ಜಾತ್ರೆಯಲ್ಲಿ ಮದ್ಯವೇ ತೀರ್ಥ
ವಿಜಾಪುರ: ತಾಲ್ಲೂಕಿನ ಬಬಲಾದಿಯ ಶ್ರೀ ಚಂದ್ರಗಿರಿ ತಾಯಿ ಜಾತ್ರೆ ಆರಂಭವಾಗಿದ್ದು, ಶನಿವಾರ ಪಲ್ಲಕ್ಕಿ ಉತ್ಸವ ನೆರವೇರಿತು. ಜಾನುವಾರು ಜಾತ್ರೆ ಇಲ್ಲಿಯ ಆಕರ್ಷಣೆ. ರಾಜ್ಯ-ಹೊರ ರಾಜ್ಯಗಳ ವರ್ತಕರು, ರೈತರು ಈ ಜಾನುವಾರು ಜಾತ್ರೆಗೆ ಆಗಮಿಸಿದ್ದಾರೆ.
ಮದ್ಯವನ್ನೇ ತೀರ್ಥ ಎಂದು ಸ್ವೀಕರಿಸುವುದು ಈ ಜಾತ್ರೆ ಮತ್ತೊಂದು ವಿಶೇಷ. ಭಕ್ತರು ದೇವರಿಗೂ ಮದ್ಯವನ್ನೇ ಸಮರ್ಪಿಸುತ್ತಾರೆ. ಆದರೆ, ಪೊಲೀಸ್ ಹಾಗೂ ಅಬಕಾರಿ ಇಲಾಖೆಯವರ ಬಿಗಿ ಪಹರೆ ಹಾಗೂ ಹಿರಿಯರ ಮನವಿಯ ಮೇರೆಗೆ ಮದ್ಯದ ಹಾವಳಿ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಕೆಲ ಭಕ್ತರು ಹೇಳುತ್ತಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.