<p>ತುಮರಿ: ಮಲೆನಾಡಿನಲ್ಲಿ ವರುಣ ತನ್ನ ಆರ್ಭಟ ಪ್ರದರ್ಶಿಸುವ ಮುನ್ನವೇ ಸಮೀಪದ ಕುದುರೂರು ಕಿರುಸೇತುವೆಯ ಒಂದು ಭಾಗದ ಮಣ್ಣು ಕುಸಿದಿರುವ ಹಿನ್ನೆಲೆಯಲ್ಲಿ ತುಮರಿ ಪಟ್ಟಣವು ಬೈಂದೂರು-ಹೊನ್ನಾಳಿ ರಾಜ್ಯ ಹೆದ್ದಾರಿ ಸಂಪರ್ಕ ಕಡಿದುಕೊಳ್ಳುವ ಆತಂಕ ಎದುರಾಗಿದೆ.<br /> <br /> ಈಗಾಗಾಲೇ, ಕರೂರು ಹೋಬಳಿ ದ್ವೀಪ ಪ್ರದೇಶದಿಂದ ಕಾರ್ಗಲ್ ಭಟ್ಕಳ ಮತ್ತು ಹೊನ್ನಾವರಕ್ಕೆ ಸಂಪರ್ಕ ಕಲ್ಪಿಸುವ ಕೋಗಾರು ಮಾರ್ಗವು ಎಣ್ಣೆ ಹೊಳೆ ಸೇತುವೆ ಮುರಿದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಮುಕ್ತವಾಗಿಲ್ಲ. <br /> <br /> ಎಣ್ಣೆಹೊಳೆ ಸೇತುವೆ ಸ್ಥಳದಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿರುವುದರಿಂದ ಸೇತುವೆ ನಿರ್ಮಾಣ ಪ್ರಕ್ರಿಯೆ ಅಥವಾ ಬದಲಿ ರಸ್ತೆ ನಿರ್ಮಾಣದ ಅವಕಾಶಕ್ಕೆ ಮಳೆಗಾಲ ಮುಗಿಯುವ ತನಕ ಕಾಯುವುದು ಅನಿವಾರ್ಯವಾಗಿದೆ. ಈ ಬೆನ್ನಲೇ ಕುದುರೂರು ಸೇತುವೆಯ ಮಣ್ಣು ಕುಸಿತ ಆತಂಕ ಸೃಷ್ಟಿಸಿದೆ.<br /> <br /> ಈಚೆಗೆ ಬಿದ್ದಸಣ್ಣ ಪ್ರಮಾಣದ ಮಳೆಗೆ ಕುದುರೂರು ಸೇತುವೆಯ ರಸ್ತೆಗೆ ಹೊಂದಿಕೊಂಡ ಭಾಗದಲ್ಲಿ ಭಾರೀ ಮಣ್ಣು ಕುಸಿದು ಕಂದಕ ಸೃಷ್ಟಿಯಾಗಿದೆ. ಸ್ಥಳ ಪರಿಶೀಲನೆ ಮಾಡಿದ ಎಂಜಿನಿಯರ್ ಮರಳು ತುಂಬಿದ ಚೀಲದಲ್ಲಿ ತಡೆಗೋಡೆ ನಿರ್ಮಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ.<br /> <br /> ಆದರೆ, ಪರ್ಯಾಯ ಮಾರ್ಗವನ್ನು ಮಾಡಿಕೊಡಲು ಅವಕಾಶವಿಲ್ಲದ ಕಡಿದಾದ ಸ್ಥಳದಲ್ಲಿ ಸೇತುವೆ ಕುಸಿದಿರುವುದರಿಂದ ಮತ್ತು ಸೇತುವೆಯಲ್ಲಿ ದೊಡ್ಡ ಪ್ರಮಾಣದ ನೀರು ಹರಿಯುವುದರಿಂದ ಪುನಃ ಸೇತುವೆ ಕುಸಿಯುವ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.<br /> <br /> ಕರೂರು ಹೋಬಳಿ ದ್ವೀಪ ಪ್ರದೇಶದ ಸಂಪರ್ಕ ಕೊಂಡಿ ಲಾಂಚ್ ವ್ಯವಸ್ಥೆಯು ಪ್ರತಿದಿನ ಸಂಜೆ ಆರು ಗಂಟೆಗೆ ಮುಕ್ತಾಯಗೊಳ್ಳುತ್ತದೆ. ರಾತ್ರಿ ಹೊತ್ತಿನಲ್ಲಿ ಅನಾರೋಗ್ಯ ಅಥವಾ ಇತರೆ ಅವಘಡಗಳು ಸಂಭವಿಸದರೆ ಕೋಗಾರು ಭೂಮಾರ್ಗದ ಮೂಲಕ ಸಾಗರ ತಾಲ್ಲೂಕು ಕೇಂದ್ರ ತಲುಪಬಹುದು.<br /> <br /> ಎಣ್ಣೆಹೊಳೆ ಸೇತುವೆ ಮುರಿದಿರುವ ಕಾರಣ ಈ ಅವಕಾಶವು ದ್ವೀಪಕ್ಕೆ ಅಲಭ್ಯವಾಗಿದೆ. ಕೊನೆಯ ಏಕಮಾತ್ರ ಭೂಮಾರ್ಗದ ಅವಕಾಶ ಇರುವುದು ಬೈಂದೂರು-ಹೊನ್ನಾಳಿ ರಾಜ್ಯ ಹೆದ್ದಾರಿ ಸಂಪರ್ಕಿಸುವುದೇ ಆಗಿದೆ.<br /> ಈಗಾಗಲೇ, ಒಂದು ಭಾಗದ ಮಣ್ಣು ಕುಸಿದು ಶಿಥಿಲಗೊಂಡಿರುವ ಕುದುರೂರು ಕಿರು ಸೇತುವೆ ಭಾರೀ ಮಳೆಗೆ ಆಹುತಿಯಾದರೆ ಪ್ರಸಿದ್ಧ ಸಿಗಂದೂರು ದೇವಾಲಯ ಮತ್ತು ಕೊಲ್ಲೂರು ಮಾರ್ಗ ಸಹ ಸಂಪರ್ಕ ಕಡಿದುಕೊಳ್ಳುತ್ತದೆ. <br /> <br /> ಇಂತಹ ಅನಿವಾರ್ಯ ಸಂದರ್ಭ ಎದುರಿಸಲು ಒಂದು ಲಾಂಚ್ನ್ನು ದ್ವೀಪ ಭಾಗದಲ್ಲಿ ನಿಲುಗಡೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.<br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತುಮರಿ: ಮಲೆನಾಡಿನಲ್ಲಿ ವರುಣ ತನ್ನ ಆರ್ಭಟ ಪ್ರದರ್ಶಿಸುವ ಮುನ್ನವೇ ಸಮೀಪದ ಕುದುರೂರು ಕಿರುಸೇತುವೆಯ ಒಂದು ಭಾಗದ ಮಣ್ಣು ಕುಸಿದಿರುವ ಹಿನ್ನೆಲೆಯಲ್ಲಿ ತುಮರಿ ಪಟ್ಟಣವು ಬೈಂದೂರು-ಹೊನ್ನಾಳಿ ರಾಜ್ಯ ಹೆದ್ದಾರಿ ಸಂಪರ್ಕ ಕಡಿದುಕೊಳ್ಳುವ ಆತಂಕ ಎದುರಾಗಿದೆ.<br /> <br /> ಈಗಾಗಾಲೇ, ಕರೂರು ಹೋಬಳಿ ದ್ವೀಪ ಪ್ರದೇಶದಿಂದ ಕಾರ್ಗಲ್ ಭಟ್ಕಳ ಮತ್ತು ಹೊನ್ನಾವರಕ್ಕೆ ಸಂಪರ್ಕ ಕಲ್ಪಿಸುವ ಕೋಗಾರು ಮಾರ್ಗವು ಎಣ್ಣೆ ಹೊಳೆ ಸೇತುವೆ ಮುರಿದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಮುಕ್ತವಾಗಿಲ್ಲ. <br /> <br /> ಎಣ್ಣೆಹೊಳೆ ಸೇತುವೆ ಸ್ಥಳದಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿರುವುದರಿಂದ ಸೇತುವೆ ನಿರ್ಮಾಣ ಪ್ರಕ್ರಿಯೆ ಅಥವಾ ಬದಲಿ ರಸ್ತೆ ನಿರ್ಮಾಣದ ಅವಕಾಶಕ್ಕೆ ಮಳೆಗಾಲ ಮುಗಿಯುವ ತನಕ ಕಾಯುವುದು ಅನಿವಾರ್ಯವಾಗಿದೆ. ಈ ಬೆನ್ನಲೇ ಕುದುರೂರು ಸೇತುವೆಯ ಮಣ್ಣು ಕುಸಿತ ಆತಂಕ ಸೃಷ್ಟಿಸಿದೆ.<br /> <br /> ಈಚೆಗೆ ಬಿದ್ದಸಣ್ಣ ಪ್ರಮಾಣದ ಮಳೆಗೆ ಕುದುರೂರು ಸೇತುವೆಯ ರಸ್ತೆಗೆ ಹೊಂದಿಕೊಂಡ ಭಾಗದಲ್ಲಿ ಭಾರೀ ಮಣ್ಣು ಕುಸಿದು ಕಂದಕ ಸೃಷ್ಟಿಯಾಗಿದೆ. ಸ್ಥಳ ಪರಿಶೀಲನೆ ಮಾಡಿದ ಎಂಜಿನಿಯರ್ ಮರಳು ತುಂಬಿದ ಚೀಲದಲ್ಲಿ ತಡೆಗೋಡೆ ನಿರ್ಮಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ.<br /> <br /> ಆದರೆ, ಪರ್ಯಾಯ ಮಾರ್ಗವನ್ನು ಮಾಡಿಕೊಡಲು ಅವಕಾಶವಿಲ್ಲದ ಕಡಿದಾದ ಸ್ಥಳದಲ್ಲಿ ಸೇತುವೆ ಕುಸಿದಿರುವುದರಿಂದ ಮತ್ತು ಸೇತುವೆಯಲ್ಲಿ ದೊಡ್ಡ ಪ್ರಮಾಣದ ನೀರು ಹರಿಯುವುದರಿಂದ ಪುನಃ ಸೇತುವೆ ಕುಸಿಯುವ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.<br /> <br /> ಕರೂರು ಹೋಬಳಿ ದ್ವೀಪ ಪ್ರದೇಶದ ಸಂಪರ್ಕ ಕೊಂಡಿ ಲಾಂಚ್ ವ್ಯವಸ್ಥೆಯು ಪ್ರತಿದಿನ ಸಂಜೆ ಆರು ಗಂಟೆಗೆ ಮುಕ್ತಾಯಗೊಳ್ಳುತ್ತದೆ. ರಾತ್ರಿ ಹೊತ್ತಿನಲ್ಲಿ ಅನಾರೋಗ್ಯ ಅಥವಾ ಇತರೆ ಅವಘಡಗಳು ಸಂಭವಿಸದರೆ ಕೋಗಾರು ಭೂಮಾರ್ಗದ ಮೂಲಕ ಸಾಗರ ತಾಲ್ಲೂಕು ಕೇಂದ್ರ ತಲುಪಬಹುದು.<br /> <br /> ಎಣ್ಣೆಹೊಳೆ ಸೇತುವೆ ಮುರಿದಿರುವ ಕಾರಣ ಈ ಅವಕಾಶವು ದ್ವೀಪಕ್ಕೆ ಅಲಭ್ಯವಾಗಿದೆ. ಕೊನೆಯ ಏಕಮಾತ್ರ ಭೂಮಾರ್ಗದ ಅವಕಾಶ ಇರುವುದು ಬೈಂದೂರು-ಹೊನ್ನಾಳಿ ರಾಜ್ಯ ಹೆದ್ದಾರಿ ಸಂಪರ್ಕಿಸುವುದೇ ಆಗಿದೆ.<br /> ಈಗಾಗಲೇ, ಒಂದು ಭಾಗದ ಮಣ್ಣು ಕುಸಿದು ಶಿಥಿಲಗೊಂಡಿರುವ ಕುದುರೂರು ಕಿರು ಸೇತುವೆ ಭಾರೀ ಮಳೆಗೆ ಆಹುತಿಯಾದರೆ ಪ್ರಸಿದ್ಧ ಸಿಗಂದೂರು ದೇವಾಲಯ ಮತ್ತು ಕೊಲ್ಲೂರು ಮಾರ್ಗ ಸಹ ಸಂಪರ್ಕ ಕಡಿದುಕೊಳ್ಳುತ್ತದೆ. <br /> <br /> ಇಂತಹ ಅನಿವಾರ್ಯ ಸಂದರ್ಭ ಎದುರಿಸಲು ಒಂದು ಲಾಂಚ್ನ್ನು ದ್ವೀಪ ಭಾಗದಲ್ಲಿ ನಿಲುಗಡೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.<br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>