<p><strong>ರಾಮನಗರ:</strong> ಕನ್ನಡದ ಸುಪ್ರಸಿದ್ಧ ಸಾಹಿತಿ ಡಾ.ಜಿ.ಪಿ. ರಾಜರತ್ನಂ ಅವರ ಹೆಸರಿನಲ್ಲಿ ನಗರದಲ್ಲಿ ಕನ್ನಡ ಸಾಂಸ್ಕೃತಿಕ ಭವನ ನಿರ್ಮಿಸಲು ಜಿಲ್ಲಾಡಳಿತ ಮನಸ್ಸು ಮಾಡಬೇಕು ಎಂದು ಸ್ಥಳೀಯ ಕನ್ನಡಾಭಿಮಾನಿಗಳು ಒತ್ತಾಯಿಸಿದ್ದಾರೆ.<br /> ಜಿ.ಪಿ.ರಾಜರತ್ನಂ ಅವರು ಜನಿಸಿ ಗುರವಾರಕ್ಕೆ (ಡಿ.5)105 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಈ ಒತ್ತಾಯ ಮಾಡಲಾಗಿದೆ.<br /> <br /> ರಾಜರತ್ನಂ ಅವರು ಇಂದಿನ ರಾಮನಗರದಲ್ಲಿ ಡಿಸೆಂಬರ್ 5ರಂದು 1908ರಲ್ಲಿ ಜನಿಸಿದರು. ರಾಮನಗರವನ್ನು ಅಂದು ‘ಕ್ಲೋಸ್ ಪೇಟೆ’ ಎಂದು ಕರೆಯಲಾಗುತ್ತಿತ್ತು. ಕನ್ನಡದ ಅಪೂರ್ವ ಸಾಹಿತಿ ಎಂದೇ ಪರಿಗಣಿಸಲಾಗುವ ರಾಜರತ್ನಂ ಅವರು ಇದೇ ರಾಮನಗರದಲ್ಲಿ ಜನಿಸಿದ್ದರು ಎಂದು ಸ್ಮರಿಸುವಂತಹ ಒಂದೇ ಒಂದು ಕುರುಹೂ ಇಲ್ಲಿಲ್ಲ.<br /> <br /> ಇಲ್ಲಿನ ಛತ್ರದ ಬೀದಿಯಲ್ಲಿರುವ 'ಜಿ.ಪಿ. ರಾಜರತ್ನಂ ವೃತ್ತ' ಎಂಬ ಬರಹವಿರುವ ಧ್ವಜಸ್ತಂಭ ಮಾತ್ರ ಇವರನ್ನು ಎಲ್ಲೋ ಒಂದು ಎಳೆಯಲ್ಲಿ ನೆನಪಿಸುತ್ತದೆ. ಇದನ್ನು ಹೊರತುಪಡಿಸಿದಂತೆ ರಾಜರತ್ನಂ ಅವರ ಹೆಸರಿನ ಯಾವೊಂದು ಸ್ಮರಣೆಗಳೂ ರಾಮನಗರದಲ್ಲಿಲ್ಲ.<br /> <br /> ಗುಂಡ್ಲುಪಂಡಿತ: ಜಿ.ಪಿ. ಎಂದರೆ ‘ಗುಂಡ್ಲು’ಪಂಡಿತ ಎಂದರ್ಥ. ಇಂದಿನ ಚಾಮರಾಜನಗರ ಜಿಲ್ಲೆಯಲ್ಲಿರುವ ತಮಿಳುನಾಡು ಹಾಗೂ ಕೇರಳ ಗಡಿ ಭಾಗದ ಗುಂಡ್ಲುಪೇಟೆಯೇ ಅಂದಿನ ಗುಂಡ್ಲು. ರಾಜರತ್ನಂ ಅವರ ವಂಶಸ್ಥರೊಬ್ಬರು ಹಿಂದೆ ತಮಿಳು ನಾಡಿನಿಂದ ಇಲ್ಲಿಗೆ ಬಂದು ಈ ಊರಿನಲ್ಲಿ ಆಯುರ್ವೇದ ಪಂಡಿತರಾಗಿದ್ದರೆಂದೂ ಆದ್ದರಿಂದಲೇ ಜನ ಅವರನ್ನು ಗುಂಡ್ಲುಪಂಡಿತ ಎಂಬುದಾಗಿ ಕರೆಯುತ್ತಿದ್ದರೆಂದೂ, ಅದೇ ನಾಮಧೇಯ ರಾಜರತ್ನಂ ಅವರ ಹೆಸರಿಗೆ ಜಿ.ಪಿ. ಎನ್ನುವ ಸಂಕ್ಷಿಪ್ತ ರೂಪದಲ್ಲಿ ಸೇರಿಕೊಂಡಿತೆಂದೂ ತಿಳಿದು ಬರುತ್ತದೆ.<br /> <br /> ರಾಜರತ್ನಂ ಅವರ ಮಾತೃಭಾಷೆ ತಮಿಳು. ಆದರೆ ಕನ್ನಡದ ಪರಿಚಾರಿಕೆಗಾಗಿ ಇವರು ತಮ್ಮ ಇಡೀ ಬದುಕನ್ನು ಸಮರ್ಪಿಸಿಕೊಂಡಿದ್ದರು.<br /> <br /> 'ನರಕಕ್ ಇಳ್ಸಿ ನಾಲ್ಗೆ ಸೀಳ್ಸಿ<br /> ಬಾಯ್ ಒಲ್ಸಾಕಿದ್ರೂನೆ<br /> ಮೂಗ್ನಲ್ ಕನ್ನಡ ಪದವಾಡ್ತೀನಿ<br /> ನನ್ ಮನಸ್ಸನ್ ನೀ ಕಾಣೆ'<br /> ಎಂದು ತಮಗೆ ಕನ್ನಡದ ಬಗ್ಗೆ ಇದ್ದ ಅನನ್ಯ ಪ್ರೀತಿಯನ್ನು ಯೆಂಡ್ಕುಡ್ಕ ರತ್ನನ ಮೂಲಕ ರಾಜರತ್ನಂ ಅವರು ಅಭಿವ್ಯಕ್ತಿಸಿದವರು.<br /> <br /> ಕನ್ನಡದ ಬಗ್ಗೆ ಅಸದೃಶ ಅಭಿಮಾನ ಇರಿಸಿಕೊಂಡಿದ್ದ ಅವರು ಇಂಗ್ಲಿಷ್, ಹಿಂದಿ, ಸಂಸ್ಕೃತ, ತೆಲುಗು, ಪಾಳಿ, ಪ್ರಾಕೃತ ಭಾಷೆಗಳಲ್ಲಿಯೂ ಮೇರುಸದೃಶ ಪಾಂಡಿತ್ಯ ಪಡೆದಿದ್ದರು. ರಾಜರತ್ನಂ ಅವರಿಗೆ ಪ್ರಸಿದ್ಧಿ ತಂದುಕೊಟ್ಟ ಸೃಜನಶೀಲ ಕೃತಿಗಳೆಂದರೆ ‘ರತ್ನನ ಪದಗಳು’ ಹಾಗೂ ‘ನಾಗನ ಪದಗಳು’.<br /> <br /> ಡಾ. ಜಿ.ಪಿ. ರಾಜರತ್ನಂ ಅವರು ತಮ್ಮನ್ನು ಕೇವಲ ಸೃಜನಶೀಲ ಸಾಹಿತ್ಯ ರಚನೆಗಷ್ಟೇ ಸೀಮಿತಗೊಳಿಸಿಕೊಳ್ಳದೆ ಸಾಹಿತ್ಯ ಪರಿಚಾರಕರಾಗಿಯೂ ಕನ್ನಡದ ಸಾರಸ್ವತ ಲೋಕಕ್ಕೆ ನೀಡಿರುವ ಕಾಣ್ಕೆ ಅಪಾರ. ಕನ್ನಡದ ಪುಸ್ತಕಗಳನ್ನು ಹೊತ್ತು ನಾಡಿನ ಮೂಲೆ ಮೂಲೆಗೂ ತಲುಪಿಸುವ ಮಹತ್ವದ ಕೆಲಸವನ್ನು ಅವರು ಮಾಡಿದ್ದಾರೆ.<br /> <br /> ಕಾದಂಬರಿ ಪ್ರಕಾರವೊಂದನ್ನು ಹೊರತುಪಡಿಸಿ ಕಾವ್ಯ, ನಾಟಕ, ಕಥೆ, ಮಕ್ಕಳ ಸಾಹಿತ್ಯ, ಬೌದ್ಧ ಸಾಹಿತ್ಯ, ಜೈನ ಸಾಹಿತ್ಯ, ಇಸ್ಲಾಂ ಸಾಹಿತ್ಯ... ಹೀಗೆ ಬಹುಮುಖಿ ನೆಲೆಯಲ್ಲಿ ಅವರು ಸರಿಸುಮಾರು ಇನ್ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.<br /> <br /> ಪಿ. ಲಂಕೇಶ್, ಕೆ.ಎಸ್. ನಿಸಾರ್ ಅಹಮದ್ ಅವರಂತಹ ಅನೇಕ ‘ರತ್ನ’ಗಳನ್ನು ಬೆಳಕಿಗೆ ತಂದ ಶ್ರೇಯಸ್ಸೂ ರಾಜರತ್ನಂ ಅವರಿಗೆ ಸಲ್ಲುತ್ತದೆ ಎಂದು ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಎಲ್.ಸಿ. ರಾಜು ನೆನಪಿಸುತ್ತಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ:</strong> ಕನ್ನಡದ ಸುಪ್ರಸಿದ್ಧ ಸಾಹಿತಿ ಡಾ.ಜಿ.ಪಿ. ರಾಜರತ್ನಂ ಅವರ ಹೆಸರಿನಲ್ಲಿ ನಗರದಲ್ಲಿ ಕನ್ನಡ ಸಾಂಸ್ಕೃತಿಕ ಭವನ ನಿರ್ಮಿಸಲು ಜಿಲ್ಲಾಡಳಿತ ಮನಸ್ಸು ಮಾಡಬೇಕು ಎಂದು ಸ್ಥಳೀಯ ಕನ್ನಡಾಭಿಮಾನಿಗಳು ಒತ್ತಾಯಿಸಿದ್ದಾರೆ.<br /> ಜಿ.ಪಿ.ರಾಜರತ್ನಂ ಅವರು ಜನಿಸಿ ಗುರವಾರಕ್ಕೆ (ಡಿ.5)105 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಈ ಒತ್ತಾಯ ಮಾಡಲಾಗಿದೆ.<br /> <br /> ರಾಜರತ್ನಂ ಅವರು ಇಂದಿನ ರಾಮನಗರದಲ್ಲಿ ಡಿಸೆಂಬರ್ 5ರಂದು 1908ರಲ್ಲಿ ಜನಿಸಿದರು. ರಾಮನಗರವನ್ನು ಅಂದು ‘ಕ್ಲೋಸ್ ಪೇಟೆ’ ಎಂದು ಕರೆಯಲಾಗುತ್ತಿತ್ತು. ಕನ್ನಡದ ಅಪೂರ್ವ ಸಾಹಿತಿ ಎಂದೇ ಪರಿಗಣಿಸಲಾಗುವ ರಾಜರತ್ನಂ ಅವರು ಇದೇ ರಾಮನಗರದಲ್ಲಿ ಜನಿಸಿದ್ದರು ಎಂದು ಸ್ಮರಿಸುವಂತಹ ಒಂದೇ ಒಂದು ಕುರುಹೂ ಇಲ್ಲಿಲ್ಲ.<br /> <br /> ಇಲ್ಲಿನ ಛತ್ರದ ಬೀದಿಯಲ್ಲಿರುವ 'ಜಿ.ಪಿ. ರಾಜರತ್ನಂ ವೃತ್ತ' ಎಂಬ ಬರಹವಿರುವ ಧ್ವಜಸ್ತಂಭ ಮಾತ್ರ ಇವರನ್ನು ಎಲ್ಲೋ ಒಂದು ಎಳೆಯಲ್ಲಿ ನೆನಪಿಸುತ್ತದೆ. ಇದನ್ನು ಹೊರತುಪಡಿಸಿದಂತೆ ರಾಜರತ್ನಂ ಅವರ ಹೆಸರಿನ ಯಾವೊಂದು ಸ್ಮರಣೆಗಳೂ ರಾಮನಗರದಲ್ಲಿಲ್ಲ.<br /> <br /> ಗುಂಡ್ಲುಪಂಡಿತ: ಜಿ.ಪಿ. ಎಂದರೆ ‘ಗುಂಡ್ಲು’ಪಂಡಿತ ಎಂದರ್ಥ. ಇಂದಿನ ಚಾಮರಾಜನಗರ ಜಿಲ್ಲೆಯಲ್ಲಿರುವ ತಮಿಳುನಾಡು ಹಾಗೂ ಕೇರಳ ಗಡಿ ಭಾಗದ ಗುಂಡ್ಲುಪೇಟೆಯೇ ಅಂದಿನ ಗುಂಡ್ಲು. ರಾಜರತ್ನಂ ಅವರ ವಂಶಸ್ಥರೊಬ್ಬರು ಹಿಂದೆ ತಮಿಳು ನಾಡಿನಿಂದ ಇಲ್ಲಿಗೆ ಬಂದು ಈ ಊರಿನಲ್ಲಿ ಆಯುರ್ವೇದ ಪಂಡಿತರಾಗಿದ್ದರೆಂದೂ ಆದ್ದರಿಂದಲೇ ಜನ ಅವರನ್ನು ಗುಂಡ್ಲುಪಂಡಿತ ಎಂಬುದಾಗಿ ಕರೆಯುತ್ತಿದ್ದರೆಂದೂ, ಅದೇ ನಾಮಧೇಯ ರಾಜರತ್ನಂ ಅವರ ಹೆಸರಿಗೆ ಜಿ.ಪಿ. ಎನ್ನುವ ಸಂಕ್ಷಿಪ್ತ ರೂಪದಲ್ಲಿ ಸೇರಿಕೊಂಡಿತೆಂದೂ ತಿಳಿದು ಬರುತ್ತದೆ.<br /> <br /> ರಾಜರತ್ನಂ ಅವರ ಮಾತೃಭಾಷೆ ತಮಿಳು. ಆದರೆ ಕನ್ನಡದ ಪರಿಚಾರಿಕೆಗಾಗಿ ಇವರು ತಮ್ಮ ಇಡೀ ಬದುಕನ್ನು ಸಮರ್ಪಿಸಿಕೊಂಡಿದ್ದರು.<br /> <br /> 'ನರಕಕ್ ಇಳ್ಸಿ ನಾಲ್ಗೆ ಸೀಳ್ಸಿ<br /> ಬಾಯ್ ಒಲ್ಸಾಕಿದ್ರೂನೆ<br /> ಮೂಗ್ನಲ್ ಕನ್ನಡ ಪದವಾಡ್ತೀನಿ<br /> ನನ್ ಮನಸ್ಸನ್ ನೀ ಕಾಣೆ'<br /> ಎಂದು ತಮಗೆ ಕನ್ನಡದ ಬಗ್ಗೆ ಇದ್ದ ಅನನ್ಯ ಪ್ರೀತಿಯನ್ನು ಯೆಂಡ್ಕುಡ್ಕ ರತ್ನನ ಮೂಲಕ ರಾಜರತ್ನಂ ಅವರು ಅಭಿವ್ಯಕ್ತಿಸಿದವರು.<br /> <br /> ಕನ್ನಡದ ಬಗ್ಗೆ ಅಸದೃಶ ಅಭಿಮಾನ ಇರಿಸಿಕೊಂಡಿದ್ದ ಅವರು ಇಂಗ್ಲಿಷ್, ಹಿಂದಿ, ಸಂಸ್ಕೃತ, ತೆಲುಗು, ಪಾಳಿ, ಪ್ರಾಕೃತ ಭಾಷೆಗಳಲ್ಲಿಯೂ ಮೇರುಸದೃಶ ಪಾಂಡಿತ್ಯ ಪಡೆದಿದ್ದರು. ರಾಜರತ್ನಂ ಅವರಿಗೆ ಪ್ರಸಿದ್ಧಿ ತಂದುಕೊಟ್ಟ ಸೃಜನಶೀಲ ಕೃತಿಗಳೆಂದರೆ ‘ರತ್ನನ ಪದಗಳು’ ಹಾಗೂ ‘ನಾಗನ ಪದಗಳು’.<br /> <br /> ಡಾ. ಜಿ.ಪಿ. ರಾಜರತ್ನಂ ಅವರು ತಮ್ಮನ್ನು ಕೇವಲ ಸೃಜನಶೀಲ ಸಾಹಿತ್ಯ ರಚನೆಗಷ್ಟೇ ಸೀಮಿತಗೊಳಿಸಿಕೊಳ್ಳದೆ ಸಾಹಿತ್ಯ ಪರಿಚಾರಕರಾಗಿಯೂ ಕನ್ನಡದ ಸಾರಸ್ವತ ಲೋಕಕ್ಕೆ ನೀಡಿರುವ ಕಾಣ್ಕೆ ಅಪಾರ. ಕನ್ನಡದ ಪುಸ್ತಕಗಳನ್ನು ಹೊತ್ತು ನಾಡಿನ ಮೂಲೆ ಮೂಲೆಗೂ ತಲುಪಿಸುವ ಮಹತ್ವದ ಕೆಲಸವನ್ನು ಅವರು ಮಾಡಿದ್ದಾರೆ.<br /> <br /> ಕಾದಂಬರಿ ಪ್ರಕಾರವೊಂದನ್ನು ಹೊರತುಪಡಿಸಿ ಕಾವ್ಯ, ನಾಟಕ, ಕಥೆ, ಮಕ್ಕಳ ಸಾಹಿತ್ಯ, ಬೌದ್ಧ ಸಾಹಿತ್ಯ, ಜೈನ ಸಾಹಿತ್ಯ, ಇಸ್ಲಾಂ ಸಾಹಿತ್ಯ... ಹೀಗೆ ಬಹುಮುಖಿ ನೆಲೆಯಲ್ಲಿ ಅವರು ಸರಿಸುಮಾರು ಇನ್ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.<br /> <br /> ಪಿ. ಲಂಕೇಶ್, ಕೆ.ಎಸ್. ನಿಸಾರ್ ಅಹಮದ್ ಅವರಂತಹ ಅನೇಕ ‘ರತ್ನ’ಗಳನ್ನು ಬೆಳಕಿಗೆ ತಂದ ಶ್ರೇಯಸ್ಸೂ ರಾಜರತ್ನಂ ಅವರಿಗೆ ಸಲ್ಲುತ್ತದೆ ಎಂದು ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಎಲ್.ಸಿ. ರಾಜು ನೆನಪಿಸುತ್ತಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>