<p><strong>ಶಿಡ್ಲಘಟ್ಟ: </strong>ಮುಂಜಾನೆ ಸೂರ್ಯನ ಹೊಂಬಿಸಿಲಿಗೆ ತಿಳಿ ಹಳದಿ ಬಣ್ಣದ ಚೆಂಡು ಹೂವುಗಳು ನಳನಳಿಸುತ್ತಿವೆ. ಆದರೆ ಇಷ್ಟು ಚೆನ್ನಾಗಿರುವ ಬೆಳೆ ಬೆಳೆದಿರುವ ತಾಲ್ಲೂಕಿನ ಚೀಮನಹಳ್ಳಿಯ ರೈತ ವೆಂಕಟನಾರಾಯಣಪ್ಪನ ಮುಖ ಮಾತ್ರ ಕಪ್ಪಿಟ್ಟಿದೆ. ಇದಕ್ಕೆ ಕಾರಣ ಚೆಂಡು ಹೂವಿಗೆ ಈಗ ಬೆಲೆಯೇ ಇಲ್ಲ.<br /> <br /> ತಮ್ಮಲ್ಲಿರುವ ತುಂಡು ಭೂಮಿ, ಸ್ವಲ್ಪವೇ ಇರುವ ನೀರಿನ ಲೆಕ್ಕಾಚಾರದಲ್ಲೇ ಹೂವುಗಳನ್ನು ಬೆಳೆಸಿ ದರೂ ಲಾಭ ಸಿಗದ ಕಾರಣ ಅವರಿಗೆ ಬೇಸರ ಮೂಡಿದೆ. ತಾಲ್ಲೂಕಿನಲ್ಲಿ ಒಂದೆಡೆ ಮಳೆ ಹಿಮ್ಮುಖವಾಗಿದ್ದರೆ, ಮತ್ತೊಂದೆಡೆ ಬೆಳೆಗಳಿಗೆ ಬೆಲೆಯೇ ಇಲ್ಲದಂತಾಗಿದೆ ಎಂದು ರೈತರಲ್ಲಿ ನಿರಾಸೆ ಆವರಿಸಿದೆ.<br /> <br /> `ಮಾರುಕಟ್ಟೆಯಲ್ಲಿ ಮೂರು ರೂಪಾಯಿಗೆ ಒಂದು ಕೆಜಿಯಷ್ಟು ಚೆಂಡು ಹೂವು ಮಾರಿದರೂ ಯಾರು ಕೊಳ್ಳುತ್ತಿಲ್ಲ. ಚಿಕ್ಕಬಳ್ಳಾಪುರದ ಮಾರು ಕಟ್ಟೆಗೆ ಸಾಗಿಸುವ ಖರ್ಚು ಬರಕತ್ತಾಗುವುದಿಲ್ಲ. ಇನ್ನು ಬೆಳೆಗೆ ಖರ್ಚು ಮಾಡಿರುವ ಹಣವನ್ನು ಹೇಗೆ ತಾನೆ ಹಿಂಪಡೆಯಲು ಸಾಧ್ಯ~ ಎಂದು ವೆಂಕಟನಾರಾಯಣಪ್ಪ ತಿಳಿಸಿದರು.<br /> <br /> `ಒಂದು ನಾರಿಗೆ ಮೂರು ರೂಪಾಯಿಯಂತೆ ತೆತ್ತು ಸಾವಿರ ನಾರನ್ನು ನಾಟಿ ಮಾಡಿದ್ದೇನೆ. ಔಷಧಿ, ಗೊಬ್ಬರ ಮೊದಲಾದ ಹಲವು ರೀತಿಯಲ್ಲಿ ಖರ್ಚುಗಳಾಗಿವೆ. <br /> <br /> ಕರೆಂಟ್ ಸರಿಯಾಗಿ ಇರುವುದಿಲ್ಲ ಎಂದು ರಾತ್ರಿ ಸರಿ ಹೊತ್ತಿನಲ್ಲಿ ಬಂದು ಸ್ವಲ್ಪ ನೀರಿರುವ ಕೊಳವೆ ಬಾವಿಯಿಂದಲೇ ನೀರು ಹರಿಸಿದ್ದೇನೆ. ರಾತ್ರಿ ಹಗಲೂ ಕಷ್ಟಪಟ್ಟರೂ ಬೆಳೆಗೆ ಬೆಲೆ ಬರದಿದ್ದಾಗ ಆಗುವ ನೋವು ಹೇಳತೀರದು.<br /> <br /> ಕಳೆದ ಬಾರಿ ಹಬ್ಬಕ್ಕೆ ಒಂದು ಕೆಜಿ ಚೆಂಡು ಹೂವಿಗೆ 70 ರೂಪಾಯಿವರೆಗೂ ಬೆಲೆ ಬಂದಿತ್ತು. ಈ ಬಾರಿ ಹಬ್ಬಕ್ಕೆ ಸರಿ ಯಾಗಿ ಬೆಳೆ ಬರಲೆಂದು ನಾಟಿ ಮಾಡಿದ್ದೆ. ಆದರೆ ಹತ್ತು ದಿನ ಮೊದಲೇ ಬೆಳೆ ಬಂದು ಚಿಂತೆಗೀಡು ಮಾಡಿದೆ.<br /> <br /> ಸೋಮವಾರ ಕೀಳುತ್ತೇವೆ. ಮಹಾಲಯ ಅಮಾವಾಸ್ಯೆಗೆ ಏನಾದರೂ ಕೊಂಚ ಹಣ ಸಿಗುವುದೋ ನೋಡಬೇಕು~ ಎಂದು ಅವರು ಹೇಳಿದರು.<br /> <br /> `ಚಿಕ್ಕಬಳ್ಳಾಪುರ ಮಾರುಕಟ್ಟೆಗೆ ಹೋಗಲು ಕನಿಷ್ಠ 450 ರೂಪಾಯಿ ಬೇಕು. ಅಲ್ಲಿ 100 ರೂಪಾಯಿಗೆ 10 ರೂಪಾಯಿ ಕಮಿಷನ್ ಪಡೆಯುತ್ತಾರೆ. ಇನ್ನು ಬೆಲೆ ಇಳಿದಾಗಂತೂ ರೈತರನ್ನು ದಳ್ಳಾಳಿಗಳು ಮತ್ತು ವ್ಯಾಪಾರಿಗಳು ಕೈಗೆ ಹಣ ದಕ್ಕದಂತೆ ಮಾಡಿ ಬಿಡುತ್ತಾರೆ.<br /> <br /> ರೈತರಿಗೆ ನೇರವಾಗಿ ಹಣ ಸಿಗುವ ವ್ಯವಸ್ಥೆ ಬರುವವರೆಗೂ ರೈತರ ಪರದಾಟ ತಪ್ಪಿದ್ದಲ್ಲ~ ಎಂದು ಹಿರಿಯರೊಬ್ಬರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಡ್ಲಘಟ್ಟ: </strong>ಮುಂಜಾನೆ ಸೂರ್ಯನ ಹೊಂಬಿಸಿಲಿಗೆ ತಿಳಿ ಹಳದಿ ಬಣ್ಣದ ಚೆಂಡು ಹೂವುಗಳು ನಳನಳಿಸುತ್ತಿವೆ. ಆದರೆ ಇಷ್ಟು ಚೆನ್ನಾಗಿರುವ ಬೆಳೆ ಬೆಳೆದಿರುವ ತಾಲ್ಲೂಕಿನ ಚೀಮನಹಳ್ಳಿಯ ರೈತ ವೆಂಕಟನಾರಾಯಣಪ್ಪನ ಮುಖ ಮಾತ್ರ ಕಪ್ಪಿಟ್ಟಿದೆ. ಇದಕ್ಕೆ ಕಾರಣ ಚೆಂಡು ಹೂವಿಗೆ ಈಗ ಬೆಲೆಯೇ ಇಲ್ಲ.<br /> <br /> ತಮ್ಮಲ್ಲಿರುವ ತುಂಡು ಭೂಮಿ, ಸ್ವಲ್ಪವೇ ಇರುವ ನೀರಿನ ಲೆಕ್ಕಾಚಾರದಲ್ಲೇ ಹೂವುಗಳನ್ನು ಬೆಳೆಸಿ ದರೂ ಲಾಭ ಸಿಗದ ಕಾರಣ ಅವರಿಗೆ ಬೇಸರ ಮೂಡಿದೆ. ತಾಲ್ಲೂಕಿನಲ್ಲಿ ಒಂದೆಡೆ ಮಳೆ ಹಿಮ್ಮುಖವಾಗಿದ್ದರೆ, ಮತ್ತೊಂದೆಡೆ ಬೆಳೆಗಳಿಗೆ ಬೆಲೆಯೇ ಇಲ್ಲದಂತಾಗಿದೆ ಎಂದು ರೈತರಲ್ಲಿ ನಿರಾಸೆ ಆವರಿಸಿದೆ.<br /> <br /> `ಮಾರುಕಟ್ಟೆಯಲ್ಲಿ ಮೂರು ರೂಪಾಯಿಗೆ ಒಂದು ಕೆಜಿಯಷ್ಟು ಚೆಂಡು ಹೂವು ಮಾರಿದರೂ ಯಾರು ಕೊಳ್ಳುತ್ತಿಲ್ಲ. ಚಿಕ್ಕಬಳ್ಳಾಪುರದ ಮಾರು ಕಟ್ಟೆಗೆ ಸಾಗಿಸುವ ಖರ್ಚು ಬರಕತ್ತಾಗುವುದಿಲ್ಲ. ಇನ್ನು ಬೆಳೆಗೆ ಖರ್ಚು ಮಾಡಿರುವ ಹಣವನ್ನು ಹೇಗೆ ತಾನೆ ಹಿಂಪಡೆಯಲು ಸಾಧ್ಯ~ ಎಂದು ವೆಂಕಟನಾರಾಯಣಪ್ಪ ತಿಳಿಸಿದರು.<br /> <br /> `ಒಂದು ನಾರಿಗೆ ಮೂರು ರೂಪಾಯಿಯಂತೆ ತೆತ್ತು ಸಾವಿರ ನಾರನ್ನು ನಾಟಿ ಮಾಡಿದ್ದೇನೆ. ಔಷಧಿ, ಗೊಬ್ಬರ ಮೊದಲಾದ ಹಲವು ರೀತಿಯಲ್ಲಿ ಖರ್ಚುಗಳಾಗಿವೆ. <br /> <br /> ಕರೆಂಟ್ ಸರಿಯಾಗಿ ಇರುವುದಿಲ್ಲ ಎಂದು ರಾತ್ರಿ ಸರಿ ಹೊತ್ತಿನಲ್ಲಿ ಬಂದು ಸ್ವಲ್ಪ ನೀರಿರುವ ಕೊಳವೆ ಬಾವಿಯಿಂದಲೇ ನೀರು ಹರಿಸಿದ್ದೇನೆ. ರಾತ್ರಿ ಹಗಲೂ ಕಷ್ಟಪಟ್ಟರೂ ಬೆಳೆಗೆ ಬೆಲೆ ಬರದಿದ್ದಾಗ ಆಗುವ ನೋವು ಹೇಳತೀರದು.<br /> <br /> ಕಳೆದ ಬಾರಿ ಹಬ್ಬಕ್ಕೆ ಒಂದು ಕೆಜಿ ಚೆಂಡು ಹೂವಿಗೆ 70 ರೂಪಾಯಿವರೆಗೂ ಬೆಲೆ ಬಂದಿತ್ತು. ಈ ಬಾರಿ ಹಬ್ಬಕ್ಕೆ ಸರಿ ಯಾಗಿ ಬೆಳೆ ಬರಲೆಂದು ನಾಟಿ ಮಾಡಿದ್ದೆ. ಆದರೆ ಹತ್ತು ದಿನ ಮೊದಲೇ ಬೆಳೆ ಬಂದು ಚಿಂತೆಗೀಡು ಮಾಡಿದೆ.<br /> <br /> ಸೋಮವಾರ ಕೀಳುತ್ತೇವೆ. ಮಹಾಲಯ ಅಮಾವಾಸ್ಯೆಗೆ ಏನಾದರೂ ಕೊಂಚ ಹಣ ಸಿಗುವುದೋ ನೋಡಬೇಕು~ ಎಂದು ಅವರು ಹೇಳಿದರು.<br /> <br /> `ಚಿಕ್ಕಬಳ್ಳಾಪುರ ಮಾರುಕಟ್ಟೆಗೆ ಹೋಗಲು ಕನಿಷ್ಠ 450 ರೂಪಾಯಿ ಬೇಕು. ಅಲ್ಲಿ 100 ರೂಪಾಯಿಗೆ 10 ರೂಪಾಯಿ ಕಮಿಷನ್ ಪಡೆಯುತ್ತಾರೆ. ಇನ್ನು ಬೆಲೆ ಇಳಿದಾಗಂತೂ ರೈತರನ್ನು ದಳ್ಳಾಳಿಗಳು ಮತ್ತು ವ್ಯಾಪಾರಿಗಳು ಕೈಗೆ ಹಣ ದಕ್ಕದಂತೆ ಮಾಡಿ ಬಿಡುತ್ತಾರೆ.<br /> <br /> ರೈತರಿಗೆ ನೇರವಾಗಿ ಹಣ ಸಿಗುವ ವ್ಯವಸ್ಥೆ ಬರುವವರೆಗೂ ರೈತರ ಪರದಾಟ ತಪ್ಪಿದ್ದಲ್ಲ~ ಎಂದು ಹಿರಿಯರೊಬ್ಬರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>