<p><strong>ಹೈದರಾಬಾದ್: </strong>ತಿರುಪತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹತ್ತು ಶಿಶುಗಳು 48 ಗಂಟೆಗಳ ಅವಧಿಯೊಳಗೆ ಸಾವನ್ನಪ್ಪಿದ್ದು, ವೈದ್ಯರ ತೀವ್ರ ಕೊರತೆ ಹಾಗೂ ಆಮ್ಲಜನಕ ಸಮರ್ಪಕವಾಗಿ ದೊರಕದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.<br /> <br /> ಬುಧವಾರ ಒಂದೇ ದಿನ ಹತ್ತು ಶಿಶುಗಳು ಮೃತಪಟ್ಟಿದ್ದರೆ ಗುರುವಾರ ಮತ್ತೆ ಮೂರು ಶಿಶುಗಳು ಸಾವನ್ನಪ್ಪಿವೆ. ಆದರೆ ವೈದ್ಯರು ಈ ಸಂಬಂಧ ಸರಿಯಾದ ಮಾಹಿತಿ ನೀಡುತ್ತಿಲ್ಲ.</p>.<p><br /> ಸುದ್ದಿ ತಿಳಿದು ಆಸ್ಪತ್ರೆಗೆ ಧಾವಿಸಿದ ವೈಎಸ್ಆರ್ ಕಾಂಗ್ರೆಸ್ ಶಾಸಕ ಭೂಮನ ಕರುಣಾಕರ ರೆಡ್ಡಿ `ಇವೆಲ್ಲ ಅಧಿಕಾರಿಗಳಿಂದಾದ ಕೊಲೆಗಳು~ ಎಂದು ಆರೋಪಿಸಿ ಮೃತ ಶಿಶುಗಳ ಸಂಬಂಧಿಕರ ಜತೆಗೂಡಿ ಪ್ರತಿಭಟನೆ ನಡೆಸಿದರು. <br /> <br /> ಶಿಶುಗಳ ಸಾವಿಗೆ ಅವುಗಳು ವಿವಿಧ ರೋಗಗಳಿಂದ ಬಳಲುತ್ತಿರುವುದೇ ಕಾರಣ, ಮೇಲಾಗಿ ಈ ಶಿಶುಗಳನ್ನು ರೋಗ ಉಲ್ಬಣಗೊಂಡ ನಂತರವೇ ಇಲ್ಲಿಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆ ಅಧೀಕ್ಷಕ ಡಾ.ವೀರಾಸ್ವಾಮಿ ತಿಳಿಸಿದರು. <br /> <br /> ಆಸ್ಪತ್ರೆಗೆ ಇನ್ನೂ 20 ವೈದ್ಯರ ಅಗತ್ಯವಿದ್ದು, ಆಮ್ಲಜನಕ ಖರೀದಿಗೂ ಹೆಚ್ಚಿನ ಹಣ ಬೇಕು ಎಂದು ತಿಳಿಸಿದರು. ಈ ನಡುವೆ ಘಟನೆಯ ಕುರಿತು ಕಳವಳವ್ಯಕ್ತಪಡಿಸಿದ ಮುಖ್ಯಮಂತ್ರಿ ಕಿರಣಕುಮಾರ್ ರೆಡ್ಡಿ ಅವರ ಸೂಚನೆಯ ಮೇರೆಗೆ ಈ ಕುರಿತು ತನಿಖೆ ಕೈಗೊಳ್ಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್: </strong>ತಿರುಪತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹತ್ತು ಶಿಶುಗಳು 48 ಗಂಟೆಗಳ ಅವಧಿಯೊಳಗೆ ಸಾವನ್ನಪ್ಪಿದ್ದು, ವೈದ್ಯರ ತೀವ್ರ ಕೊರತೆ ಹಾಗೂ ಆಮ್ಲಜನಕ ಸಮರ್ಪಕವಾಗಿ ದೊರಕದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.<br /> <br /> ಬುಧವಾರ ಒಂದೇ ದಿನ ಹತ್ತು ಶಿಶುಗಳು ಮೃತಪಟ್ಟಿದ್ದರೆ ಗುರುವಾರ ಮತ್ತೆ ಮೂರು ಶಿಶುಗಳು ಸಾವನ್ನಪ್ಪಿವೆ. ಆದರೆ ವೈದ್ಯರು ಈ ಸಂಬಂಧ ಸರಿಯಾದ ಮಾಹಿತಿ ನೀಡುತ್ತಿಲ್ಲ.</p>.<p><br /> ಸುದ್ದಿ ತಿಳಿದು ಆಸ್ಪತ್ರೆಗೆ ಧಾವಿಸಿದ ವೈಎಸ್ಆರ್ ಕಾಂಗ್ರೆಸ್ ಶಾಸಕ ಭೂಮನ ಕರುಣಾಕರ ರೆಡ್ಡಿ `ಇವೆಲ್ಲ ಅಧಿಕಾರಿಗಳಿಂದಾದ ಕೊಲೆಗಳು~ ಎಂದು ಆರೋಪಿಸಿ ಮೃತ ಶಿಶುಗಳ ಸಂಬಂಧಿಕರ ಜತೆಗೂಡಿ ಪ್ರತಿಭಟನೆ ನಡೆಸಿದರು. <br /> <br /> ಶಿಶುಗಳ ಸಾವಿಗೆ ಅವುಗಳು ವಿವಿಧ ರೋಗಗಳಿಂದ ಬಳಲುತ್ತಿರುವುದೇ ಕಾರಣ, ಮೇಲಾಗಿ ಈ ಶಿಶುಗಳನ್ನು ರೋಗ ಉಲ್ಬಣಗೊಂಡ ನಂತರವೇ ಇಲ್ಲಿಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆ ಅಧೀಕ್ಷಕ ಡಾ.ವೀರಾಸ್ವಾಮಿ ತಿಳಿಸಿದರು. <br /> <br /> ಆಸ್ಪತ್ರೆಗೆ ಇನ್ನೂ 20 ವೈದ್ಯರ ಅಗತ್ಯವಿದ್ದು, ಆಮ್ಲಜನಕ ಖರೀದಿಗೂ ಹೆಚ್ಚಿನ ಹಣ ಬೇಕು ಎಂದು ತಿಳಿಸಿದರು. ಈ ನಡುವೆ ಘಟನೆಯ ಕುರಿತು ಕಳವಳವ್ಯಕ್ತಪಡಿಸಿದ ಮುಖ್ಯಮಂತ್ರಿ ಕಿರಣಕುಮಾರ್ ರೆಡ್ಡಿ ಅವರ ಸೂಚನೆಯ ಮೇರೆಗೆ ಈ ಕುರಿತು ತನಿಖೆ ಕೈಗೊಳ್ಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>