<p><strong>ಕೊಲಂಬೊ (ಪಿಟಿಐ):</strong> ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಮಾಹೇಲ ಜಯವರ್ಧನೆ ಹಾಗೂ ತಿಲಾನ್ ಸಮರವೀರ ವಿರುದ್ಧ ಉದ್ಭವಿಸಿರುವ ಮೋಸದಾಟ ಆರೋಪ ಪ್ರಕರಣವನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ (ಎಸ್ಎಲ್ಸಿ) ಅಲ್ಲಗಳೆದಿದೆ.<br /> <br /> ಪಾಕಿಸ್ತಾನ ವಿರುದ್ಧ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಜಯವರ್ಧನೆ (2) ಹಾಗೂ ಸಮರವೀರ (1) ಅಲ್ಪ ಮೊತ್ತಕ್ಕೆ ಔಟ್ ಆಗಿದ್ದು ಮೋಸದಾಟದ ಆಮಿಷಕ್ಕೆ ಒಳಗಾಗಿರುವ ಸಾಧ್ಯತೆ ಇದೆ ಎಂದು ಸರ್ಕಾರಿ ಸ್ವಾಮ್ಯದ ಟಿವಿ ಚಾನೆಲ್ವೊಂದು ಆರೋಪ ಮಾಡಿತ್ತು. ‘ಆದರೆ ಈ ಆರೋಪಕ್ಕೆ ಯಾವುದೇ ಆಧಾರವಿಲ್ಲ. ಇದು ತಂಡದ ಉತ್ಸಾಹಕ್ಕೆ ಧಕ್ಕೆ ತರುವ ಪ್ರಯತ್ನ’ ಎಂದು ಎಸ್ಎಲ್ಸಿ ತಿಳಿಸಿದೆ.<br /> <br /> ಉದ್ದೇಶಪೂರ್ವಕವಾಗಿ ಜಯವರ್ಧನೆ ಕಳಪೆ ಪ್ರದರ್ಶನ ನೀಡಿರಬಹುದು ಎಂದು ಟಿವಿ ಚಾನೆಲ್ನ ಕಾಮೆಂಟೇಟರ್ಗಳು ಆರೋಪಿಸಿದ್ದರು. ಈ ಪಂದ್ಯದಲ್ಲಿ ಲಂಕಾ 11 ರನ್ಗಳಿಂದ ಸೋಲು ಕಂಡಿತ್ತು.<br /> <br /> ‘ಆ ಚಾನೆಲ್ ತನ್ನ ಕಾರ್ಯಕ್ರಮವೊಂದರಲ್ಲಿ ಈ ರೀತಿ ಆರೋಪ ಮಾಡಿರುವುದು ದುರದೃಷ್ಟ ಕರ. ಇದರಿಂದ ಇಬ್ಬರು ಆಟಗಾರರ ಗೌರವಕ್ಕೆ ಧಕ್ಕೆಯಾಗಿದೆ. <br /> <br /> ಈ ವರದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಈ ಸಂಬಂಧ ನಾವು ಚಾನೆಲ್ನ ಅಧಿಕಾರಿಗಳೊಂದಿಗೆ ಮಾತನಾಡಲಿದ್ದೇವೆ’ ಎಂದು ಕ್ರಿಕೆಟ್ ಮಂಡಳಿ ಹೇಳಿದೆ.<br /> <br /> ಈಗಾಗಲೇ ಈ ಸಂಬಂಧ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಜಯವರ್ಧನೆ ಹೇಳಿದ್ದಾರೆ. ಈ ಘಟನೆ ಸಂಬಂಧ ಐಸಿಸಿ ಹಾಗೂ ಲಂಕಾ ಕ್ರಿಕೆಟ್ ಮಂಡಳಿ ತನಿಖೆ ನಡೆಸಲಿವೆ ಎಂಬ ವಿಷಯವನ್ನು ತಂಡದ ಮ್ಯಾನೇಜರ್ ಅನುರಾ ತೆನ್ನೆಕೂನ್ ಅಲ್ಲಗಳೆದಿದ್ದಾರೆ. <br /> <br /> ‘ಮಾಹೇಲ ಹಾಗೂ ತಿಲಾನ್ ಬಗ್ಗೆ ನಮಗೆ ಚೆನ್ನಾಗಿ ಗೊತ್ತು. ಹಾಗಾಗಿ ಈ ಬಗ್ಗೆ ಯಾವುದೇ ತನಿಖೆ ಬೇಡ. ಐಸಿಸಿ ಬಗ್ಗೆ ಹೇಳುವುದಾದರೆ ಈ ಬಗ್ಗೆ ತನಿಖೆ ನಡೆಸಲು ಅವರಿಗೆ ಹಕ್ಕಿದೆ. ಆದರೆ ಈ ಬಗ್ಗೆ ಅವರು ನಮ್ಮನ್ನು ಸಂಪರ್ಕಿಸಿಲ್ಲ’ ಎಂದು ಅವರು ವಿವರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಲಂಬೊ (ಪಿಟಿಐ):</strong> ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಮಾಹೇಲ ಜಯವರ್ಧನೆ ಹಾಗೂ ತಿಲಾನ್ ಸಮರವೀರ ವಿರುದ್ಧ ಉದ್ಭವಿಸಿರುವ ಮೋಸದಾಟ ಆರೋಪ ಪ್ರಕರಣವನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ (ಎಸ್ಎಲ್ಸಿ) ಅಲ್ಲಗಳೆದಿದೆ.<br /> <br /> ಪಾಕಿಸ್ತಾನ ವಿರುದ್ಧ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಜಯವರ್ಧನೆ (2) ಹಾಗೂ ಸಮರವೀರ (1) ಅಲ್ಪ ಮೊತ್ತಕ್ಕೆ ಔಟ್ ಆಗಿದ್ದು ಮೋಸದಾಟದ ಆಮಿಷಕ್ಕೆ ಒಳಗಾಗಿರುವ ಸಾಧ್ಯತೆ ಇದೆ ಎಂದು ಸರ್ಕಾರಿ ಸ್ವಾಮ್ಯದ ಟಿವಿ ಚಾನೆಲ್ವೊಂದು ಆರೋಪ ಮಾಡಿತ್ತು. ‘ಆದರೆ ಈ ಆರೋಪಕ್ಕೆ ಯಾವುದೇ ಆಧಾರವಿಲ್ಲ. ಇದು ತಂಡದ ಉತ್ಸಾಹಕ್ಕೆ ಧಕ್ಕೆ ತರುವ ಪ್ರಯತ್ನ’ ಎಂದು ಎಸ್ಎಲ್ಸಿ ತಿಳಿಸಿದೆ.<br /> <br /> ಉದ್ದೇಶಪೂರ್ವಕವಾಗಿ ಜಯವರ್ಧನೆ ಕಳಪೆ ಪ್ರದರ್ಶನ ನೀಡಿರಬಹುದು ಎಂದು ಟಿವಿ ಚಾನೆಲ್ನ ಕಾಮೆಂಟೇಟರ್ಗಳು ಆರೋಪಿಸಿದ್ದರು. ಈ ಪಂದ್ಯದಲ್ಲಿ ಲಂಕಾ 11 ರನ್ಗಳಿಂದ ಸೋಲು ಕಂಡಿತ್ತು.<br /> <br /> ‘ಆ ಚಾನೆಲ್ ತನ್ನ ಕಾರ್ಯಕ್ರಮವೊಂದರಲ್ಲಿ ಈ ರೀತಿ ಆರೋಪ ಮಾಡಿರುವುದು ದುರದೃಷ್ಟ ಕರ. ಇದರಿಂದ ಇಬ್ಬರು ಆಟಗಾರರ ಗೌರವಕ್ಕೆ ಧಕ್ಕೆಯಾಗಿದೆ. <br /> <br /> ಈ ವರದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಈ ಸಂಬಂಧ ನಾವು ಚಾನೆಲ್ನ ಅಧಿಕಾರಿಗಳೊಂದಿಗೆ ಮಾತನಾಡಲಿದ್ದೇವೆ’ ಎಂದು ಕ್ರಿಕೆಟ್ ಮಂಡಳಿ ಹೇಳಿದೆ.<br /> <br /> ಈಗಾಗಲೇ ಈ ಸಂಬಂಧ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಜಯವರ್ಧನೆ ಹೇಳಿದ್ದಾರೆ. ಈ ಘಟನೆ ಸಂಬಂಧ ಐಸಿಸಿ ಹಾಗೂ ಲಂಕಾ ಕ್ರಿಕೆಟ್ ಮಂಡಳಿ ತನಿಖೆ ನಡೆಸಲಿವೆ ಎಂಬ ವಿಷಯವನ್ನು ತಂಡದ ಮ್ಯಾನೇಜರ್ ಅನುರಾ ತೆನ್ನೆಕೂನ್ ಅಲ್ಲಗಳೆದಿದ್ದಾರೆ. <br /> <br /> ‘ಮಾಹೇಲ ಹಾಗೂ ತಿಲಾನ್ ಬಗ್ಗೆ ನಮಗೆ ಚೆನ್ನಾಗಿ ಗೊತ್ತು. ಹಾಗಾಗಿ ಈ ಬಗ್ಗೆ ಯಾವುದೇ ತನಿಖೆ ಬೇಡ. ಐಸಿಸಿ ಬಗ್ಗೆ ಹೇಳುವುದಾದರೆ ಈ ಬಗ್ಗೆ ತನಿಖೆ ನಡೆಸಲು ಅವರಿಗೆ ಹಕ್ಕಿದೆ. ಆದರೆ ಈ ಬಗ್ಗೆ ಅವರು ನಮ್ಮನ್ನು ಸಂಪರ್ಕಿಸಿಲ್ಲ’ ಎಂದು ಅವರು ವಿವರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>