<p>ಮೈಸೂರು: ದಲಿತ ಸಂಘಟನೆಗಳು ಒಡೆಯುತ್ತಿವೆ, ಹೊಸ ಸಂಘಟನೆ ಹುಟ್ಟುತ್ತಿವೆ. ಆದರೆ ಸಾಮಾಜಿಕ ಬದಲಾವಣೆಯ ಮೂಲ ಆಶಯ, ಸೈದ್ಧಾಂತಿಕ ಚೌಕಟ್ಟು ಒಂದೇ ಇರುವಾಗ ಎಲ್ಲ ಸಂಘಟನೆಗಳು ಒಂದೇ ವೃಕ್ಷದ ಕೊಂಬೆಗಳಿದ್ದಂತೆ ಎಂದು ಡಿವೈಎಸ್ಪಿ ಡಾ. ಧರಣಿದೇವಿ ಮಾಲಗತ್ತಿ ಪ್ರತಿಪಾದಿಸಿದರು.<br /> <br /> ರಾಜ್ಯ ದಲಿತ ಸಂಘರ್ಷ ಸಮಿತಿ ನಗರ ಶಾಖೆಯು ಜೆಎಲ್ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಡಾ.ಕೆ.ಪಿ. ಮಹಾಲಿಂಗು ಕಲ್ಕುಂದ ಅವರಿಗೆ ಅಭಿನಂದನೆ ಹಾಗೂ ಅವರು ಬರೆದ `ಭಾರತದಲ್ಲಿ ದಲಿತ ಚಳವಳಿ~ ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ಬುದ್ಧನ ಸಾಮಾಜಿಕ ಕಾಳಜಿಯೇ ದಲಿತ ಚಳವಳಿಯ ತಳಪಾಯ. ಅಲ್ಲಿಂದ ಇಲ್ಲಿಯವರೆಗೂ ದಲಿತ ಚಳವಳಿಗಳು ಅನೂಹ್ಯ ಬದಲಾವಣೆಗಳನ್ನು ತಂದಿವೆ. ದಯನೀಯ ಸ್ಥಿತಿಯಲ್ಲಿರುವವನೇ ದಲಿತ ಎಂಬ ಅರ್ಥ ಹಿಂದೆ ಇತ್ತು. ಈಗ ಅದು ಸ್ವಾಭಿಮಾನಿ ಎಂಬ ಅರ್ಥವ್ಯಾಪ್ತಿಯನ್ನು ಪಡೆದುಕೊಳ್ಳುವಷ್ಟು ಬೆಳವಣಿಗೆಯಾಗಿದೆ ಎಂದು ಅವರು ತಿಳಿಸಿದರು.<br /> <br /> ಇಂದಿನ ಕೆಲ ದಲಿತ ಹೋರಾಟಗಾರರು ಹಳೆಯ ತಲೆಮಾರಿನ ಚಳವಳಿಗಾರರನ್ನು, ಚಿಂತಕರನ್ನು ಅಸಡ್ಡೆ ಮಾಡುತ್ತಿರುವುದು ಸರಿಯಲ್ಲ. ಹಳೆಯ ಕವಿಗಳ ಹಾಡುಗಳೇ ಅಂದಿನ ದಲಿತ ಚಳವಳಿಗಳಿಗೆ ಶಕ್ತಿ ತುಂಬಿದ್ದವು ಎಂದು ಅಭಿಪ್ರಾಯಪಟ್ಟರು. ಚಳವಳಿ ಎನ್ನುವುದು ಯುದ್ಧವಲ್ಲ. ವಾಸ್ತವಿಕ ನೆಲೆಗಟ್ಟಿನ ಮೇಲೆ ನಡೆಸುವ ಅರ್ಥಪೂರ್ಣ ಸಂಘರ್ಷ. ಈ ಚಿಂತನೆಯನ್ನು ಅರಿಯದಿದ್ದರೆ ಯಾವುದೇ ಸಂಘಟನೆ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದರು.<br /> <br /> ಡಾ.ಮಹಾಲಿಂಗು ಅವರ `ಭಾರತದಲ್ಲಿ ದಲಿತ ಚಳವಳಿ~ ಕೃತಿಯು ವಸ್ತುನಿಷ್ಠ ದೃಷ್ಟಿಕೋನ ಹೊಂದಿದೆ. ಆದರೆ ಮಹಿಳಾ ಗೈರು ಹಾಜರಿ ಇಲ್ಲಿ ಎದ್ದು ಕಾಣುತ್ತಿದೆ. ಭಾರತೀಯ ದಲಿತ ಚಳವಳಿಯಲ್ಲಿ ಸಾವಿತ್ರಿಬಾಯಿ ಪುಳೆಯಂಥ ಹೋರಾಟಗಾರ್ತಿಯರು ಇದ್ದಾರೆ. ಅಂಥವರ ಬಗ್ಗೆ ನಿರ್ಲಕ್ಷ್ಯ ಸಲ್ಲ ಎಂದು ಅವರು ಹೇಳಿದರು. <br /> <br /> ಮಹಾಲಿಂಗು ಅವರ ಕೃತಿಯನ್ನು ಬಿಡುಗಡೆ ಮಾಡಿದ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಎಚ್.ರಂಗಪ್ಪ ಮಾತನಾಡಿ ಲೇಖಕರ ಸಾಹಿತ್ಯ ಸಾಧನೆಗೆ ವಿಶ್ವವಿದ್ಯಾಲಯವು ಸಹಾಯ ಮಾಡುವುದು ಎಂದು ಭರವಸೆ ನೀಡಿದರು. ವಿದ್ಯೆ ಸಂಪಾದನೆಯಿಂದಷ್ಟೇ ಎಲ್ಲ ಸಮಾಜದವರೂ ಅಭಿವೃದ್ಧಿಯಾಗಲು ಸಾಧ್ಯ ಎಂದರು. <br /> <br /> ಮೈಸೂರು ವಿವಿ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ದಯಾನಂದ ಮಾನೆ ಪುಸ್ತಕ ಕುರಿತು ಮಾತನಾಡಿದರು. ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎಂ.ಬಿ. ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. <br /> <br /> ದಲಿತ ಸಂಘರ್ಷ ಸಮಿತಿಯ ಮುಖಂಡ ಹರಿಹರ ಆನಂದಸ್ವಾಮಿ, ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಪೂರೀಗಾಲಿ ಮರಡೇಶಮೂರ್ತಿ, ಸಮಾಜ ವಿಜ್ಞಾನಿ ಡಾ.ಕೃಷ್ಣಮೂರ್ತಿ ಚಮರಂ, ಸೋಮಯ್ಯ ಮಲೆಯೂರು ಉಪಸ್ಥಿತರಿದ್ದರು. ಮಲ್ಲೇಶ್ ಚುಂಚನಹಳ್ಳಿ ಪ್ರಾಸ್ತಾವಿಕ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ದಲಿತ ಸಂಘಟನೆಗಳು ಒಡೆಯುತ್ತಿವೆ, ಹೊಸ ಸಂಘಟನೆ ಹುಟ್ಟುತ್ತಿವೆ. ಆದರೆ ಸಾಮಾಜಿಕ ಬದಲಾವಣೆಯ ಮೂಲ ಆಶಯ, ಸೈದ್ಧಾಂತಿಕ ಚೌಕಟ್ಟು ಒಂದೇ ಇರುವಾಗ ಎಲ್ಲ ಸಂಘಟನೆಗಳು ಒಂದೇ ವೃಕ್ಷದ ಕೊಂಬೆಗಳಿದ್ದಂತೆ ಎಂದು ಡಿವೈಎಸ್ಪಿ ಡಾ. ಧರಣಿದೇವಿ ಮಾಲಗತ್ತಿ ಪ್ರತಿಪಾದಿಸಿದರು.<br /> <br /> ರಾಜ್ಯ ದಲಿತ ಸಂಘರ್ಷ ಸಮಿತಿ ನಗರ ಶಾಖೆಯು ಜೆಎಲ್ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಡಾ.ಕೆ.ಪಿ. ಮಹಾಲಿಂಗು ಕಲ್ಕುಂದ ಅವರಿಗೆ ಅಭಿನಂದನೆ ಹಾಗೂ ಅವರು ಬರೆದ `ಭಾರತದಲ್ಲಿ ದಲಿತ ಚಳವಳಿ~ ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ಬುದ್ಧನ ಸಾಮಾಜಿಕ ಕಾಳಜಿಯೇ ದಲಿತ ಚಳವಳಿಯ ತಳಪಾಯ. ಅಲ್ಲಿಂದ ಇಲ್ಲಿಯವರೆಗೂ ದಲಿತ ಚಳವಳಿಗಳು ಅನೂಹ್ಯ ಬದಲಾವಣೆಗಳನ್ನು ತಂದಿವೆ. ದಯನೀಯ ಸ್ಥಿತಿಯಲ್ಲಿರುವವನೇ ದಲಿತ ಎಂಬ ಅರ್ಥ ಹಿಂದೆ ಇತ್ತು. ಈಗ ಅದು ಸ್ವಾಭಿಮಾನಿ ಎಂಬ ಅರ್ಥವ್ಯಾಪ್ತಿಯನ್ನು ಪಡೆದುಕೊಳ್ಳುವಷ್ಟು ಬೆಳವಣಿಗೆಯಾಗಿದೆ ಎಂದು ಅವರು ತಿಳಿಸಿದರು.<br /> <br /> ಇಂದಿನ ಕೆಲ ದಲಿತ ಹೋರಾಟಗಾರರು ಹಳೆಯ ತಲೆಮಾರಿನ ಚಳವಳಿಗಾರರನ್ನು, ಚಿಂತಕರನ್ನು ಅಸಡ್ಡೆ ಮಾಡುತ್ತಿರುವುದು ಸರಿಯಲ್ಲ. ಹಳೆಯ ಕವಿಗಳ ಹಾಡುಗಳೇ ಅಂದಿನ ದಲಿತ ಚಳವಳಿಗಳಿಗೆ ಶಕ್ತಿ ತುಂಬಿದ್ದವು ಎಂದು ಅಭಿಪ್ರಾಯಪಟ್ಟರು. ಚಳವಳಿ ಎನ್ನುವುದು ಯುದ್ಧವಲ್ಲ. ವಾಸ್ತವಿಕ ನೆಲೆಗಟ್ಟಿನ ಮೇಲೆ ನಡೆಸುವ ಅರ್ಥಪೂರ್ಣ ಸಂಘರ್ಷ. ಈ ಚಿಂತನೆಯನ್ನು ಅರಿಯದಿದ್ದರೆ ಯಾವುದೇ ಸಂಘಟನೆ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದರು.<br /> <br /> ಡಾ.ಮಹಾಲಿಂಗು ಅವರ `ಭಾರತದಲ್ಲಿ ದಲಿತ ಚಳವಳಿ~ ಕೃತಿಯು ವಸ್ತುನಿಷ್ಠ ದೃಷ್ಟಿಕೋನ ಹೊಂದಿದೆ. ಆದರೆ ಮಹಿಳಾ ಗೈರು ಹಾಜರಿ ಇಲ್ಲಿ ಎದ್ದು ಕಾಣುತ್ತಿದೆ. ಭಾರತೀಯ ದಲಿತ ಚಳವಳಿಯಲ್ಲಿ ಸಾವಿತ್ರಿಬಾಯಿ ಪುಳೆಯಂಥ ಹೋರಾಟಗಾರ್ತಿಯರು ಇದ್ದಾರೆ. ಅಂಥವರ ಬಗ್ಗೆ ನಿರ್ಲಕ್ಷ್ಯ ಸಲ್ಲ ಎಂದು ಅವರು ಹೇಳಿದರು. <br /> <br /> ಮಹಾಲಿಂಗು ಅವರ ಕೃತಿಯನ್ನು ಬಿಡುಗಡೆ ಮಾಡಿದ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಎಚ್.ರಂಗಪ್ಪ ಮಾತನಾಡಿ ಲೇಖಕರ ಸಾಹಿತ್ಯ ಸಾಧನೆಗೆ ವಿಶ್ವವಿದ್ಯಾಲಯವು ಸಹಾಯ ಮಾಡುವುದು ಎಂದು ಭರವಸೆ ನೀಡಿದರು. ವಿದ್ಯೆ ಸಂಪಾದನೆಯಿಂದಷ್ಟೇ ಎಲ್ಲ ಸಮಾಜದವರೂ ಅಭಿವೃದ್ಧಿಯಾಗಲು ಸಾಧ್ಯ ಎಂದರು. <br /> <br /> ಮೈಸೂರು ವಿವಿ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ದಯಾನಂದ ಮಾನೆ ಪುಸ್ತಕ ಕುರಿತು ಮಾತನಾಡಿದರು. ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎಂ.ಬಿ. ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. <br /> <br /> ದಲಿತ ಸಂಘರ್ಷ ಸಮಿತಿಯ ಮುಖಂಡ ಹರಿಹರ ಆನಂದಸ್ವಾಮಿ, ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಪೂರೀಗಾಲಿ ಮರಡೇಶಮೂರ್ತಿ, ಸಮಾಜ ವಿಜ್ಞಾನಿ ಡಾ.ಕೃಷ್ಣಮೂರ್ತಿ ಚಮರಂ, ಸೋಮಯ್ಯ ಮಲೆಯೂರು ಉಪಸ್ಥಿತರಿದ್ದರು. ಮಲ್ಲೇಶ್ ಚುಂಚನಹಳ್ಳಿ ಪ್ರಾಸ್ತಾವಿಕ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>