<p>`ಟೈಗರ್~ ಮನ್ಸೂರ್ ಅಲಿ ಖಾನ್ ಪಟೌಡಿ, ಭಾರತ ಕ್ರಿಕೆಟ್ ಕ್ಷೇತ್ರ ಕಂಡ `ಶ್ರೇಷ್ಠ ನಾಯಕ~. ಕ್ರೀಡಾ ಜೀವನದಲ್ಲಿ ಮಾಡಿದ ಸಾಧನೆಯೂ ಹಿರಿದು. <br /> <br /> ಆಟದ ತಾಕತ್ತು ಏನೆಂದು ನೋಡಿದವರಿಗೆ ಗೊತ್ತು. ಆದರೆ ಆಟದ ಅಂಗಳದ ಹೊರಗೆ ಮಾತ್ರ ನೋಡಿದ ನಮ್ಮ ತಲೆಮಾರಿನವರಿಗೆ ಅವರ ಸ್ನೇಹಪರ ಗುಣ ಮಾತ್ರ ಗೊತ್ತು. ಅದೇ ಮಹತ್ವದ್ದು. <br /> <br /> ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ, ದೌಲತ್ತಿನ ಬಲವಿದ್ದರೂ ಬಿಗುಮಾನವಂತೂ ಒಂದಿಷ್ಟೂ ಇರಲಿಲ್ಲ. ಹಸನ್ಮುಖಿಯಾಗಿ ಎಲ್ಲರೊಂದಿಗೆ ಬೆರೆಯುತ್ತ ಜನರ ಮನದ `ನವಾಬ್~ ಎನಿಸಿದ್ದರು. ಆಟದ ಅಂಗಳದಾಚೆಗೂ ಹೊಳೆದ ಕ್ರಿಕೆಟಿಗ ಪಟೌಡಿ ಕುರಿತು ಒಂದಿಷ್ಟು ವಿಶೇಷಗಳನ್ನು ಪದಗಳ ಸಾಲಿನಲ್ಲಿ ಜೋಡಿಸಿಡಲು ಇಲ್ಲಿ ಪ್ರಯತ್ನ ಮಾಡಲಾಗಿದೆ.<br /> <br /> <strong>ಮನಗೆದ್ದ ನವಾಬ್:</strong> ಹರಿಯಾಣ ರಾಜ್ಯದ ಗುಡಗಾಂವ್ ಜಿಲ್ಲೆಯ ಪಟೌಡಿ ಇದು ಮನ್ಸೂರ್ ಅಲಿ ಅವರ ಪೂರ್ವಜರ ನೆಲೆ. ಅದೇ ಪ್ರಾಂತ್ಯದ ಒಂಬತ್ತನೇ ಹಾಗೂ ಕೊನೆಯ ನವಾಬ ಕೂಡ ಎನಿಸಿಕೊಂಡರು.<br /> <br /> 1971ರಲ್ಲಿ ಹೊಸ ಕಾನೂನು ಬಂದು ಎಲ್ಲ ರಾಜಪದವಿಗಳು ಅಳಿದು ಹೋದವು. ಆದರೆ ಇವರು ಮಾತ್ರ `ಜನರ ಮನದ ನವಾಬ್~ ಆಗಿಯೇ ಉಳಿದರು. ತಮ್ಮ ಪೂರ್ವಿಕರ ನೆಲೆಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿಸುವ ಮೂಲಕ ಮೆಚ್ಚುಗೆ ಗಳಿಸಿದರು. `ಟೈಗರ್~ ಆಗಾಗ ತಮ್ಮ ಕುಟುಂಬದೊಂದಿಗೆ ಬಂದು ಪಟೌಡಿಯ ಹವೇಲಿಯಲ್ಲಿ ತಂಗುತ್ತಿದ್ದರು. <br /> <br /> ನವಾಬ್ಗಿರಿ ಇಲ್ಲದಿದ್ದರೂ `ನವಾಬ್ ಕಾ ಶಾನ್ ಥಾ~ ಎಂದು ಪಟೌಡಿ ಜನರು ತಮ್ಮೂರಿನ ಹೆಮ್ಮೆಯ ಕ್ರಿಕೆಟಿಗನ ಅಂತಿಮ ಸಂಸ್ಕಾರದ ಸಂದರ್ಭದಲ್ಲಿ ಹೇಳಿದ ಮಾತು ಮನತಟ್ಟಿತು. ಖ್ಯಾತಿಯ ಎತ್ತರಕ್ಕೆ ಏರಿದರೂ ತಮ್ಮೂರಿನವರಿಗಾಗಿ ಮಿಡಿದ ಹೃದಯದ ಸ್ಮರಣೆ ಇದೆಂದು ಹೇಳಬಹುದು.<br /> <br /> <strong>ನೆನಪಿನಲ್ಲುಳಿದ ರೂಪದರ್ಶಿ:</strong> ಪಟೌಡಿ ಪ್ರಭಾವಿ ಕ್ರಿಕೆಟಿಗ. ಆದರೆ 1975ರ ನಂತರದ ತಲೆಮಾರಿನವರ ಮನಸ್ಸಿನಲ್ಲಿ ಆಳವಾಗಿ ಇಳಿದಿದ್ದು ಒಬ್ಬ ರೂಪದರ್ಶಿಯಾಗಿದೆ. <br /> <br /> ಹೌದು; ಅವರು ಡಿಗ್ಜಾಮ್ ಜಾಹೀರಾತಿನಲ್ಲಿ ಅದೆಷ್ಟೊಂದು ವರ್ಷಗಳ ಕಾಲ ಟೆಲಿವಿಷನ್ ಹಾಗೂ ಮುದ್ರಣ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದರು. ವಿಶಿಷ್ಟವಾದ ಗತ್ತಿನೊಂದಿಗೆ ಮುಗುಳುನಗೆ ಬೀರುತ್ತಿದ್ದ ಅವರು ಇತ್ತೀಚೆಗೆ `ಗೋಲ್ಡ್ ಕಾಫಿ~ ಜಾಹೀರಾತಿನಲ್ಲಿಯೂ ಗಮನ ಸೆಳೆದಿದ್ದರು.<br /> <br /> <strong>ಒಳ್ಳೆಯ ತಂದೆ:</strong> ಕ್ರಿಕೆಟ್ ಕ್ಷೇತ್ರದಲ್ಲಿ ತಾವು ಖ್ಯಾತಿ ಗಳಿಸಿದ್ದರೂ ತಮ್ಮ ಮಗ ಸೈಫ್ ಅಲಿ ಖಾನ್ ಕೂಡ ಕ್ರಿಕೆಟಿಗನೇ ಆಗಬೇಕೆಂದು ಪಟೌಡಿ ಬಯಸಲಿಲ್ಲ. ಮಕ್ಕಳು ಇಷ್ಟವಾದ ವೃತ್ತಿಯನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ನೀಡಿದರು. ಸೈಫ್ ಹಾಗೂ ಸೋಹಾ ತಮ್ಮ ತಾಯಿಯಂತೆ ಸಿನಿಮಾ ರಂಗವನ್ನು ಆಯ್ಕೆ ಮಾಡಿಕೊಂಡರು. <br /> <br /> ಕೊನೆಯ ಮಗಳು ಸಬಾ ಆಭರಣ ವಿನ್ಯಾಸಕಿಯಾದರು. ಸುಮಾರು ಐದು ವರ್ಷಗಳ ಹಿಂದೆ ಮೊಹಾಲಿಯಲ್ಲಿ ತಮ್ಮ ಮಕ್ಕಳ ಕುರಿತು ಸುದ್ದಿಗಾರರು ಕೇಳಿದ್ದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಟೈಗರ್ `ಮನಸ್ಸು ಒಪ್ಪುವ ವೃತ್ತಿ ಹಾಗೂ ಪ್ರವೃತ್ತಿಯೇ ಸೂಕ್ತ. ಈ ವಿಷಯದಲ್ಲಿ ನನ್ನ ಮಕ್ಕಳಿಗೆ ಆಯ್ಕೆಗೆ ಮುಕ್ತ ಅವಕಾಶ ನೀಡಿದ್ದೇನೆ~ ಎಂದಿದ್ದರು. ಮಕ್ಕಳ ಮೇಲೆ ತಮ್ಮ ಆಸಕ್ತಿಯ ವಿಷಯಗಳನ್ನು ಹೇರದ ಅವರು `ಒಳ್ಳೆಯ ತಂದೆ~ ಎನಿಸಿಕೊಂಡರು.<br /> <br /> <strong>ಬಾಲಿವುಡ್ ಸ್ನೇಹ:</strong> ತಮ್ಮ ಪತ್ನಿ ಶರ್ಮಿಳಾ ಸಿನಿಮಾ ತಾರೆ ಆಗಿದ್ದರಿಂದ ಸಹಜವಾಗಿಯೇ ಬಾಲಿವುಡ್ ಜನರ ಸಂಪರ್ಕ ಮನ್ಸೂರ್ ಅಲಿ ಅವರಿಗೆ ಇತ್ತು. ಆದರೆ ಇದು ಕೇವಲ ರಜತ ಪರದೆಯಲ್ಲಿ ಮಿಂಚುವ ನಟಿಯ ಪತಿ ಎನ್ನುವ ಕಾರಣಕ್ಕಾಗಿ ಅಲ್ಲ.<br /> <br /> ಕ್ರಿಕೆಟಿಗರಾಗಿ ಅವರು ಹೊಂದಿದ್ದ ಖ್ಯಾತಿಯಿಂದ. ಬಾಲಿವುಡ್ ಜನರು ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ `ಟೈಗರ್~ ಇದ್ದರೆ ವಿಶಿಷ್ಟ ಕಳೆ! ಇದರಿಂದಾಗಿಯೇ ಹೆಚ್ಚಿನ ಸಿನಿಮಾ ಸಮಾರಂಭಗಳಿಗೆ ಪಟೌಡಿಗೆ ವಿಶೇಷ ಆಹ್ವಾನ ಇರುತ್ತಿತ್ತು. <br /> <br /> ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್, ಖ್ಯಾತ ನಿರ್ದೇಶಕ ಮನಮೋಹನ್ ದೇಸಾಯಿ ಅವರಂಥ ಹಳಬರು ಮಾತ್ರವಲ್ಲ ಹೊಸ ತಲೆಮಾರಿನ ನಿರ್ದೇಶಕರಾದ ನಾಗೇಶ್ ಕುಕುನೂರ್ ಹಾಗೂ ಮಧುರ್ ಭಂಡಾರ್ಕರ್ ಕೂಡ `ಚುಂಬಕದಂತೆ ಸೆಳೆಯುವ ವ್ಯಕ್ತಿತ್ವ~ದ ಮಾಜಿ ಕ್ರಿಕೆಟಿಗ ಇದ್ದರೆ ಬಾಲಿವುಡ್ ಪಾರ್ಟಿಗಳ ಮೌಲ್ಯ ಹೇಗೆ ಹೆಚ್ಚುತಿತ್ತು ಎನ್ನುವುದನ್ನು ಸ್ಮರಿಸುತ್ತಾರೆ. `ಸಮಯಪ್ರಜ್ಞೆಯುಳ್ಳ ಮಾತುಗಾರಿಕೆಯೇ ಅಪಾರ ಸ್ನೇಹಿತರನ್ನು ಗಳಿಸಲು ಕಾರಣ~ ಎಂದು ಪಟೌಡಿ ಗುಣವನ್ನು ಬಚ್ಚನ್ ಕೂಡ ಕೊಂಡಾಡಿದ್ದಾರೆ.<br /> <br /> <strong>ಸಂಭ್ರಮವಿಲ್ಲದ ಜನ್ಮದಿನ: </strong>ಮನ್ಸೂರ್ ಅಲಿ ಖಾನ್ ಪಟೌಡಿ ಜನಿಸಿದ್ದು 5ನೇ ಜನವರಿ 1941ರಲ್ಲಿ. ಅವರ ಹನ್ನೊಂದನೇ ಹುಟ್ಟುಹಬ್ಬದ ದಿನದಂದೇ ತಂದೆ ಇಫ್ತಿಕಾರ್ ಅಲಿ ಖಾನ್ ಪಟೌಡಿ (5ನೇ ಜನವರಿ 1952) ನಿಧನರಾದರು. <br /> <br /> ಇದೇ ಕಾರಣಕ್ಕಾಗಿ ಆನಂತರದಿಂದ ಮನ್ಸೂರ್ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳಲಿಲ್ಲ. ಗೆಳೆಯರ ಹಾಗೂ ಅಭಿಮಾನಿಗಳ ಒತ್ತಡವಿದ್ದರೂ ಅವರೆಂದೂ ಆ ದಿನವನ್ನು ಔತಣಕೂಟ ಆಯೋಜಿಸುವ ಮೂಲಕ ಕಳೆಯಲಿಲ್ಲ. <br /> <br /> ತಮ್ಮ ತಂದೆಯ ಸಾವಿನ ನಂತರ ಅವರು 59 ಜನ್ಮದಿನಗಳನ್ನು ಆಚರಿಸಿಕೊಳ್ಳಲಿಲ್ಲ. `ವಾಲಿದ್ ಸಾಬ್ (ಹಿರಿಯರ) ನೆನಪಿನಲ್ಲಿ ಈ ದಿನವನ್ನು ಕಳೆಯಲು ಬಯಸುತ್ತೇನೆ~ ಎಂದು ಅವರೇ ಒಮ್ಮೆ ಹೇಳಿಕೊಂಡಿದ್ದನ್ನು ಸ್ಮರಿಸಬಹುದು.<br /> <br /> <strong>ಬೇಟೆ ಹವ್ಯಾಸ:</strong> ನವಾಬರ ಕುಟುಂಬದವರಾದ್ದರಿಂದ ಬೇಟೆ ಆಡುವ ಹವ್ಯಾಸ ಸಹಜವೆನಿಸಿತ್ತು. ವಿದೇಶ ಪ್ರವಾಸಕ್ಕೆ ಹೋದಾಗಲು ಕೂಡ ಪಟೌಡಿ ಅಲ್ಲಿಯೂ ತುಪಾಕಿ ಹಿಡಿದುಕೊಂಡು ಕಾಡಿಗೆ ಹೋಗುತ್ತಿದ್ದರು. <br /> <br /> 1962ರ ಏಪ್ರಿಲ್ನಲ್ಲಿ ವೆಸ್ಟ್ ಇಂಡೀಸ್ನಲ್ಲಿ ಟೆಸ್ಟ್ ಸರಣಿ ಆಡಲು ಭಾರತ ತಂಡ ಹೋಗಿತ್ತು. ಆಗ ತಂಡಕ್ಕೆ `ಟೈಗರ್~ ನಾಯಕತ್ವ. ಪಂದ್ಯಗಳ ನಡುವೆ ಬಿಡುವು ಇದ್ದಾಗ ಒಮ್ಮೆ ಕಾಡಿಗೆ ಹೋಗಿ ಪ್ರಾಣಿಯೊಂದನ್ನು ಬೇಟೆ ಆಡಿದರು. <br /> <br /> ಆಗಲೇ ಅವರಿಗೆ ಸಹ ಆಟಗಾರರೊಂದಿಗೆ ಕೀಟಲೆ ಮಾಡುವ ಯೋಚನೆಯೂ ಹೊಳೆಯಿತು. ಆಗ ತಾವು ಬೇಟೆಯಾಡಿದ್ದ ಪ್ರಾಣಿಯನ್ನು ಬಟ್ಟೆಯಲ್ಲಿ ಸುತ್ತಿ ಸಹ ಆಟಗಾರನ ಪಕ್ಕದಲ್ಲಿ ಹಾಕಿದರು. <br /> <br /> ಎಚ್ಚೆತ್ತ ಆ ಆಟಗಾರ ಬೆಚ್ಚಿಬಿದ್ದಾಗ ಅಲ್ಲಿ ನಗೆಯ ಹೊಳೆ ಹರಿದಿತ್ತು. ಆದರೆ ಬೇಟೆ ಆಡುವ ಹವ್ಯಾಸವು ಇಂಥ ಸಂತಸವನ್ನು ನೀಡಿದ್ದರ ಜೊತೆಗೆ ಪಟೌಡಿ ಜೀವನದಲ್ಲಿ ಬಿರುಗಾಳಿಯನ್ನು ಕೂಡ ಎಬ್ಬಿಸಿತ್ತು ಎನ್ನುವುದನ್ನು ಮರೆಯುವಂತಿಲ್ಲ. <br /> <br /> ಅಳಿವಿನಂಚಿನಲ್ಲಿರುವ ಕೃಷ್ಣಮೃಗವನ್ನು ಬೇಟೆಯಾಡಿದ ಆರೋಪದ ಮೇಲೆ ಅವರು 2005ರಲ್ಲಿ ಬಂಧನಕ್ಕೊಳಗಾಗಿ ಎರಡು ದಿನ ಜೈಲಿನಲ್ಲಿ ಕಳೆಯಬೇಕಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ಟೈಗರ್~ ಮನ್ಸೂರ್ ಅಲಿ ಖಾನ್ ಪಟೌಡಿ, ಭಾರತ ಕ್ರಿಕೆಟ್ ಕ್ಷೇತ್ರ ಕಂಡ `ಶ್ರೇಷ್ಠ ನಾಯಕ~. ಕ್ರೀಡಾ ಜೀವನದಲ್ಲಿ ಮಾಡಿದ ಸಾಧನೆಯೂ ಹಿರಿದು. <br /> <br /> ಆಟದ ತಾಕತ್ತು ಏನೆಂದು ನೋಡಿದವರಿಗೆ ಗೊತ್ತು. ಆದರೆ ಆಟದ ಅಂಗಳದ ಹೊರಗೆ ಮಾತ್ರ ನೋಡಿದ ನಮ್ಮ ತಲೆಮಾರಿನವರಿಗೆ ಅವರ ಸ್ನೇಹಪರ ಗುಣ ಮಾತ್ರ ಗೊತ್ತು. ಅದೇ ಮಹತ್ವದ್ದು. <br /> <br /> ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ, ದೌಲತ್ತಿನ ಬಲವಿದ್ದರೂ ಬಿಗುಮಾನವಂತೂ ಒಂದಿಷ್ಟೂ ಇರಲಿಲ್ಲ. ಹಸನ್ಮುಖಿಯಾಗಿ ಎಲ್ಲರೊಂದಿಗೆ ಬೆರೆಯುತ್ತ ಜನರ ಮನದ `ನವಾಬ್~ ಎನಿಸಿದ್ದರು. ಆಟದ ಅಂಗಳದಾಚೆಗೂ ಹೊಳೆದ ಕ್ರಿಕೆಟಿಗ ಪಟೌಡಿ ಕುರಿತು ಒಂದಿಷ್ಟು ವಿಶೇಷಗಳನ್ನು ಪದಗಳ ಸಾಲಿನಲ್ಲಿ ಜೋಡಿಸಿಡಲು ಇಲ್ಲಿ ಪ್ರಯತ್ನ ಮಾಡಲಾಗಿದೆ.<br /> <br /> <strong>ಮನಗೆದ್ದ ನವಾಬ್:</strong> ಹರಿಯಾಣ ರಾಜ್ಯದ ಗುಡಗಾಂವ್ ಜಿಲ್ಲೆಯ ಪಟೌಡಿ ಇದು ಮನ್ಸೂರ್ ಅಲಿ ಅವರ ಪೂರ್ವಜರ ನೆಲೆ. ಅದೇ ಪ್ರಾಂತ್ಯದ ಒಂಬತ್ತನೇ ಹಾಗೂ ಕೊನೆಯ ನವಾಬ ಕೂಡ ಎನಿಸಿಕೊಂಡರು.<br /> <br /> 1971ರಲ್ಲಿ ಹೊಸ ಕಾನೂನು ಬಂದು ಎಲ್ಲ ರಾಜಪದವಿಗಳು ಅಳಿದು ಹೋದವು. ಆದರೆ ಇವರು ಮಾತ್ರ `ಜನರ ಮನದ ನವಾಬ್~ ಆಗಿಯೇ ಉಳಿದರು. ತಮ್ಮ ಪೂರ್ವಿಕರ ನೆಲೆಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿಸುವ ಮೂಲಕ ಮೆಚ್ಚುಗೆ ಗಳಿಸಿದರು. `ಟೈಗರ್~ ಆಗಾಗ ತಮ್ಮ ಕುಟುಂಬದೊಂದಿಗೆ ಬಂದು ಪಟೌಡಿಯ ಹವೇಲಿಯಲ್ಲಿ ತಂಗುತ್ತಿದ್ದರು. <br /> <br /> ನವಾಬ್ಗಿರಿ ಇಲ್ಲದಿದ್ದರೂ `ನವಾಬ್ ಕಾ ಶಾನ್ ಥಾ~ ಎಂದು ಪಟೌಡಿ ಜನರು ತಮ್ಮೂರಿನ ಹೆಮ್ಮೆಯ ಕ್ರಿಕೆಟಿಗನ ಅಂತಿಮ ಸಂಸ್ಕಾರದ ಸಂದರ್ಭದಲ್ಲಿ ಹೇಳಿದ ಮಾತು ಮನತಟ್ಟಿತು. ಖ್ಯಾತಿಯ ಎತ್ತರಕ್ಕೆ ಏರಿದರೂ ತಮ್ಮೂರಿನವರಿಗಾಗಿ ಮಿಡಿದ ಹೃದಯದ ಸ್ಮರಣೆ ಇದೆಂದು ಹೇಳಬಹುದು.<br /> <br /> <strong>ನೆನಪಿನಲ್ಲುಳಿದ ರೂಪದರ್ಶಿ:</strong> ಪಟೌಡಿ ಪ್ರಭಾವಿ ಕ್ರಿಕೆಟಿಗ. ಆದರೆ 1975ರ ನಂತರದ ತಲೆಮಾರಿನವರ ಮನಸ್ಸಿನಲ್ಲಿ ಆಳವಾಗಿ ಇಳಿದಿದ್ದು ಒಬ್ಬ ರೂಪದರ್ಶಿಯಾಗಿದೆ. <br /> <br /> ಹೌದು; ಅವರು ಡಿಗ್ಜಾಮ್ ಜಾಹೀರಾತಿನಲ್ಲಿ ಅದೆಷ್ಟೊಂದು ವರ್ಷಗಳ ಕಾಲ ಟೆಲಿವಿಷನ್ ಹಾಗೂ ಮುದ್ರಣ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದರು. ವಿಶಿಷ್ಟವಾದ ಗತ್ತಿನೊಂದಿಗೆ ಮುಗುಳುನಗೆ ಬೀರುತ್ತಿದ್ದ ಅವರು ಇತ್ತೀಚೆಗೆ `ಗೋಲ್ಡ್ ಕಾಫಿ~ ಜಾಹೀರಾತಿನಲ್ಲಿಯೂ ಗಮನ ಸೆಳೆದಿದ್ದರು.<br /> <br /> <strong>ಒಳ್ಳೆಯ ತಂದೆ:</strong> ಕ್ರಿಕೆಟ್ ಕ್ಷೇತ್ರದಲ್ಲಿ ತಾವು ಖ್ಯಾತಿ ಗಳಿಸಿದ್ದರೂ ತಮ್ಮ ಮಗ ಸೈಫ್ ಅಲಿ ಖಾನ್ ಕೂಡ ಕ್ರಿಕೆಟಿಗನೇ ಆಗಬೇಕೆಂದು ಪಟೌಡಿ ಬಯಸಲಿಲ್ಲ. ಮಕ್ಕಳು ಇಷ್ಟವಾದ ವೃತ್ತಿಯನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ನೀಡಿದರು. ಸೈಫ್ ಹಾಗೂ ಸೋಹಾ ತಮ್ಮ ತಾಯಿಯಂತೆ ಸಿನಿಮಾ ರಂಗವನ್ನು ಆಯ್ಕೆ ಮಾಡಿಕೊಂಡರು. <br /> <br /> ಕೊನೆಯ ಮಗಳು ಸಬಾ ಆಭರಣ ವಿನ್ಯಾಸಕಿಯಾದರು. ಸುಮಾರು ಐದು ವರ್ಷಗಳ ಹಿಂದೆ ಮೊಹಾಲಿಯಲ್ಲಿ ತಮ್ಮ ಮಕ್ಕಳ ಕುರಿತು ಸುದ್ದಿಗಾರರು ಕೇಳಿದ್ದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಟೈಗರ್ `ಮನಸ್ಸು ಒಪ್ಪುವ ವೃತ್ತಿ ಹಾಗೂ ಪ್ರವೃತ್ತಿಯೇ ಸೂಕ್ತ. ಈ ವಿಷಯದಲ್ಲಿ ನನ್ನ ಮಕ್ಕಳಿಗೆ ಆಯ್ಕೆಗೆ ಮುಕ್ತ ಅವಕಾಶ ನೀಡಿದ್ದೇನೆ~ ಎಂದಿದ್ದರು. ಮಕ್ಕಳ ಮೇಲೆ ತಮ್ಮ ಆಸಕ್ತಿಯ ವಿಷಯಗಳನ್ನು ಹೇರದ ಅವರು `ಒಳ್ಳೆಯ ತಂದೆ~ ಎನಿಸಿಕೊಂಡರು.<br /> <br /> <strong>ಬಾಲಿವುಡ್ ಸ್ನೇಹ:</strong> ತಮ್ಮ ಪತ್ನಿ ಶರ್ಮಿಳಾ ಸಿನಿಮಾ ತಾರೆ ಆಗಿದ್ದರಿಂದ ಸಹಜವಾಗಿಯೇ ಬಾಲಿವುಡ್ ಜನರ ಸಂಪರ್ಕ ಮನ್ಸೂರ್ ಅಲಿ ಅವರಿಗೆ ಇತ್ತು. ಆದರೆ ಇದು ಕೇವಲ ರಜತ ಪರದೆಯಲ್ಲಿ ಮಿಂಚುವ ನಟಿಯ ಪತಿ ಎನ್ನುವ ಕಾರಣಕ್ಕಾಗಿ ಅಲ್ಲ.<br /> <br /> ಕ್ರಿಕೆಟಿಗರಾಗಿ ಅವರು ಹೊಂದಿದ್ದ ಖ್ಯಾತಿಯಿಂದ. ಬಾಲಿವುಡ್ ಜನರು ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ `ಟೈಗರ್~ ಇದ್ದರೆ ವಿಶಿಷ್ಟ ಕಳೆ! ಇದರಿಂದಾಗಿಯೇ ಹೆಚ್ಚಿನ ಸಿನಿಮಾ ಸಮಾರಂಭಗಳಿಗೆ ಪಟೌಡಿಗೆ ವಿಶೇಷ ಆಹ್ವಾನ ಇರುತ್ತಿತ್ತು. <br /> <br /> ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್, ಖ್ಯಾತ ನಿರ್ದೇಶಕ ಮನಮೋಹನ್ ದೇಸಾಯಿ ಅವರಂಥ ಹಳಬರು ಮಾತ್ರವಲ್ಲ ಹೊಸ ತಲೆಮಾರಿನ ನಿರ್ದೇಶಕರಾದ ನಾಗೇಶ್ ಕುಕುನೂರ್ ಹಾಗೂ ಮಧುರ್ ಭಂಡಾರ್ಕರ್ ಕೂಡ `ಚುಂಬಕದಂತೆ ಸೆಳೆಯುವ ವ್ಯಕ್ತಿತ್ವ~ದ ಮಾಜಿ ಕ್ರಿಕೆಟಿಗ ಇದ್ದರೆ ಬಾಲಿವುಡ್ ಪಾರ್ಟಿಗಳ ಮೌಲ್ಯ ಹೇಗೆ ಹೆಚ್ಚುತಿತ್ತು ಎನ್ನುವುದನ್ನು ಸ್ಮರಿಸುತ್ತಾರೆ. `ಸಮಯಪ್ರಜ್ಞೆಯುಳ್ಳ ಮಾತುಗಾರಿಕೆಯೇ ಅಪಾರ ಸ್ನೇಹಿತರನ್ನು ಗಳಿಸಲು ಕಾರಣ~ ಎಂದು ಪಟೌಡಿ ಗುಣವನ್ನು ಬಚ್ಚನ್ ಕೂಡ ಕೊಂಡಾಡಿದ್ದಾರೆ.<br /> <br /> <strong>ಸಂಭ್ರಮವಿಲ್ಲದ ಜನ್ಮದಿನ: </strong>ಮನ್ಸೂರ್ ಅಲಿ ಖಾನ್ ಪಟೌಡಿ ಜನಿಸಿದ್ದು 5ನೇ ಜನವರಿ 1941ರಲ್ಲಿ. ಅವರ ಹನ್ನೊಂದನೇ ಹುಟ್ಟುಹಬ್ಬದ ದಿನದಂದೇ ತಂದೆ ಇಫ್ತಿಕಾರ್ ಅಲಿ ಖಾನ್ ಪಟೌಡಿ (5ನೇ ಜನವರಿ 1952) ನಿಧನರಾದರು. <br /> <br /> ಇದೇ ಕಾರಣಕ್ಕಾಗಿ ಆನಂತರದಿಂದ ಮನ್ಸೂರ್ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳಲಿಲ್ಲ. ಗೆಳೆಯರ ಹಾಗೂ ಅಭಿಮಾನಿಗಳ ಒತ್ತಡವಿದ್ದರೂ ಅವರೆಂದೂ ಆ ದಿನವನ್ನು ಔತಣಕೂಟ ಆಯೋಜಿಸುವ ಮೂಲಕ ಕಳೆಯಲಿಲ್ಲ. <br /> <br /> ತಮ್ಮ ತಂದೆಯ ಸಾವಿನ ನಂತರ ಅವರು 59 ಜನ್ಮದಿನಗಳನ್ನು ಆಚರಿಸಿಕೊಳ್ಳಲಿಲ್ಲ. `ವಾಲಿದ್ ಸಾಬ್ (ಹಿರಿಯರ) ನೆನಪಿನಲ್ಲಿ ಈ ದಿನವನ್ನು ಕಳೆಯಲು ಬಯಸುತ್ತೇನೆ~ ಎಂದು ಅವರೇ ಒಮ್ಮೆ ಹೇಳಿಕೊಂಡಿದ್ದನ್ನು ಸ್ಮರಿಸಬಹುದು.<br /> <br /> <strong>ಬೇಟೆ ಹವ್ಯಾಸ:</strong> ನವಾಬರ ಕುಟುಂಬದವರಾದ್ದರಿಂದ ಬೇಟೆ ಆಡುವ ಹವ್ಯಾಸ ಸಹಜವೆನಿಸಿತ್ತು. ವಿದೇಶ ಪ್ರವಾಸಕ್ಕೆ ಹೋದಾಗಲು ಕೂಡ ಪಟೌಡಿ ಅಲ್ಲಿಯೂ ತುಪಾಕಿ ಹಿಡಿದುಕೊಂಡು ಕಾಡಿಗೆ ಹೋಗುತ್ತಿದ್ದರು. <br /> <br /> 1962ರ ಏಪ್ರಿಲ್ನಲ್ಲಿ ವೆಸ್ಟ್ ಇಂಡೀಸ್ನಲ್ಲಿ ಟೆಸ್ಟ್ ಸರಣಿ ಆಡಲು ಭಾರತ ತಂಡ ಹೋಗಿತ್ತು. ಆಗ ತಂಡಕ್ಕೆ `ಟೈಗರ್~ ನಾಯಕತ್ವ. ಪಂದ್ಯಗಳ ನಡುವೆ ಬಿಡುವು ಇದ್ದಾಗ ಒಮ್ಮೆ ಕಾಡಿಗೆ ಹೋಗಿ ಪ್ರಾಣಿಯೊಂದನ್ನು ಬೇಟೆ ಆಡಿದರು. <br /> <br /> ಆಗಲೇ ಅವರಿಗೆ ಸಹ ಆಟಗಾರರೊಂದಿಗೆ ಕೀಟಲೆ ಮಾಡುವ ಯೋಚನೆಯೂ ಹೊಳೆಯಿತು. ಆಗ ತಾವು ಬೇಟೆಯಾಡಿದ್ದ ಪ್ರಾಣಿಯನ್ನು ಬಟ್ಟೆಯಲ್ಲಿ ಸುತ್ತಿ ಸಹ ಆಟಗಾರನ ಪಕ್ಕದಲ್ಲಿ ಹಾಕಿದರು. <br /> <br /> ಎಚ್ಚೆತ್ತ ಆ ಆಟಗಾರ ಬೆಚ್ಚಿಬಿದ್ದಾಗ ಅಲ್ಲಿ ನಗೆಯ ಹೊಳೆ ಹರಿದಿತ್ತು. ಆದರೆ ಬೇಟೆ ಆಡುವ ಹವ್ಯಾಸವು ಇಂಥ ಸಂತಸವನ್ನು ನೀಡಿದ್ದರ ಜೊತೆಗೆ ಪಟೌಡಿ ಜೀವನದಲ್ಲಿ ಬಿರುಗಾಳಿಯನ್ನು ಕೂಡ ಎಬ್ಬಿಸಿತ್ತು ಎನ್ನುವುದನ್ನು ಮರೆಯುವಂತಿಲ್ಲ. <br /> <br /> ಅಳಿವಿನಂಚಿನಲ್ಲಿರುವ ಕೃಷ್ಣಮೃಗವನ್ನು ಬೇಟೆಯಾಡಿದ ಆರೋಪದ ಮೇಲೆ ಅವರು 2005ರಲ್ಲಿ ಬಂಧನಕ್ಕೊಳಗಾಗಿ ಎರಡು ದಿನ ಜೈಲಿನಲ್ಲಿ ಕಳೆಯಬೇಕಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>