<p><strong>ನವದೆಹಲಿ (ಪಿಟಿಐ):</strong> ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ ದೇಶದ ಎಂಟು ಸಹಕಾರಿ ಬ್ಯಾಂಕುಗಳು ಗ್ರಾಹಕರ ಠೇವಣಿ ಹಣ ಮರು ಪಾವತಿಸುವಲ್ಲಿ ವಿಫಲವಾಗಿದ್ದು, ದಿವಾಳಿ ಅಂಚಿನಲ್ಲಿವೆ ಎಂದು `ಆರ್ಬಿಐ~ನ ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮದ (ಡಿಐಸಿಜಿಸಿ) ವರದಿ ತಿಳಿಸಿದೆ.</p>.<p>ಮಹಾರಾಷ್ಟ್ರದ ನಾಲ್ಕು, ಗುಜರಾತ್ನ ಒಂದು ಮತ್ತು ಕರ್ನಾಟಕದ ಮೂರು ಸಹಕಾರಿ ಬ್ಯಾಂಕ್ಗಳು ಈ ದಿವಾಳಿ ಪಟ್ಟಿಯಲ್ಲಿವೆ. ಕಳೆದ ಹಣಕಾಸು ವರ್ಷದಲ್ಲಿ ಹಣಕಾಸು ಮುಗ್ಗಟ್ಟಿನಿಂದ ದೇಶದಾದ್ಯಂತ ಒಟ್ಟು 26 ಸಹಕಾರಿ ಬ್ಯಾಂಕುಗಳು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದವು.</p>.<p>ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮದ ಪ್ರಕಾರ, ಸಹಕಾರಿ ಬ್ಯಾಂಕುಗಳು ಆರ್ಥಿಕ ಮುಗ್ಗಟ್ಟಿನ (ದಿವಾಳಿ) ಕಾರಣಕ್ಕೆ ಗ್ರಾಹಕರ ಠೇವಣಿ ಮೊತ್ತವನ್ನು ಮರು ಪಾವತಿಸಲು ವಿಫಲವಾದರೆ, ಭಾರತೀಯ ರಿಸರ್ವ್ ಬ್ಯಾಂಕ್ ಮಧ್ಯ ಪ್ರವೇಶಿಸಿ ಗ್ರಾಹಕರಿಗೆ ಗರಿಷ್ಠ ರೂ. 1 ಲಕ್ಷದವರೆಗೆ ಹಣ ಮರು ಪಾವತಿಸುತ್ತದೆ.</p>.<p>ಮಹಾರಾಷ್ಟ್ರದ ಈಚಲಕರಂಜಿ ಮತ್ತು ಸಮತಾ ಸಹಕಾರಿ ಬ್ಯಾಂಕ್ಗೆ `ಡಿಐಸಿಜಿಸಿ~ ಕ್ರಮವಾಗಿ ಗರಿಷ್ಠ ರೂ. 48.7 ಮತ್ತು ರೂ. 38.83 ಕೋಟಿ ಹಣ ಪಾವತಿಸಿದೆ.</p>.<p>ಕರ್ನಾಟಕದ ಚಡಚಣ ಶ್ರೀ ಸಂಗಮೇಶ್ವರ ಅರ್ಬನ್ ಕೊ-ಆಪರೇಟಿವ್ ಬ್ಯಾಂಕ್ ಮತ್ತು ಮಹಾರಾಷ್ಟ್ರದ ಲಕ್ಷ್ಮಿ ಸಹಕಾರಿ ಬ್ಯಾಂಕ್ ಕ್ರಮವಾಗಿ ರೂ. 2.5 ಕೋಟಿ ನೆರವು ಪಡೆದಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ ದೇಶದ ಎಂಟು ಸಹಕಾರಿ ಬ್ಯಾಂಕುಗಳು ಗ್ರಾಹಕರ ಠೇವಣಿ ಹಣ ಮರು ಪಾವತಿಸುವಲ್ಲಿ ವಿಫಲವಾಗಿದ್ದು, ದಿವಾಳಿ ಅಂಚಿನಲ್ಲಿವೆ ಎಂದು `ಆರ್ಬಿಐ~ನ ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮದ (ಡಿಐಸಿಜಿಸಿ) ವರದಿ ತಿಳಿಸಿದೆ.</p>.<p>ಮಹಾರಾಷ್ಟ್ರದ ನಾಲ್ಕು, ಗುಜರಾತ್ನ ಒಂದು ಮತ್ತು ಕರ್ನಾಟಕದ ಮೂರು ಸಹಕಾರಿ ಬ್ಯಾಂಕ್ಗಳು ಈ ದಿವಾಳಿ ಪಟ್ಟಿಯಲ್ಲಿವೆ. ಕಳೆದ ಹಣಕಾಸು ವರ್ಷದಲ್ಲಿ ಹಣಕಾಸು ಮುಗ್ಗಟ್ಟಿನಿಂದ ದೇಶದಾದ್ಯಂತ ಒಟ್ಟು 26 ಸಹಕಾರಿ ಬ್ಯಾಂಕುಗಳು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದವು.</p>.<p>ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮದ ಪ್ರಕಾರ, ಸಹಕಾರಿ ಬ್ಯಾಂಕುಗಳು ಆರ್ಥಿಕ ಮುಗ್ಗಟ್ಟಿನ (ದಿವಾಳಿ) ಕಾರಣಕ್ಕೆ ಗ್ರಾಹಕರ ಠೇವಣಿ ಮೊತ್ತವನ್ನು ಮರು ಪಾವತಿಸಲು ವಿಫಲವಾದರೆ, ಭಾರತೀಯ ರಿಸರ್ವ್ ಬ್ಯಾಂಕ್ ಮಧ್ಯ ಪ್ರವೇಶಿಸಿ ಗ್ರಾಹಕರಿಗೆ ಗರಿಷ್ಠ ರೂ. 1 ಲಕ್ಷದವರೆಗೆ ಹಣ ಮರು ಪಾವತಿಸುತ್ತದೆ.</p>.<p>ಮಹಾರಾಷ್ಟ್ರದ ಈಚಲಕರಂಜಿ ಮತ್ತು ಸಮತಾ ಸಹಕಾರಿ ಬ್ಯಾಂಕ್ಗೆ `ಡಿಐಸಿಜಿಸಿ~ ಕ್ರಮವಾಗಿ ಗರಿಷ್ಠ ರೂ. 48.7 ಮತ್ತು ರೂ. 38.83 ಕೋಟಿ ಹಣ ಪಾವತಿಸಿದೆ.</p>.<p>ಕರ್ನಾಟಕದ ಚಡಚಣ ಶ್ರೀ ಸಂಗಮೇಶ್ವರ ಅರ್ಬನ್ ಕೊ-ಆಪರೇಟಿವ್ ಬ್ಯಾಂಕ್ ಮತ್ತು ಮಹಾರಾಷ್ಟ್ರದ ಲಕ್ಷ್ಮಿ ಸಹಕಾರಿ ಬ್ಯಾಂಕ್ ಕ್ರಮವಾಗಿ ರೂ. 2.5 ಕೋಟಿ ನೆರವು ಪಡೆದಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>