<p>ತೋವಿನಕೆರೆ: ಕೊರಟಗೆರೆ ರಸ್ತೆಯಲ್ಲಿರುವ ಹೇಮಾವತಿ ನೀರಿನ ಪೈಪ್ಲೈನ್ಗೆ ಬುಧವಾರ ಕಾಟಾಚಾರದ ರಿಪೇರಿ ಮಾಡಲಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.<br /> <br /> ಹಲವು ತಿಂಗಳಿಂದ ಪೈಪ್ಲೈನ್ನ ಹೇಮಾವತಿ ನೀರು ರಸ್ತೆಯ ಮೇಲೆ ಹರಿದು ಚರಂಡಿ ಸೇರುತ್ತಿತ್ತು. ಇದೀಗ ನೀರು ರಸ್ತೆಯ ಮೇಲೆ ಹರಿಯದೆ ನೇರವಾಗಿ ಚರಂಡಿ ಸೇರುವಂತೆ ರಿಪೇರಿ ಮಾಡಲಾಗಿದೆ.<br /> <br /> ಈ ವಿಷಯ ತಿಳಿದ ಜಿ.ಪಂ ಸದಸ್ಯ ಟಿ.ಡಿ.ಪ್ರಸನ್ನಕುಮಾರ್, ಅಧಿಕಾರಿಗಳನ್ನು ಸಂಪರ್ಕಿಸಿ ಇನ್ನು ಮೂರು ದಿನದಲ್ಲಿ ಪೈಪ್ಲೈನ್ನ ಸಂಪೂರ್ಣ ದುರಸ್ತಿಗೆ ಸೂಚಿಸಿದ್ದಾರೆ.<br /> <br /> ಸ್ಪಷ್ಟನೆ: ಪೈಪ್ಲೈನ್ ಒಡೆದಿರುವ ವಿಚಾರದಲ್ಲಿ ರೈತರನ್ನು ಬಂಧಿಸುವಂತೆ ನಾನು ಯಾರಿಗೂ ಸೂಚಿಸಿಲ್ಲ ಎಂದು ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.<br /> <br /> ಈ ವಿಚಾರದಲ್ಲಿ ಕೆಲವರು ನನ್ನ ವಿರುದ್ಧ ವ್ಯವಸ್ಥಿತವಾಗಿ ಗಾಳಿಸುದ್ದಿ ಹರಡುತ್ತಿದ್ದಾರೆ. ನಗರ ಪ್ರದೇಶದ ಜನರ ಬಗ್ಗೆ ಇರುವಷ್ಟೇ ಕಾಳಜಿ ಮತ್ತು ಪ್ರೀತಿ ಗ್ರಾಮೀಣ ಪ್ರದೇಶದ ಜನಗಳ ಬಗ್ಗೆಯೂ ಇದೆ ಎಂದು ತಿಳಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತೋವಿನಕೆರೆ: ಕೊರಟಗೆರೆ ರಸ್ತೆಯಲ್ಲಿರುವ ಹೇಮಾವತಿ ನೀರಿನ ಪೈಪ್ಲೈನ್ಗೆ ಬುಧವಾರ ಕಾಟಾಚಾರದ ರಿಪೇರಿ ಮಾಡಲಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.<br /> <br /> ಹಲವು ತಿಂಗಳಿಂದ ಪೈಪ್ಲೈನ್ನ ಹೇಮಾವತಿ ನೀರು ರಸ್ತೆಯ ಮೇಲೆ ಹರಿದು ಚರಂಡಿ ಸೇರುತ್ತಿತ್ತು. ಇದೀಗ ನೀರು ರಸ್ತೆಯ ಮೇಲೆ ಹರಿಯದೆ ನೇರವಾಗಿ ಚರಂಡಿ ಸೇರುವಂತೆ ರಿಪೇರಿ ಮಾಡಲಾಗಿದೆ.<br /> <br /> ಈ ವಿಷಯ ತಿಳಿದ ಜಿ.ಪಂ ಸದಸ್ಯ ಟಿ.ಡಿ.ಪ್ರಸನ್ನಕುಮಾರ್, ಅಧಿಕಾರಿಗಳನ್ನು ಸಂಪರ್ಕಿಸಿ ಇನ್ನು ಮೂರು ದಿನದಲ್ಲಿ ಪೈಪ್ಲೈನ್ನ ಸಂಪೂರ್ಣ ದುರಸ್ತಿಗೆ ಸೂಚಿಸಿದ್ದಾರೆ.<br /> <br /> ಸ್ಪಷ್ಟನೆ: ಪೈಪ್ಲೈನ್ ಒಡೆದಿರುವ ವಿಚಾರದಲ್ಲಿ ರೈತರನ್ನು ಬಂಧಿಸುವಂತೆ ನಾನು ಯಾರಿಗೂ ಸೂಚಿಸಿಲ್ಲ ಎಂದು ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.<br /> <br /> ಈ ವಿಚಾರದಲ್ಲಿ ಕೆಲವರು ನನ್ನ ವಿರುದ್ಧ ವ್ಯವಸ್ಥಿತವಾಗಿ ಗಾಳಿಸುದ್ದಿ ಹರಡುತ್ತಿದ್ದಾರೆ. ನಗರ ಪ್ರದೇಶದ ಜನರ ಬಗ್ಗೆ ಇರುವಷ್ಟೇ ಕಾಳಜಿ ಮತ್ತು ಪ್ರೀತಿ ಗ್ರಾಮೀಣ ಪ್ರದೇಶದ ಜನಗಳ ಬಗ್ಗೆಯೂ ಇದೆ ಎಂದು ತಿಳಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>