<p><strong>ಬ್ರಹ್ಮಾವರ: </strong>ನೀರು ಪೂರೈಕೆಗೆ ಬೇಕಾದ ಎಲ್ಲಾ ವ್ಯವಸ್ಥೆ ಇದ್ದರೂ ಸಮರ್ಪಕ ನೀರು ಪೂರೈಕೆ ಆಗುತ್ತಿಲ್ಲ ಎಂಬ ಗೋಳು ಹಂದಾಡಿ ಗ್ರಾಮ ಪಂಚಾಯಿತಿಯ (ಆಕಾಶವಾಣಿ ಕೇಂದ್ರದ ಹಿಂಭಾಗ) ಬ್ಯಾಂಕರ್ಸ್ ಕಾಲನಿ ಜನತೆಯದು. <br /> <br /> ಇಲ್ಲಿ ನೀರು ಪೂರೈಸುವ ಬಾವಿ ಇದೆ, ನೀರು ಸರಬರಾಜಿಗೆ ಬೇಕಾದ ಓವರ್ ಹೆಡ್ಟ್ಯಾಂಕ್ ನಿರ್ಮಿಸಲಾಗಿದೆ. ಪಕ್ಕದಲ್ಲೇ ಅದಕ್ಕೆ ವಿದ್ಯುತ್ ಪೂರೈಕೆ ವ್ಯವಸ್ಥೆಗೆ ಬೇಕಾದ ಶೆಡ್ ಕೂಡಾ ಇದೆ. ಇಷ್ಟೆಲ್ಲಾ ಸೌಕರ್ಯವಿದ್ದರೂ ಸ್ಥಳೀಯರಿಗೆ ಈ ಬಾವಿ ನೀರು ಕುಡಿಯುವ ಯೋಗವಿಲ್ಲ. <br /> <br /> ಕಾಲನಿಯಲ್ಲಿ 50ಕ್ಕೂ ಹೆಚ್ಚು ಮನೆಗಳಿವೆ. ಇಲ್ಲಿನ ಮನೆಗಳಿಗೆ ನೀರು ಪೂರೈಸುವ ಸಲುವಾಗಿ ಎಂಟು ವರ್ಷ ಹಿಂದೆ ಜಿಲ್ಲಾ ಪಂಚಾಯಿತಿ ವತಿಯಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಾವಿ, ಓವರ್ ಹೆಡ್ ಟ್ಯಾಂಕ್ ಮತ್ತು ಪಂಪ್ಸೆಟ್ ಅಳವಡಿಸಲು ಶೆಡ್ ನಿರ್ಮಿಸಲಾಯಿತು. <br /> <br /> ಪರಿಸರದ ನೂರಾರು ಮನೆಗಳಿಗೆ ಇಲ್ಲಿಂದಲೇ ನೀರಿನ ಸರಬರಾಜು ಕೂಡಾ ಆರಂಭವಾಯಿತು. ಆದರೆ ಕಳೆದ ನಾಲ್ಕು ವರ್ಷ ಹಿಂದೆ ಕೆಲವೊಂದು ಸಬೂಬು ಏಕಾಏಕಿ ನೀರು ಪೂರೈಕೆ ಸ್ಥಗಿತಗೊಳಿಸಲಾಯಿತು. ಈಗ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಸೌಕರ್ಯ ನಿರುಪಯುಕ್ತವಾಗುತ್ತಿದೆ. <br /> <br /> <strong>ಬಾವಿಗೆ ತ್ಯಾಜ್ಯ:</strong> `ಇಲ್ಲಿನ ಮನೆಯವರು ತ್ಯಾಜ್ಯವನ್ನು ಬಾವಿಯ ಸಮೀಪವೇ ತಂದು ಸುರಿಯುತ್ತ್ದ್ದಿದು, ಈ ಪ್ರದೇಶ ತ್ಯಾಜ್ಯ ವಿಲೇವಾರಿ ಘಟಕದಂತಾಗಿದೆ. ಕಸ ಬಾವಿಯನ್ನೂ ಸೇರುತ್ತಿದೆ. ಕುಡಿಯುವ ನೀರು ಒದಗಿಸಲೆಂದು ನಿರ್ಮಿಸಿದ ಇಲ್ಲಿನ ಸುಸಜ್ಜಿತ ಬಾವಿ ಈಗ ತ್ಯಾಜ್ಯ ಗುಂಡಿಯಂತಾಗಿದೆ. ಅಲ್ಲೇ ಸನಿಹದಲ್ಲಿ ಇರುವ ಓವರ್ಹೆಡ್ ಟ್ಯಾಂಕ್ಗೆ ಅಳವಡಿಸಲಾದ ಪೈಪ್ಗಳು ತುಕ್ಕು ಹಿಡಿದು ಹದಗೆಟ್ಟಿವೆ. <br /> <br /> ಶೆಡ್ನಲ್ಲಿದ್ದ ಪಂಪ್ಸೆಟ್ ಕಳವಾಗಿದೆ. ಶೆಡ್ ಸುತ್ತಲೂ ಗಿಡಗಂಟಿಗಳು ಬೆಳೆದಿವೆ. ಒಟ್ಟಾರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದು ನೀರಿನಲ್ಲಿ ಹೋಮ ಇಟ್ಟಂತಾಗಿದೆ~ ಎಂದು ಸ್ಥಳೀಯರೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು. <br /> <br /> `ಬಾವಿಯನ್ನು ಸೇರಿರುವ ಕೊಳಚೆ ಪದಾರ್ಥಗಳು ತೇಲಾಡುತ್ತಿವೆ. ಓವರ್ ಹೆಡ್ ಟ್ಯಾಂಕ್ ಬೀಳುವ ಸ್ಥಿತಿಯಲ್ಲಿದೆ. ಹಾಕಿದ್ದ ಪೈಪುಗಳು ಗುಜರಿಯವರ ಪಾಲಾಗುತ್ತಿದೆ. ಲಕ್ಷಾಂತರ ರೂಪಾಯಿಯ ಕಾಮಗಾರಿ ಹಾಳಾಗುತ್ತಿದೆ. ಆದರೂ ಗ್ರಾ.ಪಂ ಸದಸ್ಯರಾಗಲೀ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಾಗಲೀ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ~ ಎಂದು ಸ್ಥಳೀಯರು ಬೇಸರ ವ್ಯಕ್ತ ಪಡಿಸಿಸಿದರು. <br /> <br /> `ಬಾವಿ ಹತ್ತಿರದಲ್ಲಿಯೇ ಆಟದ ಮೈದಾನವೂ ಇದೆ. ತ್ಯಾಜ್ಯದ ದುರ್ವಾಸನೆಯಿಂದಾಗಿ ಅಲ್ಲಿ ಆಡಿಕೊಳ್ಳಲೂ ಆಗುತ್ತಿಲ್ಲ~ ಎಂದು ಸ್ಥಳೀಯ ಪುಟಾಣಿ ಶರತ್ ಮತ್ತು ಅವನ ಸ್ನೇಹಿತರು ಅಳಲು ತೋಡಿಕೊಂಡರು. <br /> `ಟ್ಯಾಂಕ್ ಹಾಗೂ ಬಾವಿಯ ಪುನಃಶ್ಚೇತನದ ಬಗ್ಗೆ ಸಂಬಂಧಪಟ್ಟವರು ಯೋಜನೆ ರೂಪಿಸಬೇಕು~ ಎಂಬ ಆಗ್ರಹ ಸ್ಥಳೀಯರದು. <br /> <br /> `ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಸುಧಾರಣೆಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಕೋಟ್ಯಂತರ ರೂಪಾಯಿ ವ್ಯಯಿಸಲಾಗುತ್ತಿದೆ. ಆದರೆ ನಮ್ಮೂರಿನ ಸ್ಥಿತಿ ವಿಭಿನ್ನ. ಇಲ್ಲಿನ ಸೌಕರ್ಯ ಸರಿಪಡಿಸುವ ಹೊಣೆ ಹೋರಲು ಯಾರೂ ಮುಂದೆ ಬರುತ್ತಿಲ್ಲ~ ಎಂಬುದು ಸ್ಥಳೀಯರ ಅಳಲು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬ್ರಹ್ಮಾವರ: </strong>ನೀರು ಪೂರೈಕೆಗೆ ಬೇಕಾದ ಎಲ್ಲಾ ವ್ಯವಸ್ಥೆ ಇದ್ದರೂ ಸಮರ್ಪಕ ನೀರು ಪೂರೈಕೆ ಆಗುತ್ತಿಲ್ಲ ಎಂಬ ಗೋಳು ಹಂದಾಡಿ ಗ್ರಾಮ ಪಂಚಾಯಿತಿಯ (ಆಕಾಶವಾಣಿ ಕೇಂದ್ರದ ಹಿಂಭಾಗ) ಬ್ಯಾಂಕರ್ಸ್ ಕಾಲನಿ ಜನತೆಯದು. <br /> <br /> ಇಲ್ಲಿ ನೀರು ಪೂರೈಸುವ ಬಾವಿ ಇದೆ, ನೀರು ಸರಬರಾಜಿಗೆ ಬೇಕಾದ ಓವರ್ ಹೆಡ್ಟ್ಯಾಂಕ್ ನಿರ್ಮಿಸಲಾಗಿದೆ. ಪಕ್ಕದಲ್ಲೇ ಅದಕ್ಕೆ ವಿದ್ಯುತ್ ಪೂರೈಕೆ ವ್ಯವಸ್ಥೆಗೆ ಬೇಕಾದ ಶೆಡ್ ಕೂಡಾ ಇದೆ. ಇಷ್ಟೆಲ್ಲಾ ಸೌಕರ್ಯವಿದ್ದರೂ ಸ್ಥಳೀಯರಿಗೆ ಈ ಬಾವಿ ನೀರು ಕುಡಿಯುವ ಯೋಗವಿಲ್ಲ. <br /> <br /> ಕಾಲನಿಯಲ್ಲಿ 50ಕ್ಕೂ ಹೆಚ್ಚು ಮನೆಗಳಿವೆ. ಇಲ್ಲಿನ ಮನೆಗಳಿಗೆ ನೀರು ಪೂರೈಸುವ ಸಲುವಾಗಿ ಎಂಟು ವರ್ಷ ಹಿಂದೆ ಜಿಲ್ಲಾ ಪಂಚಾಯಿತಿ ವತಿಯಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಾವಿ, ಓವರ್ ಹೆಡ್ ಟ್ಯಾಂಕ್ ಮತ್ತು ಪಂಪ್ಸೆಟ್ ಅಳವಡಿಸಲು ಶೆಡ್ ನಿರ್ಮಿಸಲಾಯಿತು. <br /> <br /> ಪರಿಸರದ ನೂರಾರು ಮನೆಗಳಿಗೆ ಇಲ್ಲಿಂದಲೇ ನೀರಿನ ಸರಬರಾಜು ಕೂಡಾ ಆರಂಭವಾಯಿತು. ಆದರೆ ಕಳೆದ ನಾಲ್ಕು ವರ್ಷ ಹಿಂದೆ ಕೆಲವೊಂದು ಸಬೂಬು ಏಕಾಏಕಿ ನೀರು ಪೂರೈಕೆ ಸ್ಥಗಿತಗೊಳಿಸಲಾಯಿತು. ಈಗ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಸೌಕರ್ಯ ನಿರುಪಯುಕ್ತವಾಗುತ್ತಿದೆ. <br /> <br /> <strong>ಬಾವಿಗೆ ತ್ಯಾಜ್ಯ:</strong> `ಇಲ್ಲಿನ ಮನೆಯವರು ತ್ಯಾಜ್ಯವನ್ನು ಬಾವಿಯ ಸಮೀಪವೇ ತಂದು ಸುರಿಯುತ್ತ್ದ್ದಿದು, ಈ ಪ್ರದೇಶ ತ್ಯಾಜ್ಯ ವಿಲೇವಾರಿ ಘಟಕದಂತಾಗಿದೆ. ಕಸ ಬಾವಿಯನ್ನೂ ಸೇರುತ್ತಿದೆ. ಕುಡಿಯುವ ನೀರು ಒದಗಿಸಲೆಂದು ನಿರ್ಮಿಸಿದ ಇಲ್ಲಿನ ಸುಸಜ್ಜಿತ ಬಾವಿ ಈಗ ತ್ಯಾಜ್ಯ ಗುಂಡಿಯಂತಾಗಿದೆ. ಅಲ್ಲೇ ಸನಿಹದಲ್ಲಿ ಇರುವ ಓವರ್ಹೆಡ್ ಟ್ಯಾಂಕ್ಗೆ ಅಳವಡಿಸಲಾದ ಪೈಪ್ಗಳು ತುಕ್ಕು ಹಿಡಿದು ಹದಗೆಟ್ಟಿವೆ. <br /> <br /> ಶೆಡ್ನಲ್ಲಿದ್ದ ಪಂಪ್ಸೆಟ್ ಕಳವಾಗಿದೆ. ಶೆಡ್ ಸುತ್ತಲೂ ಗಿಡಗಂಟಿಗಳು ಬೆಳೆದಿವೆ. ಒಟ್ಟಾರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದು ನೀರಿನಲ್ಲಿ ಹೋಮ ಇಟ್ಟಂತಾಗಿದೆ~ ಎಂದು ಸ್ಥಳೀಯರೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು. <br /> <br /> `ಬಾವಿಯನ್ನು ಸೇರಿರುವ ಕೊಳಚೆ ಪದಾರ್ಥಗಳು ತೇಲಾಡುತ್ತಿವೆ. ಓವರ್ ಹೆಡ್ ಟ್ಯಾಂಕ್ ಬೀಳುವ ಸ್ಥಿತಿಯಲ್ಲಿದೆ. ಹಾಕಿದ್ದ ಪೈಪುಗಳು ಗುಜರಿಯವರ ಪಾಲಾಗುತ್ತಿದೆ. ಲಕ್ಷಾಂತರ ರೂಪಾಯಿಯ ಕಾಮಗಾರಿ ಹಾಳಾಗುತ್ತಿದೆ. ಆದರೂ ಗ್ರಾ.ಪಂ ಸದಸ್ಯರಾಗಲೀ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಾಗಲೀ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ~ ಎಂದು ಸ್ಥಳೀಯರು ಬೇಸರ ವ್ಯಕ್ತ ಪಡಿಸಿಸಿದರು. <br /> <br /> `ಬಾವಿ ಹತ್ತಿರದಲ್ಲಿಯೇ ಆಟದ ಮೈದಾನವೂ ಇದೆ. ತ್ಯಾಜ್ಯದ ದುರ್ವಾಸನೆಯಿಂದಾಗಿ ಅಲ್ಲಿ ಆಡಿಕೊಳ್ಳಲೂ ಆಗುತ್ತಿಲ್ಲ~ ಎಂದು ಸ್ಥಳೀಯ ಪುಟಾಣಿ ಶರತ್ ಮತ್ತು ಅವನ ಸ್ನೇಹಿತರು ಅಳಲು ತೋಡಿಕೊಂಡರು. <br /> `ಟ್ಯಾಂಕ್ ಹಾಗೂ ಬಾವಿಯ ಪುನಃಶ್ಚೇತನದ ಬಗ್ಗೆ ಸಂಬಂಧಪಟ್ಟವರು ಯೋಜನೆ ರೂಪಿಸಬೇಕು~ ಎಂಬ ಆಗ್ರಹ ಸ್ಥಳೀಯರದು. <br /> <br /> `ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಸುಧಾರಣೆಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಕೋಟ್ಯಂತರ ರೂಪಾಯಿ ವ್ಯಯಿಸಲಾಗುತ್ತಿದೆ. ಆದರೆ ನಮ್ಮೂರಿನ ಸ್ಥಿತಿ ವಿಭಿನ್ನ. ಇಲ್ಲಿನ ಸೌಕರ್ಯ ಸರಿಪಡಿಸುವ ಹೊಣೆ ಹೋರಲು ಯಾರೂ ಮುಂದೆ ಬರುತ್ತಿಲ್ಲ~ ಎಂಬುದು ಸ್ಥಳೀಯರ ಅಳಲು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>