<p><strong>ಚಾಮರಾಜನಗರ: </strong>ಸರ್ವಶಿಕ್ಷಣ ಅಭಿಯಾನದ ಕಂಪ್ಯೂಟರ್ ಶಿಕ್ಷಣ ಸಹಾಯಕ ಯೋಜನೆಯಡಿ ಲ್ಯಾಪ್ಟಾಪ್ ಮೂಲಕ ಜಿಲ್ಲೆಯ 32 ಸರ್ಕಾರಿ ಶಾಲೆಗಳಲ್ಲಿ `ಇ-ಕಲಿಕೆ~ ಅನುಷ್ಠಾನಕ್ಕೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. <br /> <br /> ನಗರ ಹಾಗೂ ಪಟ್ಟಣ ಪ್ರದೇಶದ ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಸರಿಸಮಾನವಾಗಿ ಸರ್ಕಾರಿ ಶಾಲಾ ಮಕ್ಕಳನ್ನು ಸಜ್ಜುಗೊಳಿಸುವುದು ಈ ಯೋಜನೆಯ ಮುಖ್ಯಉದ್ದೇಶ. ಈ ಹಿಂದೆ ಪ್ರತಿ ಶಾಲೆಗಳಿಗೆ ಐದು ಕಂಪ್ಯೂಟರ್(ಡೆಸ್ಕ್ಟಾಪ್) ನೀಡಲಾಗುತಿತ್ತು. ಪ್ರಸ್ತುತ ಅದರ ಬದಲಾಗಿ ಪ್ರತಿಶಾಲೆಗೆ ತಲಾ 25 ಲ್ಯಾಪ್ಟಾಪ್ ನೀಡಿ ಮಕ್ಕಳನ್ನು ಪ್ರಾಥಮಿಕ ಹಂತದಿಂದಲೇ ಉನ್ನತ ಶಿಕ್ಷಣಕ್ಕೆ ಸಜ್ಜುಗೊಳಿ ಸಲು ನಿರ್ಧರಿಸಲಾಗಿದೆ. <br /> <br /> 5, 6 ಮತ್ತು 7ನೇ ತರಗತಿ ಮಕ್ಕಳಿಗೆ ಈ ಸೌಲಭ್ಯ ಸಿಗಲಿದೆ. ಲ್ಯಾಪ್ಟಾಪ್ ಮೂಲಕ ಬೋಧನೆ ಮಾಡುವ ಈ ವಿಧಾನಕ್ಕೆ `ನೆಟ್ಬುಕ್~ ಎಂದು ಹೆಸರಿಡಲಾಗಿದೆ. ಲ್ಯಾಪ್ಟಾಪ್ನಲ್ಲಿ ನಿರ್ದಿಷ್ಟ ವಿಷಯದ ತಂತ್ರಾಂಶ ಅಳವಡಿಸಲಾಗುತ್ತದೆ. ವಿಶೇಷವಾಗಿ ವಿಜ್ಞಾನ ಮತ್ತು ಗಣಿತಕ್ಕೆ ಸಂಬಂಧಪಟ್ಟ ತಂತ್ರಾಂಶ ಅಳವಡಿಕೆಗೆ ಒತ್ತು ನೀಡಲಾಗಿದೆ. ಶಿಕ್ಷಕರು ಕಲಿಸುವ ವಿಷಯ ಲ್ಯಾಪ್ಟಾಪ್ನಲ್ಲಿ ಮೂಡುತ್ತದೆ. ಪರಿಣತ ಶಿಕ್ಷಕರ ಮೂಲಕ ಮಕ್ಕಳಿಗೆ ಬೋಧನೆ ನಡೆಯಲಿದೆ. <br /> <br /> ಪ್ರಸ್ತುತ ಜಿಲ್ಲೆಯ ಕೆಲವು ಶಾಲೆಗಳಲ್ಲಿ ಕಂಪ್ಯೂಟರ್ ಇದ್ದರೂ ವಿದ್ಯುತ್ ವ್ಯತ್ಯಯ, ಬೋಧಕರ ಕೊರತೆಯಿಂದ ಮಕ್ಕಳಿಗೆ ಸಮರ್ಪಕವಾಗಿ ಕಂಪ್ಯೂಟರ್ ಜ್ಞಾನ ಸಿಗುತ್ತಿಲ್ಲ. ಆದರೆ, ಲ್ಯಾಪ್ಟಾಪ್ ಮೂಲಕ `ಇ-ಕಲಿಕೆ~ ನಡೆಯುವ ಪರಿಣಾಮ ವಿದ್ಯುತ್ ಪೂರೈಕೆ ಇಲ್ಲದಿದ್ದರೂ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ. <br /> <br /> <strong>32 ಶಾಲೆಗೆ ಸೌಲಭ್ಯ:</strong> ಸರ್ವಶಿಕ್ಷಣ ಅಭಿಯಾನದಡಿ 2010-11ನೇ ಸಾಲಿನಲ್ಲಿ ಜಿಲ್ಲೆಯ 16 ಶಾಲೆಗಳಿಗೆ ತಲಾ 5 ಕಂಪ್ಯೂಟರ್(ಡೆಸ್ಕ್ಟಾಪ್) ನೀಡಲು ನಿರ್ಧರಿಸಲಾಗಿತ್ತು. ಆದರೆ, 3 ಶಾಲೆಗೆ ಮಾತ್ರವೇ ಕಂಪ್ಯೂಟರ್ ನೀಡಲಾಗಿದೆ. ಉಳಿದ ಶಾಲೆಗಳಿಗೆ ಕಂಪ್ಯೂಟರ್ ದಕ್ಕಿಲ್ಲ. ಪ್ರಸ್ತುತ ಉಳಿದ 13 ಶಾಲೆಗಳಲ್ಲೂ ಲ್ಯಾಪ್ಟಾಪ್ ಮೂಲಕ ಇ-ಕಲಿಕೆಗೆ ಒತ್ತು ನೀಡಲು ನಿರ್ಧರಿಸಲಾಗಿದೆ. <br /> <br /> 2011-12ನೇ ಸಾಲಿನಡಿ ಒಟ್ಟು 19 ಶಾಲೆಗಳಲ್ಲಿ `ಇ-ಕಲಿಕೆ~ ಜಾರಿಗೊಳ್ಳುತ್ತಿದೆ. ಚಾಮರಾಜನಗರ- 8, ಗುಂಡ್ಲುಪೇಟೆ- 3, ಕೊಳ್ಳೇಗಾಲ- 2, ಯಳಂದೂರು- 2 ಹಾಗೂ ಹನೂರು ಶೈಕ್ಷಣಿಕ ವಲಯದ 4 ಸರ್ಕಾರಿ ಶಾಲೆಗಳಿಗೆ ಲ್ಯಾಪ್ಟಾಪ್ ನೀಡಲಾಗುತ್ತದೆ. ಒಟ್ಟಾರೆ ಜಿಲ್ಲೆಯ 32 ಶಾಲೆಯ ಮಕ್ಕಳಿಗೆ ಈ ಸೌಲಭ್ಯ ಲಭಿಸಲಿದೆ. <br /> <br /> ಆಧುನಿಕ ಯಗದಲ್ಲಿ ಕಂಪ್ಯೂಟರ್ ಕಲಿಕೆ ಅನಿವಾರ್ಯವಾಗಿದೆ. ಅದರಲ್ಲೂ ಲ್ಯಾಪ್ಟಾಪ್ನತ್ತ ಯುವಜನರು ಮಾರುಹೋಗುತ್ತಿದ್ದಾರೆ. ಆದರೆ, ಗ್ರಾಮೀಣ ಮಕ್ಕಳಿಗೆ ಲ್ಯಾಪ್ಟಾಪ್ನಂಥ ಸೌಲಭ್ಯ ಸಿಗುವುದು ಅಪರೂಪ. <br /> ಜತೆಗೆ, ಗ್ರಾಮೀಣ ಚಿಣ್ಣರು ಉನ್ನತ ಶಿಕ್ಷಣದ ಮೆಟ್ಟಿಲು ತುಳಿಯುವ ವೇಳೆ ಇ-ಕಲಿಕೆ ಗೊತ್ತಿದ್ದರೆ ವ್ಯವಹರಿಸಲು ಸುಲಭವಾಗಲಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಮಾಧ್ಯಮಿಕ ಹಂತದಲ್ಲಿಯೇ ಲ್ಯಾಪ್ಟಾಪ್ ಮೂಲಕ ಶಿಕ್ಷಣ ಕಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಪ್ರಸಕ್ತ ಸಾಲಿನಡಿ ರಾಜ್ಯದ 332 ಸರ್ಕಾರಿ ಶಾಲೆಗಳಲ್ಲಿ ಇ-ಕಲಿಕೆ ಆರಂಭಗೊಳ್ಳುತ್ತಿದ್ದು, ಜಿಲ್ಲೆಯ 32 ಶಾಲೆಗಳು ಇದರಲ್ಲಿ ಸೇರಿರುವುದು ವಿಶೇಷ. <br /> <br /> `ಸರ್ವಶಿಕ್ಷಣ ಅಭಿಯಾನದ ಮಾರ್ಗಸೂಚಿ ಅನ್ವಯ ಇ-ಕಲಿಕೆಗೆ ಜಿಲ್ಲೆಯಲ್ಲೂ ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಇ-ಕಲಿಕೆಯಿಂದ ಮಕ್ಕಳಲ್ಲಿ ಮಾಹಿತಿ ತಂತ್ರಜ್ಞಾನದ ಬಗ್ಗೆ ಅರಿವು ಹೆಚ್ಚಲಿದೆ. ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಸಿದ್ಧತೆ ನಡೆಸಲಾಗುತ್ತಿದೆ~ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬೆಳ್ಳಶೆಟ್ಟಿ `ಪ್ರಜಾವಾಣಿ~ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ: </strong>ಸರ್ವಶಿಕ್ಷಣ ಅಭಿಯಾನದ ಕಂಪ್ಯೂಟರ್ ಶಿಕ್ಷಣ ಸಹಾಯಕ ಯೋಜನೆಯಡಿ ಲ್ಯಾಪ್ಟಾಪ್ ಮೂಲಕ ಜಿಲ್ಲೆಯ 32 ಸರ್ಕಾರಿ ಶಾಲೆಗಳಲ್ಲಿ `ಇ-ಕಲಿಕೆ~ ಅನುಷ್ಠಾನಕ್ಕೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. <br /> <br /> ನಗರ ಹಾಗೂ ಪಟ್ಟಣ ಪ್ರದೇಶದ ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಸರಿಸಮಾನವಾಗಿ ಸರ್ಕಾರಿ ಶಾಲಾ ಮಕ್ಕಳನ್ನು ಸಜ್ಜುಗೊಳಿಸುವುದು ಈ ಯೋಜನೆಯ ಮುಖ್ಯಉದ್ದೇಶ. ಈ ಹಿಂದೆ ಪ್ರತಿ ಶಾಲೆಗಳಿಗೆ ಐದು ಕಂಪ್ಯೂಟರ್(ಡೆಸ್ಕ್ಟಾಪ್) ನೀಡಲಾಗುತಿತ್ತು. ಪ್ರಸ್ತುತ ಅದರ ಬದಲಾಗಿ ಪ್ರತಿಶಾಲೆಗೆ ತಲಾ 25 ಲ್ಯಾಪ್ಟಾಪ್ ನೀಡಿ ಮಕ್ಕಳನ್ನು ಪ್ರಾಥಮಿಕ ಹಂತದಿಂದಲೇ ಉನ್ನತ ಶಿಕ್ಷಣಕ್ಕೆ ಸಜ್ಜುಗೊಳಿ ಸಲು ನಿರ್ಧರಿಸಲಾಗಿದೆ. <br /> <br /> 5, 6 ಮತ್ತು 7ನೇ ತರಗತಿ ಮಕ್ಕಳಿಗೆ ಈ ಸೌಲಭ್ಯ ಸಿಗಲಿದೆ. ಲ್ಯಾಪ್ಟಾಪ್ ಮೂಲಕ ಬೋಧನೆ ಮಾಡುವ ಈ ವಿಧಾನಕ್ಕೆ `ನೆಟ್ಬುಕ್~ ಎಂದು ಹೆಸರಿಡಲಾಗಿದೆ. ಲ್ಯಾಪ್ಟಾಪ್ನಲ್ಲಿ ನಿರ್ದಿಷ್ಟ ವಿಷಯದ ತಂತ್ರಾಂಶ ಅಳವಡಿಸಲಾಗುತ್ತದೆ. ವಿಶೇಷವಾಗಿ ವಿಜ್ಞಾನ ಮತ್ತು ಗಣಿತಕ್ಕೆ ಸಂಬಂಧಪಟ್ಟ ತಂತ್ರಾಂಶ ಅಳವಡಿಕೆಗೆ ಒತ್ತು ನೀಡಲಾಗಿದೆ. ಶಿಕ್ಷಕರು ಕಲಿಸುವ ವಿಷಯ ಲ್ಯಾಪ್ಟಾಪ್ನಲ್ಲಿ ಮೂಡುತ್ತದೆ. ಪರಿಣತ ಶಿಕ್ಷಕರ ಮೂಲಕ ಮಕ್ಕಳಿಗೆ ಬೋಧನೆ ನಡೆಯಲಿದೆ. <br /> <br /> ಪ್ರಸ್ತುತ ಜಿಲ್ಲೆಯ ಕೆಲವು ಶಾಲೆಗಳಲ್ಲಿ ಕಂಪ್ಯೂಟರ್ ಇದ್ದರೂ ವಿದ್ಯುತ್ ವ್ಯತ್ಯಯ, ಬೋಧಕರ ಕೊರತೆಯಿಂದ ಮಕ್ಕಳಿಗೆ ಸಮರ್ಪಕವಾಗಿ ಕಂಪ್ಯೂಟರ್ ಜ್ಞಾನ ಸಿಗುತ್ತಿಲ್ಲ. ಆದರೆ, ಲ್ಯಾಪ್ಟಾಪ್ ಮೂಲಕ `ಇ-ಕಲಿಕೆ~ ನಡೆಯುವ ಪರಿಣಾಮ ವಿದ್ಯುತ್ ಪೂರೈಕೆ ಇಲ್ಲದಿದ್ದರೂ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ. <br /> <br /> <strong>32 ಶಾಲೆಗೆ ಸೌಲಭ್ಯ:</strong> ಸರ್ವಶಿಕ್ಷಣ ಅಭಿಯಾನದಡಿ 2010-11ನೇ ಸಾಲಿನಲ್ಲಿ ಜಿಲ್ಲೆಯ 16 ಶಾಲೆಗಳಿಗೆ ತಲಾ 5 ಕಂಪ್ಯೂಟರ್(ಡೆಸ್ಕ್ಟಾಪ್) ನೀಡಲು ನಿರ್ಧರಿಸಲಾಗಿತ್ತು. ಆದರೆ, 3 ಶಾಲೆಗೆ ಮಾತ್ರವೇ ಕಂಪ್ಯೂಟರ್ ನೀಡಲಾಗಿದೆ. ಉಳಿದ ಶಾಲೆಗಳಿಗೆ ಕಂಪ್ಯೂಟರ್ ದಕ್ಕಿಲ್ಲ. ಪ್ರಸ್ತುತ ಉಳಿದ 13 ಶಾಲೆಗಳಲ್ಲೂ ಲ್ಯಾಪ್ಟಾಪ್ ಮೂಲಕ ಇ-ಕಲಿಕೆಗೆ ಒತ್ತು ನೀಡಲು ನಿರ್ಧರಿಸಲಾಗಿದೆ. <br /> <br /> 2011-12ನೇ ಸಾಲಿನಡಿ ಒಟ್ಟು 19 ಶಾಲೆಗಳಲ್ಲಿ `ಇ-ಕಲಿಕೆ~ ಜಾರಿಗೊಳ್ಳುತ್ತಿದೆ. ಚಾಮರಾಜನಗರ- 8, ಗುಂಡ್ಲುಪೇಟೆ- 3, ಕೊಳ್ಳೇಗಾಲ- 2, ಯಳಂದೂರು- 2 ಹಾಗೂ ಹನೂರು ಶೈಕ್ಷಣಿಕ ವಲಯದ 4 ಸರ್ಕಾರಿ ಶಾಲೆಗಳಿಗೆ ಲ್ಯಾಪ್ಟಾಪ್ ನೀಡಲಾಗುತ್ತದೆ. ಒಟ್ಟಾರೆ ಜಿಲ್ಲೆಯ 32 ಶಾಲೆಯ ಮಕ್ಕಳಿಗೆ ಈ ಸೌಲಭ್ಯ ಲಭಿಸಲಿದೆ. <br /> <br /> ಆಧುನಿಕ ಯಗದಲ್ಲಿ ಕಂಪ್ಯೂಟರ್ ಕಲಿಕೆ ಅನಿವಾರ್ಯವಾಗಿದೆ. ಅದರಲ್ಲೂ ಲ್ಯಾಪ್ಟಾಪ್ನತ್ತ ಯುವಜನರು ಮಾರುಹೋಗುತ್ತಿದ್ದಾರೆ. ಆದರೆ, ಗ್ರಾಮೀಣ ಮಕ್ಕಳಿಗೆ ಲ್ಯಾಪ್ಟಾಪ್ನಂಥ ಸೌಲಭ್ಯ ಸಿಗುವುದು ಅಪರೂಪ. <br /> ಜತೆಗೆ, ಗ್ರಾಮೀಣ ಚಿಣ್ಣರು ಉನ್ನತ ಶಿಕ್ಷಣದ ಮೆಟ್ಟಿಲು ತುಳಿಯುವ ವೇಳೆ ಇ-ಕಲಿಕೆ ಗೊತ್ತಿದ್ದರೆ ವ್ಯವಹರಿಸಲು ಸುಲಭವಾಗಲಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಮಾಧ್ಯಮಿಕ ಹಂತದಲ್ಲಿಯೇ ಲ್ಯಾಪ್ಟಾಪ್ ಮೂಲಕ ಶಿಕ್ಷಣ ಕಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಪ್ರಸಕ್ತ ಸಾಲಿನಡಿ ರಾಜ್ಯದ 332 ಸರ್ಕಾರಿ ಶಾಲೆಗಳಲ್ಲಿ ಇ-ಕಲಿಕೆ ಆರಂಭಗೊಳ್ಳುತ್ತಿದ್ದು, ಜಿಲ್ಲೆಯ 32 ಶಾಲೆಗಳು ಇದರಲ್ಲಿ ಸೇರಿರುವುದು ವಿಶೇಷ. <br /> <br /> `ಸರ್ವಶಿಕ್ಷಣ ಅಭಿಯಾನದ ಮಾರ್ಗಸೂಚಿ ಅನ್ವಯ ಇ-ಕಲಿಕೆಗೆ ಜಿಲ್ಲೆಯಲ್ಲೂ ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಇ-ಕಲಿಕೆಯಿಂದ ಮಕ್ಕಳಲ್ಲಿ ಮಾಹಿತಿ ತಂತ್ರಜ್ಞಾನದ ಬಗ್ಗೆ ಅರಿವು ಹೆಚ್ಚಲಿದೆ. ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಸಿದ್ಧತೆ ನಡೆಸಲಾಗುತ್ತಿದೆ~ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬೆಳ್ಳಶೆಟ್ಟಿ `ಪ್ರಜಾವಾಣಿ~ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>