<p><strong>ನವದೆಹಲಿ (ಪಿಟಿಐ): </strong>ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯಲ್ಲಿನ(ಡಿಡಿಸಿಎ) ಅವ್ಯವಹಾರ ಪ್ರಕರಣ ಮತ್ತೊಂದು ತಿರುವು ಪಡೆದಿದೆ. ಡಿಡಿಸಿಎ ಅವ್ಯವಹಾರ ಕುರಿತು ತನಿಖೆಗೆ ಆಯೋಗ ನೇಮಿಸಿರುವ ದೆಹಲಿ ಸರ್ಕಾರದ ಕ್ರಮ ಪ್ರಶ್ನಿಸಿ ದೆಹಲಿ ಹೈಕೋರ್ಟ್ನಲ್ಲಿ ಶುಕ್ರವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಲಾಗಿದೆ.</p>.<p><strong>ಹೈಕೋರ್ಟ್ನಲ್ಲಿ ಪಿಐಎಲ್: </strong>ರಮಾಕಾಂತ್ ಕುಮಾರ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಜಿ.ರೋಹಿಣಿ ಹಾಗೂ ನ್ಯಾಯಮೂರ್ತಿ ಜಯಂತನಾಥ್ ಅವರ ಪೀಠ ನಡೆಸಿತು.</p>.<p>ಈ ವೇಳೆ, ಮಧ್ಯ ಪ್ರವೇಶಿಸಿದ ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ಸಂಜಯ್ ಜೈನ್, ಅರ್ಜಿದಾರರಿಗೆ ಈ ವಿಷಯವನ್ನು ಪ್ರಶ್ನಿಸಲು ಯಾವುದೇ ಹಕ್ಕಿಲ್ಲ ಎಂದರು. ಅರ್ಜಿದಾರರು ಡಿಡಿಸಿಎ ಅಥವಾ ಕೇಂದ್ರ ಸರ್ಕಾರವನ್ನು ವಾದಿಗಳನ್ನಾಗಿ ಮಾಡಿಲ್ಲ ಎಂದರು.</p>.<p>ಜೈನ್ ಅವರ ಆಕ್ಷೇಪಕ್ಕೆ ಸ್ಪಂದಿಸಿದ ಪೀಠವು ಅರ್ಜಿಯ ಪ್ರತಿಯೊಂದನ್ನು ಕೇಂದ್ರ ಸರ್ಕಾರಕ್ಕೆ ನೀಡುವಂತೆ ರಮಾಕಾಂತ್ ಅವರಿಗೆ ಸೂಚಿಸಿತು. ಮುಂದಿನ ವಿಚಾರಣೆಯನ್ನು ಜನವರಿ 27ಕ್ಕೆ ನಿಗದಿಪಡಿಸಿತು.</p>.<p>ಡಿಡಿಸಿಎಯಲ್ಲಿ ನಡೆದಿರುವ ಅಕ್ರಮಗಳು ಹಾಗೂ ಅವ್ಯವಹಾರಗಳ ತನಿಖೆಗೆ ಸಮಿತಿ ರಚಿಸಿ 2015ರ ಡಿಸೆಂಬರ್ 22ರಂದು ಅಧಿಸೂಚನೆ ಹೊರಡಿಸಿದ್ದ ದೆಹಲಿ ಸರ್ಕಾರ ಕ್ರಮವನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು.</p>.<p><strong>ತನಿಖೆ ನಿಲ್ಲದು:</strong> ಈ ಬೆನ್ನಲ್ಲೆ, ತನಿಖಾ ಆಯೋಗ ತನ್ನ ಕೆಲಸವನ್ನು ಮುಂದುವರೆಸಲಿದೆ ಎಂದು ಕೇಜ್ರಿವಾಲ್ ಅವರು ಒತ್ತಿ ಹೇಳಿದ್ದಾರೆ.</p>.<p>‘ಡಿಡಿಸಿಎ ತನಿಖಾ ಸಮಿತಿಯು ತನ್ನ ಕಾರ್ಯವನ್ನು ಮುಂದುವರೆಸಲಿದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.</p>.<p>ತನಿಖಾ ಆಯೋಗ ನೇಮಿಸಿದ ಎಎಪಿ ಸರ್ಕಾರದ ನಿರ್ಧಾರವನ್ನು‘ಅಸಾಂವಿಧಾನಿಕ ಹಾಗೂ ಅಕ್ರಮ’ ಎಂದು ಕೇಂದ್ರ ಸರ್ಕಾರ ಜನವರಿ 8ರಂದು ಘೋಷಿಸಿತ್ತು.</p>.<p><strong>ಪ್ರತಿಕ್ರಿಯಿಸಲು ಕೇಜ್ರಿ, ಕೀರ್ತಿಗೆ ಸೂಚನೆ:</strong> ಮತ್ತೊಂದೆಡೆ, ಪ್ರಕರಣ ಸಂಬಂಧ ಡಿಡಿಸಿಎ ದಾಖಲಿಸಿರುವ ಸಿವಿಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಜ್ರಿವಾಲ್ ಹಾಗೂ ಬಿಜೆಪಿಯ ಸಂಸದ ಕೀರ್ತಿ ಆಜಾದ್ ಅವರಿಗೆ ದೆಹಲಿ ಹೈಕೋರ್ಟ್ ಸೂಚಿಸಿದೆ.</p>.<p>ಡಿಡಿಸಿಎ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಒಪ್ಪಿರುವ ನ್ಯಾಯಾಲಯದ ಜಂಟಿ ರಜಿಸ್ಟ್ರಾರ್ ಅನಿಲ್ ಕುಮಾರ್ ಸಿಸೋಡಿಯಾ, ಈ ಸಂಬಂಧ ಮಾರ್ಚ್ 2ರ ಒಳಗೆ ಪ್ರತಿಕ್ರಿಯೆ ನೀಡಲು ಕೇಜ್ರಿವಾಲ್ ಹಾಗೂ ಕೀರ್ತಿ ಆಜಾದ್ ನೋಟಿಸ್ ಮೂಲಕ ಸೂಚಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯಲ್ಲಿನ(ಡಿಡಿಸಿಎ) ಅವ್ಯವಹಾರ ಪ್ರಕರಣ ಮತ್ತೊಂದು ತಿರುವು ಪಡೆದಿದೆ. ಡಿಡಿಸಿಎ ಅವ್ಯವಹಾರ ಕುರಿತು ತನಿಖೆಗೆ ಆಯೋಗ ನೇಮಿಸಿರುವ ದೆಹಲಿ ಸರ್ಕಾರದ ಕ್ರಮ ಪ್ರಶ್ನಿಸಿ ದೆಹಲಿ ಹೈಕೋರ್ಟ್ನಲ್ಲಿ ಶುಕ್ರವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಲಾಗಿದೆ.</p>.<p><strong>ಹೈಕೋರ್ಟ್ನಲ್ಲಿ ಪಿಐಎಲ್: </strong>ರಮಾಕಾಂತ್ ಕುಮಾರ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಜಿ.ರೋಹಿಣಿ ಹಾಗೂ ನ್ಯಾಯಮೂರ್ತಿ ಜಯಂತನಾಥ್ ಅವರ ಪೀಠ ನಡೆಸಿತು.</p>.<p>ಈ ವೇಳೆ, ಮಧ್ಯ ಪ್ರವೇಶಿಸಿದ ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ಸಂಜಯ್ ಜೈನ್, ಅರ್ಜಿದಾರರಿಗೆ ಈ ವಿಷಯವನ್ನು ಪ್ರಶ್ನಿಸಲು ಯಾವುದೇ ಹಕ್ಕಿಲ್ಲ ಎಂದರು. ಅರ್ಜಿದಾರರು ಡಿಡಿಸಿಎ ಅಥವಾ ಕೇಂದ್ರ ಸರ್ಕಾರವನ್ನು ವಾದಿಗಳನ್ನಾಗಿ ಮಾಡಿಲ್ಲ ಎಂದರು.</p>.<p>ಜೈನ್ ಅವರ ಆಕ್ಷೇಪಕ್ಕೆ ಸ್ಪಂದಿಸಿದ ಪೀಠವು ಅರ್ಜಿಯ ಪ್ರತಿಯೊಂದನ್ನು ಕೇಂದ್ರ ಸರ್ಕಾರಕ್ಕೆ ನೀಡುವಂತೆ ರಮಾಕಾಂತ್ ಅವರಿಗೆ ಸೂಚಿಸಿತು. ಮುಂದಿನ ವಿಚಾರಣೆಯನ್ನು ಜನವರಿ 27ಕ್ಕೆ ನಿಗದಿಪಡಿಸಿತು.</p>.<p>ಡಿಡಿಸಿಎಯಲ್ಲಿ ನಡೆದಿರುವ ಅಕ್ರಮಗಳು ಹಾಗೂ ಅವ್ಯವಹಾರಗಳ ತನಿಖೆಗೆ ಸಮಿತಿ ರಚಿಸಿ 2015ರ ಡಿಸೆಂಬರ್ 22ರಂದು ಅಧಿಸೂಚನೆ ಹೊರಡಿಸಿದ್ದ ದೆಹಲಿ ಸರ್ಕಾರ ಕ್ರಮವನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು.</p>.<p><strong>ತನಿಖೆ ನಿಲ್ಲದು:</strong> ಈ ಬೆನ್ನಲ್ಲೆ, ತನಿಖಾ ಆಯೋಗ ತನ್ನ ಕೆಲಸವನ್ನು ಮುಂದುವರೆಸಲಿದೆ ಎಂದು ಕೇಜ್ರಿವಾಲ್ ಅವರು ಒತ್ತಿ ಹೇಳಿದ್ದಾರೆ.</p>.<p>‘ಡಿಡಿಸಿಎ ತನಿಖಾ ಸಮಿತಿಯು ತನ್ನ ಕಾರ್ಯವನ್ನು ಮುಂದುವರೆಸಲಿದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.</p>.<p>ತನಿಖಾ ಆಯೋಗ ನೇಮಿಸಿದ ಎಎಪಿ ಸರ್ಕಾರದ ನಿರ್ಧಾರವನ್ನು‘ಅಸಾಂವಿಧಾನಿಕ ಹಾಗೂ ಅಕ್ರಮ’ ಎಂದು ಕೇಂದ್ರ ಸರ್ಕಾರ ಜನವರಿ 8ರಂದು ಘೋಷಿಸಿತ್ತು.</p>.<p><strong>ಪ್ರತಿಕ್ರಿಯಿಸಲು ಕೇಜ್ರಿ, ಕೀರ್ತಿಗೆ ಸೂಚನೆ:</strong> ಮತ್ತೊಂದೆಡೆ, ಪ್ರಕರಣ ಸಂಬಂಧ ಡಿಡಿಸಿಎ ದಾಖಲಿಸಿರುವ ಸಿವಿಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಜ್ರಿವಾಲ್ ಹಾಗೂ ಬಿಜೆಪಿಯ ಸಂಸದ ಕೀರ್ತಿ ಆಜಾದ್ ಅವರಿಗೆ ದೆಹಲಿ ಹೈಕೋರ್ಟ್ ಸೂಚಿಸಿದೆ.</p>.<p>ಡಿಡಿಸಿಎ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಒಪ್ಪಿರುವ ನ್ಯಾಯಾಲಯದ ಜಂಟಿ ರಜಿಸ್ಟ್ರಾರ್ ಅನಿಲ್ ಕುಮಾರ್ ಸಿಸೋಡಿಯಾ, ಈ ಸಂಬಂಧ ಮಾರ್ಚ್ 2ರ ಒಳಗೆ ಪ್ರತಿಕ್ರಿಯೆ ನೀಡಲು ಕೇಜ್ರಿವಾಲ್ ಹಾಗೂ ಕೀರ್ತಿ ಆಜಾದ್ ನೋಟಿಸ್ ಮೂಲಕ ಸೂಚಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>