<p><strong>ಬೆಳಗಾವಿ:</strong> ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ `ಬೆಳಗಾವಿ~ ಎಂದು ಉಚ್ಚರಿಸಿದ ಅಧಿಕಾರಿಗಳನ್ನು ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯರು ಅಸಂವಿಧಾನಿಕ ಹಾಗೂ ಅಶ್ಲೀಲ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ ಘಟನೆ ಶನಿವಾರ ನಡೆಯಿತು.<br /> <br /> ಸಭೆ ಆರಂಭವಾದಾಗ ಅಧಿಕಾರಿಗಳು ಮಾತನಾಡುವಾಗ `ಬೆಳಗಾವಿ~ ಎಂದು ಉಚ್ಚರಿಸಿದ್ದಕ್ಕೆ ಎಂಇಎಸ್ ಸದಸ್ಯರು ಆಕ್ಷೇಪಿಸಿದರು. `ಬೆಳಗಾಮ್~ ಎಂಬುದನ್ನು `ಬೆಳಗಾವಿ~ ಎಂದು ಯಾವ ಆಧಾರದಲ್ಲಿ ನೀವು ಹೇಳಿದಿರಿ. ಇದನ್ನು ಬದಲಾಯಿಸಿರುವ ಬಗ್ಗೆ ದಾಖಲೆಗಳನ್ನು ನೀಡಿರಿ ಎಂದು ಗದ್ದಲ ಎಬ್ಬಿಸಿದರು. <br /> <br /> ಈ ವಿಷಯವು ತಾಲ್ಲೂಕು ಪಂಚಾಯ್ತಿ ವ್ಯಾಪ್ತಿಗೆ ಬರುವುದಿಲ್ಲ ಹಾಗೂ ಈ ಬಗ್ಗೆ ಚರ್ಚಿಸಲು ಇದು ಸಮರ್ಪಕವಾದ ವೇದಿಕೆಯೂ ಅಲ್ಲ ಎಂದು ಅಧಿಕಾರಿಗಳು ಸಮಾಧಾನ ಪಡಿಸಲು ಯತ್ನಿಸಿದರು. ಹೀಗಿದ್ದರೂ ಸಹ ಎಂಇಎಸ್ ಸದಸ್ಯರು ಘೋಷಣೆಗಳನ್ನು ಕೂಗುತ್ತ, ಅಶ್ಲೀಲ ಹಾಗೂ ಅಸಂವಿಧಾನಿಕ ಪದಗಳಿಂದ ನಿಂದಿಸಿ, ಅಧಿಕಾರಿ ಐ.ಸಿ. ಹೆದ್ದುರಿ ಅವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದರು.<br /> <br /> ಈ ವಿಷಯವನ್ನು ಕೈಬಿಟ್ಟು ಸಭೆಯ ಕಾರ್ಯಸೂಚಿ ಪ್ರಕಾರ ಚರ್ಚಿಸುವಂತೆ ಅಧಿಕಾರಿಗಳು ಮನವಿ ಮಾಡಿದರೂ, ಎಂಇಎಸ್ ಸದಸ್ಯರಾದ ಸುರೇಶ ರಾಜುಕರ್, ಸಾಗರ ಪಾಟೀಲ, ರಮೇಶ ಬೆಳಗಾಂವಕರ ಮತ್ತಿತರರು ಕನ್ನಡದ ವಿರುದ್ಧ ಘೋಷಣೆ ಕೂಗುತ್ತ, ಕನ್ನಡದಲ್ಲಿ `ಬೆಳಗಾವಿ~ ಎಂದು ಕರೆಯುವುದಕ್ಕೆ ವಿರೋಧ ವ್ಯಕ್ತಪಡಿಸಿದರು. <br /> <br /> ಬಿಜೆಪಿ ಹಾಗೂ ಕಾಂಗ್ರೆಸ್ನ ಕನ್ನಡ ಪರ ಸದಸ್ಯರು ಮಧ್ಯ ಪ್ರವೇಶಿಸಿ, `ಅಪ್ರಸ್ತುತ ವಿಷಯದ ಮೇಲೆ ಚರ್ಚೆ ನಡೆಸುವುದನ್ನು ಬಿಟ್ಟು, ಕುಡಿಯುವ ನೀರಿನ ಸಮಸ್ಯೆ ಹಾಗೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸೋಣ~ ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಎಂಇಎಸ್ ಹಾಗೂ ಕನ್ನಡ ಪರ ಸದಸ್ಯರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಬಳಿಕ ಕೆಲ ಕಾಲ ಸಭೆಯನ್ನು ಮುಂಡೂಡಲಾಯಿತು. <br /> <br /> ಬಳಿಕ ಸಭೆ ಆರಂಭವಾಗುತ್ತಿದ್ದಂತೆಯೇ, ಕನ್ನಡ ಪರ ಸದಸ್ಯ ಬಸನಗೌಡ ಪಾಟೀಲ ಮಾತನಾಡಿ, ಸಭೆಯಲ್ಲಿನ ಬೆಳವಣಿಗೆ ಹಾಗೂ ಎಂಇಎಸ್ ಸದಸ್ಯರು ಪ್ರತಿ ಬಾರಿಯೂ ಸಭೆ ನಡೆಸಲು ಅಡ್ಡಿಪಡಿಸುತ್ತಿರುವ ಬಗ್ಗೆ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಅವರನ್ನು ಒತ್ತಾಯಿಸಿದರು. <br /> <br /> ಕಾರ್ಯನಿರ್ವಹಣಾಧಿಕಾರಿ ಎ.ಎಂ. ಪಾಟೀಲ ಮಾತನಾಡಿ, `ಸಭೆಯಲ್ಲಿ ಅಸಂವಿಧಾನಿಕ ಪದ ಬಳಕೆ ಹಾಗೂ ಅಶ್ಲೀಲ ನಿಂದಿನೆ ಸಹಿಸಲಸಾಧ್ಯ. ಇದು ಸಭೆಗೆ ಶೋಭೆ ತರುವುದಿಲ್ಲ. ಈ ಘಟನೆ ಖಂಡನೀಯ~ ಎಂದು ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ಮಲ್ಲವ್ವ ಕೋಲಕಾರ ವಹಿಸಿದ್ದರು. ಉಪಾಧ್ಯಕ್ಷೆ ಸುನೀತಾ ಬುವಾ ಹಾಜರಿದ್ದರು.<strong> <br /> <br /> </strong>ತಾ.ಪಂ.ನ ಪ್ರತಿ ಸಾಮಾನ್ಯ ಸಭೆಯಲ್ಲೂ ಎಂಇಎಸ್ ಸದಸ್ಯರು `ಕನ್ನಡ- ಮರಾಠಿ~ ವಿಷಯಕ್ಕೆ ಸಂಬಂಧಿಸಿದಂತೆ ಗದ್ದಲ ಎಬ್ಬಿಸುತ್ತಿದ್ದಾರೆ. ಸಭೆಯ ನಡಾವಳಿಯಂತೆ ಕ್ಷೇತ್ರದ ಸಮಸ್ಯೆ, ಅಭಿವೃದ್ಧಿ ಕುರಿತು ಚರ್ಚಿಸುವುದನ್ನು ಬಿಟ್ಟು, ಭಾಷಾ ಸಮಸ್ಯೆ ಕುರಿತು `ಗದ್ದಲ~ ಎಬ್ಬಿಸುವುದನ್ನೇ ತಮ್ಮ ಕಾರ್ಯಸೂಚಿ ಮಾಡಿಕೊಂಡಿದ್ದಾರೆ ಎಂದು ಸದಸ್ಯ ಬಸನಗೌಡ ಪಾಟೀಲ ವಿಷಾದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ `ಬೆಳಗಾವಿ~ ಎಂದು ಉಚ್ಚರಿಸಿದ ಅಧಿಕಾರಿಗಳನ್ನು ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯರು ಅಸಂವಿಧಾನಿಕ ಹಾಗೂ ಅಶ್ಲೀಲ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ ಘಟನೆ ಶನಿವಾರ ನಡೆಯಿತು.<br /> <br /> ಸಭೆ ಆರಂಭವಾದಾಗ ಅಧಿಕಾರಿಗಳು ಮಾತನಾಡುವಾಗ `ಬೆಳಗಾವಿ~ ಎಂದು ಉಚ್ಚರಿಸಿದ್ದಕ್ಕೆ ಎಂಇಎಸ್ ಸದಸ್ಯರು ಆಕ್ಷೇಪಿಸಿದರು. `ಬೆಳಗಾಮ್~ ಎಂಬುದನ್ನು `ಬೆಳಗಾವಿ~ ಎಂದು ಯಾವ ಆಧಾರದಲ್ಲಿ ನೀವು ಹೇಳಿದಿರಿ. ಇದನ್ನು ಬದಲಾಯಿಸಿರುವ ಬಗ್ಗೆ ದಾಖಲೆಗಳನ್ನು ನೀಡಿರಿ ಎಂದು ಗದ್ದಲ ಎಬ್ಬಿಸಿದರು. <br /> <br /> ಈ ವಿಷಯವು ತಾಲ್ಲೂಕು ಪಂಚಾಯ್ತಿ ವ್ಯಾಪ್ತಿಗೆ ಬರುವುದಿಲ್ಲ ಹಾಗೂ ಈ ಬಗ್ಗೆ ಚರ್ಚಿಸಲು ಇದು ಸಮರ್ಪಕವಾದ ವೇದಿಕೆಯೂ ಅಲ್ಲ ಎಂದು ಅಧಿಕಾರಿಗಳು ಸಮಾಧಾನ ಪಡಿಸಲು ಯತ್ನಿಸಿದರು. ಹೀಗಿದ್ದರೂ ಸಹ ಎಂಇಎಸ್ ಸದಸ್ಯರು ಘೋಷಣೆಗಳನ್ನು ಕೂಗುತ್ತ, ಅಶ್ಲೀಲ ಹಾಗೂ ಅಸಂವಿಧಾನಿಕ ಪದಗಳಿಂದ ನಿಂದಿಸಿ, ಅಧಿಕಾರಿ ಐ.ಸಿ. ಹೆದ್ದುರಿ ಅವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದರು.<br /> <br /> ಈ ವಿಷಯವನ್ನು ಕೈಬಿಟ್ಟು ಸಭೆಯ ಕಾರ್ಯಸೂಚಿ ಪ್ರಕಾರ ಚರ್ಚಿಸುವಂತೆ ಅಧಿಕಾರಿಗಳು ಮನವಿ ಮಾಡಿದರೂ, ಎಂಇಎಸ್ ಸದಸ್ಯರಾದ ಸುರೇಶ ರಾಜುಕರ್, ಸಾಗರ ಪಾಟೀಲ, ರಮೇಶ ಬೆಳಗಾಂವಕರ ಮತ್ತಿತರರು ಕನ್ನಡದ ವಿರುದ್ಧ ಘೋಷಣೆ ಕೂಗುತ್ತ, ಕನ್ನಡದಲ್ಲಿ `ಬೆಳಗಾವಿ~ ಎಂದು ಕರೆಯುವುದಕ್ಕೆ ವಿರೋಧ ವ್ಯಕ್ತಪಡಿಸಿದರು. <br /> <br /> ಬಿಜೆಪಿ ಹಾಗೂ ಕಾಂಗ್ರೆಸ್ನ ಕನ್ನಡ ಪರ ಸದಸ್ಯರು ಮಧ್ಯ ಪ್ರವೇಶಿಸಿ, `ಅಪ್ರಸ್ತುತ ವಿಷಯದ ಮೇಲೆ ಚರ್ಚೆ ನಡೆಸುವುದನ್ನು ಬಿಟ್ಟು, ಕುಡಿಯುವ ನೀರಿನ ಸಮಸ್ಯೆ ಹಾಗೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸೋಣ~ ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಎಂಇಎಸ್ ಹಾಗೂ ಕನ್ನಡ ಪರ ಸದಸ್ಯರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಬಳಿಕ ಕೆಲ ಕಾಲ ಸಭೆಯನ್ನು ಮುಂಡೂಡಲಾಯಿತು. <br /> <br /> ಬಳಿಕ ಸಭೆ ಆರಂಭವಾಗುತ್ತಿದ್ದಂತೆಯೇ, ಕನ್ನಡ ಪರ ಸದಸ್ಯ ಬಸನಗೌಡ ಪಾಟೀಲ ಮಾತನಾಡಿ, ಸಭೆಯಲ್ಲಿನ ಬೆಳವಣಿಗೆ ಹಾಗೂ ಎಂಇಎಸ್ ಸದಸ್ಯರು ಪ್ರತಿ ಬಾರಿಯೂ ಸಭೆ ನಡೆಸಲು ಅಡ್ಡಿಪಡಿಸುತ್ತಿರುವ ಬಗ್ಗೆ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಅವರನ್ನು ಒತ್ತಾಯಿಸಿದರು. <br /> <br /> ಕಾರ್ಯನಿರ್ವಹಣಾಧಿಕಾರಿ ಎ.ಎಂ. ಪಾಟೀಲ ಮಾತನಾಡಿ, `ಸಭೆಯಲ್ಲಿ ಅಸಂವಿಧಾನಿಕ ಪದ ಬಳಕೆ ಹಾಗೂ ಅಶ್ಲೀಲ ನಿಂದಿನೆ ಸಹಿಸಲಸಾಧ್ಯ. ಇದು ಸಭೆಗೆ ಶೋಭೆ ತರುವುದಿಲ್ಲ. ಈ ಘಟನೆ ಖಂಡನೀಯ~ ಎಂದು ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ಮಲ್ಲವ್ವ ಕೋಲಕಾರ ವಹಿಸಿದ್ದರು. ಉಪಾಧ್ಯಕ್ಷೆ ಸುನೀತಾ ಬುವಾ ಹಾಜರಿದ್ದರು.<strong> <br /> <br /> </strong>ತಾ.ಪಂ.ನ ಪ್ರತಿ ಸಾಮಾನ್ಯ ಸಭೆಯಲ್ಲೂ ಎಂಇಎಸ್ ಸದಸ್ಯರು `ಕನ್ನಡ- ಮರಾಠಿ~ ವಿಷಯಕ್ಕೆ ಸಂಬಂಧಿಸಿದಂತೆ ಗದ್ದಲ ಎಬ್ಬಿಸುತ್ತಿದ್ದಾರೆ. ಸಭೆಯ ನಡಾವಳಿಯಂತೆ ಕ್ಷೇತ್ರದ ಸಮಸ್ಯೆ, ಅಭಿವೃದ್ಧಿ ಕುರಿತು ಚರ್ಚಿಸುವುದನ್ನು ಬಿಟ್ಟು, ಭಾಷಾ ಸಮಸ್ಯೆ ಕುರಿತು `ಗದ್ದಲ~ ಎಬ್ಬಿಸುವುದನ್ನೇ ತಮ್ಮ ಕಾರ್ಯಸೂಚಿ ಮಾಡಿಕೊಂಡಿದ್ದಾರೆ ಎಂದು ಸದಸ್ಯ ಬಸನಗೌಡ ಪಾಟೀಲ ವಿಷಾದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>