆಚ್ಚು ಭಾಗವಾಗಿ ಹಂಚಿಹೋಗಿರುವ ಭೋವಿ ಸಂಘಗಳನ್ನು ಒಂದೇ ವೇದಿಕೆಯಡಿ ಸಂಘಟಿಸುವುದಾಗಿ ಭೋವಿ ಮಹಾಸಂಸ್ಥಾನ ಮಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ತಿಳಿಸಿದರು.<br /> <br /> ಜ. 14, 2013ರಲ್ಲಿ ನಡೆಯಲಿರುವ ಸಿದ್ದರಾಮೇಶ್ವರ ಜಯಂತಿ ಸಂದರ್ಭದಲ್ಲಿ ಸಾಧ್ಯವಾದಲ್ಲಿ ಭೋವಿ ಸಂಘಗಳನ್ನು ಒಂದುಗೂಡಿಸಿ, ಪ್ರಕಟಿಸುವ ವಿಚಾರ ಇದೆ ಎಂದು ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.<br /> <br /> ಚುನಾವಣಾ ಪೂರ್ವದಲ್ಲಿ ಅಸಂಘಟಿತರಾಗಿದ್ದ ಸಮಾಜವನ್ನು ಮುಖಂಡರ ಅಪೇಕ್ಷೆ ಮೇರೆಗೆ ಒಂದುಗೂಡಿಸಲಾಗಿತ್ತು. ಅದರ ಫಲವಾಗಿ ಭೋವಿ ಸಮಾಜದಿಂದ 11 ಶಾಸಕರು, ಒಬ್ಬ ಸಂಸತ್ ಸದಸ್ಯರು ರಾಜಕೀಯ ಸ್ಥಾನಮಾನ ಪಡೆದರು.</p>.<p>ಮುಂದಿನ ದಿನಗಳಲ್ಲಿ ಸಮಾಜ ಮತ್ತಷ್ಟು ಬಲಿಷ್ಠವಾಗಿ ಬೆಳೆಯಬೇಕು. ಈ ಹಿನ್ನೆಲೆಯಲ್ಲಿ ರಾಜ್ಯದ 20 ಜಿಲ್ಲೆಗಳ ವಿವಿಧ ಹಳ್ಳಿಗಳಲ್ಲಿ ಪ್ರವಾಸ ಮಾಡಲಾಗಿದೆ. ಭೋವಿ ಗುರುಪೀಠದ ಆದೇಶದ ಮೇರೆಗೆ ಜಿಲ್ಲಾವಾರು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.</p>.<p>ಮುಖ್ಯವಾಗಿ ಪ್ರತಿ ತಾಲ್ಲೂಕಿಗೆ ಮೂವರು ಸದಸ್ಯರನ್ನು ಒಳಗೊಂಡಂತೆ ಸಮಾಜದ ಸರ್ವಸದಸ್ಯರ ಸಭೆಯಲ್ಲಿ ಜಿಲ್ಲಾಮಟ್ಟದಲ್ಲಿ ಸಮಿತಿ ರಚಿಸಲಾಗಿದೆ. ಕರ್ನಾಟಕ ರಾಜ್ಯ ಭೋವಿ ಸಂಘದ ಮಾರ್ಗದರ್ಶಕ ಡಾ.ವೈ. ರಾಮಪ್ಪ ಅವರ ನೇತೃತ್ವದಲ್ಲಿ ಈ ಕಾರ್ಯ ನಡೆದಿದೆ ಎಂದು ಸ್ವಾಮೀಜಿ ವಿವರಿಸಿದರು. ಭೋವಿ ಸಮಾಜದ ಓದೋಗಂಗಣ್ಣ, ಅರಸೀಕೆರೆ ತಿಮ್ಮಣ್ಣ, ಅಂಜನಪ್ಪ, ಚೌಡಪ್ಪ, ಶ್ರೀನಿವಾಸ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>