<p><strong>ಬೆಂಗಳೂರು: </strong>`ಇ-ಸುಗಮ್~ ಅರ್ಜಿಗಳನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ತೆರಿಗೆ ವಂಚನೆ ಮಾಡಿದ್ದ ಆರು ಆರೋಪಿಗಳನ್ನು ಕಬ್ಬನ್ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.<br /> <br /> ರಾಜಸ್ತಾನ ಮೂಲದ ತಿಲೋಕ್ಚಂದ್, ದಿನೇಶ್ಕುಮಾರ್, ರಮೇಶ್ಕುಮಾರ್, ಶುಭಸಿಂಗ್, ಚಿಕ್ಕಮಗಳೂರು ಜಿಲ್ಲೆಯ ಸಿ.ಡಿ.ಹುಲಿಯಪ್ಪ ಉರುಫ್ ಶಿವಕುಮಾರ್ ಮತ್ತು ಕಾಡುಗೊಂಡನಹಳ್ಳಿಯ ಜಾಫರ್ಬೇಗ್ ಬಂಧಿತರು. ಆರೋಪಿಗಳಿಂದ ನಕಲಿ ದಾಖಲೆಪತ್ರಗಳು ಹಾಗೂ ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.<br /> <br /> `ಡಿಸ್ಪೆನ್ಸರಿ ರಸ್ತೆಯಲ್ಲಿರುವ ಸ್ಟಾರ್ ಎಂಟರ್ಪ್ರೈಸಸ್ ಮತ್ತು ಸೂರ್ಯ ಪ್ರಕಾಶ್ ಏಜೆನ್ಸಿಸ್ ಹೆಸರಿನ ಸೈಕಲ್ ಮಾರಾಟ ಮಳಿಗೆಗಳ ಬಳಕೆದಾರರ ಗುರುತಿನ ಸಂಖ್ಯೆ (ಯೂಸರ್ ಐ.ಡಿ) ಹಾಗೂ ರಹಸ್ಯ ಸಂಕೇತವನ್ನು (ಪಾಸ್ ವರ್ಡ್) ಆರೋಪಿಗಳು ದುರ್ಬಳಕೆ ಮಾಡಿಕೊಂಡು ಈ ಕೃತ್ಯ ಎಸಗಿದ್ದರು. ಬಂಧಿತರು ಆ ಎರಡು ಮಳಿಗೆಗಳ ಹೆಸರಿನಲ್ಲಿ ಸರ್ಕಾರಕ್ಕೆ 68 ಲಕ್ಷ ರೂಪಾಯಿ ತೆರಿಗೆ ವಂಚನೆ ಮಾಡಿದ್ದರು~ ಎಂದು ಕೇಂದ್ರ ವಿಭಾಗದ ಡಿಸಿಪಿ ಡಾ.ಜಿ.ರಮೇಶ್ `ಪ್ರಜಾವಾಣಿ~ಗೆ ತಿಳಿಸಿದರು.<br /> <br /> `ಇದೇ ರೀತಿ ತೆರಿಗೆ ವಂಚನೆ ಮಾಡುತ್ತಿರುವ ಆರೋಪಿಗಳ ಹಲವು ಗುಂಪುಗಳು ನಗರದ ಸುತ್ತಮುತ್ತ ಕಾರ್ಯ ನಿರ್ವಹಿಸುತ್ತಿವೆ. ಆ ಗುಂಪುಗಳು ಸೈಕಲ್ ವ್ಯಾಪಾರಿಗಳು, ಕಲ್ಲು ಮಾರಾಟಗಾರರು ಮತ್ತು ಸಣ್ಣಪುಟ್ಟ ಅಂಗಡಿಗಳ ಟಿನ್ ನಂಬರ್ಗಳನ್ನು ದುರುಪಯೋಗಪಡಿಸಿಕೊಂಡು ವಂಚನೆ ಮಾಡುತ್ತಿದ್ದಾರೆ. <br /> <br /> ಆನೇಕಲ್, ಹೊಸೂರು ರಸ್ತೆ, ಜಿಗಣಿ ಸುತ್ತಮುತ್ತ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈ ರೀತಿಯ ವಂಚನೆ ದಂಧೆ ನಡೆಯುತ್ತಿದೆ. ಇದರಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಅರಣ್ಯ ಹಾಗೂ ವಾಣಿಜ್ಯ ತೆರಿಗೆ ಇಲಾಖೆಗೆ ನಷ್ಟವಾಗುತ್ತಿದೆ~ ಎಂದು ರಮೇಶ್ ಮಾಹಿತಿ ನೀಡಿದರು.<br /> <br /> ವಂಚನೆ ಹೇಗೆ?: ವರ್ತಕರ ಅನುಕೂಲಕ್ಕಾಗಿ ಸರ್ಕಾರ ಇ-ಸುಗಮ್ ವಿಧಾನವನ್ನು ಜಾರಿಗೊಳಿಸಿದೆ. ಈ ವಿಧಾನದ ಅನ್ವಯ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಹೆಸರು ನೋಂದಾಯಿಸುವ ವರ್ತಕರಿಗೆ ಪ್ರತ್ಯೇಕ `ಟಿನ್ ನಂಬರ್~, ಗುರುತಿನ ಸಂಖ್ಯೆ ಮತ್ತು ರಹಸ್ಯ ಸಂಕೇತ ನೀಡಲಾಗಿರುತ್ತದೆ.<br /> <br /> ವರ್ತಕರು ಆ ಮಾಹಿತಿ ಬಳಸಿ ಆನ್ಲೈನ್ನಲ್ಲೇ ತೆರಿಗೆ ಪಾವತಿಸಬಹುದು ಮತ್ತು ಸರಕು ಸಾಗಣೆಗೂ ಬಳಸಿಕೊಳ್ಳಬಹುದು. `ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಹೆಸರು ನೋಂದಾಯಿಸಿದ್ದ ಸ್ಟಾರ್ ಎಂಟರ್ಪ್ರೈಸಸ್ ಮತ್ತು ಸೂರ್ಯ ಪ್ರಕಾಶ್ ಏಜೆನ್ಸಿಸ್ ಮಳಿಗೆಗೂ ಗುರುತಿನ ಸಂಖ್ಯೆ ಮತ್ತು ರಹಸ್ಯ ಸಂಕೇತ ನೀಡಲಾಗಿತ್ತು.<br /> <br /> ಆ ಮಳಿಗೆಗಳ ಲೆಕ್ಕಪರಿಶೋಧನಾ ಕಾರ್ಯ ನಿರ್ವಹಿಸುತ್ತಿದ್ದ ಹುಲಿಯಪ್ಪ ಮಳಿಗೆಗಳ `ಟಿನ್ ನಂಬರ್~, ಗುರುತಿನ ಸಂಖ್ಯೆ ಮತ್ತು ರಹಸ್ಯ ಸಂಕೇತದ ಬಗ್ಗೆ ವಿವರ ಕಲೆ ಹಾಕಿದ್ದ. ಆ ವಿವರಗಳನ್ನು ಇತರೆ ಆರೋಪಿಗಳಿಗೆ ನೀಡಿದ್ದ. ಆರೋಪಿಗಳು ಆ ಮಾಹಿತಿಯನ್ನು ದುರ್ಬಳಕೆ ಮಾಡಿಕೊಂಡು ಮಳಿಗೆಗಳ ಹೆಸರಿನಲ್ಲಿ ಗ್ರಾನೈಟ್ ವ್ಯಾಪಾರಿಗಳಿಗೆ ನಕಲಿ ಬಿಲ್ಗಳನ್ನು ಸೃಷ್ಟಿಸಿಕೊಟ್ಟಿದ್ದರು.<br /> <br /> ಗ್ರಾನೈಟ್ ವ್ಯಾಪಾರಿಗಳು ಆ ಮಳಿಗೆಗಳ ಹೆಸರಿನಲ್ಲಿ ವ್ಯವಹಾರ ಮಾಡುತ್ತಿದ್ದರು ಮತ್ತು ಗ್ರಾಹಕರಿಗೆ ನಕಲಿ ಬಿಲ್ಗಳನ್ನು ನೀಡಿದ್ದರು. ಇದರಿಂದ ಸರ್ಕಾರಕ್ಕೆ ತೆರಿಗೆ ವಂಚನೆಯಾಗಿತ್ತು~ ಎಂದು ಇನ್ಸ್ಪೆಕ್ಟರ್ ಬದರಿನಾಥ್ ತಿಳಿಸಿದರು. <br /> <br /> `ಗ್ರಾನೈಟ್ ವ್ಯಾಪಾರಿಗಳು ಆರೋಪಿಗಳಿಗೆ ತೆರಿಗೆ ಹಣದಲ್ಲಿ ಶೇ 6ರಷ್ಟು ಕಮಿಷನ್ ನೀಡುತ್ತಿದ್ದರು. ಅಲ್ಲದೇ ತೆರಿಗೆಯ ಉಳಿದ ಮೊತ್ತವನ್ನು ಸರ್ಕಾರಕ್ಕೆ ಪಾವತಿಸದೆ ವಂಚಿಸುತ್ತಿದ್ದರು. ಈ ಸಂಬಂಧ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ನೀಡಿದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಯಿತು~ ಎಂದು ಅವರು ಮಾಹಿತಿ ನೀಡಿದರು.<br /> <br /> ಡಿಸಿಪಿ ರಮೇಶ್ ಅವರ ಮಾರ್ಗದರ್ಶನದಲ್ಲಿ ಕಬ್ಬನ್ಪಾರ್ಕ್ ಉಪ ವಿಭಾಗದ ಎಸಿಪಿ ಡಿ.ದೇವರಾಜ್, ಇನ್ಸ್ಪೆಕ್ಟರ್ ಎಸ್.ಬದರಿನಾಥ್, ಕಾನ್ಸ್ಟೇಬಲ್ ದಯಾನಂದ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>`ಇ-ಸುಗಮ್~ ಅರ್ಜಿಗಳನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ತೆರಿಗೆ ವಂಚನೆ ಮಾಡಿದ್ದ ಆರು ಆರೋಪಿಗಳನ್ನು ಕಬ್ಬನ್ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.<br /> <br /> ರಾಜಸ್ತಾನ ಮೂಲದ ತಿಲೋಕ್ಚಂದ್, ದಿನೇಶ್ಕುಮಾರ್, ರಮೇಶ್ಕುಮಾರ್, ಶುಭಸಿಂಗ್, ಚಿಕ್ಕಮಗಳೂರು ಜಿಲ್ಲೆಯ ಸಿ.ಡಿ.ಹುಲಿಯಪ್ಪ ಉರುಫ್ ಶಿವಕುಮಾರ್ ಮತ್ತು ಕಾಡುಗೊಂಡನಹಳ್ಳಿಯ ಜಾಫರ್ಬೇಗ್ ಬಂಧಿತರು. ಆರೋಪಿಗಳಿಂದ ನಕಲಿ ದಾಖಲೆಪತ್ರಗಳು ಹಾಗೂ ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.<br /> <br /> `ಡಿಸ್ಪೆನ್ಸರಿ ರಸ್ತೆಯಲ್ಲಿರುವ ಸ್ಟಾರ್ ಎಂಟರ್ಪ್ರೈಸಸ್ ಮತ್ತು ಸೂರ್ಯ ಪ್ರಕಾಶ್ ಏಜೆನ್ಸಿಸ್ ಹೆಸರಿನ ಸೈಕಲ್ ಮಾರಾಟ ಮಳಿಗೆಗಳ ಬಳಕೆದಾರರ ಗುರುತಿನ ಸಂಖ್ಯೆ (ಯೂಸರ್ ಐ.ಡಿ) ಹಾಗೂ ರಹಸ್ಯ ಸಂಕೇತವನ್ನು (ಪಾಸ್ ವರ್ಡ್) ಆರೋಪಿಗಳು ದುರ್ಬಳಕೆ ಮಾಡಿಕೊಂಡು ಈ ಕೃತ್ಯ ಎಸಗಿದ್ದರು. ಬಂಧಿತರು ಆ ಎರಡು ಮಳಿಗೆಗಳ ಹೆಸರಿನಲ್ಲಿ ಸರ್ಕಾರಕ್ಕೆ 68 ಲಕ್ಷ ರೂಪಾಯಿ ತೆರಿಗೆ ವಂಚನೆ ಮಾಡಿದ್ದರು~ ಎಂದು ಕೇಂದ್ರ ವಿಭಾಗದ ಡಿಸಿಪಿ ಡಾ.ಜಿ.ರಮೇಶ್ `ಪ್ರಜಾವಾಣಿ~ಗೆ ತಿಳಿಸಿದರು.<br /> <br /> `ಇದೇ ರೀತಿ ತೆರಿಗೆ ವಂಚನೆ ಮಾಡುತ್ತಿರುವ ಆರೋಪಿಗಳ ಹಲವು ಗುಂಪುಗಳು ನಗರದ ಸುತ್ತಮುತ್ತ ಕಾರ್ಯ ನಿರ್ವಹಿಸುತ್ತಿವೆ. ಆ ಗುಂಪುಗಳು ಸೈಕಲ್ ವ್ಯಾಪಾರಿಗಳು, ಕಲ್ಲು ಮಾರಾಟಗಾರರು ಮತ್ತು ಸಣ್ಣಪುಟ್ಟ ಅಂಗಡಿಗಳ ಟಿನ್ ನಂಬರ್ಗಳನ್ನು ದುರುಪಯೋಗಪಡಿಸಿಕೊಂಡು ವಂಚನೆ ಮಾಡುತ್ತಿದ್ದಾರೆ. <br /> <br /> ಆನೇಕಲ್, ಹೊಸೂರು ರಸ್ತೆ, ಜಿಗಣಿ ಸುತ್ತಮುತ್ತ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈ ರೀತಿಯ ವಂಚನೆ ದಂಧೆ ನಡೆಯುತ್ತಿದೆ. ಇದರಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಅರಣ್ಯ ಹಾಗೂ ವಾಣಿಜ್ಯ ತೆರಿಗೆ ಇಲಾಖೆಗೆ ನಷ್ಟವಾಗುತ್ತಿದೆ~ ಎಂದು ರಮೇಶ್ ಮಾಹಿತಿ ನೀಡಿದರು.<br /> <br /> ವಂಚನೆ ಹೇಗೆ?: ವರ್ತಕರ ಅನುಕೂಲಕ್ಕಾಗಿ ಸರ್ಕಾರ ಇ-ಸುಗಮ್ ವಿಧಾನವನ್ನು ಜಾರಿಗೊಳಿಸಿದೆ. ಈ ವಿಧಾನದ ಅನ್ವಯ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಹೆಸರು ನೋಂದಾಯಿಸುವ ವರ್ತಕರಿಗೆ ಪ್ರತ್ಯೇಕ `ಟಿನ್ ನಂಬರ್~, ಗುರುತಿನ ಸಂಖ್ಯೆ ಮತ್ತು ರಹಸ್ಯ ಸಂಕೇತ ನೀಡಲಾಗಿರುತ್ತದೆ.<br /> <br /> ವರ್ತಕರು ಆ ಮಾಹಿತಿ ಬಳಸಿ ಆನ್ಲೈನ್ನಲ್ಲೇ ತೆರಿಗೆ ಪಾವತಿಸಬಹುದು ಮತ್ತು ಸರಕು ಸಾಗಣೆಗೂ ಬಳಸಿಕೊಳ್ಳಬಹುದು. `ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಹೆಸರು ನೋಂದಾಯಿಸಿದ್ದ ಸ್ಟಾರ್ ಎಂಟರ್ಪ್ರೈಸಸ್ ಮತ್ತು ಸೂರ್ಯ ಪ್ರಕಾಶ್ ಏಜೆನ್ಸಿಸ್ ಮಳಿಗೆಗೂ ಗುರುತಿನ ಸಂಖ್ಯೆ ಮತ್ತು ರಹಸ್ಯ ಸಂಕೇತ ನೀಡಲಾಗಿತ್ತು.<br /> <br /> ಆ ಮಳಿಗೆಗಳ ಲೆಕ್ಕಪರಿಶೋಧನಾ ಕಾರ್ಯ ನಿರ್ವಹಿಸುತ್ತಿದ್ದ ಹುಲಿಯಪ್ಪ ಮಳಿಗೆಗಳ `ಟಿನ್ ನಂಬರ್~, ಗುರುತಿನ ಸಂಖ್ಯೆ ಮತ್ತು ರಹಸ್ಯ ಸಂಕೇತದ ಬಗ್ಗೆ ವಿವರ ಕಲೆ ಹಾಕಿದ್ದ. ಆ ವಿವರಗಳನ್ನು ಇತರೆ ಆರೋಪಿಗಳಿಗೆ ನೀಡಿದ್ದ. ಆರೋಪಿಗಳು ಆ ಮಾಹಿತಿಯನ್ನು ದುರ್ಬಳಕೆ ಮಾಡಿಕೊಂಡು ಮಳಿಗೆಗಳ ಹೆಸರಿನಲ್ಲಿ ಗ್ರಾನೈಟ್ ವ್ಯಾಪಾರಿಗಳಿಗೆ ನಕಲಿ ಬಿಲ್ಗಳನ್ನು ಸೃಷ್ಟಿಸಿಕೊಟ್ಟಿದ್ದರು.<br /> <br /> ಗ್ರಾನೈಟ್ ವ್ಯಾಪಾರಿಗಳು ಆ ಮಳಿಗೆಗಳ ಹೆಸರಿನಲ್ಲಿ ವ್ಯವಹಾರ ಮಾಡುತ್ತಿದ್ದರು ಮತ್ತು ಗ್ರಾಹಕರಿಗೆ ನಕಲಿ ಬಿಲ್ಗಳನ್ನು ನೀಡಿದ್ದರು. ಇದರಿಂದ ಸರ್ಕಾರಕ್ಕೆ ತೆರಿಗೆ ವಂಚನೆಯಾಗಿತ್ತು~ ಎಂದು ಇನ್ಸ್ಪೆಕ್ಟರ್ ಬದರಿನಾಥ್ ತಿಳಿಸಿದರು. <br /> <br /> `ಗ್ರಾನೈಟ್ ವ್ಯಾಪಾರಿಗಳು ಆರೋಪಿಗಳಿಗೆ ತೆರಿಗೆ ಹಣದಲ್ಲಿ ಶೇ 6ರಷ್ಟು ಕಮಿಷನ್ ನೀಡುತ್ತಿದ್ದರು. ಅಲ್ಲದೇ ತೆರಿಗೆಯ ಉಳಿದ ಮೊತ್ತವನ್ನು ಸರ್ಕಾರಕ್ಕೆ ಪಾವತಿಸದೆ ವಂಚಿಸುತ್ತಿದ್ದರು. ಈ ಸಂಬಂಧ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ನೀಡಿದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಯಿತು~ ಎಂದು ಅವರು ಮಾಹಿತಿ ನೀಡಿದರು.<br /> <br /> ಡಿಸಿಪಿ ರಮೇಶ್ ಅವರ ಮಾರ್ಗದರ್ಶನದಲ್ಲಿ ಕಬ್ಬನ್ಪಾರ್ಕ್ ಉಪ ವಿಭಾಗದ ಎಸಿಪಿ ಡಿ.ದೇವರಾಜ್, ಇನ್ಸ್ಪೆಕ್ಟರ್ ಎಸ್.ಬದರಿನಾಥ್, ಕಾನ್ಸ್ಟೇಬಲ್ ದಯಾನಂದ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>