<p><strong>ಮಧುಗಿರಿ:</strong> ಇದು ಕುಗ್ರಾಮ. ಎಂಬತ್ತಕ್ಕೂ ಹೆಚ್ಚು ಮನೆಗಳಿವೆ. ಆದರೆ ಯಾವೊಂದು ಕನಿಷ್ಠ ಸೌಲಭ್ಯವೂ ಇಲ್ಲಿಲ್ಲ... ಇದು ತಾಲ್ಲೂಕಿನ ಚಿಕ್ಕದಾಳವಾಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನಕಲೋಟಿ ದಲಿತ ಕಾಲೊನಿಯ ನೈಜ ಸ್ಥಿತಿ.<br /> <br /> ಎರಡು ವರ್ಷದ ಹಿಂದೆ ನೀರಿನ ಸಮಸ್ಯೆ ನೀಗಿಸಲು ಬೋರ್ ಕೊರೆದು ಎರಡು ಸಿಸ್ಟನ್ ಅಳವಡಿಸಲಾಗಿದೆ. ಆದರೆ ಒಂದೂ ದಿನವೂ ಅದರೊಳಗೆ ಒಂದು ಹನಿ ನೀರು ಹರಿಸಿಲ್ಲ. ಉಳಿದ ಎರಡು ಸಿಸ್ಟನ್ ಮುಂದೆ ನೀರಿಗಾಗಿ ಗಂಟೆಗಟ್ಟಲೇ ಕಾಯುವುದು ತಪ್ಪದು. ಕೈಪಂಪು ಕೆಟ್ಟಿವೆ. ಗ್ರಾಮದ ಜನತೆ ನೀರಿಗಾಗಿ ಹಾಹಾಕಾರ ಪಡುತ್ತಿರುವುದು ಈಗಲೂ ತಪ್ಪಿಲ್ಲ.<br /> <br /> ಮುಖ್ಯ ರಸ್ತೆಯಿಂದ ಕಾಲೊನಿ ಒಳಗೆ ಕೆಲದೂರ ಸಿಮೆಂಟ್ ರಸ್ತೆ ನಿರ್ಮಿಸಲಾಗಿದೆ. ಒಳ ಹೊಕ್ಕರೆ ಕಾಣುವುದೇ ಬೇರೆ. ರಸ್ತೆ ಬದಿ ದಟ್ಟ ಜಾಲಿ ಪೊದೆಗಳು, ಮನೆಗಳಿಗೆ ರಸ್ತೆಯೂ ಇಲ್ಲ. ಬೀದಿ ದೀಪ ವೂ ಇಲ್ಲ. ಮನೆಗೆ ಹಾವು- ಚೇಳು ಬರುವುದೇ ಹೆಚ್ಚು.<br /> <br /> ಶೌಚಕ್ಕೆ ಬಯಲೇ ಗತಿ. ಸಾಕಷ್ಟು ಕುಟುಂಬಗಳು ಈಗಲೂ ಗುಡಿಸಲುಗಳಲ್ಲೇ ಬದುಕು ಸಾಗಿಸುತ್ತಿವೆ. ಕಾಲೊನಿ ಎದುರಿಸುತ್ತಿರುವ ಸಮಸ್ಯೆಗಳ ಸರಮಾಲೆಯನ್ನು ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಚಿಕ್ಕಾಸಿನ ಪ್ರಯೋಜನ ಸಿಕ್ಕಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿ ನಾಗಕೃಷ್ಣಯ್ಯ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಧುಗಿರಿ:</strong> ಇದು ಕುಗ್ರಾಮ. ಎಂಬತ್ತಕ್ಕೂ ಹೆಚ್ಚು ಮನೆಗಳಿವೆ. ಆದರೆ ಯಾವೊಂದು ಕನಿಷ್ಠ ಸೌಲಭ್ಯವೂ ಇಲ್ಲಿಲ್ಲ... ಇದು ತಾಲ್ಲೂಕಿನ ಚಿಕ್ಕದಾಳವಾಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನಕಲೋಟಿ ದಲಿತ ಕಾಲೊನಿಯ ನೈಜ ಸ್ಥಿತಿ.<br /> <br /> ಎರಡು ವರ್ಷದ ಹಿಂದೆ ನೀರಿನ ಸಮಸ್ಯೆ ನೀಗಿಸಲು ಬೋರ್ ಕೊರೆದು ಎರಡು ಸಿಸ್ಟನ್ ಅಳವಡಿಸಲಾಗಿದೆ. ಆದರೆ ಒಂದೂ ದಿನವೂ ಅದರೊಳಗೆ ಒಂದು ಹನಿ ನೀರು ಹರಿಸಿಲ್ಲ. ಉಳಿದ ಎರಡು ಸಿಸ್ಟನ್ ಮುಂದೆ ನೀರಿಗಾಗಿ ಗಂಟೆಗಟ್ಟಲೇ ಕಾಯುವುದು ತಪ್ಪದು. ಕೈಪಂಪು ಕೆಟ್ಟಿವೆ. ಗ್ರಾಮದ ಜನತೆ ನೀರಿಗಾಗಿ ಹಾಹಾಕಾರ ಪಡುತ್ತಿರುವುದು ಈಗಲೂ ತಪ್ಪಿಲ್ಲ.<br /> <br /> ಮುಖ್ಯ ರಸ್ತೆಯಿಂದ ಕಾಲೊನಿ ಒಳಗೆ ಕೆಲದೂರ ಸಿಮೆಂಟ್ ರಸ್ತೆ ನಿರ್ಮಿಸಲಾಗಿದೆ. ಒಳ ಹೊಕ್ಕರೆ ಕಾಣುವುದೇ ಬೇರೆ. ರಸ್ತೆ ಬದಿ ದಟ್ಟ ಜಾಲಿ ಪೊದೆಗಳು, ಮನೆಗಳಿಗೆ ರಸ್ತೆಯೂ ಇಲ್ಲ. ಬೀದಿ ದೀಪ ವೂ ಇಲ್ಲ. ಮನೆಗೆ ಹಾವು- ಚೇಳು ಬರುವುದೇ ಹೆಚ್ಚು.<br /> <br /> ಶೌಚಕ್ಕೆ ಬಯಲೇ ಗತಿ. ಸಾಕಷ್ಟು ಕುಟುಂಬಗಳು ಈಗಲೂ ಗುಡಿಸಲುಗಳಲ್ಲೇ ಬದುಕು ಸಾಗಿಸುತ್ತಿವೆ. ಕಾಲೊನಿ ಎದುರಿಸುತ್ತಿರುವ ಸಮಸ್ಯೆಗಳ ಸರಮಾಲೆಯನ್ನು ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಚಿಕ್ಕಾಸಿನ ಪ್ರಯೋಜನ ಸಿಕ್ಕಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿ ನಾಗಕೃಷ್ಣಯ್ಯ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>