<p><strong>ಅರಸೀಕೆರೆ:</strong> ಮಳೆಯೂ ಇಲ್ಲ. ಇತ್ತ ಬಿತ್ತನೆಯೂ ಇಲ್ಲ. ಈ ವರ್ಷವೂ ಮುಂಗಾರಿನ ಕತೆ ಮುಗಿಯಿತು ಎಂಬುದು ತಾಲ್ಲೂಕಿನ ರೈತರು ಆತಂಕ.ಬೆಳೆ ಇಲ್ಲದೇ, ಆದಾಯ ಇಲ್ಲದ ರೈತರಿಗೆ ಆಧಾರಸ್ತಂಭವಾಗಿರುವುದು ಹೈನುಗಾರಿಕೆ ಮಾತ್ರ. ನೀರು, ಮೇವಿನ ಕೊರತೆಯಲ್ಲಿ ಗೋವುಗಳನ್ನು ಸಾಕುವುದೂ ಈಚೆಗಿನ ದಿನಗಳಲ್ಲಿ ಕಷ್ಟವಾಗುತ್ತಿದೆ.<br /> <br /> ಬರದ ಛಾಯೆಗೆ ಸಿಲುಕಿ ಐದಾರು ವರ್ಷಗಳಿಂದ ತಾಲ್ಲೂಕಿನ ರೈತರು ತೀವ್ರ ಸಂಕಷ್ಟದಲ್ಲಿ ಬದುಕುತ್ತಿದ್ದಾರೆ. ಪರಿ ಣಾಮ ಜಾನುವಾರು ಸಂಖ್ಯೆಯೂ ಇಳಿ ಮುಖಗೊಂಡಿದೆ. ಅಲ್ಲದೆ ಅವುಗಳ ಸಾಕಣೆ ದುಸ್ತರವಾಗಿದ್ದು, ಜಾನು ವಾರುಗಳು ಕಸಾಯಿಖಾನೆ ಪಾಲಾಗಿವೆ.<br /> <br /> <br /> ಈಚಿನ ಅಂಕಿ-ಅಂಶಗಳ ಪ್ರಕಾರ ತಾಲ್ಲೂಕಿನಲ್ಲಿ ಜಾನುವಾರು ಸಂತತಿ ನಶಿಸುತ್ತಿರುವುದು ಸ್ಪಷ್ಟವಾಗಿದೆ. 2007ರಲ್ಲಿ ತಾಲ್ಲೂಕಿನಲ್ಲಿ ಹಸು, ಎಮ್ಮೆಗಳ ಸಂಖ್ಯೆ 1.12 ಲಕ್ಷ ಇದ್ದವು. 2012ರ ಆಕ್ಟೋಬರ್ನಲ್ಲಿ ನಡೆಸಿದ ಗಣತಿ ಪ್ರಕಾರ ಅವುಗಳ ಸಂಖ್ಯೆ ಒಂದು ಲಕ್ಷಕ್ಕಿಂತ ಕೆಳಗೆ ಇಳಿದಿದೆ.<br /> <br /> ಸರ್ಕಾರದ ನಿರ್ಲಕ್ಷ್ಯ: ಮಳೆ ಬೆಳೆ ಕುಸಿತವೇ ಜಾನುವಾರುಗಳ ಸಂಖ್ಯೆ ಇಳಿಮುಖಗೊಳ್ಳಲು ಕಾರಣ. ಜತೆಗೆ ಸರ್ಕಾರದ ವಿವಿಧ ಇಲಾಖೆಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದಿರುವುದೂ ಕಾರಣ ಎಂದು ರೈತರು ಆರೋಪಿಸುತ್ತಿದ್ದಾರೆ. ಐದು ಸಾವಿರ ಜಾನುವಾರು ಗಳಿಗೆ ಒಂದು ಪ್ರಾಥಮಿಕ ಪಶು ಚಿಕಿತ್ಸಾಲಯ ಇರಬೇಕು. ಭೌಗೋಳಿ ಕವಾಗಿ 8 ಕಿ.ಮೀ ವ್ಯಾಪ್ತಿಯಲ್ಲಿ ಚಿಕಿತ್ಸಾಲಯ ಇರಲೇಬೇಕು.<br /> <br /> ಕಾವಲು ಪ್ರದೇಶಕ್ಕೆ ನಿರ್ಬಂಧ: ತಾಲ್ಲೂಕಿನ ಸಾಕಷ್ಟು ಕೃಷಿ ಕುಟುಂಬಗಳು ಹಾಗೂ ಸಾವಿರಾರು ಜಾನುವಾರುಗಳಿಗೆ ತಿಪಟೂರು ತಾಲ್ಲೂ ಕಿನ ಕೊನೇಹಳ್ಳಿ ಬಳಿಯ ಅಮೃತ ಮಹಲ್ ಹಾಗೂ ಕಣಕಟ್ಟೆ ಕೆರೆ ಅಂಗಳದಲ್ಲಿರುವ ಕಾವಲ್ಗಳು ಆಧಾರವಾಗಿದ್ದವು. ಈಗ ಕಾವಲ್ಗಳು ಬಲಾಢ್ಯರ ಪಾಲಾಗಿ ಜಾನು ವಾರುಗಳನ್ನು ಮೇಯಿಸಲು ಜಾಗ ಇಲ್ಲದಂತಾಗಿದೆ.<br /> <br /> ಕಾವಲ್ ಒಳಗೆ ಪ್ರವೇಶವೇ ಇಲ್ಲದೆ ಜಾನುವಾರುಗಳನ್ನು ಸಾಕುವುದೇ ಕಷ್ಟವಾಗಿ ರೈತರು ವಿಧಿಯಿಲ್ಲದೆ ಕಸಾಯಿಖಾನೆಗಳಿಗೆ ದೂಡುತ್ತಿದ್ದಾರೆ.<br /> <br /> `ಮಳೆಯಾಗದಿದ್ದಲ್ಲಿ ಜಾನುವಾರು ರಕ್ಷಣೆಗೆ ಇಲಾಖೆ ಕ್ರಮ ಕೈಗೊಳ್ಳುವುದು. ಇದಕ್ಕೆ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಶೀಘ್ರದಲ್ಲೇ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿ ಮೇವು ಖರೀದಿಗೆ ಮುಂದಾಗುತ್ತೇವೆ ಎಂದು ಕೇಶವಮೂರ್ತಿ ತಹಶೀಲ್ದಾರ್ ಹೇಳಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅರಸೀಕೆರೆ:</strong> ಮಳೆಯೂ ಇಲ್ಲ. ಇತ್ತ ಬಿತ್ತನೆಯೂ ಇಲ್ಲ. ಈ ವರ್ಷವೂ ಮುಂಗಾರಿನ ಕತೆ ಮುಗಿಯಿತು ಎಂಬುದು ತಾಲ್ಲೂಕಿನ ರೈತರು ಆತಂಕ.ಬೆಳೆ ಇಲ್ಲದೇ, ಆದಾಯ ಇಲ್ಲದ ರೈತರಿಗೆ ಆಧಾರಸ್ತಂಭವಾಗಿರುವುದು ಹೈನುಗಾರಿಕೆ ಮಾತ್ರ. ನೀರು, ಮೇವಿನ ಕೊರತೆಯಲ್ಲಿ ಗೋವುಗಳನ್ನು ಸಾಕುವುದೂ ಈಚೆಗಿನ ದಿನಗಳಲ್ಲಿ ಕಷ್ಟವಾಗುತ್ತಿದೆ.<br /> <br /> ಬರದ ಛಾಯೆಗೆ ಸಿಲುಕಿ ಐದಾರು ವರ್ಷಗಳಿಂದ ತಾಲ್ಲೂಕಿನ ರೈತರು ತೀವ್ರ ಸಂಕಷ್ಟದಲ್ಲಿ ಬದುಕುತ್ತಿದ್ದಾರೆ. ಪರಿ ಣಾಮ ಜಾನುವಾರು ಸಂಖ್ಯೆಯೂ ಇಳಿ ಮುಖಗೊಂಡಿದೆ. ಅಲ್ಲದೆ ಅವುಗಳ ಸಾಕಣೆ ದುಸ್ತರವಾಗಿದ್ದು, ಜಾನು ವಾರುಗಳು ಕಸಾಯಿಖಾನೆ ಪಾಲಾಗಿವೆ.<br /> <br /> <br /> ಈಚಿನ ಅಂಕಿ-ಅಂಶಗಳ ಪ್ರಕಾರ ತಾಲ್ಲೂಕಿನಲ್ಲಿ ಜಾನುವಾರು ಸಂತತಿ ನಶಿಸುತ್ತಿರುವುದು ಸ್ಪಷ್ಟವಾಗಿದೆ. 2007ರಲ್ಲಿ ತಾಲ್ಲೂಕಿನಲ್ಲಿ ಹಸು, ಎಮ್ಮೆಗಳ ಸಂಖ್ಯೆ 1.12 ಲಕ್ಷ ಇದ್ದವು. 2012ರ ಆಕ್ಟೋಬರ್ನಲ್ಲಿ ನಡೆಸಿದ ಗಣತಿ ಪ್ರಕಾರ ಅವುಗಳ ಸಂಖ್ಯೆ ಒಂದು ಲಕ್ಷಕ್ಕಿಂತ ಕೆಳಗೆ ಇಳಿದಿದೆ.<br /> <br /> ಸರ್ಕಾರದ ನಿರ್ಲಕ್ಷ್ಯ: ಮಳೆ ಬೆಳೆ ಕುಸಿತವೇ ಜಾನುವಾರುಗಳ ಸಂಖ್ಯೆ ಇಳಿಮುಖಗೊಳ್ಳಲು ಕಾರಣ. ಜತೆಗೆ ಸರ್ಕಾರದ ವಿವಿಧ ಇಲಾಖೆಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದಿರುವುದೂ ಕಾರಣ ಎಂದು ರೈತರು ಆರೋಪಿಸುತ್ತಿದ್ದಾರೆ. ಐದು ಸಾವಿರ ಜಾನುವಾರು ಗಳಿಗೆ ಒಂದು ಪ್ರಾಥಮಿಕ ಪಶು ಚಿಕಿತ್ಸಾಲಯ ಇರಬೇಕು. ಭೌಗೋಳಿ ಕವಾಗಿ 8 ಕಿ.ಮೀ ವ್ಯಾಪ್ತಿಯಲ್ಲಿ ಚಿಕಿತ್ಸಾಲಯ ಇರಲೇಬೇಕು.<br /> <br /> ಕಾವಲು ಪ್ರದೇಶಕ್ಕೆ ನಿರ್ಬಂಧ: ತಾಲ್ಲೂಕಿನ ಸಾಕಷ್ಟು ಕೃಷಿ ಕುಟುಂಬಗಳು ಹಾಗೂ ಸಾವಿರಾರು ಜಾನುವಾರುಗಳಿಗೆ ತಿಪಟೂರು ತಾಲ್ಲೂ ಕಿನ ಕೊನೇಹಳ್ಳಿ ಬಳಿಯ ಅಮೃತ ಮಹಲ್ ಹಾಗೂ ಕಣಕಟ್ಟೆ ಕೆರೆ ಅಂಗಳದಲ್ಲಿರುವ ಕಾವಲ್ಗಳು ಆಧಾರವಾಗಿದ್ದವು. ಈಗ ಕಾವಲ್ಗಳು ಬಲಾಢ್ಯರ ಪಾಲಾಗಿ ಜಾನು ವಾರುಗಳನ್ನು ಮೇಯಿಸಲು ಜಾಗ ಇಲ್ಲದಂತಾಗಿದೆ.<br /> <br /> ಕಾವಲ್ ಒಳಗೆ ಪ್ರವೇಶವೇ ಇಲ್ಲದೆ ಜಾನುವಾರುಗಳನ್ನು ಸಾಕುವುದೇ ಕಷ್ಟವಾಗಿ ರೈತರು ವಿಧಿಯಿಲ್ಲದೆ ಕಸಾಯಿಖಾನೆಗಳಿಗೆ ದೂಡುತ್ತಿದ್ದಾರೆ.<br /> <br /> `ಮಳೆಯಾಗದಿದ್ದಲ್ಲಿ ಜಾನುವಾರು ರಕ್ಷಣೆಗೆ ಇಲಾಖೆ ಕ್ರಮ ಕೈಗೊಳ್ಳುವುದು. ಇದಕ್ಕೆ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಶೀಘ್ರದಲ್ಲೇ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿ ಮೇವು ಖರೀದಿಗೆ ಮುಂದಾಗುತ್ತೇವೆ ಎಂದು ಕೇಶವಮೂರ್ತಿ ತಹಶೀಲ್ದಾರ್ ಹೇಳಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>