<p><strong>ಮೈಸೂರು:</strong> ದೇಶವು ಎದುರಿಸುತ್ತಿರುವ ಆಹಾರ ಅಪೌಷ್ಟಿಕತೆಯ ಸಮಸ್ಯೆ ತಗ್ಗಿಸಲು ಮೈಸೂರಿನ ಕೇಂದ್ರ ಆಹಾರ ಮತ್ತು ತಂತ್ರಜ್ಞಾನ ಸಂಶೋಧನ ಸಂಸ್ಥೆ (ಸಿಎಫ್ಟಿಆರ್ಐ) ‘ಹಸಿರು ಕ್ಷೀರ’ ಅಭಿವೃದ್ಧಿಪಡಿಸಿದೆ.<br /> <br /> ಬುಧವಾರದಿಂದ (ಡಿ. 18) ನಾಲ್ಕು ದಿನಗಳವರೆಗೆ ಇಲ್ಲಿ ನಡೆಯಲಿರುವ 7ನೇ ಇಫ್ಕಾನ್ ಅಂತರರಾಷ್ಟ್ರೀಯ ಆಹಾರ ವಿಜ್ಞಾನಿಗಳು ಹಾಗೂ ತಂತ್ರಜ್ಞರ ಸಮ್ಮೇಳನದಲ್ಲಿ ಈ ‘ಹಸಿರು ಕ್ಷೀರ’ವನ್ನು ಪರಿಚಯಿಸಲಾಗುತ್ತಿದ್ದು, ಸಾರ್ವಜನಿಕರು ಸಹ ರುಚಿ ನೋಡಬಹುದು.<br /> <br /> <strong>ಏನಿದು ಹಸಿರು ಹಾಲು?</strong><br /> ‘ಡಿಸೈನರ್ ಮಿಲ್ಕ್’ ಎಂದೂ ಕರೆಯಲಾಗುವ ಈ ‘ಹಸಿರು ಹಾಲು’ ಹಸು, ಎಮ್ಮೆ ಮತ್ತಿತರ ಪ್ರಾಣಿಗಳ ಉತ್ಪನ್ನವಲ್ಲ. ನಮ್ಮ ಸುತ್ತಮುತ್ತ ಯಥೇಚ್ಛವಾಗಿ ಸಿಗುವ ಹಸಿರು ತರಕಾರಿ, ಸೊಪ್ಪುಗಳಿಂದ ತಯಾರಿಸಿದ್ದು. ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ‘ಸಿಎಫ್ಟಿಆರ್ಐ’ ನಿರ್ದೇಶಕ ಪ್ರೊ.ರಾಮ ರಾಜಶೇಖರನ್, ನುಗ್ಗೆಸೊಪ್ಪು, ಕೀರೆಸೊಪ್ಪು (ಗೋಣಿ), ಚಿಕೋರಿ, ಅಣಬೆ ಮತ್ತು ತುಳಸಿ ಬೀಜದಿಂದ ಬೇರ್ಪಡಿಸಲಾದ ಪ್ರೋಟಿನ್, ಅಮೈನೋ ಆಮ್ಲಗಳು ಸೇರಿದಂತೆ ಮತ್ತಿತರ ಪೋಷಕಾಂಶಗಳಿಂದ ಈ ಹಾಲು ತಯಾರಾಗಿದೆ. ಒಂದು ವರ್ಷ, ನಾಲ್ಕು ತಿಂಗಳು ನಡೆಸಿದ ಸಂಶೋಧನೆಯಿಂದ ಈ ಹಾಲು ಅಭಿವೃದ್ಧಿಪಡಿಸಲಾಗಿದೆ. ಅದಕ್ಕಾಗಿಯೇ ಇದಕ್ಕೆ ‘1.4 ಮಿಲ್ಕ್’ ಎಂದೂ ನಾಮಕರಣ ಮಾಡಲಾಗಿದ್ದು, ಮಕ್ಕಳಿಗೆ, ಹಿರಿಯರಿಗೆ, ಕ್ರೀಡಾಪಟುಗಳಿಗೆ ವಿವಿಧ ಗುಣಮಟ್ಟಗಳಲ್ಲಿ ಹಾಲು ಲಭ್ಯವಿದೆ ಎಂದರು.<br /> <br /> ‘ಸಹಜವಾದ ತಾಪಮಾನದಲ್ಲಿ ಒಂದು ದಿನದ ಮಟ್ಟಿಗೆ ಮಾತ್ರ ‘ಹಸಿರು ಹಾಲು’ ಕಾಯ್ದಿರಿಸಬಹುದು. ರೆಫ್ರಿಜಿರೇಟರ್ನಲ್ಲಿ ನಾಲ್ಕು ದಿನಗಳವರೆಗೆ ಇಡಬಹುದು ಎಂದರು. ‘ಸಿಎಫ್ಟಿಆರ್ಐ’ ತನ್ನ ಉತ್ಪನ್ನಗಳ ಮಾರುಕಟ್ಟೆಗಾಗಿ ತನ್ನದೇ ಆದ ಮಾರಾಟ ಮಳಿಗೆಗಳನ್ನು ಆರಂಭಿಸುವ ಯೋಜನೆ ಹೊಂದಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.<br /> <br /> <strong>ಆಹಾರ ಮೇಳ</strong><br /> ಇಲ್ಲಿಯ ಕಲಾಮಂದಿರದಲ್ಲಿ ಬುಧವಾರ ಸಂಜೆ 5 ಗಂಟೆಗೆ ಸಮ್ಮೇಳನ ಉದ್ಘಾಟನೆಯಾಗಲಿದೆ. ವಿಚಾರ ಸಂಕಿರಣ, ಆಹಾರ ಪ್ರದರ್ಶನ ಮತ್ತಿತರ ಕಾರ್ಯಕ್ರಮಗಳು ಸಿಎಫ್ಟಿಆರ್ಐ ಆವರಣದಲ್ಲಿಯೇ ನಡೆಯಲಿವೆ. ‘ಭಾರತೀಯ ಆಹಾರ ವಿಜ್ಞಾನಿಗಳು ಹಾಗೂ ತಂತ್ರಜ್ಞರ ಸಂಘವು ಸಿಎಸ್ಐಆರ್– ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ, ಡಿಆರ್ಡಿಒ ರಕ್ಷಣಾ ಖಾದ್ಯ ಪ್ರಯೋಗಶಾಲೆ, ಹರಿಯಾಣದ ಕುಂಡಲಿಯಲ್ಲಿರುವ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಉದ್ಯಮಶೀಲತೆ ಹಾಗೂ ನಿರ್ವಹಣಾ ಸಂಸ್ಥೆಯ ಸಹಯೋಗದೊಂದಿಗೆ ಸಮ್ಮೇಳನವು ನಡೆಯಲಿದೆ. ಆಹಾರ ತಂತ್ರಜ್ಞಾನ ಪ್ರದರ್ಶನವನ್ನೂ (ಫುಡ್ ಎಕ್ಸ್ಪೋ) ಆಯೋಜಿಸಲಾಗಿದೆ’ ಎಂದು ರಾಜಶೇಖರನ್ ಮಾಹಿತಿ ನೀಡಿದರು.<br /> <br /> ‘ಸಮ್ಮೇಳನದಲ್ಲಿ ವಿವಿಧ ದೇಶಗಳ 100 ವಿಜ್ಞಾನಿಗಳು ಭಾಗವಹಿಸುವರು. ಕೈಗಾರಿಕೋದ್ಯಮಿಗಳು, ಸಂಶೋಧಕರಿಂದ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಾಗಿದೆ. ಸಮ್ಮೇಳನದಲ್ಲಿ 21 ತಾಂತ್ರಿಕ ಸಭೆಗಳು ಜರುಗಲಿವೆ. ಆಹಾರ ಭದ್ರತೆ, ಸುಸ್ಥಿರತೆ, ಸಂಸ್ಕರಣೆ, ಆರೋಗ್ಯ ಹಾಗೂ ಪೌಷ್ಟಿಕತೆ, ಕುರಿತ ತಾಂತ್ರಿಕ ಗೋಷ್ಠಿಗಳು ನಡೆಯಲಿವೆ. ಹರಿಯಾಣದ ‘ನಿಫ್ಟೆಮ್’ ಸಂಸ್ಥೆಯ ನಿರ್ದೇಶಕ ಅಜಿತಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ದೇಶವು ಎದುರಿಸುತ್ತಿರುವ ಆಹಾರ ಅಪೌಷ್ಟಿಕತೆಯ ಸಮಸ್ಯೆ ತಗ್ಗಿಸಲು ಮೈಸೂರಿನ ಕೇಂದ್ರ ಆಹಾರ ಮತ್ತು ತಂತ್ರಜ್ಞಾನ ಸಂಶೋಧನ ಸಂಸ್ಥೆ (ಸಿಎಫ್ಟಿಆರ್ಐ) ‘ಹಸಿರು ಕ್ಷೀರ’ ಅಭಿವೃದ್ಧಿಪಡಿಸಿದೆ.<br /> <br /> ಬುಧವಾರದಿಂದ (ಡಿ. 18) ನಾಲ್ಕು ದಿನಗಳವರೆಗೆ ಇಲ್ಲಿ ನಡೆಯಲಿರುವ 7ನೇ ಇಫ್ಕಾನ್ ಅಂತರರಾಷ್ಟ್ರೀಯ ಆಹಾರ ವಿಜ್ಞಾನಿಗಳು ಹಾಗೂ ತಂತ್ರಜ್ಞರ ಸಮ್ಮೇಳನದಲ್ಲಿ ಈ ‘ಹಸಿರು ಕ್ಷೀರ’ವನ್ನು ಪರಿಚಯಿಸಲಾಗುತ್ತಿದ್ದು, ಸಾರ್ವಜನಿಕರು ಸಹ ರುಚಿ ನೋಡಬಹುದು.<br /> <br /> <strong>ಏನಿದು ಹಸಿರು ಹಾಲು?</strong><br /> ‘ಡಿಸೈನರ್ ಮಿಲ್ಕ್’ ಎಂದೂ ಕರೆಯಲಾಗುವ ಈ ‘ಹಸಿರು ಹಾಲು’ ಹಸು, ಎಮ್ಮೆ ಮತ್ತಿತರ ಪ್ರಾಣಿಗಳ ಉತ್ಪನ್ನವಲ್ಲ. ನಮ್ಮ ಸುತ್ತಮುತ್ತ ಯಥೇಚ್ಛವಾಗಿ ಸಿಗುವ ಹಸಿರು ತರಕಾರಿ, ಸೊಪ್ಪುಗಳಿಂದ ತಯಾರಿಸಿದ್ದು. ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ‘ಸಿಎಫ್ಟಿಆರ್ಐ’ ನಿರ್ದೇಶಕ ಪ್ರೊ.ರಾಮ ರಾಜಶೇಖರನ್, ನುಗ್ಗೆಸೊಪ್ಪು, ಕೀರೆಸೊಪ್ಪು (ಗೋಣಿ), ಚಿಕೋರಿ, ಅಣಬೆ ಮತ್ತು ತುಳಸಿ ಬೀಜದಿಂದ ಬೇರ್ಪಡಿಸಲಾದ ಪ್ರೋಟಿನ್, ಅಮೈನೋ ಆಮ್ಲಗಳು ಸೇರಿದಂತೆ ಮತ್ತಿತರ ಪೋಷಕಾಂಶಗಳಿಂದ ಈ ಹಾಲು ತಯಾರಾಗಿದೆ. ಒಂದು ವರ್ಷ, ನಾಲ್ಕು ತಿಂಗಳು ನಡೆಸಿದ ಸಂಶೋಧನೆಯಿಂದ ಈ ಹಾಲು ಅಭಿವೃದ್ಧಿಪಡಿಸಲಾಗಿದೆ. ಅದಕ್ಕಾಗಿಯೇ ಇದಕ್ಕೆ ‘1.4 ಮಿಲ್ಕ್’ ಎಂದೂ ನಾಮಕರಣ ಮಾಡಲಾಗಿದ್ದು, ಮಕ್ಕಳಿಗೆ, ಹಿರಿಯರಿಗೆ, ಕ್ರೀಡಾಪಟುಗಳಿಗೆ ವಿವಿಧ ಗುಣಮಟ್ಟಗಳಲ್ಲಿ ಹಾಲು ಲಭ್ಯವಿದೆ ಎಂದರು.<br /> <br /> ‘ಸಹಜವಾದ ತಾಪಮಾನದಲ್ಲಿ ಒಂದು ದಿನದ ಮಟ್ಟಿಗೆ ಮಾತ್ರ ‘ಹಸಿರು ಹಾಲು’ ಕಾಯ್ದಿರಿಸಬಹುದು. ರೆಫ್ರಿಜಿರೇಟರ್ನಲ್ಲಿ ನಾಲ್ಕು ದಿನಗಳವರೆಗೆ ಇಡಬಹುದು ಎಂದರು. ‘ಸಿಎಫ್ಟಿಆರ್ಐ’ ತನ್ನ ಉತ್ಪನ್ನಗಳ ಮಾರುಕಟ್ಟೆಗಾಗಿ ತನ್ನದೇ ಆದ ಮಾರಾಟ ಮಳಿಗೆಗಳನ್ನು ಆರಂಭಿಸುವ ಯೋಜನೆ ಹೊಂದಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.<br /> <br /> <strong>ಆಹಾರ ಮೇಳ</strong><br /> ಇಲ್ಲಿಯ ಕಲಾಮಂದಿರದಲ್ಲಿ ಬುಧವಾರ ಸಂಜೆ 5 ಗಂಟೆಗೆ ಸಮ್ಮೇಳನ ಉದ್ಘಾಟನೆಯಾಗಲಿದೆ. ವಿಚಾರ ಸಂಕಿರಣ, ಆಹಾರ ಪ್ರದರ್ಶನ ಮತ್ತಿತರ ಕಾರ್ಯಕ್ರಮಗಳು ಸಿಎಫ್ಟಿಆರ್ಐ ಆವರಣದಲ್ಲಿಯೇ ನಡೆಯಲಿವೆ. ‘ಭಾರತೀಯ ಆಹಾರ ವಿಜ್ಞಾನಿಗಳು ಹಾಗೂ ತಂತ್ರಜ್ಞರ ಸಂಘವು ಸಿಎಸ್ಐಆರ್– ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ, ಡಿಆರ್ಡಿಒ ರಕ್ಷಣಾ ಖಾದ್ಯ ಪ್ರಯೋಗಶಾಲೆ, ಹರಿಯಾಣದ ಕುಂಡಲಿಯಲ್ಲಿರುವ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಉದ್ಯಮಶೀಲತೆ ಹಾಗೂ ನಿರ್ವಹಣಾ ಸಂಸ್ಥೆಯ ಸಹಯೋಗದೊಂದಿಗೆ ಸಮ್ಮೇಳನವು ನಡೆಯಲಿದೆ. ಆಹಾರ ತಂತ್ರಜ್ಞಾನ ಪ್ರದರ್ಶನವನ್ನೂ (ಫುಡ್ ಎಕ್ಸ್ಪೋ) ಆಯೋಜಿಸಲಾಗಿದೆ’ ಎಂದು ರಾಜಶೇಖರನ್ ಮಾಹಿತಿ ನೀಡಿದರು.<br /> <br /> ‘ಸಮ್ಮೇಳನದಲ್ಲಿ ವಿವಿಧ ದೇಶಗಳ 100 ವಿಜ್ಞಾನಿಗಳು ಭಾಗವಹಿಸುವರು. ಕೈಗಾರಿಕೋದ್ಯಮಿಗಳು, ಸಂಶೋಧಕರಿಂದ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಾಗಿದೆ. ಸಮ್ಮೇಳನದಲ್ಲಿ 21 ತಾಂತ್ರಿಕ ಸಭೆಗಳು ಜರುಗಲಿವೆ. ಆಹಾರ ಭದ್ರತೆ, ಸುಸ್ಥಿರತೆ, ಸಂಸ್ಕರಣೆ, ಆರೋಗ್ಯ ಹಾಗೂ ಪೌಷ್ಟಿಕತೆ, ಕುರಿತ ತಾಂತ್ರಿಕ ಗೋಷ್ಠಿಗಳು ನಡೆಯಲಿವೆ. ಹರಿಯಾಣದ ‘ನಿಫ್ಟೆಮ್’ ಸಂಸ್ಥೆಯ ನಿರ್ದೇಶಕ ಅಜಿತಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>