<p><strong>ಚೆನ್ನೈ (ಪಿಟಿಐ):</strong> ಡಿಎಂಕೆ ನಾಯಕ ಎಂ. ಕರುಣಾನಿಧಿ ಅವರಿಗೆ ಕೊನೆಯ ಕ್ಷಣದಲ್ಲಿ ವಿವಾದಾತ್ಮಕ `ಟೆಸೊ~ (ಪ್ರತ್ಯೇಕ ತಮಿಳು ದೇಶ ಬೆಂಬಲಿಗರ ಸಂಘಟನೆ) ಸಭೆ ನಡೆಸಲು ಮದ್ರಾಸ್ ಹೈಕೋರ್ಟ್ ವಿಭಾಗೀಯ ಪೀಠ ಭಾನುವಾರ ಮಧ್ಯಾಹ್ನ ಅನುಮತಿ ನೀಡಿ ಆದೇಶ ಹೊರಡಿಸಿತು.<br /> <br /> ಚೆನ್ನೈನ `ವೈಎಂಸಿಎ~ ಮೈದಾನದಲ್ಲಿ ಸಭೆ ನಡೆಸಲು ಅನುಮತಿ ನಿರಾಕರಿಸಿ ಚೆನ್ನೈ ಪೊಲೀಸ್ ಆಯುಕ್ತರು ಹೊರಡಿಸಿದ್ದ ಆದೇಶಕ್ಕೆ ನ್ಯಾಯಮೂರ್ತಿಗಳಾದ ಇ. ಧರ್ಮರಾವ್ ಹಾಗೂ ಎಂ. ವೇಣುಗೋಪಾಲ್ ತಡೆ ನೀಡಿದರು.<br /> <br /> ಇದಕ್ಕೂ ಮುನ್ನ ಶನಿವಾರ, ಮದ್ರಾಸ್ ಹೈಕೋರ್ಟ್ನ ಏಕ ಸದಸ್ಯ ಪೀಠದ ನ್ಯಾಯಮೂರ್ತಿಗಳು ಪೊಲೀಸ್ ಆಯುಕ್ತರ ಆದೇಶ ಪ್ರಶ್ನಿಸಿ ಡಿಎಂಕೆ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಳ್ಳಲು ನಿರಾಕರಿಸಿದ್ದರು. ಈ ಕಾರಣದಿಂದ ಅರ್ಜಿಯ ವಿಚಾರಣೆ ವಿಭಾಗೀಯ ಪೀಠದ ಮುಂದೆ ಬಂದಿತ್ತು. <br /> <br /> ಭಾನುವಾರವಾದರೂ ವಿಭಾಗೀಯ ಪೀಠ ವಿಶೇಷ ಕಲಾಪ ನಡೆಸಿ `ಟೆಸೊ~ ಸಭೆ ನಡೆಸಲು ಅನುಮತಿ ನೀಡಿತು.<br /> <br /> `ಟೆಸೊ~ ಸಭೆಯ ಶೀರ್ಷಿಕೆಯಲ್ಲಿ ಈಳಂ (ತಮಿಳರಿಗೆ ಪ್ರತ್ಯೇಕ ನಾಡು) ಶಬ್ದ ಬಳಸುವುದಕ್ಕೆ ವಿರೋಧ ವ್ಯಕ್ತಪಡಿಸಿ ತಮಿಳುನಾಡು ಸರ್ಕಾರ ಹಾಗೂ ಕೇಂದ್ರ ಸರ್ಕಾರ ಶುಕ್ರವಾರ ಕೋರ್ಟ್ನಲ್ಲಿ ಆಕ್ಷೇಪ ಸಲ್ಲಿಸಿದ್ದವು.<br /> ಆದರೆ, ಕೇಂದ್ರ ಸರ್ಕಾರ ಶನಿವಾರ ಏಕಾಏಕಿ ತನ್ನ ನಿಲುವು ಬದಲಿಸಿತು. ಈಳಂ ಶಬ್ದ ಬಳಕೆಗೆ ತನ್ನ ಆಕ್ಷೇಪವಿಲ್ಲ ಎಂದು ಹೇಳಿತು.<br /> <br /> ವಿದೇಶಾಂಗ ಸಚಿವಾಲಯ `ಟೆಸೊ~ ಸಂಘಟಕರಿಗೆ ಕಳುಹಿಸಿದ ಪತ್ರವನ್ನು ಸಹ ಡಿಎಂಕೆ ಕೋರ್ಟ್ ಮುಂದೆ ಇಟ್ಟಿತ್ತು. ಭಾರತ ರಾಜತಾಂತ್ರಿಕ ಸಂಬಂಧ ಹೊಂದಿರುವ ಯಾವುದೇ ದೇಶದ ಸಾರ್ವಭೌಮತ್ವ, ಏಕತೆಯನ್ನು ಪ್ರಶ್ನಿಸುವ ಘೋಷಣೆಯನ್ನು ಈ ಸಭೆಯಲ್ಲಿ ಮಾಡಬಾರದು ಎಂದು ವಿದೇಶಾಂಗ ಸಚಿವಾಲಯ `ಟೆಸೊ~ಗೆ ತಾಕೀತು ಮಾಡಿತು.<br /> <br /> <strong>`ಟೆಸೊ~ಗೆ ಜೀವ ತುಂಬಲು ಯತ್ನ</strong><br /> 1980ರಲ್ಲಿ ಶ್ರೀಲಂಕಾದಲ್ಲಿ ತಮಿಳು ನಾಗರಿಕರ ಮೇಲೆ ಸಿಂಹಳೀಯರಿಂದ ದೌರ್ಜನ್ಯ ನಡೆಯುತ್ತಿದ್ದಾಗ ಡಿಎಂಕೆ ನಾಯಕ ಕರುಣಾನಿಧಿ `ಟೆಸೊ~ (ಪ್ರತ್ಯೇಕ ತಮಿಳು ದೇಶ ಬೆಂಬಲಿಗರ ಸಂಘಟನೆ) ಸ್ಥಾಪಿಸಿದ್ದರು. ಈಗ ಮತ್ತೆ `ಟೆಸೊ~ಗೆ ಜೀವ ತುಂಬಲು ಯತ್ನಿಸುತ್ತಿದ್ದಾರೆ. ಇದೇ ಕಾರಣಕ್ಕಾಗಿ ಭಾನುವಾರ `ಈಳಂ~ ಪರ ಅಂತರರಾಷ್ಟ್ರೀಯ `ಟೆಸೊ~ ಸಭೆ ಕರೆದಿದ್ದರು.<br /> <br /> `ಟೆಸೊ~ ಸಭೆಗೂ ಮುನ್ನ ಭಾನುವಾರ ಬೆಳಿಗ್ಗೆ ಮಾತನಾಡಿದ ಕರುಣಾನಿಧಿ, ರಾಜಕೀಯ ಪ್ರಕ್ರಿಯೆಯ ಮೂಲಕ ಮಾತ್ರ ಲಂಕಾ ತಮಿಳರ ಸಮಸ್ಯೆಗೆ ದೀರ್ಘಕಾಲೀನ ಪರಿಹಾರ ದೊರಕಲು ಸಾಧ್ಯ ಎಂದಿದ್ದಾರೆ. ಶ್ರೀಲಂಕಾ ಸೇನೆ, ಅಲ್ಲಿನ ತಮಿಳು ಪ್ರದೇಶಗಳಲ್ಲಿ `ತುರ್ತು ಪರಿಸ್ಥಿತಿ~ ಜಾರಿ ಮಾಡಿದೆ. ಇದು ತಮಿಳರ ಮಾನವ ಹಕ್ಕು ಹಾಗೂ ಘನತೆಗೆ ಸಂಬಂಧಿಸಿದ ವಿಚಾರವಾಗಿದೆ ಎಂದು ಹೇಳಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ (ಪಿಟಿಐ):</strong> ಡಿಎಂಕೆ ನಾಯಕ ಎಂ. ಕರುಣಾನಿಧಿ ಅವರಿಗೆ ಕೊನೆಯ ಕ್ಷಣದಲ್ಲಿ ವಿವಾದಾತ್ಮಕ `ಟೆಸೊ~ (ಪ್ರತ್ಯೇಕ ತಮಿಳು ದೇಶ ಬೆಂಬಲಿಗರ ಸಂಘಟನೆ) ಸಭೆ ನಡೆಸಲು ಮದ್ರಾಸ್ ಹೈಕೋರ್ಟ್ ವಿಭಾಗೀಯ ಪೀಠ ಭಾನುವಾರ ಮಧ್ಯಾಹ್ನ ಅನುಮತಿ ನೀಡಿ ಆದೇಶ ಹೊರಡಿಸಿತು.<br /> <br /> ಚೆನ್ನೈನ `ವೈಎಂಸಿಎ~ ಮೈದಾನದಲ್ಲಿ ಸಭೆ ನಡೆಸಲು ಅನುಮತಿ ನಿರಾಕರಿಸಿ ಚೆನ್ನೈ ಪೊಲೀಸ್ ಆಯುಕ್ತರು ಹೊರಡಿಸಿದ್ದ ಆದೇಶಕ್ಕೆ ನ್ಯಾಯಮೂರ್ತಿಗಳಾದ ಇ. ಧರ್ಮರಾವ್ ಹಾಗೂ ಎಂ. ವೇಣುಗೋಪಾಲ್ ತಡೆ ನೀಡಿದರು.<br /> <br /> ಇದಕ್ಕೂ ಮುನ್ನ ಶನಿವಾರ, ಮದ್ರಾಸ್ ಹೈಕೋರ್ಟ್ನ ಏಕ ಸದಸ್ಯ ಪೀಠದ ನ್ಯಾಯಮೂರ್ತಿಗಳು ಪೊಲೀಸ್ ಆಯುಕ್ತರ ಆದೇಶ ಪ್ರಶ್ನಿಸಿ ಡಿಎಂಕೆ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಳ್ಳಲು ನಿರಾಕರಿಸಿದ್ದರು. ಈ ಕಾರಣದಿಂದ ಅರ್ಜಿಯ ವಿಚಾರಣೆ ವಿಭಾಗೀಯ ಪೀಠದ ಮುಂದೆ ಬಂದಿತ್ತು. <br /> <br /> ಭಾನುವಾರವಾದರೂ ವಿಭಾಗೀಯ ಪೀಠ ವಿಶೇಷ ಕಲಾಪ ನಡೆಸಿ `ಟೆಸೊ~ ಸಭೆ ನಡೆಸಲು ಅನುಮತಿ ನೀಡಿತು.<br /> <br /> `ಟೆಸೊ~ ಸಭೆಯ ಶೀರ್ಷಿಕೆಯಲ್ಲಿ ಈಳಂ (ತಮಿಳರಿಗೆ ಪ್ರತ್ಯೇಕ ನಾಡು) ಶಬ್ದ ಬಳಸುವುದಕ್ಕೆ ವಿರೋಧ ವ್ಯಕ್ತಪಡಿಸಿ ತಮಿಳುನಾಡು ಸರ್ಕಾರ ಹಾಗೂ ಕೇಂದ್ರ ಸರ್ಕಾರ ಶುಕ್ರವಾರ ಕೋರ್ಟ್ನಲ್ಲಿ ಆಕ್ಷೇಪ ಸಲ್ಲಿಸಿದ್ದವು.<br /> ಆದರೆ, ಕೇಂದ್ರ ಸರ್ಕಾರ ಶನಿವಾರ ಏಕಾಏಕಿ ತನ್ನ ನಿಲುವು ಬದಲಿಸಿತು. ಈಳಂ ಶಬ್ದ ಬಳಕೆಗೆ ತನ್ನ ಆಕ್ಷೇಪವಿಲ್ಲ ಎಂದು ಹೇಳಿತು.<br /> <br /> ವಿದೇಶಾಂಗ ಸಚಿವಾಲಯ `ಟೆಸೊ~ ಸಂಘಟಕರಿಗೆ ಕಳುಹಿಸಿದ ಪತ್ರವನ್ನು ಸಹ ಡಿಎಂಕೆ ಕೋರ್ಟ್ ಮುಂದೆ ಇಟ್ಟಿತ್ತು. ಭಾರತ ರಾಜತಾಂತ್ರಿಕ ಸಂಬಂಧ ಹೊಂದಿರುವ ಯಾವುದೇ ದೇಶದ ಸಾರ್ವಭೌಮತ್ವ, ಏಕತೆಯನ್ನು ಪ್ರಶ್ನಿಸುವ ಘೋಷಣೆಯನ್ನು ಈ ಸಭೆಯಲ್ಲಿ ಮಾಡಬಾರದು ಎಂದು ವಿದೇಶಾಂಗ ಸಚಿವಾಲಯ `ಟೆಸೊ~ಗೆ ತಾಕೀತು ಮಾಡಿತು.<br /> <br /> <strong>`ಟೆಸೊ~ಗೆ ಜೀವ ತುಂಬಲು ಯತ್ನ</strong><br /> 1980ರಲ್ಲಿ ಶ್ರೀಲಂಕಾದಲ್ಲಿ ತಮಿಳು ನಾಗರಿಕರ ಮೇಲೆ ಸಿಂಹಳೀಯರಿಂದ ದೌರ್ಜನ್ಯ ನಡೆಯುತ್ತಿದ್ದಾಗ ಡಿಎಂಕೆ ನಾಯಕ ಕರುಣಾನಿಧಿ `ಟೆಸೊ~ (ಪ್ರತ್ಯೇಕ ತಮಿಳು ದೇಶ ಬೆಂಬಲಿಗರ ಸಂಘಟನೆ) ಸ್ಥಾಪಿಸಿದ್ದರು. ಈಗ ಮತ್ತೆ `ಟೆಸೊ~ಗೆ ಜೀವ ತುಂಬಲು ಯತ್ನಿಸುತ್ತಿದ್ದಾರೆ. ಇದೇ ಕಾರಣಕ್ಕಾಗಿ ಭಾನುವಾರ `ಈಳಂ~ ಪರ ಅಂತರರಾಷ್ಟ್ರೀಯ `ಟೆಸೊ~ ಸಭೆ ಕರೆದಿದ್ದರು.<br /> <br /> `ಟೆಸೊ~ ಸಭೆಗೂ ಮುನ್ನ ಭಾನುವಾರ ಬೆಳಿಗ್ಗೆ ಮಾತನಾಡಿದ ಕರುಣಾನಿಧಿ, ರಾಜಕೀಯ ಪ್ರಕ್ರಿಯೆಯ ಮೂಲಕ ಮಾತ್ರ ಲಂಕಾ ತಮಿಳರ ಸಮಸ್ಯೆಗೆ ದೀರ್ಘಕಾಲೀನ ಪರಿಹಾರ ದೊರಕಲು ಸಾಧ್ಯ ಎಂದಿದ್ದಾರೆ. ಶ್ರೀಲಂಕಾ ಸೇನೆ, ಅಲ್ಲಿನ ತಮಿಳು ಪ್ರದೇಶಗಳಲ್ಲಿ `ತುರ್ತು ಪರಿಸ್ಥಿತಿ~ ಜಾರಿ ಮಾಡಿದೆ. ಇದು ತಮಿಳರ ಮಾನವ ಹಕ್ಕು ಹಾಗೂ ಘನತೆಗೆ ಸಂಬಂಧಿಸಿದ ವಿಚಾರವಾಗಿದೆ ಎಂದು ಹೇಳಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>