<p>ಡಾ.ಟಿ.ಎಸ್.ಸತ್ಯವತಿಯವರು ಗಾಯಕಿ ಮಾತ್ರವಲ್ಲ ಬೋಧಕಿಯಾಗಿಯೂ ಮಾನಿತರು. ಅವರು ಶಾಸ್ತ್ರಜ್ಞೆಯಾಗಿ ಸಹ ಗೌರವಾನ್ವಿತರು. ಮಾನಸೋಲ್ಲಾಸದ ಮೇಲೆ ಮಾಡಿದ ಅಧ್ಯಯನಕ್ಕೆ ಡಾಕ್ಟರೇಟ್ ಪದವಿಯೂ ಸಿಕ್ಕಿದೆ. ಅವರ ಗಾಯನ, ಅಧ್ಯಯನ, ವಿದ್ವತ್ಗಳನ್ನು ಗೌರವಿಸಿ, ಕರ್ನಾಟಕ ಗಾನಕಲಾ ಪರಿಷತ್ತು `ಗಾನಕಲಾಶ್ರೀ~ ಬಿರುದು ನೀಡಿ ಗೌರವಿಸಿದೆ. <br /> <br /> ಸತ್ಯವತಿಯವರ ಕಛೇರಿ ಯಾವಾಗಲೂ ವಿದ್ವತ್ಪೂರ್ಣ! ತಾಳವಾದ್ಯೋತ್ಸವದಲ್ಲಿ- ಸೋಮವಾರ ಮಾಡಿದ ಕಛೇರಿಯಲ್ಲಿ ಸಂಗೀತೋತ್ಸವಕ್ಕೆ ಹೊಂದುವಂತೆ ಭವ್ಯವಾದ ಪಲ್ಲವಿಯೊಂದನ್ನು ಆಯ್ದುಕೊಂಡಿದ್ದರು. ಮಿಶ್ರಝಂಪೆಯಲ್ಲಿದ್ದ ಹಾಸನ್ನು (ಅಚ್ಯುತಾನಂತ ಗೋವಿಂದ ಪಾಹಿಮಾಂ) ಮೂರು ವಿಭಾಗಗಳಲ್ಲಿ ಅರಳಿಸಿದರು.<br /> <br /> ಹಿಂದಿನ ಕಾಲ, ಮೇಲ್ ಕಾಲ, ತಿಶ್ರದಲ್ಲಿ ಸಾಂಪ್ರದಾಯಕವಾಗಿ ಬೆಳೆಸಿದರು. ಸಮದಿಂದ ಚತುಶ್ರಕಳೆ ಮಾಡಿ, ಅಕ್ಷರ ತ್ರಿಕಾಲ ರೋಚಕವಾಗಿತ್ತು. ಸ್ವರಪ್ರಸ್ತಾರವೂ ಸ್ವಾರಸ್ಯಕರ. ಕಾಮವರ್ಧಿನಿ ರಾಗದ ಎಲ್ಲ ಮಗ್ಗಲುಗಳು ಗೋಚರವಾಗುವಂತೆ ಪಲ್ಲವಿಯು ಪಲ್ಲವಿಸಿತು.<br /> <br /> ಆ ಮೊದಲು ಹಾಡಿದ ದೇವಮನೋಹರಿ ರಾಗವು ಒಳ್ಳೆಯ ವಜನ್ನಿಂದ ಕೂಡಿತ್ತು. ಖರಹರಪ್ರಿಯ ಕುಟುಂಬಕ್ಕೆ ಸೇರಿದ ಇದೊಂದು ಜನಪ್ರಿಯ ಪ್ರಾಚೀನ ರಕ್ತಿ ರಾಗ. ಕುಪ್ಪಯ್ಯರ್ ಅವರ ಮಹದೇವ ಮನೋಹರಿ ಒಂದು ಹಸನಾದ ಕೃತಿ. ತ್ಯಾಗರಾಜರ `ರಾಮನೀ ಪೈ~ ನಂತರ ಶ್ಯಾಮಾಶಾಸ್ತ್ರಿಗಳ ಪ್ರಸಿದ್ಧ ಕೃತಿ `ಬ್ರೋವಮ್ಮ~ ವಿಳಂಬದಲ್ಲಿ ಭಾವಪೂರ್ಣವಾಗಿ ಹೊಮ್ಮಿತು.<br /> <br /> ಪಿಟೀಲಿನಲ್ಲಿ ನಳಿನಾ ಮೋಹನ್, ಮೃದಂಗದಲ್ಲಿ ಕೆ.ಯು. ಜಯಚಂದ್ರರಾವ್ ಹಾಗೂ ಘಟದಲ್ಲಿ ಫಣೀಂದ್ರ ಭಾಸ್ಕರ್ ಪಕ್ಕವಾದ್ಯಗಳನ್ನು ನುಡಿಸಿದರು. ಕಿರಿಯ ವಿದ್ಯಾರ್ಥಿನಿ ಲಾವಣ್ಯ ಕೃಷ್ಣಮೂರ್ತಿ ಹಿನ್ನೆಲೆಯಲ್ಲಿ ಹಾಡುತ್ತಾ ನೆರವಾದರು.<br /> <br /> ತಾಳವಾದ್ಯ ಕಲಾಕೇಂದ್ರ ಆಶ್ರಯದಲ್ಲಿ ನಡೆಯುತ್ತಿರುವ ವಾರ್ಷಿಕ ತಾಳವಾದ್ಯೋತ್ಸವದ ಅಂಗವಾಗಿ ಡಾ. ಸತ್ಯವತಿ ಅವರ ಗಾಯನ ಕಾರ್ಯಕ್ರಮ ನಡೆಯಿತು. ಸಂಗೀತ ಕಛೇರಿಗಳಲ್ಲದೆ (ಗಾಯನ, ವಾದ್ಯ ದ್ವಯ, ಜುಗಲ್ ಬಂದಿ) ಪ್ರಾತ್ಯಕ್ಷಿಕೆ, ಉಪನ್ಯಾಸ, ಲಯವಿನ್ಯಾಸ ಹಾಗೂ ವಿಚಾರ ಸಂಕಿರಣಗಳೂ ಸೇರಿ ಉತ್ಸವದ ಉಪಯುಕ್ತತೆಯನ್ನು ಹೆಚ್ಚಿಸಿವೆ. <br /> <br /> <strong>ಪ್ರೌಢ ಗಾಯನ</strong><br /> ಮಧುರೆ ಮಣಿ ಅಯ್ಯರ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಟಿ.ವಿ. ಶಂಕರನಾರಾಯಣನ್ ಅವರ ಕಾರ್ಯಕ್ರಮ ಏರ್ಪಡಿಸಿದ್ದು ಉಚಿತವಾಗಿತ್ತು. ಸಂಗೀತ ಕಳಾನಿಧಿ ಟಿ.ವಿ. ಶಂಕರನಾರಾಯಣನ್ ತಮ್ಮ ಗಾಯನದಲ್ಲಿ ಪ್ರಮುಖವಾಗಿ ಎರಡು ರಾಗಗಳನ್ನು ವಿಸ್ತರಿಸಿದರು.<br /> <br /> ತೋಡಿಯನ್ನು ಶಾಸ್ತ್ರೀಯವಾಗಿ ಅರಳಿಸಿ ಕೃತಿಗೆ ಭದ್ರವಾದ ಹಿನ್ನೆಲೆ ಒದಗಿಸಿದರು. ತ್ಯಾಗರಾಜರ `ರಾಜುವೆಡಲೆ ಚೂತಮು ರಾರೇ~ ಕೃತಿಯನ್ನು ಹಿರಿಯರು ಮೊದಲಿನಿಂದಲೂ ವಿಸ್ತಾರಕ್ಕೆ ಆಯ್ದುಕೊಂಡು ಬಂದಿದ್ದಾರೆ. <br /> <br /> ಶಂಕರನಾರಾಯಣನ್ ಆ ಕೃತಿ ಹಾಗೂ ಸ್ವರ ರಾಗಕ್ಕೆ ಪೂರಕವಾಗಿ ಹಾಡಿದ ಬಗೆ ಅನುಪಮವಾದುದು. ಹಾಗೆಯೇ ನೆರವಲ್ (ಕಾವೇರಿ ತೀರಮುನನು ಪಾವನಮಗು ರಂಗಪುರನಿ) ಸಹ ರಾಗ-ಕೃತಿಗಳೆರಡಕ್ಕೂ ಪೂರಕವಾಗಿ ಬೆಳಗಿತು. ಸ್ವರವನ್ನೂ ಅತಿಚಾಚದೆ ಹಿತಮಿತವಾಗಿ ಅಡಕಗೊಳಿಸಿದ್ದು ಗಮನಾರ್ಹ. <br /> <br /> ಕಾಂಬೋಧಿಯನ್ನು ಹಂತಹಂತವಾಗಿ ಬೆಳೆಸುತ್ತಾ ಪೂರ್ಣತ್ವ ನೀಡಿದರು. ನೆರವಲ್ ಮಾಡಿ ಸರ್ವಲಫುವಿನಲ್ಲಿ ಹಾಕಿದ ಸ್ವರಪ್ರಸ್ತಾರ ಸೊಗಸಾಗಿತ್ತು. ಆ ಮೊದಲು ವಲ್ಲಭ ನಾಯಕಸ್ಯ, `ಓ ಜಗದಂಬ~, `ಭುವನೇಶ್ವರಿಯ~, `ವೆಂಕಟಾಚಲ ನಿಲಯಂ~ ಕೃತಿಗಳು ಕಛೇರಿಯ ಮೌಲ್ಯ ವರ್ಧಿಸಿದವು.<br /> <br /> ಮಗ ಮಹದೇವನ್ ರಾಗಾಲಾಪನೆ, ಸ್ವರ ಪ್ರಸ್ತಾರಗಳಲ್ಲಿ ತನ್ನ ಪ್ರತಿಭೆಯನ್ನು ತೋರಿದ. ಸಿ.ಎನ್. ಚಂದ್ರಶೇಖರ್ ಪಿಟೀಲಿನಲ್ಲಿ ಒತ್ತಾಸೆಯಾಗಿ ನಿಂತರು. ಲಯ ವಾದ್ಯಗಳಲ್ಲಿ ಗುರು-ಶಿಷ್ಯರ ಜೋಡಿ ಶ್ರೀಮುಷ್ಣಂ ರಾಜಾರಾಂ ಮತ್ತು ಎಚ್.ಎಸ್. ಸುಧೀಂದ್ರ ಗಾಯನಕ್ಕೆ ಪೂರಕವಾಗಿ ನುಡಿಸಿದರು.<br /> <br /> <strong>ಸುಂದರ ಮೋಹಿನಿ ಆಟ</strong><br /> ಪ್ರತಿ ಶುಕ್ರವಾರ ಸಾಂಸ್ಕೃತಿಕ ಸಂಜೆ ಮಾಲೆಯಲ್ಲಿ ಮೋಹಿನಿ ಆಟ ನೃತ್ಯ ಮಾಡಿದ ಸಂಗೀತಾ ಭರತನಾಟ್ಯ, ಮೋಹಿನಿ ಆಟ,ಕಥಕ್ಕಳಿ - ಮೂರು ಪ್ರಕಾರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಅನೇಕ ಗುರುಗಳಿಂದ ಕಲಿತು ಇದೀಗ ಕಲಾಮಂಡಳಂ ಹೈಮಾವತಿ ಅವರಲ್ಲಿ ಪ್ರೌಢ ಶಿಕ್ಷಣ ಮುಂದುವರೆಸಿದ್ದಾರೆ.<br /> <br /> ಪ್ರಸ್ತುತ ಕಾರ್ಯಕ್ರಮವನ್ನು ಸಂಗೀತಾ `ಶರಣಂ ಸಿದ್ಧಿವಿನಾಯಕ~ದೊಂದಿಗೆ ಪ್ರಾರಂಭಿಸಿ, ವರ್ಣ `ದಾನಿಗಾಮಜೇಂದ್ರ~ (ಸ್ವಾತಿ ತಿರುನಾಳ್)ದೊಂದಿಗೆ ಮುಂದುವರಿಸಿದರು. ಪದ (ಸ್ವಾತಿ ತಿರುನಾಳ್) ಮತ್ತು ಜಾವಡಿ (ಇದೇನೇ ಸಖಿ) ಗಳೆರಡರಲ್ಲೂ ಅಭಿನಯ ಸಂಯಮ ಪೂರ್ಣವಾಗಿತ್ತು.<br /> <br /> ದೀಕ್ಷಿತರ `ಕಂಜದಳಾಯತಾಕ್ಷಿ~ ಹಾಗೂ ಕುರಂಜಿ ರಾಗದ ಲಾಲಿಯೊಂದಿಗೆ ಮುಕ್ತಾಯಗೊಳಿಸಿದರು. ಮರಕತವಲ್ಲಿಯವರ ಹಿನ್ನೆಲೆ ಗಾಯನ ಪ್ರಖರವಾಗಿದ್ದರೆ, ಲಕ್ಷ್ಮೀ ತಂಗವೇಲು ಅವರ ನಟುವಾಂಗ, ತಂಗವೇಲು ಮೃದಂಗ, ಭುವನೇಶ್ವರಿಯ ಪಿಟೀಲು ಹಾಗೂ ಅಚ್ಯುತ ಅನಂತ ಮಾರನ್ರ ಎಡಕ್ಕ- ನೃತ್ಯದ ಯಶಸ್ಸಿಗೆ ನೆರವಾಯಿತು.<br /> <strong><br /> ಅನನ್ಯದ `ನಿರಂತರ~</strong><br /> ಅನನ್ಯದ `ನಿರಂತರ~ ಮಾಲೆಯಲ್ಲಿ ಹಾಡಿದ ವಿವೇಕ ಸದಾಶಿವಂ ಸಂಗೀತಗಾರರ ಕುಟುಂಬದಿಂದ ಬಂದವ. ತಾತ ಅನಂತರಾಮನ್ ಅಯ್ಯರ್ ಮತ್ತು ತಂದೆ ಎ. ಸದಾಶಿವ ಇಬ್ಬರೂ ಗಾಯಕರು. ಚಿಕ್ಕಮ್ಮ ಎ. ಚಂಪಕವಲ್ಲಿ ಮತ್ತು ತಾಯಿ ರೇವತಿ ಸದಾಶಿವಂ ಇಬ್ಬರೂ ಹಿರಿಯ ಕಲಾವಿದೆಯರು. <br /> <br /> ಕೆಲ ಕಾಲದಿಂದ ಆರ್.ಎನ್. ತ್ಯಾಗರಾಜನ್ ಅವರಲ್ಲಿ ಪ್ರೌಢ ವ್ಯಾಸಂಗ ಮಾಡುತ್ತಿರುವ ವಿವೇಕ್ ಇಂಜಿನಿಯರ್ ಪದವೀಧರ. ಆಕಾಶವಾಣಿ ರಾಷ್ಟ್ರೀಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿರುವ ವಿವೇಕ್ ಮೃದಂಗವನ್ನೂ ಅಭ್ಯಾಸ ಮಾಡುತ್ತಿದ್ದಾರೆ.<br /> <br /> ವಿವೇಕ್ ಪ್ರಸ್ತುತ ಕಛೇರಿಯಲ್ಲಿ ಅಮೃತವರ್ಷಿಣಿ ರಾಗವನ್ನು ಅದ್ಭುತವಾಗಿ ಅರಳಿಸಿದರು. ವಿಳಂಬದಲ್ಲಿ ಹಾಡಿದ `ಮಾಯಮ್ಮ~ ಕೃತಿಯಲ್ಲಿ ಮೂಡಿದ ಭಾವ ಅನುಪಮವಾದುದು. <br /> ಶಂಕರಾಭರಣವನ್ನು ವಿಸ್ತಾರವಾಗಿ ಹಾಡಿ `ಎಂದುಕು ಪೆದ್ದಲ~ ಬೆಳೆಸಿದರು. <br /> <br /> ನೆರವಲ್ ಮಿತವಾಗಿತ್ತು ಹಾಗೂ ಅವರೋಹಣದಲ್ಲಿ ಒಂದೆರಡು ಕಡೆ ತಡವರಿಸಿದರೂ, ಗಾಯಕರ ಒಳ್ಳೆಯ ಪಾಠಾಂತರ ಸುವ್ಯಕ್ತವಾಯಿತು. ಷಣ್ಮುಖಪ್ರಿಯ ರಾಗದಲ್ಲಿ ಆದಿ ತಾಳದಲ್ಲಿ ಪಲ್ಲವಿಯನ್ನು ಮಿತ ವ್ಯಾಪ್ತಿಯಲ್ಲಿ ಪ್ರಸ್ತುತ ಪಡಿಸಿದರು. <br /> <br /> ಒಳ್ಳೆಯ ಕಂಠ ಹೊಂದಿರುವ ವಿವೇಕ್ ಹೆಚ್ಚಿನ ಅನುಭವ, ಪ್ರೌಢ ಶಿಕ್ಷಣಗಳಿಂದ ಮುಗಿಲು ಮುಟ್ಟಬಹುದು. ಪ್ರೇಮ್ ವಿವೇಕ್ (ಪಿಟೀಲು) ಮತ್ತು ಬಿ.ಎಸ್. ಪ್ರಶಾಂತ್ (ಮೃದಂಗ) ಸಹ ತಮ್ಮ ಪ್ರತಿಭೆ ತೋರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಡಾ.ಟಿ.ಎಸ್.ಸತ್ಯವತಿಯವರು ಗಾಯಕಿ ಮಾತ್ರವಲ್ಲ ಬೋಧಕಿಯಾಗಿಯೂ ಮಾನಿತರು. ಅವರು ಶಾಸ್ತ್ರಜ್ಞೆಯಾಗಿ ಸಹ ಗೌರವಾನ್ವಿತರು. ಮಾನಸೋಲ್ಲಾಸದ ಮೇಲೆ ಮಾಡಿದ ಅಧ್ಯಯನಕ್ಕೆ ಡಾಕ್ಟರೇಟ್ ಪದವಿಯೂ ಸಿಕ್ಕಿದೆ. ಅವರ ಗಾಯನ, ಅಧ್ಯಯನ, ವಿದ್ವತ್ಗಳನ್ನು ಗೌರವಿಸಿ, ಕರ್ನಾಟಕ ಗಾನಕಲಾ ಪರಿಷತ್ತು `ಗಾನಕಲಾಶ್ರೀ~ ಬಿರುದು ನೀಡಿ ಗೌರವಿಸಿದೆ. <br /> <br /> ಸತ್ಯವತಿಯವರ ಕಛೇರಿ ಯಾವಾಗಲೂ ವಿದ್ವತ್ಪೂರ್ಣ! ತಾಳವಾದ್ಯೋತ್ಸವದಲ್ಲಿ- ಸೋಮವಾರ ಮಾಡಿದ ಕಛೇರಿಯಲ್ಲಿ ಸಂಗೀತೋತ್ಸವಕ್ಕೆ ಹೊಂದುವಂತೆ ಭವ್ಯವಾದ ಪಲ್ಲವಿಯೊಂದನ್ನು ಆಯ್ದುಕೊಂಡಿದ್ದರು. ಮಿಶ್ರಝಂಪೆಯಲ್ಲಿದ್ದ ಹಾಸನ್ನು (ಅಚ್ಯುತಾನಂತ ಗೋವಿಂದ ಪಾಹಿಮಾಂ) ಮೂರು ವಿಭಾಗಗಳಲ್ಲಿ ಅರಳಿಸಿದರು.<br /> <br /> ಹಿಂದಿನ ಕಾಲ, ಮೇಲ್ ಕಾಲ, ತಿಶ್ರದಲ್ಲಿ ಸಾಂಪ್ರದಾಯಕವಾಗಿ ಬೆಳೆಸಿದರು. ಸಮದಿಂದ ಚತುಶ್ರಕಳೆ ಮಾಡಿ, ಅಕ್ಷರ ತ್ರಿಕಾಲ ರೋಚಕವಾಗಿತ್ತು. ಸ್ವರಪ್ರಸ್ತಾರವೂ ಸ್ವಾರಸ್ಯಕರ. ಕಾಮವರ್ಧಿನಿ ರಾಗದ ಎಲ್ಲ ಮಗ್ಗಲುಗಳು ಗೋಚರವಾಗುವಂತೆ ಪಲ್ಲವಿಯು ಪಲ್ಲವಿಸಿತು.<br /> <br /> ಆ ಮೊದಲು ಹಾಡಿದ ದೇವಮನೋಹರಿ ರಾಗವು ಒಳ್ಳೆಯ ವಜನ್ನಿಂದ ಕೂಡಿತ್ತು. ಖರಹರಪ್ರಿಯ ಕುಟುಂಬಕ್ಕೆ ಸೇರಿದ ಇದೊಂದು ಜನಪ್ರಿಯ ಪ್ರಾಚೀನ ರಕ್ತಿ ರಾಗ. ಕುಪ್ಪಯ್ಯರ್ ಅವರ ಮಹದೇವ ಮನೋಹರಿ ಒಂದು ಹಸನಾದ ಕೃತಿ. ತ್ಯಾಗರಾಜರ `ರಾಮನೀ ಪೈ~ ನಂತರ ಶ್ಯಾಮಾಶಾಸ್ತ್ರಿಗಳ ಪ್ರಸಿದ್ಧ ಕೃತಿ `ಬ್ರೋವಮ್ಮ~ ವಿಳಂಬದಲ್ಲಿ ಭಾವಪೂರ್ಣವಾಗಿ ಹೊಮ್ಮಿತು.<br /> <br /> ಪಿಟೀಲಿನಲ್ಲಿ ನಳಿನಾ ಮೋಹನ್, ಮೃದಂಗದಲ್ಲಿ ಕೆ.ಯು. ಜಯಚಂದ್ರರಾವ್ ಹಾಗೂ ಘಟದಲ್ಲಿ ಫಣೀಂದ್ರ ಭಾಸ್ಕರ್ ಪಕ್ಕವಾದ್ಯಗಳನ್ನು ನುಡಿಸಿದರು. ಕಿರಿಯ ವಿದ್ಯಾರ್ಥಿನಿ ಲಾವಣ್ಯ ಕೃಷ್ಣಮೂರ್ತಿ ಹಿನ್ನೆಲೆಯಲ್ಲಿ ಹಾಡುತ್ತಾ ನೆರವಾದರು.<br /> <br /> ತಾಳವಾದ್ಯ ಕಲಾಕೇಂದ್ರ ಆಶ್ರಯದಲ್ಲಿ ನಡೆಯುತ್ತಿರುವ ವಾರ್ಷಿಕ ತಾಳವಾದ್ಯೋತ್ಸವದ ಅಂಗವಾಗಿ ಡಾ. ಸತ್ಯವತಿ ಅವರ ಗಾಯನ ಕಾರ್ಯಕ್ರಮ ನಡೆಯಿತು. ಸಂಗೀತ ಕಛೇರಿಗಳಲ್ಲದೆ (ಗಾಯನ, ವಾದ್ಯ ದ್ವಯ, ಜುಗಲ್ ಬಂದಿ) ಪ್ರಾತ್ಯಕ್ಷಿಕೆ, ಉಪನ್ಯಾಸ, ಲಯವಿನ್ಯಾಸ ಹಾಗೂ ವಿಚಾರ ಸಂಕಿರಣಗಳೂ ಸೇರಿ ಉತ್ಸವದ ಉಪಯುಕ್ತತೆಯನ್ನು ಹೆಚ್ಚಿಸಿವೆ. <br /> <br /> <strong>ಪ್ರೌಢ ಗಾಯನ</strong><br /> ಮಧುರೆ ಮಣಿ ಅಯ್ಯರ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಟಿ.ವಿ. ಶಂಕರನಾರಾಯಣನ್ ಅವರ ಕಾರ್ಯಕ್ರಮ ಏರ್ಪಡಿಸಿದ್ದು ಉಚಿತವಾಗಿತ್ತು. ಸಂಗೀತ ಕಳಾನಿಧಿ ಟಿ.ವಿ. ಶಂಕರನಾರಾಯಣನ್ ತಮ್ಮ ಗಾಯನದಲ್ಲಿ ಪ್ರಮುಖವಾಗಿ ಎರಡು ರಾಗಗಳನ್ನು ವಿಸ್ತರಿಸಿದರು.<br /> <br /> ತೋಡಿಯನ್ನು ಶಾಸ್ತ್ರೀಯವಾಗಿ ಅರಳಿಸಿ ಕೃತಿಗೆ ಭದ್ರವಾದ ಹಿನ್ನೆಲೆ ಒದಗಿಸಿದರು. ತ್ಯಾಗರಾಜರ `ರಾಜುವೆಡಲೆ ಚೂತಮು ರಾರೇ~ ಕೃತಿಯನ್ನು ಹಿರಿಯರು ಮೊದಲಿನಿಂದಲೂ ವಿಸ್ತಾರಕ್ಕೆ ಆಯ್ದುಕೊಂಡು ಬಂದಿದ್ದಾರೆ. <br /> <br /> ಶಂಕರನಾರಾಯಣನ್ ಆ ಕೃತಿ ಹಾಗೂ ಸ್ವರ ರಾಗಕ್ಕೆ ಪೂರಕವಾಗಿ ಹಾಡಿದ ಬಗೆ ಅನುಪಮವಾದುದು. ಹಾಗೆಯೇ ನೆರವಲ್ (ಕಾವೇರಿ ತೀರಮುನನು ಪಾವನಮಗು ರಂಗಪುರನಿ) ಸಹ ರಾಗ-ಕೃತಿಗಳೆರಡಕ್ಕೂ ಪೂರಕವಾಗಿ ಬೆಳಗಿತು. ಸ್ವರವನ್ನೂ ಅತಿಚಾಚದೆ ಹಿತಮಿತವಾಗಿ ಅಡಕಗೊಳಿಸಿದ್ದು ಗಮನಾರ್ಹ. <br /> <br /> ಕಾಂಬೋಧಿಯನ್ನು ಹಂತಹಂತವಾಗಿ ಬೆಳೆಸುತ್ತಾ ಪೂರ್ಣತ್ವ ನೀಡಿದರು. ನೆರವಲ್ ಮಾಡಿ ಸರ್ವಲಫುವಿನಲ್ಲಿ ಹಾಕಿದ ಸ್ವರಪ್ರಸ್ತಾರ ಸೊಗಸಾಗಿತ್ತು. ಆ ಮೊದಲು ವಲ್ಲಭ ನಾಯಕಸ್ಯ, `ಓ ಜಗದಂಬ~, `ಭುವನೇಶ್ವರಿಯ~, `ವೆಂಕಟಾಚಲ ನಿಲಯಂ~ ಕೃತಿಗಳು ಕಛೇರಿಯ ಮೌಲ್ಯ ವರ್ಧಿಸಿದವು.<br /> <br /> ಮಗ ಮಹದೇವನ್ ರಾಗಾಲಾಪನೆ, ಸ್ವರ ಪ್ರಸ್ತಾರಗಳಲ್ಲಿ ತನ್ನ ಪ್ರತಿಭೆಯನ್ನು ತೋರಿದ. ಸಿ.ಎನ್. ಚಂದ್ರಶೇಖರ್ ಪಿಟೀಲಿನಲ್ಲಿ ಒತ್ತಾಸೆಯಾಗಿ ನಿಂತರು. ಲಯ ವಾದ್ಯಗಳಲ್ಲಿ ಗುರು-ಶಿಷ್ಯರ ಜೋಡಿ ಶ್ರೀಮುಷ್ಣಂ ರಾಜಾರಾಂ ಮತ್ತು ಎಚ್.ಎಸ್. ಸುಧೀಂದ್ರ ಗಾಯನಕ್ಕೆ ಪೂರಕವಾಗಿ ನುಡಿಸಿದರು.<br /> <br /> <strong>ಸುಂದರ ಮೋಹಿನಿ ಆಟ</strong><br /> ಪ್ರತಿ ಶುಕ್ರವಾರ ಸಾಂಸ್ಕೃತಿಕ ಸಂಜೆ ಮಾಲೆಯಲ್ಲಿ ಮೋಹಿನಿ ಆಟ ನೃತ್ಯ ಮಾಡಿದ ಸಂಗೀತಾ ಭರತನಾಟ್ಯ, ಮೋಹಿನಿ ಆಟ,ಕಥಕ್ಕಳಿ - ಮೂರು ಪ್ರಕಾರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಅನೇಕ ಗುರುಗಳಿಂದ ಕಲಿತು ಇದೀಗ ಕಲಾಮಂಡಳಂ ಹೈಮಾವತಿ ಅವರಲ್ಲಿ ಪ್ರೌಢ ಶಿಕ್ಷಣ ಮುಂದುವರೆಸಿದ್ದಾರೆ.<br /> <br /> ಪ್ರಸ್ತುತ ಕಾರ್ಯಕ್ರಮವನ್ನು ಸಂಗೀತಾ `ಶರಣಂ ಸಿದ್ಧಿವಿನಾಯಕ~ದೊಂದಿಗೆ ಪ್ರಾರಂಭಿಸಿ, ವರ್ಣ `ದಾನಿಗಾಮಜೇಂದ್ರ~ (ಸ್ವಾತಿ ತಿರುನಾಳ್)ದೊಂದಿಗೆ ಮುಂದುವರಿಸಿದರು. ಪದ (ಸ್ವಾತಿ ತಿರುನಾಳ್) ಮತ್ತು ಜಾವಡಿ (ಇದೇನೇ ಸಖಿ) ಗಳೆರಡರಲ್ಲೂ ಅಭಿನಯ ಸಂಯಮ ಪೂರ್ಣವಾಗಿತ್ತು.<br /> <br /> ದೀಕ್ಷಿತರ `ಕಂಜದಳಾಯತಾಕ್ಷಿ~ ಹಾಗೂ ಕುರಂಜಿ ರಾಗದ ಲಾಲಿಯೊಂದಿಗೆ ಮುಕ್ತಾಯಗೊಳಿಸಿದರು. ಮರಕತವಲ್ಲಿಯವರ ಹಿನ್ನೆಲೆ ಗಾಯನ ಪ್ರಖರವಾಗಿದ್ದರೆ, ಲಕ್ಷ್ಮೀ ತಂಗವೇಲು ಅವರ ನಟುವಾಂಗ, ತಂಗವೇಲು ಮೃದಂಗ, ಭುವನೇಶ್ವರಿಯ ಪಿಟೀಲು ಹಾಗೂ ಅಚ್ಯುತ ಅನಂತ ಮಾರನ್ರ ಎಡಕ್ಕ- ನೃತ್ಯದ ಯಶಸ್ಸಿಗೆ ನೆರವಾಯಿತು.<br /> <strong><br /> ಅನನ್ಯದ `ನಿರಂತರ~</strong><br /> ಅನನ್ಯದ `ನಿರಂತರ~ ಮಾಲೆಯಲ್ಲಿ ಹಾಡಿದ ವಿವೇಕ ಸದಾಶಿವಂ ಸಂಗೀತಗಾರರ ಕುಟುಂಬದಿಂದ ಬಂದವ. ತಾತ ಅನಂತರಾಮನ್ ಅಯ್ಯರ್ ಮತ್ತು ತಂದೆ ಎ. ಸದಾಶಿವ ಇಬ್ಬರೂ ಗಾಯಕರು. ಚಿಕ್ಕಮ್ಮ ಎ. ಚಂಪಕವಲ್ಲಿ ಮತ್ತು ತಾಯಿ ರೇವತಿ ಸದಾಶಿವಂ ಇಬ್ಬರೂ ಹಿರಿಯ ಕಲಾವಿದೆಯರು. <br /> <br /> ಕೆಲ ಕಾಲದಿಂದ ಆರ್.ಎನ್. ತ್ಯಾಗರಾಜನ್ ಅವರಲ್ಲಿ ಪ್ರೌಢ ವ್ಯಾಸಂಗ ಮಾಡುತ್ತಿರುವ ವಿವೇಕ್ ಇಂಜಿನಿಯರ್ ಪದವೀಧರ. ಆಕಾಶವಾಣಿ ರಾಷ್ಟ್ರೀಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿರುವ ವಿವೇಕ್ ಮೃದಂಗವನ್ನೂ ಅಭ್ಯಾಸ ಮಾಡುತ್ತಿದ್ದಾರೆ.<br /> <br /> ವಿವೇಕ್ ಪ್ರಸ್ತುತ ಕಛೇರಿಯಲ್ಲಿ ಅಮೃತವರ್ಷಿಣಿ ರಾಗವನ್ನು ಅದ್ಭುತವಾಗಿ ಅರಳಿಸಿದರು. ವಿಳಂಬದಲ್ಲಿ ಹಾಡಿದ `ಮಾಯಮ್ಮ~ ಕೃತಿಯಲ್ಲಿ ಮೂಡಿದ ಭಾವ ಅನುಪಮವಾದುದು. <br /> ಶಂಕರಾಭರಣವನ್ನು ವಿಸ್ತಾರವಾಗಿ ಹಾಡಿ `ಎಂದುಕು ಪೆದ್ದಲ~ ಬೆಳೆಸಿದರು. <br /> <br /> ನೆರವಲ್ ಮಿತವಾಗಿತ್ತು ಹಾಗೂ ಅವರೋಹಣದಲ್ಲಿ ಒಂದೆರಡು ಕಡೆ ತಡವರಿಸಿದರೂ, ಗಾಯಕರ ಒಳ್ಳೆಯ ಪಾಠಾಂತರ ಸುವ್ಯಕ್ತವಾಯಿತು. ಷಣ್ಮುಖಪ್ರಿಯ ರಾಗದಲ್ಲಿ ಆದಿ ತಾಳದಲ್ಲಿ ಪಲ್ಲವಿಯನ್ನು ಮಿತ ವ್ಯಾಪ್ತಿಯಲ್ಲಿ ಪ್ರಸ್ತುತ ಪಡಿಸಿದರು. <br /> <br /> ಒಳ್ಳೆಯ ಕಂಠ ಹೊಂದಿರುವ ವಿವೇಕ್ ಹೆಚ್ಚಿನ ಅನುಭವ, ಪ್ರೌಢ ಶಿಕ್ಷಣಗಳಿಂದ ಮುಗಿಲು ಮುಟ್ಟಬಹುದು. ಪ್ರೇಮ್ ವಿವೇಕ್ (ಪಿಟೀಲು) ಮತ್ತು ಬಿ.ಎಸ್. ಪ್ರಶಾಂತ್ (ಮೃದಂಗ) ಸಹ ತಮ್ಮ ಪ್ರತಿಭೆ ತೋರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>