<p><strong>* `ಕ್ಯಾಸಲ್ ಬೀದಿಯಲ್ಲಿ ಮತ್ತೆ ಕಲುಷಿತ ನೀರು~ ಎಂಬ ದೂರು.</strong><br /> ಸದರಿ ಸ್ಥಳದಲ್ಲಿ ಕೊಳವೆ ಮಾರ್ಗದಲ್ಲಿ ಚರಂಡಿ ನೀರು ಹರಿದು ಕಲುಷಿತಗೊಳ್ಳುತ್ತಿದ್ದನ್ನು ಗಮನಿಸಿ ಸದರಿ ಕೊಳವೆ ಮಾರ್ಗವನ್ನು ಬದಲಾಯಿಸಲಾಗಿದೆ. ಬ್ಲೀಚಿಂಗ್ ಪೌಡರ್ ಸಿಂಪಡಿಸಿ ಶುದ್ಧ ನೀರನ್ನು ಸರಬರಾಜು ಮಾಡಲಾಗುತ್ತಿದೆ.<br /> <br /> <strong>* `ಎಲ್ಲೆಲ್ಲೂ ರಸ್ತೆ ಅಗೆತ ಇದು ವಸಂತನಗರ~ ಎಂಬ ಆಕ್ಷೇಪ.</strong><br /> ಮಿಲ್ಲರ್ ರಸ್ತೆ, ವಸಂತನಗರ, ಹಾಗೂ ಜಸ್ಮಾಭವನ ಪ್ರದೇಶವನ್ನು ಜಲಮಂಡಲಿಯ ಎಂಜಿನಿಯರ್ ಪರಿಶೀಲಿಸಿದ್ದಾರೆ. ಸದರಿ ಸ್ಥಳದಲ್ಲಿ ಮಂಡಲಿಯ ವತಿಯಿಂದ ಹೊಸದಾಗಿ ಕೊಳವೆ ಮಾರ್ಗವನ್ನು ಅಳವಡಿಸುವ ಕಾಮಗಾರಿ ಕೆಲಸ ಪೂರ್ಣಗೊಂಡಿದ್ದು, ರಸ್ತೆಯನ್ನು ಯಥಾಸ್ಥಿತಿಗೆ ತರಲಾಗಿರುತ್ತದೆ. ಆದರೆ ಬಿಬಿಎಂಪಿ ವತಿಯಿಂದ ಡಾಂಬರೀಕರಣ ಕೆಲಸ ಬಾಕಿ ಇರುತ್ತದೆ.<br /> <br /> <strong>* `ನೀರಿಲ್ಲ ಸ್ವಾಮಿ~ ಎಂಬ ಆಕ್ಷೇಪ.</strong><br /> ವಿಲ್ಸನ್ ಗಾರ್ಡನ್ನ ಚಿನ್ನಯ್ಯನ ಪಾಳ್ಯ ಪ್ರದೇಶವನ್ನು ಜಲಮಂಡಲಿಯ ಎಂಜಿನಿಯರ್ ಪರಿಶೀಲಿಸ್ದ್ದಿದಾರೆ. ಸದರಿ ಸ್ಥಳದಲ್ಲಿ ಕೊಳವೆ ಮಾರ್ಗದಲ್ಲಿ ನೀರು ಸರಾಗವಾಗಿ ಹರಿಯದೆ ಅಡಚಣೆ ಉಂಟಾಗಿತ್ತು. ಮಂಡಲಿಯ ವತಿಯಿಂದ ಕೊಳವೆ ಮಾರ್ಗ ಸ್ವಚ್ಛತೆ ಕಾಮಗಾರಿ ಕೈಗೊಳ್ಳಲಾಗಿದೆ. ಅಲ್ಲಿ ಈಗ ಸಮರ್ಪಕವಾಗಿ ನೀರನ್ನು ಸರಬರಾಜು ಮಾಡಲಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>* `ಕ್ಯಾಸಲ್ ಬೀದಿಯಲ್ಲಿ ಮತ್ತೆ ಕಲುಷಿತ ನೀರು~ ಎಂಬ ದೂರು.</strong><br /> ಸದರಿ ಸ್ಥಳದಲ್ಲಿ ಕೊಳವೆ ಮಾರ್ಗದಲ್ಲಿ ಚರಂಡಿ ನೀರು ಹರಿದು ಕಲುಷಿತಗೊಳ್ಳುತ್ತಿದ್ದನ್ನು ಗಮನಿಸಿ ಸದರಿ ಕೊಳವೆ ಮಾರ್ಗವನ್ನು ಬದಲಾಯಿಸಲಾಗಿದೆ. ಬ್ಲೀಚಿಂಗ್ ಪೌಡರ್ ಸಿಂಪಡಿಸಿ ಶುದ್ಧ ನೀರನ್ನು ಸರಬರಾಜು ಮಾಡಲಾಗುತ್ತಿದೆ.<br /> <br /> <strong>* `ಎಲ್ಲೆಲ್ಲೂ ರಸ್ತೆ ಅಗೆತ ಇದು ವಸಂತನಗರ~ ಎಂಬ ಆಕ್ಷೇಪ.</strong><br /> ಮಿಲ್ಲರ್ ರಸ್ತೆ, ವಸಂತನಗರ, ಹಾಗೂ ಜಸ್ಮಾಭವನ ಪ್ರದೇಶವನ್ನು ಜಲಮಂಡಲಿಯ ಎಂಜಿನಿಯರ್ ಪರಿಶೀಲಿಸಿದ್ದಾರೆ. ಸದರಿ ಸ್ಥಳದಲ್ಲಿ ಮಂಡಲಿಯ ವತಿಯಿಂದ ಹೊಸದಾಗಿ ಕೊಳವೆ ಮಾರ್ಗವನ್ನು ಅಳವಡಿಸುವ ಕಾಮಗಾರಿ ಕೆಲಸ ಪೂರ್ಣಗೊಂಡಿದ್ದು, ರಸ್ತೆಯನ್ನು ಯಥಾಸ್ಥಿತಿಗೆ ತರಲಾಗಿರುತ್ತದೆ. ಆದರೆ ಬಿಬಿಎಂಪಿ ವತಿಯಿಂದ ಡಾಂಬರೀಕರಣ ಕೆಲಸ ಬಾಕಿ ಇರುತ್ತದೆ.<br /> <br /> <strong>* `ನೀರಿಲ್ಲ ಸ್ವಾಮಿ~ ಎಂಬ ಆಕ್ಷೇಪ.</strong><br /> ವಿಲ್ಸನ್ ಗಾರ್ಡನ್ನ ಚಿನ್ನಯ್ಯನ ಪಾಳ್ಯ ಪ್ರದೇಶವನ್ನು ಜಲಮಂಡಲಿಯ ಎಂಜಿನಿಯರ್ ಪರಿಶೀಲಿಸ್ದ್ದಿದಾರೆ. ಸದರಿ ಸ್ಥಳದಲ್ಲಿ ಕೊಳವೆ ಮಾರ್ಗದಲ್ಲಿ ನೀರು ಸರಾಗವಾಗಿ ಹರಿಯದೆ ಅಡಚಣೆ ಉಂಟಾಗಿತ್ತು. ಮಂಡಲಿಯ ವತಿಯಿಂದ ಕೊಳವೆ ಮಾರ್ಗ ಸ್ವಚ್ಛತೆ ಕಾಮಗಾರಿ ಕೈಗೊಳ್ಳಲಾಗಿದೆ. ಅಲ್ಲಿ ಈಗ ಸಮರ್ಪಕವಾಗಿ ನೀರನ್ನು ಸರಬರಾಜು ಮಾಡಲಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>