<p>ಹೊಸ ಆರ್ಥಿಕ ನೀತಿ, ಉದಾರೀಕರಣ, ಜಾಗತೀಕರಣ ಅಭಿವೃದ್ಧಿಶೀಲ ರಾಷ್ಟ್ರಗಳ ಜನರ ಜೀವನಮಟ್ಟವನ್ನು ಉನ್ನತಮಟ್ಟಕ್ಕೆ ಏರಿಸಿದೆ. ಜತೆಜತೆಗೆ ಸಾಮಾಜಿಕ ಸಂಸ್ಥೆಗಳು ಗುಣಮಟ್ಟದ ಸುಧಾರಣೆಗಳೊಂದಿಗೆ ಆಧುನಿಕ ಸೌಲಭ್ಯ ಬಳಸಿಕೊಂಡು ಅಸ್ತಿತ್ವ ಪಡೆದುಕೊಳ್ಳುತ್ತಲಿವೆ.<br /> <br /> ಅಂತಹ ಬದಲಾವಣೆಗೆ ಸ್ಪಂದಿಸಿದ ಶಿಕ್ಷಣ ಕ್ಷೇತ್ರ ಬಿರುಸಾಗಿ ತನ್ನ ಹೊಸ ರೂಪದಲ್ಲಿ ನಿಂತಿದೆ. ವೈವಿಧ್ಯಮಯ ಕೋರ್ಸ್ಗಳು, ಐಷಾರಮಿ ಕಟ್ಟಡಗಳು, ಕೊಠಡಿಗಳು, ತಾಂತ್ರಿಕ ವ್ಯವಸ್ಥೆ, ಎಲೆಕ್ಟ್ರಾನಿಕ್ ಪಾಠೋಪಕರಣಗಳು ವಿದ್ಯಾಕಾಂಕ್ಷಿಗಳನ್ನು ಕೈ ಬೀಸಿ ಕರೆಯುತ್ತಿವೆ. <br /> <br /> ಶ್ರೀಮಂತ ಹಾಗೂ ಮೇಲ್ಮಧ್ಯಮ ವರ್ಗ ತಮ್ಮ ಮಕ್ಕಳಿಗೆ ಆಧುನಿಕ ಜೀವನ ಶೈಲಿಗೆ ಆವಶ್ಯವಾದ ಉದ್ಯೋಗ ಪಡೆಯುವಂತಹ ಶಿಕ್ಷಣ ಕೊಡಿಸಲು ಹಾತೊರೆಯುತ್ತಿದ್ದಾರೆ. ಹಣದ ಥೈಲಿ ಹಿಡಿದು ಗುಣಮಟ್ಟ ಹಾಗೂ ಆಧುನಿಕತೆಯ ಸ್ಪರ್ಶವಿರುವ ಶಾಲಾಕಾಲೇಜುಗಳಲ್ಲಿ ತಮ್ಮ ಮಕ್ಕಳಿಗೆ ಪ್ರವೇಶ ಕೊಡಿಸುತ್ತಾರೆ.<br /> <br /> ಕೆಳ ಮಧ್ಯಮ ವರ್ಗ ಹಾಗೂ ಬಡವರಿಗೆ ಹಳ್ಳಿಗಳ ಸರ್ಕಾರಿ ಶಾಲೆಗಳೇ ವಿದ್ಯಾಭ್ಯಾಸದ ಆಸರೆ. ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರ ಸಂಖ್ಯೆ ಹೆಚ್ಚಿರುವ ಇಂದಿನ ದಿನಗಳಲ್ಲಿ ಸಂತೇಬೆನ್ನೂರು ಸಮೀಪದ ಚೆನ್ನಾಪುರ ಸರ್ಕಾರಿ ಪ್ರಾಥಮಿಕ ಶಾಲೆ ಮಾದರಿಯಾಗಿದೆ.<br /> <br /> <strong>ಪರಿಸರ ಸ್ನೇಹಿ ಆವರಣ:</strong> ಶಾಲಾ ಕಟ್ಟಡದ ಸುತ್ತ ವಿಶಾಲ ಮೈದಾನದಲ್ಲಿ ಹಸಿರು ಗಿಡ ಮರಗಳು ಮಕ್ಕಳನ್ನು ಶಾಲೆಗೆ ಕೈ ಬೀಸಿ ಕರೆಯುವಂತಿವೆ. ಶಿಕ್ಷಕ ಹಾಗೂ ವಿದ್ಯಾರ್ಥಿಗಳಗೆ ಕಲಿಕೆಗೆ ಮನೋಲ್ಲಾಸ ನೀಡಲು ಸಹಕಾರಿಯಾಗಿವೆ. ತೇಗದ ಮರಗಳನ್ನು ಕೂಡ ಪರಿಸರ ಶಿಕ್ಷಣದ ಮಾಹಿತಿ ನೀಡಲು ನಿಂತಂತಿವೆ.<br /> <br /> <strong>ಅಂದದ ಶಾಲಾ ಕೊಠಡಿ: </strong>ಶಾಲಾ ಕೊಠಡಿಗಳು ಪಠ್ಯ-ಪಠ್ಯೇತರ ಮಾಹಿತಿಗಳ ಆಗರಗಳಾಗಿವೆ. ಬಣ್ಣಗಳ ಬರಹಗಳಲ್ಲಿ ಮೂಡಿ ಬಂದ ಅಕ್ಷರಗಳು ಹಾಗೂ ಚಿತ್ರಗಳು, ಚಿತ್ರಪಟಗಳು, ಪ್ರಯೋಗಶಾಲೆ ಕೊಠಡಿಯ ಆಕರ್ಷಣೆಯನ್ನು ಹೆಚ್ಚಿಸಿ ಕಲಿಕೆಗೆ ಪ್ರೋತ್ಸಾಹಿಸುವಂತಿವೆ.<br /> <br /> ಆಗಾಗ್ಗೆ ಕೊಠಡಿಯಲ್ಲಿ ಶಾಶ್ವತ ಮಾಹಿತಿಯನ್ನು ಮಕ್ಕಳು ನೋಡುವುದರಿಂದ ಅವು ಅವರ ಸ್ಮೃತಿ ಪಟಲದಲ್ಲಿ ಶಾಶ್ವತವಾಗಿರುತ್ತವೆ ಎನ್ನುತ್ತಾರೆ ಮುಖ ಶಿಕ್ಷಕ ಎಸ್.ಎನ್. ಮಂಜುನಾಥ್.<br /> <br /> ಒಂದರಿಂದ ಏಳನೇ ತರಗತಿಯವರೆಗೆ ಒಟ್ಟು 140 ಮಕ್ಕಳು ಈ ಶಾಲೆಯಲ್ಲಿ ಪ್ರವೇಶ ಪಡೆದಿದ್ದಾರೆ. ಕಾನ್ವೆಂಟ್ನಲ್ಲಿನ ಸೌಲಭ್ಯಗಳನ್ನು ಸರ್ಕಾರಿ ಶಾಲೆಯಲ್ಲಿ ನೀಡುವ ಭರವಸೆಯೊಂದಿಗೆ ಮಕ್ಕಳಿಗೆ ಗುಣಮಟ್ಟ ಹಾಗೂ ಮೌಲ್ಯಾಧಾರಿತ ಶಿಕ್ಷಣ ಕೊಡಲು ಇಲ್ಲಿನ ಶಿಕ್ಷಕರು ಶ್ರಮಿಸುತ್ತಿದ್ದಾರೆ.<br /> <br /> ಸರ್ಕಾರದ ಉಚಿತ ಶಿಕ್ಷಣ, ಬಿಸಿಯೂಟ, ಪುಸ್ತಕ, ಬಟ್ಟೆಗಳನ್ನು ಪಡೆದು ಬಡ ಮಕ್ಕಳು ಉನ್ನತ ವ್ಯಾಸಂಗ ಮಾಡಿ ಅತ್ಯುತ್ತಮ ಉದ್ಯೋಗ ಪಡೆಯುವ ಹಿನ್ನೆಲೆಯಲ್ಲಿ ಶ್ರಮವಹಿಸಿ ಕೆಲಸ ನಿರ್ವಹಿಸುತ್ತಲಿದೆ.<br /> ಶಾಲೆಯ ಅಭಿವೃದ್ಧಿ, ಶಿಕ್ಷಕರೊಂದಿಗೆ ಉತ್ತಮ ಬಾಂಧವ್ಯ ಹಾಗೂ ಮಕ್ಕಳನ್ನು ಸರ್ಕಾರಿ ಶಾಲೆಗೆ ಕರೆತರುವಲ್ಲಿ ಎಸ್ಡಿಎಂಸಿ ಸದಸ್ಯರು ಉತ್ತಮ ಸಹಕಾರ ನೀಡುತ್ತಿದ್ದಾರೆ.<br /> <br /> ಚನ್ನಗಿರಿ ತಾಲ್ಲೂಕಿನ ಅತ್ಯುತ್ತಮ ಶಾಲೆ ಎಂಬ ಗೌರವಕ್ಕೆ ಪಾತ್ರವಾಗಿದೆ. ಈ ಬಾರಿ ಶಿಕ್ಷಕ ದಿನಾಚರಣೆಯಂದು ಶಿಕ್ಷಕ ಎಂ ಜಗದೀಶ್ ಅವರಿಗೆ `ಗುರು ಶ್ರೀ~ ಪ್ರಶಸ್ತಿ ನೀಡಿ ಇಲಾಖೆ ಗೌರವಿಸಿದೆ.<br /> ಶಾಲೆಯ ಪ್ರಗತಿ ಗಮನಿಸಿದ ಗ್ರಾಮದ ಹಲವಾರು ಪೋಷಕರು ತಮ್ಮ ಮಕ್ಕಳಿಗೆ ಇಲ್ಲಿಯೇ ಶಿಕ್ಷಣ ಕೊಡಿಸಲು ಮುಂದಾಗಿದ್ದಾರೆ ಎನ್ನುತ್ತಾರೆ ಪೋಷಕ ಕುಮಾರ್.<br /> <br /> ಉತ್ತಮ ಪಾಠ ಬೋಧನೆ ಮಾಡಿ ಪೋಷಕರ ಮನಗೆದ್ದ ಶಾಲೆಯ ಆರು ಜನ ಶಿಕ್ಷಕರು ಗ್ರಾಮದ ಪ್ರಶಂಸೆಗೆ ಪಾತ್ರರಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊಸ ಆರ್ಥಿಕ ನೀತಿ, ಉದಾರೀಕರಣ, ಜಾಗತೀಕರಣ ಅಭಿವೃದ್ಧಿಶೀಲ ರಾಷ್ಟ್ರಗಳ ಜನರ ಜೀವನಮಟ್ಟವನ್ನು ಉನ್ನತಮಟ್ಟಕ್ಕೆ ಏರಿಸಿದೆ. ಜತೆಜತೆಗೆ ಸಾಮಾಜಿಕ ಸಂಸ್ಥೆಗಳು ಗುಣಮಟ್ಟದ ಸುಧಾರಣೆಗಳೊಂದಿಗೆ ಆಧುನಿಕ ಸೌಲಭ್ಯ ಬಳಸಿಕೊಂಡು ಅಸ್ತಿತ್ವ ಪಡೆದುಕೊಳ್ಳುತ್ತಲಿವೆ.<br /> <br /> ಅಂತಹ ಬದಲಾವಣೆಗೆ ಸ್ಪಂದಿಸಿದ ಶಿಕ್ಷಣ ಕ್ಷೇತ್ರ ಬಿರುಸಾಗಿ ತನ್ನ ಹೊಸ ರೂಪದಲ್ಲಿ ನಿಂತಿದೆ. ವೈವಿಧ್ಯಮಯ ಕೋರ್ಸ್ಗಳು, ಐಷಾರಮಿ ಕಟ್ಟಡಗಳು, ಕೊಠಡಿಗಳು, ತಾಂತ್ರಿಕ ವ್ಯವಸ್ಥೆ, ಎಲೆಕ್ಟ್ರಾನಿಕ್ ಪಾಠೋಪಕರಣಗಳು ವಿದ್ಯಾಕಾಂಕ್ಷಿಗಳನ್ನು ಕೈ ಬೀಸಿ ಕರೆಯುತ್ತಿವೆ. <br /> <br /> ಶ್ರೀಮಂತ ಹಾಗೂ ಮೇಲ್ಮಧ್ಯಮ ವರ್ಗ ತಮ್ಮ ಮಕ್ಕಳಿಗೆ ಆಧುನಿಕ ಜೀವನ ಶೈಲಿಗೆ ಆವಶ್ಯವಾದ ಉದ್ಯೋಗ ಪಡೆಯುವಂತಹ ಶಿಕ್ಷಣ ಕೊಡಿಸಲು ಹಾತೊರೆಯುತ್ತಿದ್ದಾರೆ. ಹಣದ ಥೈಲಿ ಹಿಡಿದು ಗುಣಮಟ್ಟ ಹಾಗೂ ಆಧುನಿಕತೆಯ ಸ್ಪರ್ಶವಿರುವ ಶಾಲಾಕಾಲೇಜುಗಳಲ್ಲಿ ತಮ್ಮ ಮಕ್ಕಳಿಗೆ ಪ್ರವೇಶ ಕೊಡಿಸುತ್ತಾರೆ.<br /> <br /> ಕೆಳ ಮಧ್ಯಮ ವರ್ಗ ಹಾಗೂ ಬಡವರಿಗೆ ಹಳ್ಳಿಗಳ ಸರ್ಕಾರಿ ಶಾಲೆಗಳೇ ವಿದ್ಯಾಭ್ಯಾಸದ ಆಸರೆ. ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರ ಸಂಖ್ಯೆ ಹೆಚ್ಚಿರುವ ಇಂದಿನ ದಿನಗಳಲ್ಲಿ ಸಂತೇಬೆನ್ನೂರು ಸಮೀಪದ ಚೆನ್ನಾಪುರ ಸರ್ಕಾರಿ ಪ್ರಾಥಮಿಕ ಶಾಲೆ ಮಾದರಿಯಾಗಿದೆ.<br /> <br /> <strong>ಪರಿಸರ ಸ್ನೇಹಿ ಆವರಣ:</strong> ಶಾಲಾ ಕಟ್ಟಡದ ಸುತ್ತ ವಿಶಾಲ ಮೈದಾನದಲ್ಲಿ ಹಸಿರು ಗಿಡ ಮರಗಳು ಮಕ್ಕಳನ್ನು ಶಾಲೆಗೆ ಕೈ ಬೀಸಿ ಕರೆಯುವಂತಿವೆ. ಶಿಕ್ಷಕ ಹಾಗೂ ವಿದ್ಯಾರ್ಥಿಗಳಗೆ ಕಲಿಕೆಗೆ ಮನೋಲ್ಲಾಸ ನೀಡಲು ಸಹಕಾರಿಯಾಗಿವೆ. ತೇಗದ ಮರಗಳನ್ನು ಕೂಡ ಪರಿಸರ ಶಿಕ್ಷಣದ ಮಾಹಿತಿ ನೀಡಲು ನಿಂತಂತಿವೆ.<br /> <br /> <strong>ಅಂದದ ಶಾಲಾ ಕೊಠಡಿ: </strong>ಶಾಲಾ ಕೊಠಡಿಗಳು ಪಠ್ಯ-ಪಠ್ಯೇತರ ಮಾಹಿತಿಗಳ ಆಗರಗಳಾಗಿವೆ. ಬಣ್ಣಗಳ ಬರಹಗಳಲ್ಲಿ ಮೂಡಿ ಬಂದ ಅಕ್ಷರಗಳು ಹಾಗೂ ಚಿತ್ರಗಳು, ಚಿತ್ರಪಟಗಳು, ಪ್ರಯೋಗಶಾಲೆ ಕೊಠಡಿಯ ಆಕರ್ಷಣೆಯನ್ನು ಹೆಚ್ಚಿಸಿ ಕಲಿಕೆಗೆ ಪ್ರೋತ್ಸಾಹಿಸುವಂತಿವೆ.<br /> <br /> ಆಗಾಗ್ಗೆ ಕೊಠಡಿಯಲ್ಲಿ ಶಾಶ್ವತ ಮಾಹಿತಿಯನ್ನು ಮಕ್ಕಳು ನೋಡುವುದರಿಂದ ಅವು ಅವರ ಸ್ಮೃತಿ ಪಟಲದಲ್ಲಿ ಶಾಶ್ವತವಾಗಿರುತ್ತವೆ ಎನ್ನುತ್ತಾರೆ ಮುಖ ಶಿಕ್ಷಕ ಎಸ್.ಎನ್. ಮಂಜುನಾಥ್.<br /> <br /> ಒಂದರಿಂದ ಏಳನೇ ತರಗತಿಯವರೆಗೆ ಒಟ್ಟು 140 ಮಕ್ಕಳು ಈ ಶಾಲೆಯಲ್ಲಿ ಪ್ರವೇಶ ಪಡೆದಿದ್ದಾರೆ. ಕಾನ್ವೆಂಟ್ನಲ್ಲಿನ ಸೌಲಭ್ಯಗಳನ್ನು ಸರ್ಕಾರಿ ಶಾಲೆಯಲ್ಲಿ ನೀಡುವ ಭರವಸೆಯೊಂದಿಗೆ ಮಕ್ಕಳಿಗೆ ಗುಣಮಟ್ಟ ಹಾಗೂ ಮೌಲ್ಯಾಧಾರಿತ ಶಿಕ್ಷಣ ಕೊಡಲು ಇಲ್ಲಿನ ಶಿಕ್ಷಕರು ಶ್ರಮಿಸುತ್ತಿದ್ದಾರೆ.<br /> <br /> ಸರ್ಕಾರದ ಉಚಿತ ಶಿಕ್ಷಣ, ಬಿಸಿಯೂಟ, ಪುಸ್ತಕ, ಬಟ್ಟೆಗಳನ್ನು ಪಡೆದು ಬಡ ಮಕ್ಕಳು ಉನ್ನತ ವ್ಯಾಸಂಗ ಮಾಡಿ ಅತ್ಯುತ್ತಮ ಉದ್ಯೋಗ ಪಡೆಯುವ ಹಿನ್ನೆಲೆಯಲ್ಲಿ ಶ್ರಮವಹಿಸಿ ಕೆಲಸ ನಿರ್ವಹಿಸುತ್ತಲಿದೆ.<br /> ಶಾಲೆಯ ಅಭಿವೃದ್ಧಿ, ಶಿಕ್ಷಕರೊಂದಿಗೆ ಉತ್ತಮ ಬಾಂಧವ್ಯ ಹಾಗೂ ಮಕ್ಕಳನ್ನು ಸರ್ಕಾರಿ ಶಾಲೆಗೆ ಕರೆತರುವಲ್ಲಿ ಎಸ್ಡಿಎಂಸಿ ಸದಸ್ಯರು ಉತ್ತಮ ಸಹಕಾರ ನೀಡುತ್ತಿದ್ದಾರೆ.<br /> <br /> ಚನ್ನಗಿರಿ ತಾಲ್ಲೂಕಿನ ಅತ್ಯುತ್ತಮ ಶಾಲೆ ಎಂಬ ಗೌರವಕ್ಕೆ ಪಾತ್ರವಾಗಿದೆ. ಈ ಬಾರಿ ಶಿಕ್ಷಕ ದಿನಾಚರಣೆಯಂದು ಶಿಕ್ಷಕ ಎಂ ಜಗದೀಶ್ ಅವರಿಗೆ `ಗುರು ಶ್ರೀ~ ಪ್ರಶಸ್ತಿ ನೀಡಿ ಇಲಾಖೆ ಗೌರವಿಸಿದೆ.<br /> ಶಾಲೆಯ ಪ್ರಗತಿ ಗಮನಿಸಿದ ಗ್ರಾಮದ ಹಲವಾರು ಪೋಷಕರು ತಮ್ಮ ಮಕ್ಕಳಿಗೆ ಇಲ್ಲಿಯೇ ಶಿಕ್ಷಣ ಕೊಡಿಸಲು ಮುಂದಾಗಿದ್ದಾರೆ ಎನ್ನುತ್ತಾರೆ ಪೋಷಕ ಕುಮಾರ್.<br /> <br /> ಉತ್ತಮ ಪಾಠ ಬೋಧನೆ ಮಾಡಿ ಪೋಷಕರ ಮನಗೆದ್ದ ಶಾಲೆಯ ಆರು ಜನ ಶಿಕ್ಷಕರು ಗ್ರಾಮದ ಪ್ರಶಂಸೆಗೆ ಪಾತ್ರರಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>