<p><strong>ಬೆಂಗಳೂರು: `</strong>ಗ್ಲಾಕೊಮಾದ ಕುರಿತು ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮಾರ್ಚ್ 11ರಂದು ಭಾನುವಾರ ಸ್ವಾತಂತ್ರ್ಯ ಉದ್ಯಾನದಿಂದ ಎಂ.ಜಿ.ರಸ್ತೆಯವರೆಗೆ ಜಾಥಾ ಆಯೋಜಿಸಲಾ ಗಿದ್ದು, ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಉದ್ಘಾಟಿಸಲಿದ್ದಾರೆ~ ಎಂದು ಬೆಂಗಳೂರು ಅಪ್ತಲಮಿಕ್ ಸೊಸೈಟಿಯ ಕಾರ್ಯದರ್ಶಿ ಡಾ. ಎಂ.ಎಸ್. ರವೀಂದ್ರ ತಿಳಿಸಿದರು.<br /> <br /> `ಯಾವುದೇ ರೀತಿಯ ಕಣ್ಣಿನ ಸಮಸ್ಯೆಗಳು ಎದುರಾದಾಗ ವಿಳಂಬ ಮಾಡದೇ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಿ. ಯಾವುದೇ ನಿರ್ದಿಷ್ಟ ಕಾರಣಗಳಿಲ್ಲದೇ, ಮುನ್ಸೂಚನೆ ನೀಡದೇ ಗ್ಲಾಕೊಮಾ ಕಾಯಿಲೆಯು ಕಣ್ಣನ್ನು ಆವರಿಸಬಹುದು~ ಎಂದು ಹೇಳಿದರು.<br /> <br /> `ಕಣ್ಣಿನ ದೃಷ್ಟಿಯ ನರಕ್ಕೆ ಆಗುವ ಹಾನಿಯಿಂದ ಗ್ಲಾಕೋಮಾ ಕಾಯಿಲೆ ಉಂಟಾಗುತ್ತದೆ. 40 ವರ್ಷದ ಬಳಿಕ ವರ್ಷದಲ್ಲಿ ಎರಡು ಸಲ ಕಣ್ಣಿನ ಪೂರ್ಣ ಪರೀಕ್ಷೆ ಮಾಡಿಸುವುದು ಒಳಿತು. ಆರಂಭಿಕ ಹಂತದಲ್ಲಿ ಈ ಕಾಯಿಲೆಯನ್ನು ಪತ್ತೆ ಹಚ್ಚಿದರೆ ದೃಷ್ಟಿ ಕಳೆದುಕೊಳ್ಳುವುದನ್ನು ತಪ್ಪಿಸಬಹುದು~ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.<br /> <br /> `ಕಣ್ಣಿನ ನಾಳಗಳಲ್ಲಿ ಉತ್ಪತ್ತಿಯಾಗುವ ದ್ರವ ಖಾಲಿಯಾಗಿ ಮತ್ತೆ ತುಂಬುತ್ತದೆ. ಆದರೆ ಈ ದ್ರವ ಖಾಲಿಯಾಗದಿ ದ್ದಾಗ ಒತ್ತಡ ಹೆಚ್ಚಾಗಿ ದೃಷ್ಟಿಯ ನರಕ್ಕೆ ಹಾನಿಯಾಗುತ್ತದೆ. ಇದು ಗ್ಲಾಕೊಮಾ ದಂತಹ ಕಾಯಿಲೆಗೆ ಅವಕಾಶ ಮಾಡಿ ಕೊಡುತ್ತದೆ~ ಎಂದು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: `</strong>ಗ್ಲಾಕೊಮಾದ ಕುರಿತು ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮಾರ್ಚ್ 11ರಂದು ಭಾನುವಾರ ಸ್ವಾತಂತ್ರ್ಯ ಉದ್ಯಾನದಿಂದ ಎಂ.ಜಿ.ರಸ್ತೆಯವರೆಗೆ ಜಾಥಾ ಆಯೋಜಿಸಲಾ ಗಿದ್ದು, ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಉದ್ಘಾಟಿಸಲಿದ್ದಾರೆ~ ಎಂದು ಬೆಂಗಳೂರು ಅಪ್ತಲಮಿಕ್ ಸೊಸೈಟಿಯ ಕಾರ್ಯದರ್ಶಿ ಡಾ. ಎಂ.ಎಸ್. ರವೀಂದ್ರ ತಿಳಿಸಿದರು.<br /> <br /> `ಯಾವುದೇ ರೀತಿಯ ಕಣ್ಣಿನ ಸಮಸ್ಯೆಗಳು ಎದುರಾದಾಗ ವಿಳಂಬ ಮಾಡದೇ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಿ. ಯಾವುದೇ ನಿರ್ದಿಷ್ಟ ಕಾರಣಗಳಿಲ್ಲದೇ, ಮುನ್ಸೂಚನೆ ನೀಡದೇ ಗ್ಲಾಕೊಮಾ ಕಾಯಿಲೆಯು ಕಣ್ಣನ್ನು ಆವರಿಸಬಹುದು~ ಎಂದು ಹೇಳಿದರು.<br /> <br /> `ಕಣ್ಣಿನ ದೃಷ್ಟಿಯ ನರಕ್ಕೆ ಆಗುವ ಹಾನಿಯಿಂದ ಗ್ಲಾಕೋಮಾ ಕಾಯಿಲೆ ಉಂಟಾಗುತ್ತದೆ. 40 ವರ್ಷದ ಬಳಿಕ ವರ್ಷದಲ್ಲಿ ಎರಡು ಸಲ ಕಣ್ಣಿನ ಪೂರ್ಣ ಪರೀಕ್ಷೆ ಮಾಡಿಸುವುದು ಒಳಿತು. ಆರಂಭಿಕ ಹಂತದಲ್ಲಿ ಈ ಕಾಯಿಲೆಯನ್ನು ಪತ್ತೆ ಹಚ್ಚಿದರೆ ದೃಷ್ಟಿ ಕಳೆದುಕೊಳ್ಳುವುದನ್ನು ತಪ್ಪಿಸಬಹುದು~ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.<br /> <br /> `ಕಣ್ಣಿನ ನಾಳಗಳಲ್ಲಿ ಉತ್ಪತ್ತಿಯಾಗುವ ದ್ರವ ಖಾಲಿಯಾಗಿ ಮತ್ತೆ ತುಂಬುತ್ತದೆ. ಆದರೆ ಈ ದ್ರವ ಖಾಲಿಯಾಗದಿ ದ್ದಾಗ ಒತ್ತಡ ಹೆಚ್ಚಾಗಿ ದೃಷ್ಟಿಯ ನರಕ್ಕೆ ಹಾನಿಯಾಗುತ್ತದೆ. ಇದು ಗ್ಲಾಕೊಮಾ ದಂತಹ ಕಾಯಿಲೆಗೆ ಅವಕಾಶ ಮಾಡಿ ಕೊಡುತ್ತದೆ~ ಎಂದು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>